Karna Serial ಯಾರೂ ಊಹಿಸದ ಟ್ವಿಸ್ಟ್​: ತೇಜಸ್​ ಕ್ಷಮೆ ಕೋರಿ ಫೋನ್​ ಮಾಡಿದ್ರೂ ನಿತ್ಯಾ ಮಾಡಿದ್ದೇ ಬೇರೆ!

Published : Dec 19, 2025, 06:35 PM IST

ಕಿಡ್ನಾಪ್‌ನಿಂದ ತಪ್ಪಿಸಿಕೊಂಡು ಬಂದಿರುವ ತೇಜಸ್, ತನ್ನ ಅಪಹರಣಕ್ಕೆ ಕರ್ಣನೇ ಕಾರಣ ಎಂದು ತಪ್ಪಾಗಿ ಭಾವಿಸಿದ್ದಾನೆ. ಅನಿರೀಕ್ಷಿತವಾಗಿ ಫೋನ್‌ನಲ್ಲಿ ನಿತ್ಯಾಳ ದನಿ ಕೇಳಿದಾಗ, ಆತನ ಸ್ಥಿತಿ ತಿಳಿಯದ ನಿತ್ಯಾ, ತನ್ನನ್ನು ತೊರೆದು ಹೋದದ್ದಕ್ಕೆ ಆಕ್ರೋಶ ವ್ಯಕ್ತಪಡಿಸುತ್ತಾಳೆ.  

PREV
16
ತೇಜಸ್​ ಆಗಮನ

ಕರ್ಣ ಸೀರಿಯಲ್​ (Karna Serial) ಸದ್ಯ ತೇಜಸ್​ ಆಗಮನವಾಗಿದೆ. ಕರ್ಣನೇ ತನ್ನನ್ನು ಕಿಡ್​ನ್ಯಾಪ್​​ ಮಾಡಿದ್ದು ಎಂದು ಆತ ತಪ್ಪು ತಿಳಿದುಕೊಂಡಿದ್ದಾನೆ. ಇದಕ್ಕೆ ಕಾರಣ, ಕಿಡ್​ನ್ಯಾಪ್​ ಮಾಡಿಸಿದ್ದ ರಮೇಶ್​, ತನ್ನ ರೌಡಿಗಳ ಬಳಿ ಫೋನ್​ ಮಾಡಿಸಿದಾಗ ಕರ್ಣನ ಹೆಸರನ್ನು ಹೇಳಿಸಿರೋದು.

26
ಸಂಜಯ್​ ಗೂಢಾಚಾರಿಕೆ

ಇದೀಗ, ಅಚಾನಕ್​ ಸ್ಥಿತಿಯಲ್ಲಿ ತೇಜಸ್​ ಮತ್ತು ನಿಧಿಯ ಭೇಟಿಯಾಗಿದೆ. ಅತ್ತ ಸಂಜಯ್​ ಮತ್ತು ರಮೇಶ್​ಗೆ ತೇಜಸ್​ ತಪ್ಪಿಸಿಕೊಂಡಿರೋದು ತಿಳಿದಿರುವ ಹಿನ್ನೆಲೆಯಲ್ಲಿ, ನಿತ್ಯಾಳ ಮೇಲೆ ಅವರು ಕಣ್ಣಿಟ್ಟಿದ್ದಾರೆ. ಅವಳಿಗೆ ಬರುವ ಕರೆಗಳ ಮೇಲೂ ಸಂಜಯ್​ ಗಮನ ಇಟ್ಟಿದ್ದಾನೆ.

36
ಕಿಡಿಯಾದ ನಿತ್ಯಾ

ಆದರೆ ನಿಧಿ ಕರ್ಣನ ಫೋನ್​ಗೆ ಕಾಲ್​ ಮಾಡಿ ನಿತ್ಯಾಳಿಗೆ ನೀಡುವಂತೆ ಕೇಳಿದ್ದಾಳೆ. ಅತ್ತ ಕಡೆಯಿಂದ ತೇಜಸ್​ ದನಿ ಕೇಳುತ್ತಿದ್ದಂತೆಯೇ ನಿತ್ಯಾ ಕೆಂಡಾಮಂಡಲ ಆಗಿದ್ದಾಳೆ.

46
ನೋವಿನ ಸರಮಾಲೆ

ಹೇಗಿದ್ಯಾ ಎಂದು ಸಂಜಯ್​ ಕೇಳಿದಾಗ, ಅವನಿಗೆ ಏನಾಗಿತ್ತು ಎನ್ನೋದನ್ನು ತಿಳಿಯದ ನಿತ್ಯಾ, ಕೈಕೊಟ್ಟು ಓಡಿಹೋದ ಬಗ್ಗೆ ಕಿಡಿ ಕಾರಿದ್ದಾಳೆ. ತಾನು ಅನುಭವಿಸಿದ ನೋವಿನ ಸರಮಾಲೆಗಳ ಬಗ್ಗೆ ತಿಳಿಸಿದ್ದಾರೆ. ನಿನ್ನ ಮುಖ ನೋಡೋಕೂ ಅಸಹ್ಯ ಆಗುತ್ತದೆ ಎಂದಿದ್ದಾಳೆ.

56
ಮನೆಗೆ ಬರಲ್ಲ ಎಂದ ತೇಜಸ್​

ಅತ್ತ ನಿಧಿ ಫೋನ್​ ತೆಗೆದುಕೊಂಡು ಮೊದಲು ಇಬ್ಬರೂ ಕುಳಿತು ಮಾತನಾಡಿ, ಆಮೇಲೆ ಏನು ಎನ್ನುವುದು ಗೊತ್ತಾಗುತ್ತದೆ ಎಂದಿದ್ದಾಳೆ. ಮನೆಗೆ ಕರೆದುಕೊಂಡು ಬರುತ್ತೇನೆ ಎಂದಾಗ ಅಲ್ಲಿ ಕಿಡ್​ನ್ಯಾಪ್​ ಮಾಡಿಸಿರೋ ಕರ್ಣ ಇದ್ದಾನೆ ಎಂದು ಸಂಜಯ್​ ಬೇಡ ಎಂದಿದ್ದಾನೆ.

66
ಮುಂದೇನು?

ಇದೀಗ ಇಬ್ಬರೂ ಕುಳಿತು ಮಾತನಾಡುವುದು ಯಾವಾಗ, ತನ್ನನ್ನು ಕಿಡ್​ನ್ಯಾಪ್​ ಮಾಡಿಸಿದ್ದು ಯಾರು ಎನ್ನುವುದು ತೇಜಸ್​ಗೆ ತಿಳಿಯುವುದು ಯಾವಾಗ? ನಿತ್ಯಾ ಮೇಲೆ ಕಣ್ಣು ಇಟ್ಟಿರೋ ಸಂಜಯ್​ ಇಬ್ಬರನ್ನೂ ಭೇಟಿ ಮಾಡಿಸ್ತಾನಾ ಇತ್ಯಾದಿ ಪ್ರಶ್ನೆಗಳು ಸದ್ಯ ಎಲ್ಲರನ್ನೂ ಕಾಡ್ತಿದೆ

Read more Photos on
click me!

Recommended Stories