ಭಾನುವಾರದ ಸಂಚಿಕೆಯಲ್ಲಿ ಕಳೆದ ನಾಲ್ಕು ವಾರಗಳಿಂದ ಕಾಣೆಯಾಗಿದ್ದ ಮೂವರು ಸ್ಪರ್ಧಿಗಳಿಗೆ ಕಿಚ್ಚ ಸುದೀಪ್ ಸ್ವಾಗತಿಸಿದ್ದಾರೆ. ಹಿಂದಿನ ವಾರದಿಂದ ಮೂವರು ಆಟ ಆರಂಭಿಸಿದ್ದು, ಎಲ್ಲರ ಕಣ್ಣಿಗೂ ಕಾಣಿಸುತ್ತಿದ್ದಾರೆ. ನಮ್ಮ ಸ್ಪರ್ಧಿಗಳು ಎಲ್ಲಿ ಅಂತ ವೀಕ್ಷಕರು ಹುಡುಕುತ್ತಿದ್ದರು. ಇದೀಗ ನೀವು ಕಾಣಿಸುತ್ತಿದ್ದೀರಿ ಎಂದು ಸುದೀಪ್ ಹೇಳಿದರು. ಈ ಮೂಲಕ ಮೂವರಿಗೂ ಎಚ್ಚರಿಕೆಯಿಂದ ಆಟ ಮುಂದುವರಿಸುವಂತೆ ಸಲಹೆ ನೀಡಿದರು.