ಅಪ್ಪ ರಮೇಶ್ನ ಕುತಂತ್ರಗಳನ್ನು ಅರಿತ ಕರ್ಣ, ತಿರುಗೇಟು ನೀಡಲು ಆರಂಭಿಸಿದ್ದಾನೆ. ತಾಯಿಗೆ ಬರೆ ಹಾಕಿದ್ದಕ್ಕೆ ಅಪ್ಪನಿಂದಲೇ ಅಡುಗೆ ಮಾಡಿಸಿ, ರಾತ್ರಿ ನಿದ್ದೆಗೆಡಿಸಿ ಕಾಡಿದ್ದಾನೆ. ಇದರ ನಡುವೆ ನಿತ್ಯಾಳಿಗೆ ಆಸ್ಪತ್ರೆಯ ನಿರ್ದೇಶಕ ಸ್ಥಾನ ನೀಡಿ, ತನ್ನ ಅತ್ತೆಯ ಕೆಂಗಣ್ಣಿಗೆ ಗುರಿಯಾಗಿದ್ದಾನೆ.
ಜೀ ಕನ್ನಡದ ಕರ್ಣ ಸೀರಿಯಲ್ನಲ್ಲಿ ಇದೀಗ ಎಲ್ಲವೂ ಬದಲಾಗಿದೆ. ಅಪ್ಪ ರಮೇಶ್ ಮಾಡುತ್ತಿದ್ದ ಎಲ್ಲಾ ಕತ್ರಿ ಕೆಲಸಗಳು ಕರ್ಣನಿಗೆ ಗೊತ್ತಾಗಿದ್ದು, ತಾಳ್ಮೆಯಿಂದ ಇವರನ್ನು ಸರಿ ಮಾಡಲು ಸಾಧ್ಯವಿಲ್ಲ ಎಂಬ ವಿಷಯ ಅರ್ಥವಾಗಿದೆ. ಹೀಗಾಗಿ ದಂಡಂದಶಗುಣಂ ಅಂತಾ ಕರ್ಣ ಮುನ್ನುಗ್ಗುತ್ತಿದ್ದಾನೆ.
25
ಮಾಲತಿಗೆ ರಮೇಶ್ ಬರೆ
ಸೋಮವಾರದ ಸಂಚಿಕೆಯಲ್ಲಿ ಕರ್ಣನ ಊಟವನ್ನು ರಮೇಶ್ ಕಸದಬಟ್ಟಿಗೆ ಎಸೆದಿದ್ದನು. ರಾತ್ರಿ ಮಗನಿಗಾಗಿ ಅಡುಗೆ ಮಾಡಲು ಬಂದಿದ್ದ ಮಾಲತಿಗೆ ರಮೇಶ್ ಬರೆ ಹಾಕಿದ್ದನು. ಈ ವಿಷಯ ತಿಳಿದ ರಮೇಶ್ನಿಂದಲೇ ಅಡುಗೆ ಮಾಡಿಸಿಕೊಂಡು ಕರ್ಣ ಊಟ ಮಾಡಿದ್ದನು. ಇದನ್ನು ನೋಡಿದ್ದ ವೀಕ್ಷಕರು, ಮಾಡಿದ್ದುಣ್ಣೋ ಮಾರಾಯ ಎಂದು ಮಾತನಾಡಿಕೊಳ್ಳುತ್ತಿದ್ದಾರೆ.
35
ಕರ್ಣನ ಟಕ್ಕರ್ಗೆ ರಮೇಶ್ ನಿದ್ದೆ ಇಲ್ಲದೇ ವಿಲವಲ
ಅಮ್ಮನ ಕೈಯಲ್ಲಿನ ಬರೆ ನೋಡಿದ ಕರ್ಣ ತಾಯಿಗೆ ಸಾಂತ್ವಾನ ಹೇಳಿದ್ದಾನೆ. ತಾಯಿಯನ್ನು ನಿತ್ಯಾ ಜೊತೆ ಮಲಗಲು ಕಳುಹಿಸಿ ಅಪ್ಪನೊಂದಿಗೆ ಕರ್ಣ ಮಲಗಿಕೊಂಡಿದ್ದಾನೆ. ರಮೇಶ್ನಿಗೆ ನಿದ್ದೆ ಮಾಡಲು ಬಿಡದ ಕರ್ಣ, ಜೋರು ಧ್ವನಿಯಲ್ಲಿ ಮಾತನಾಡುತ್ತಾ ಡಿಸ್ಟರ್ಬ್ ಮಾಡಿದ್ದಾನೆ. ಕರ್ಣನ ಟಕ್ಕರ್ಗೆ ರಮೇಶ್ ನಿದ್ದೆ ಇಲ್ಲದೇ ವಿಲವಲ ಅಂತ ಒದ್ದಾಡಿದ್ದಾನೆ.
ಈ ಎಲ್ಲದರ ನಡುವೆ ಕರ್ಣ ಸೀರಿಯಲ್ಗೆ ಮತ್ತೋರ್ವ ಚೆಲುವೆಯ ಆಗಮನವಾಗಿದೆ. ಇಂದು ಬಿಡುಗಡೆಯಾದ ಪ್ರೋಮೋದಲ್ಲಿ ನಟಿಯನ್ನು ತೋರಿಸಲಾಗಿದೆ. ಕರ್ಣನ ಸೋದರ ಸಂಜಯ್ಗೆ ಈ ನಟಿ ಜೋಡಿಯಾಗೋದು ಪಕ್ಕಾ ಆಗಿದೆ.
ನಿತ್ಯಾಳನ್ನು ವಶಿಷ್ಠ ಆಸ್ಪತ್ರೆಯ ಬೋರ್ಡ್ ಮೆಂಬರ್ ಆಗಿರುವ ಕರ್ಣನ ನಿರ್ಧಾರಕ್ಕೆ ಅತ್ತೆ ಗರಂ ಆಗಿದ್ದಾಳೆ. ಇದು ಇದೇ ರೀತಿ ಮುಂದುವರಿದ್ರೆ ತನ್ನ ಸ್ಥಾನಕ್ಕೆ ಕುತ್ತು ಎಂದು ಮತ್ತೆ ಸಂಚು ಮಾಡಲು ಮುಂದಾಗಿದ್ದಾಳೆ. ನಿತ್ಯಾಳಿಗೆ ನಿರ್ದೇಶಕರ ಸ್ಥಾನ ನೀಡಿದ್ದಕ್ಕೆಮ ಅಜ್ಜಿಯರಿಬ್ಬರು ಖುಷಿಯಾಗಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.