ತಾನೊಂದು ಬಗೆದರೆ ದೈವವೊಂದು ಬಗೆಯಿತು; ದುಷ್ಟ ರಮೇಶನಿಗೆ ಗೊತ್ತೇ ಆಗಲಿಲ್ಲ! ಹಿರಿ ಹಿರಿ ಹಿಗ್ಗಿದ ಪ್ರೇಕ್ಷಕರು

Published : Oct 22, 2025, 08:02 AM IST

Karna Nidhi Nitya story: ಕರ್ಣನಿಂದ ನಿಧಿಯನ್ನು ದೂರ ಮಾಡಲು ರಮೇಶ್ ರೂಪಿಸಿದ ಸಂಚು ವಿಫಲವಾಗಿದೆ. ಮನೆ ಕಳೆದುಕೊಂಡ ನಿಧಿಯನ್ನು ಕರ್ಣ ತನ್ನ ಮನೆಗೆ ಕರೆತಂದಿದ್ದು, ಪತ್ನಿ ನಿತ್ಯಾ ಜೊತೆಯಲ್ಲೇ ಮಾಜಿ ಪ್ರೇಯಸಿ ನಿಧಿಯ ಗೃಹಪ್ರವೇಶವೂ ನಡೆದಿದೆ. ಇದು ಕಥೆಯಲ್ಲಿ ಹೊಸ ಕುತೂಹಲಕ್ಕೆ ಕಾರಣವಾಗಿದೆ.

PREV
15
ಕರ್ಣ ಸೀರಿಯಲ್

ಜೀ ಕನ್ನಡದಲ್ಲಿ ಪ್ರಸಾರವಾಗುವ ಕರ್ಣ ಸೀರಿಯಲ್ ಪ್ರತಿ ಸಂಚಿಕೆಯಲ್ಲಿಯೂ ಹೊಸ ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ನಿಧಿಯನ್ನು ಪ್ರೀತಿ ಮಾಡಿದ್ದ ಕರ್ಣ ತನ್ನನ್ನು ಸದಾ ದ್ವೇಷಿಸುವ ನಿತ್ಯಾ ಜೊತೆ ಸಪ್ತಪದಿ ತುಳಿದಿದ್ದಾನೆ. ಕರ್ಣನ ಮಾಜಿ ಪ್ರೇಯಸಿ ನಿಧಿ ಆತನ ಮುಂದೆಯೇ ಇರಬೇಕು. ಪ್ರೀತಿ ಕಳೆದುಕೊಂಡ ನೋವು ಪ್ರತಿದಿನ ಕರ್ಣನಿಗೆ ಕಾಡುತ್ತಿರಬೇಕು ಎಂದು ನಿಧಿ ಮನೆಗೆ ರಮೇಶ್ ಬೆಂಕಿ ಹಚ್ಚಿಸಿದ್ದಾನೆ.

25
ರಮೇಶ್‌ನ ನೀಚ ಪ್ಲಾನ್

ಮನೆ ಕಳೆದುಕೊಂಡು ಶಾಂತಜ್ಜಿ ಜೊತೆ ನಿಧಿ ಬೀದಿಗೆ ಬಂದಿದ್ದಾಳೆ. ನಿತ್ಯಾ ನಮ್ಮ ಸೊಸೆ, ಆಕೆಯನ್ನು ನಾವು ಮನೆಗೆ ಕರೆದುಕೊಂಡು ಹೋಗುತ್ತವೆ. ಆದ್ರೆ ನಿಧಿ ಮತ್ತು ಶಾಂತಜ್ಜಿ ಅವರ ಮುಂದಿನ ಕಥೆ ಏನು ಎಂದು ತಾಯಿ ಮುಂದೆ ರಮೇಶ್ ಹೇಳಿದ್ದಾನೆ. ಆಗ ಕರ್ಣ, ಇನ್ಮುಂದೆ ಅವರಿಬ್ಬರು ನಮ್ಮೊಂದಿಗೆ ನಮ್ಮ ಮನೆಯಲ್ಲಿರುತ್ತಾರೆ ಎಂದು ಹೇಳಿದ್ದಾನೆ. ಇಲ್ಲಿಗೆ ರಮೇಶ್‌ನ ಮತ್ತೊಂದು ಪ್ಲಾನ್‌ ಸಕ್ಸಸ್ ಆಗಿದೆ.

35
ಗೆದ್ದೆ ಎಂಬ ಹೆಮ್ಮೆಯಲ್ಲಿ ರಮೇಶ್

ಎಲ್ಲವೂ ತಾನು ಅಂದುಕೊಂಡಂತೆ ಆಗುತ್ತಿದೆ ಎಂದು ರಮೇಶ್ ಹೆಮ್ಮೆಯಿಂದ ಬೀಗುತ್ತಿದ್ದಾನೆ. ಆದ್ರೆ ನಿತ್ಯಾ ಕೊರಳಿಗೆ ಕರ್ಣ ತಾಳಿ ಕಟ್ಟೇ ಇಲ್ಲ ಎಂಬ ವಿಷಯ ರಮೇಶ್‌ನಿಗೆ ಗೊತ್ತಿಲ್ಲ. ಇನ್ನು ಮಗ-ಸೊಸೆಯನ್ನು ಮನೆ ತುಂಬಿಸಿಕೊಳ್ಳುವ ವೇಳೆ ನಿಧಿ ಪ್ರಜ್ಞೆ ಕಳೆದುಕೊಂಡಿದ್ದಾಳೆ. ಇದರಿಂದ ನಿಧಿಯನ್ನು ಎತ್ತಿಕೊಂಡು ನಿತ್ಯಾ ಜೊತೆ ಕರ್ಣ ಮನೆಯೊಳಗೆ ಬಂದಿದ್ದಾನೆ. ಇಬ್ಬರು ಸೋದರಿಯರು ಕರ್ಣನೊಂದಿಗೆ ಮನೆಯೊಳಗೆ ಬಂದಿದ್ದಾರೆ.

45
ತಾನೊಂದು ಬಗೆದರೆ ದೈವವೊಂದು ಬಗೆಯಿತು

ಇಂದಿನ ಪ್ರೋಮೋ ನೋಡಿದ ವೀಕ್ಷಕರು, ತಾನೊಂದು ಬಗೆದರೆ ದೈವವೊಂದು ಬಗೆಯಿತು ಎಂದು ಹೇಳುತ್ತಿದ್ದಾರೆ. ಕರ್ಣನಿಂದ ನಿಧಿಯನ್ನು ದೂರ ಮಾಡಬೇಕು ಎಂದು ರಮೇಶ್‌ ಸಂಚು ರೂಪಿಸಿದ್ದನು. ಇದೀಗ ರಮೇಶ್‌ನ ಮುಂದೆಯೇ ಕರ್ಣನೊಂದಿಗೆ ನಿಧಿಯ ಗೃಹಪ್ರವೇಶವಾಗಿರೋದನ್ನು ಕಂಡು ಪ್ರೇಕ್ಷಕರು ಹಿರಿ ಹಿರಿ ಹಿಗ್ಗಿದ್ದಾರೆ.

ಇದನ್ನೂ ಓದಿ: Karna Serial: ಒಡೆದ ಹೃದಯಗಳ ಪಿಸುಮಾತಿಗೆ ಸಾಕ್ಷಿಯಾದ ಕರ್ಣ-ನಿಧಿ ಮೌನ, ಅಸಹಾಯಕಳಾಗಿ ನಿಂತ ನಿತ್ಯಾ

55
ಕುತೂಹಲ

ಮುಂದೆ ಕರ್ಣ ತನ್ನ ಪ್ರೀತಿಯನ್ನು ಹೇಗೆ ಉಳಿಸಿಕೊಳ್ಳುತ್ತಾನೆ? ಮದುವೆಗೂ ಮುಂಚೆಯೇ ಗರ್ಭಿಣಿಯಾಗಿರುವ ವಿಷಯವನ್ನು ಕರ್ಣನಿಗೆ ನಿತ್ಯಾ ಹೇಳ್ತಾಳಾ? ಹೀಗೆ ಹಲವು ಕುತೂಹಲಗಳನ್ನು ಕರ್ಣ ಧಾರಾವಾಹಿ ಒಳಗೊಂಡಿದೆ. ಮುಂದಿನ ದಿನಗಳಲ್ಲಿ ಸೀರಿಯಲ್‌ ಮತ್ತಷ್ಟು ರೋಚಕ ತಿರುವು ಪಡೆದುಕೊಳ್ಳಲಿದೆ ಎಂಬುದರ ಸುಳಿವು ಪ್ರೇಕ್ಷಕರಿಗೆ ಸಿಕ್ಕಿದೆ.

ಇದನ್ನೂ ಓದಿ: ಕರ್ಣನ ಮದ್ವೆ ಆಗ್ತಿದ್ದಂತೆ ಭವ್ಯಾ ಗೌಡ ಬಗ್ಗೆ ಎಲ್ರೂ ಹೇಳ್ತಿರೋದು, ಹೇಳಿದ್ದು ಇದೊಂದೇ ಮಾತು!

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories