ಗಿಲ್ಲಿ ಕಂಡ್ರೆ ನನಗೇನ್ ಹೊಟ್ಟೆ ಕಿಚ್ ಇಲ್ರಪ್ಪ.. ಯಾಕಿಂಗಂದ್ರೂ ವಿನೋದ್ ಗೊಬ್ರಗಾಲ..!?

Published : Jul 26, 2026, 11:38 AM IST

ಬಿಗ್ ಬಾಸ್ ಸೀಸನ್ 12ರಲ್ಲಿ ಈ ಹಿಂದೆ ಯಾರು ಮಾಡಿರದ ದಾಖಲೆಯ ಒಟನ್ನ ಗಳಿಸಿ, ಕಾಮಿಡಿಯಲ್ಲಿ ಇವರನ್ನ ಮೀರಿಸುವವರಿಲ್ಲ ಎನ್ನುವಷ್ಟರ ಮಟ್ಟಿಗೆ ಮನೆ ಮಾತಾಗಿರುವ ಗಿಲ್ಲಿ ನಟನನ್ನ ಕಂಡರೆ ಗಿಚ್ಚಿ ಗಿಲಿ ಗಿಲಿ ಖ್ಯಾತಿಯ ವಿನೋದ್ ಗೊಬ್ರಗಾಲಗೆ ಹೊಟ್ಟೆಕಿಚ್ಚಾ..!

PREV
16
ಗಿಲ್ಲಿ ನಟನನ್ನ ಕಂಡರೆ ಗಿಚ್ಚಿ ಗಿಲಿ ಗಿಲಿ ಖ್ಯಾತಿಯ ವಿನೋದ್ ಗೊಬ್ರಗಾಲಗೆ ಹೊಟ್ಟೆಕಿಚ್ಚಾ..!

ಬಿಗ್ ಬಾಸ್ ಸೀಸನ್ 12ರಲ್ಲಿ ಈ ಹಿಂದೆ ಯಾರು ಮಾಡಿರದ ದಾಖಲೆಯ ಒಟನ್ನ ಗಳಿಸಿದ್ದು ಗಿಲ್ಲಿ ನಟ, ಇಡೀ ಕರ್ನಾಟಕ ಜನತೆಯನ್ನ ಹೊಟ್ಟೆ ಹುಣ್ಣಾಗುವಷ್ಟು ನಗಿಸಿದ ಮಂಡ್ಯ ಹೈದ. ಮನೆ ಮಗನಾಗಿರುವ  ಪಳಾರ್ ತನ್ನ ಪಂಚಿಂಗ್ ಡೈಲಾಗ್ಸ್ ನಿಂದಲೆ ಎಲ್ಲರ ಗಮನ ಸೆಳೆದಿರುವ. ಬಿಗ್ ಮನೆಯ ಬಿಗ್ ಟ್ರೋಫಿಯನ್ನ ತನ್ನ ಪಾಲಾಗಿಸಿಕೊಂಡ ನಗುವಿನ ಸರದಾರ. ಇದೀಗ ಈತನನ್ನ ಕಂಡ್ರೆ ಗಿಚ್ಚಿ ಗಿಲಿ ಗಿಲಿ ಖ್ಯಾತಿಯ ವಿನೋದ್ ಗೊಬ್ರಗಾಲಗೆ ಹೊಟ್ಟೆಕಿಚ್ಚು ಎನ್ನುವ ಕಮೆಂಟ್ಸ್ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡ್ತಿದೆ.

26
ಗಿಲ್ಲಿ ಬಗ್ಗೆ ಗೊಬ್ರಗಾಲ ಹೇಳಿದ್ದೇನು ಗೊತ್ತಾ..?

ಕಾಮಿಡಿಯಲ್ಲಿ ಇವರನ್ನ ಮೀರಿಸುವವರಿಲ್ಲ ಎನ್ನುವಷ್ಟರ ಮಟ್ಟಿಗೆ ಮನೆ ಮಾತಾಗಿರುವ ಗಿಲ್ಲಿ ನಟನನ್ನ ಕಂಡರೆ ಗಿಚ್ಚಿ ಗಿಲಿ ಗಿಲಿ ಖ್ಯಾತಿಯ ವಿನೋದ್ ಗೊಬ್ರಗಾಲಗೆ ಹೊಟ್ಟೆಕಿಚ್ಚಾ..! ಹೀಗೊಂದು ಚರ್ಚೆ ಸೋಷಿಯಲ್ ಮೀಡಯಾದಲ್ಲಿ ಎದ್ದಿದ್ದು, ವಿನೋದ್ ಗೊಬ್ರಗಾಲ ಇದಕ್ಕೆ ಪ್ರತಿಕ್ರಿಯಿಸಿದ್ದಾರೆ.

36
ವಿನೋದ್ ಗೊಬ್ರಗಾಲ ಮೇಲೆ ಗಿಲ್ಲಿ ಫ್ಯಾನ್ಸ್ ಗರಂ..!

ಹೌದು ವಿನೋದ್ ಗೊಬ್ರಗಾಲ ಇತ್ತೀಚಿಗೆ ಕೊಟ್ಟ ಸಂದರ್ಶನದಲ್ಲಿ ಗಿಲ್ಲಿ ಫ್ಯಾನ್ಸ್ ತನ್ನ ಮೇಲೆ ಗರಂ ಆಗಿದ್ದರ ವಿಚಾರವನ್ನ ಹಂಚಿಕೊಂಡು ಬೇಸರ ಹೊರ ಹಾಕಿದ್ರು, ಗಿಲ್ಲಿ ನಮ್ಮೂರಿನ ಹುಡುಗ, ಎಲ್ಲೇ ಸಿಕ್ರೂ ಅಣ್ಣಾ ಅಂತಾ ಬಾಯ್ತುಂಬಾ ಕರೆದು ಮಾತಾಡಿಸ್ತಾನೆ, ನಮಗೆ ಅವನ ಯಶಸ್ಸು, ಬೆಳವಣಿಗೆಯನ್ನ ನೋಡಿ ಖುಷಿ ಇದೆಯೋ ಹೊರತು, ಹೊಟ್ಟೆಕಿಚ್ಚ್ ಇಲ್ಲ, ಗಿಲ್ಲಿ ವಿಚಾರವಾಗಿ ಮಾತನಾಡಿದಾಗ ಫ್ಯಾನ್ಸ್ ಹಾಕಿದ ಕಮೆಂಟ್ಸ್ ನೋಡಿ ನಿಜಕ್ಕೂ ಬೇಸರವಾಯಿತು, ಎಂದಿದ್ದಾರೆ

46
ನೆಗೆಟೀವ್ ಕಮೆಂಟ್ ಹಾಕೋದರಿಂದ ಅದೇನ್ ಸಾಧಿಸ್ತಾರೊ ಗೊತ್ತಿಲ್ಲ

ಇನ್ನು ಮಾತನ್ನ ಮುಂದುವರೆಸುತ್ತಾ ಗಿಲ್ಲಿ ನಮ್ಮೂರಿನ ಪಕ್ಕದ ಊರಿನವನೆ, ಜೊತೆಯಲ್ಲಿ ನೋಡಿಕೊಂಡು ಬೆಳೆದವರು ನಾವು, ಯಾಕಿತರ ಫ್ಯಾನ್ಸ್ ಸುಖಾ ಸುಮ್ಮನೆ ಮಾತಾಡ್ತಾರೆ, ನೆಗೆಟೀವ್ ಕಮೆಂಟ್ ಹಾಕ್ತಾರೆ ಗೊತ್ತಿಲ್ಲ ಎಂದಿದ್ದಾರೆ

56
ಗಿಲ್ಲಿ ಪಟ್ಟ ಶ್ರಮಕ್ಕೆ ಎಷ್ಟು ಗೆಲುವು ದಕ್ಕಬೇಕು ಅಷ್ಚು ಅವನಿಗೆ ದಕ್ಕಿಗೆ,

ಅದೇನೆ ಇರಲಿ ಗಿಲ್ಲಿ ಪಟ್ಟ ಶ್ರಮಕ್ಕೆ ಎಷ್ಟು ಗೆಲುವು ದಕ್ಕಬೇಕು ಅಷ್ಚು ಅವನಿಗೆ ದಕ್ಕಿಗೆ, ನನ್ನ ಶ್ರಮಕ್ಕೆ ಎಷ್ಟು ಗೆಲುವು ದಕ್ಕಬೇಕು ಅಷ್ಚು ನನಗೆ ದಕ್ಕಿಗೆ. ಯಾರೇನೆ ಹೇಳಿದರೂ ನಮ್ಮ ದೋಸ್ತಿಗೆ ಏನಂತ ನಮಗೆ ಗೊತ್ತು ಎಂದ್ರು ವಿನೋದ್ ಗೊಬ್ರಗಾಲ

66
ಅರಿವಿರದ ಅವರಿವರ ಮಾತಿಗೆ ಅರಿತಿರುವ ನೀನು ಅರಿತೂ ಅರಿಯದಂತಿರುವುದೇ, ನಿಜವಾದ ಅರಿವೂ.

ಅದೇನೆ ಹೇಳಿ ಒಂದು ಕಮೆಂಟ್ ನಿಂದ ಏನೇಲ್ಲ ಮನಸ್ಧಾಪಗಳು, ತೊಂದರೆಗಳು ಆಗಬಹುದೆಂಬ ಅರಿವಿಲ್ಲದೆಯೆ ಅಥವಾ ಅರಿತೆ ಹೀಗೆ ವ್ಯಂಗ್ಯವಾಡ್ತಾರ ದೇವರೇ ಬಲ್ಲ, ಅರಿವಿರದ ಅವರಿವರ ಮಾತಿಗೆ ಅರಿತಿರುವ ನೀನು ಅರಿತೂ ಅರಿಯದಂತಿರುವುದೇ, ನಿಜವಾದ ಅರಿವೂ..ನೀವೇನಂತೀರಾ,,?

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories