Amruthadhaare: ಗೌತಮ್​ ಮೇಲೆ ವಠಾರದ ಯುವತಿಯರಿಗೆ ಶುರುವಾಯ್ತು ಕ್ರಷ್​- ಭೂಮಿಕಾ ಎಲ್ಲಿದ್ಯಮ್ಮಾ?

Published : Oct 04, 2025, 11:02 AM IST

ಅಮೃತಧಾರೆ ಧಾರಾವಾಹಿಯು ಮೂರನೇ ಅಧ್ಯಾಯಕ್ಕೆ ಕಾಲಿಟ್ಟಿದ್ದು, ಗೌತಮ್ ಮತ್ತು ಭೂಮಿಕಾ ಬೆಂಗಳೂರಿನಲ್ಲಿ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ. ವಠಾರದಲ್ಲಿ ಗೌತಮ್ ಮೇಲೆ ಹುಡುಗಿಯರ ಕ್ರಷ್​ ಹೆಚ್ಚಾಗಿದ್ದು, ಡುಮ್ಮ ಸರ್​ ಸುಸ್ತಾಗಿದ್ದಾನೆ. ಏನಿದು ನೋಡಿ ರೋಚಕ ಟ್ವಿಸ್ಟ್​!

PREV
16
ಅಮೃತಧಾರೆ 3ನೇ ಅಧ್ಯಾಯ ಶುರು

ಅಮೃತಧಾರೆ (Amruthadhaare) ಸೀರಿಯಲ್​ ಎರಡನೇ ಪಾರ್ಟ್​ ಮುಗಿದು ಈಗ ಮೂರನೆಯ ಪಾರ್ಟ್​ ಶುರುವಾಗಿದೆ. ಎರಡನೆಯ ಹಂತದಲ್ಲಿ ಇನ್ನೇನು ಗೌತಮ್​ ಮತ್ತು ಭೂಮಿಕಾ ಒಂದಾಗುತ್ತಾರೆ ಎಂದುಕೊಳ್ಳುವಷ್ಟರಲ್ಲಿಯೇ ಎಲ್ಲರೂ ಅಯೋಮಯವಾಗಿದೆ. ಭೂಮಿಕಾ ಕೊಡಗಿನ ಮನೆಯನ್ನು ಬಿಟ್ಟು ಬೆಂಗಳೂರು ಸೇರಿದ್ದಾಳೆ. ಐದು ವರ್ಷ ಹೆಂಡತಿ-ಮಗನಿಗಾಗಿ ಹುಡುಕಿದ್ದ ಗೌತಮ್​ಗೆ ಕೊನೆಗೂ ಸಿಕ್ಕಿದ್ದು ನಿರಾಸೆಯೇ.

26
ಬೆಂಗಳೂರು ಸೇರಿದ ಜೋಡಿ

ಅತ್ತ ಭೂಮಿಕಾ ಬೆಂಗಳೂರು ಸೇರಿದ್ರೆ, ಇತ್ತ ಗೌತಮ್​ ಕೂಡ ಬೆಂಗಳೂರಿನ ವಠಾರದಲ್ಲಿ ವಾಸವಾಗಿದ್ದಾನೆ. ವಠಾರದ ಜನರ ಪ್ರೀತಿಗೆ ಪಾತ್ರನಾಗಿದ್ದಾನೆ ಗೌತಮ್​. ಎಲ್ಲರಿಗೂ ಗೌತಮ್​ ಕಂಡ್ರೆ ತುಂಬಾ ಇಷ್ಟ. ಎಲ್ಲರನ್ನೂ ಪ್ರೀತಿಯಿಂದ ಮಾತನಾಡಿಸುತ್ತಾ, ಎಲ್ಲರ ಕೆಲಸವನ್ನೂ ಮಾಡಿಕೊಡುತ್ತಾ, ಯಾರಿಗೆ ಏನು ಬೇಕೋ ಎಲ್ಲವನ್ನೂ ತಂದುಕೊಡುತ್ತಾ, ಎಲ್ಲರ ಆರೋಗ್ಯ ವಿಚಾರಿಸುತ್ತಾ, ಸಮಾಧಾನ ಹೇಳುತ್ತಾ ವಠಾರದವರ ಪ್ರೀತಿ ಗಳಿಸಿದ್ದಾನೆ ಆತ.

36
ಹುಡುಗಿಯರಿಗೆ ಕ್ರಷ್​

ಅದೇ ಇನ್ನೊಂದೆಡೆ, ಆತನ ಮೇಲೆ ಅಲ್ಲಿಯ ಹುಡುಗಿಯರಿಗೂ ಲವ್​ ಶುರುವಾಗಿದೆ. ಗೌತಮ್​ ಒಂಟಿಯಾಗಿ ಇರುವ ಕಾರಣದಿಂದ ಆತನ ಬಗ್ಗೆ ಗೊತ್ತಿಲ್ಲದ ಇಬ್ಬರು ಯುವತಿಯರು, ಗೌತಮ್​ ಕನಸು ಕಾಣುತ್ತಿದ್ದಾರೆ. ಇಬ್ಬರೂ ಪ್ರೀತಿಯಿಂದ ಗೌತಮ್​ನನ್ನು ಮಾತನಾಡಿಸಿದ್ದಾರೆ. ನೀವು ಇಲ್ಲದೇ ತುಂಬಾ ಬೇಸರವಾಗಿತ್ತು ಎಂದು ನುಲಿಯುತ್ತಾ ಮಾತನಾಡಿದ್ದಾರೆ. ಅವರ ಈ ನುಲಿಯುವ ಮಾತು ಕೇಳಿ ಗೌತಮ್​ಗೆ ಸುಸ್ತಾಗಿ ಹೋಗಿದೆ. ಅಲ್ಲಿಂದ ತಪ್ಪಿಸಿಕೊಂಡರೆ ಸಾಕು ಎನ್ನುವಂತಾಗಿದೆ.

46
ಹಾಸ್ಯದ ಲೇಪನ

ಒಟ್ಟಿನಲ್ಲಿ, ಇಷ್ಟು ದಿನ ಸೀರಿಯಸ್​ ಆಗಿ ನಡೆಯುತ್ತಿದ್ದ ಸೀರಿಯಲ್​ನಲ್ಲಿ ಒಂದಿಷ್ಟು ಹಾಸ್ಯವನ್ನು ಲೇಪಿಸಲಾಗಿದೆ. ಆದರೆ ಅದೇ ಇನ್ನೊಂದೆಡೆ ಭೂಮಿಕಾ ಶಾಲೆಯಲ್ಲಿ ಹೆಡ್​ಮಿಸ್​​ ಆಗಿ ಕೆಲಸಕ್ಕೆ ಸೇರಿದ್ದಾಳೆ. ಆಕೆಯ ಸ್ನೇಹಿತೆ ಮಗುವನ್ನು ದತ್ತು ಪಡೆದುಕೊಂಡಿದ್ದಳು. ಆ ಮಗುನೇ ಭೂಮಿಕಾಳ ಮಗು ಆಗಿರುವ ಸಾಧ್ಯತೆ ಇದೆ.

56
ಭೂಮಿಕಾಳಿಗೆ ಮಗಳು ಸಿಗುವ ಟೈಮ್​

ಆ ಸ್ನೇಹಿತೆ ಕೂಡ ಭೂಮಿಕಾ ಸಮೀಪವೇ ಇರುವ ಕಾರಣದಿಂದ ಭೂಮಿಕಾಗೆ ಮಗಳು ಸಿಗುತ್ತಾಳೆ, ಆ ಮಗು ತನ್ನದೇ ಎಂದು ಕಣ್ಣಿಗೆ ಗೊತ್ತಾಗದಿದ್ದರೂ ಕರುಳು ಎನ್ನುವುದು ಇದೆ ಅಲ್ವಾ? ಆ ಮಗುವಿಗೆ ಅಪಾರ ಪ್ರೀತಿ ತೋರುತ್ತಾಳೆ. ಇನ್ನು ಸೀರಿಯಲ್​ ಮುಗಿಯುವ ಹಂತದಲ್ಲಿ ಅದು ತನ್ನದೇ ಮಗು ಎಂದು ಗೊತ್ತಾಗುವುದು ಬಾಕಿ ಇದೆ ಅಷ್ಟೇ.

66
ಭೂಮಿಕಾ ಮೇಲೆ ಸಿಟ್ಟು

ಇದೇ ವೇಳೆ, ಮಗನ ಶಾಲೆಯನ್ನು ಅರ್ಧಕ್ಕೆ ನಿಲ್ಲಿಸಿ, ಏಕಾಏಕಿ ಮನೆಬಿಟ್ಟು ಬಂದಿರುವ ಭೂಮಿಕಾ ಮೇಲೆ ಸೀರಿಯಲ್​ ಪ್ರೇಮಿಗಳ ಸಿಟ್ಟು ಇನ್ನೂ ಇಳಿದಿಲ್ಲ. ಇನ್ನು ಭೂಮಿಕಾಳನ್ನು ಹುಡುಕಲು ಗೌತಮ್​ ಮತ್ತೆಷ್ಟು ವರ್ಷ ಅಲೆಯಬೇಕೋ ಎಂದು ಕೇಳುತ್ತಿದ್ದಾರೆ. ಒಟ್ಟಿನಲ್ಲಿ ಸೀರಿಯಲ್​​ ಇನ್ನಷ್ಟು ವರ್ಷ ಹೋಗಬೇಕೆಂದರೆ ಇದೆಲ್ಲವೂ ಅನಿವಾರ್ಯ ಅಲ್ಲವೆ?

Read more Photos on
click me!

Recommended Stories