ಗಂಜಿ,ನಿಂಬೆ,ಸಲಾಡ್ಸ್‌ ;ಬೇಸಿಗೆ ಬಾಡಿ ಹೀಟ್‌ಗೆ ಈ ಡಯೆಟ್‌!

Suvarna News   | Asianet News
Published : May 28, 2020, 11:09 AM IST
ಗಂಜಿ,ನಿಂಬೆ,ಸಲಾಡ್ಸ್‌ ;ಬೇಸಿಗೆ ಬಾಡಿ ಹೀಟ್‌ಗೆ ಈ ಡಯೆಟ್‌!

ಸಾರಾಂಶ

ಸಮ್ಮರ್‌ನಲ್ಲಿ ಬಾಡಿ ಹೀಟ್‌ ಹೆಚ್ಚಾಗಿ ಕಸಿವಿಸಿಯಾಗೋದು ಸಹಜ. ಅಧಿಕ ಉಷ್ಣತೆಗೆ ದೇಹದಲ್ಲಿರುವ ನೀರಿನಂಶ ಕಡಿಮೆಯಾಗುತ್ತೆ, ಮೈ ಶಾಖ ಹೆಚ್ಚಾಗುತ್ತೆ. ಎದೆಬಡಿತದಲ್ಲಿ ಏರುಪೇರು, ಆಯಾಸ, ಬಳಲಿಕೆ ಉಂಟಾಗಬಹುದು. ಜೊತೆಗೆ ಚರ್ಮವೂ ಡ್ರೈ ಆಗಿ ತುರಿಕೆ, ಕಿರಿಕಿರಿ ಆಗಬಹುದು. ಇಲ್ಲಿ ಹೇಳಿರೋ ಡಯೆಟ್‌ ಬೇಸಿಗೆಯಲ್ಲೂ ದೇಹ ಕೂಲ್‌ ಕೂಲ್‌ ಇರುವ ಹಾಗೆ ಮಾಡುತ್ತೆ.

ಸೋರೆ ಕಾಯಿ ಜ್ಯೂಸ್‌

ಹೆಚ್ಚಿನವರ ಅವಜ್ಞೆ ತುತ್ತಾದ ತರಕಾರಿ ಸೋರೆಕಾಯಿ. ಆದರೆ ಇದರಲ್ಲಿ ದೇಹದ ಶುಷ್ಕತೆ ನಿವಾರಿಸುವ ಗುಣ ಇದೆ. ಕಾಮಾಲೆ ಗುಣಪಡಿಸುವ ವಿಶೇಷ ಶಕ್ತಿ ಇದೆ. ಹಳ್ಳಿಗಳಲ್ಲಿ ಇಂದಿಗೂ ಕಾಮಾಲೆ ರೋಗಿಗೆ ಅಲೋಪತಿ ಬದಲಿಗೆ ಮನೆಮದ್ದಿನಂತೆ ಬೇಯಿಸಿದ ಸೋರೆಕಾಯಿ ಹೋಳುಗಳನ್ನು ಯಥೇಚ್ಛವಾಗಿ ನೀಡುತ್ತಾರೆ.

ವಯಸ್ಸು 50 ಆಯಿತೆಂದರೆ ಬದಲಾಗಲಿ ಡಯಟ್!

ಸೋರೆಕಾಯಿ ಜ್ಯೂಸ್‌ ಬೇಸಿಗೆಗೆ ಅತ್ಯುತ್ತಮ. ಸೋರೆಕಾಯಿಯ ಹೋಳುಗಳ ಜೊತೆಗೆ ಪುದೀನಾ, ಜೀರಿಗೆ, ಪೆಪ್ಪರ್‌, ಉಪ್ಪು, ನಿಂಬೆ ರಸ, ಶುಂಠಿ ಹಾಕಿ ಮಿಕ್ಸಿಗೆ ಹಾಕಿ ಜ್ಯೂಸ್‌ ಮಾಡಿ ಕುಡಿಯಬಹುದು.

ಹಣ್ಣು ಸೇವನೆ

ಕಲ್ಲಂಗಡಿ, ಕರಬೂಜದಂಥ ಹಣ್ಣುಗಳನ್ನು ಚೆನ್ನಾಗಿ ತಿನ್ನಿ. ಸಕ್ಕರೆ ಹಾಕದೇ ಜ್ಯೂಸ್‌ ಮಾಡಿ ಕುಡಿದರೂ ಸೈ. ಹಣ್ಣುಗಳು ದೇಹವನ್ನು ಕೂಲ್‌ ಆಗಿಡುತ್ತವೆ. ಸೌತೆಕಾಯಿಯ ಸೇವನೆಯನ್ನು ಮರೀಬೇಡಿ.

ಸಲ್ಮಾನ್ ಖಾನಿಂದ ಪ್ರಿಯಾಂಕಾ ಚೋಪ್ರಾವರೆಗೂ ಖ್ಯಾತರೆಲ್ಲ ಎಗ್ ವೈಟ್ ತಿನ್ತಾರೇಕೆ?

ನಿಂಬೆ

ನಿಂಬೆರಸದಲ್ಲಿ ವಿಟಮಿನ್‌ ಸಿ ಅಂಶ ಹೆಚ್ಚಾಗಿದೆ. ಬಿಸಿಲಿಗೆ ಇದರ ಜ್ಯೂಸ್‌ ಕುಡಿಯೋದರಿಂದ ಡಿ ಹೈಡ್ರೇಶನ್‌ ನಿಂದ ಹೊರ ಬರಬಹುದು. ಸಕ್ಕರೆ ಬೇಡ ಅನ್ನೋರು ನಿಂಬೂ ಸಾಲ್ಟ್‌ ಜ್ಯೂಸ್‌ ಕುಡೀರಿ.

ಗಂಜಿ ದೇಹಕ್ಕೆ ತಂಪು

ನಿಮ್ಮ ದೇಹ ಎಷ್ಟುಬೇಕು ಅನ್ನುತ್ತೋ ಅಷ್ಟುನೀರು ಕುಡಿಯಿರಿ. ರಾಗಿ ಅಂಬಲಿ ಕುಡೀರಿ, ಹಾಯಾಗಿರುತ್ತೆ. ಕೆಂಪಕ್ಕಿ, ಮಂಗಳೂರು ರೈಸ್‌ ಅಥವಾ ಕುಚ್ಚಿಲಕ್ಕಿ ಗಂಜಿ ಮಾಡಿ ಸ್ವಲ್ಪ ಉಪ್ಪು ಹಾಕಿ ತಿನ್ನಿ. ಅನ್ನಕ್ಕಿಂತ ಗಂಜಿ ಈ ಟೈಮ್‌ ಗೆ ಬೆಸ್ಟ್‌.

ದೀಪಿಕಾ ರಣವೀರ್ ತಿಂಗಳ ಆಹಾರದ ಖರ್ಚಿಷ್ಟು... ! 

ಸಲಾಡ್ಸ್

ನಾನಾ ನಮೂನೆಯ ಸಲಾಡ್ಸ್‌ ರೆಸಿಪಿ ಆನ್‌ಲೈನ್‌ನಲ್ಲಿ ಸಿಗುತ್ತೆ. ದಿನಕ್ಕೊಂದು ರೆಸಿಪಿ ಟ್ರೈ ಮಾಡಿ. ಮತ್ತೇನಿಲ್ಲ, ಈ ಎಲ್ಲ ಸಲಾಡ್ಸ್‌ಗಳೂ ದೇಹದಲ್ಲಿ ನೀರಿನಂಶ ಚೆನ್ನಾಗಿರುವಂತೆ ಮಾಡುತ್ತವೆ. ಇದರಿಂದ ಎಂಥಾ ಸೆಕೆ ಇದ್ರೂ ನೀವು ಕೂಲ್‌ ಆಗಿರ್ತೀರಿ. ತರಕಾರಿ ಹೆಚ್ಚೆಚ್ಚು ದೇಹ ಸೇರೋ ಕಾರಣ ಜೀರ್ಣ ಕ್ರಿಯೆ ಸರಾಗವಾಗಿರುತ್ತೆ. ಫಲಿತಾಂಶ ಬೇಸಿಗೆಯಲ್ಲೂ ಅತ್ಯುತ್ತಮ ಆರೋಗ್ಯ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಆರೋಗ್ಯಕರ ತುಳಸಿ ಅಗೆದು ತಿಂದ್ರೆ ಅಪಾಯ, ಧರ್ಮ- ಆಯುರ್ವೇದ ಹೇಳೋದೇನು?
ಅತಿಯಾದ್ರೆ ಅಮೃತವೂ ವಿಷ, ಇವನ್ನೆಲ್ಲಾ ಮಿತಿ ಮೀರಿ ತಿಂದ್ರೆ ಅಷ್ಟೇ..