ಆಸ್ತಿ ಮಾರಾಟ ಮಾಡಲು ಗೌತಮ್ ಮತ್ತು ಭೂಮಿಕಾ ಅವರ ಸಹಿ ಅಗತ್ಯವಿರುವುದರಿಂದ, ಜೈದೇವ್ ಅವರನ್ನು ಹುಡುಕಲು ರೌಡಿಗಳನ್ನು ಕಳುಹಿಸಿದ್ದಾನೆ. ಈ ವಿಷಯ ತಿಳಿದು ಮಲ್ಲಿ ಆಘಾತಕ್ಕೊಳಗಾಗಿದ್ದು, ಆನಂದ್ ಈ ಬಗ್ಗೆ ಗೌತಮ್ಗೆ ಎಚ್ಚರಿಕೆ ನೀಡಿದ್ದಾನೆ.
ಇದ್ದಬಿದ್ದ ಆಸ್ತಿಯನ್ನೆಲ್ಲಾ ಬರೆದುಕೊಟ್ಟರೂ, ಜೈದೇವ್ ಮತ್ತು ಶಕುಂತಲಾಗೆ ನೆಮ್ಮದಿ ಇಲ್ಲ. ಅವರು ಅದನ್ನು ಮಾರಾಟ ಮಾಡಲು ಕಾನೂನಿನ ತೊಡಕು ಎದುರಾಗ್ತಿದೆ. ಇದೇ ಕಾರಣಕ್ಕೆ ಗೌತಮ್ ಮತ್ತು ಭೂಮಿಕಾ ಸಹಿ ಅವರಿಗೆ ಅಗತ್ಯವಿದೆ.
27
ರೌಡಿಗಳನ್ನು ಬಿಟ್ಟ ಜೈದೇವ್
ಈ ಕಾರಣದಿಂದಾಗಿ ಅವರನ್ನು ಹುಡುಕಲು ರೌಡಿಗಳನ್ನು ಬಿಟ್ಟಿದ್ದಾನೆ ಜೈದೇವ್. ಅಲ್ಲಿಯೇ ಎಲ್ಲಿಯೋ ವಾಸವಾಗಿರುವ ಬಗ್ಗೆ ತಿಳಿಯುತ್ತಲೇ ಅಲ್ಲಿ ಹುಡುಕಿಕೊಂಡು ಹೋಗಿದ್ದಾನೆ.
37
ಮಲ್ಲಿಗೆ ಶಾಕ್
ಮಲ್ಲಿ ಅತ್ತ ಬರುತ್ತಲೇ ಶಕುನಿ ಮಾಮಾ ಎಂದೇ ಫೇಮಸ್ ಆಗಿರೋ ಲಕ್ಷ್ಮೀಕಾಂತ, ಮಲ್ಲಿಗೆ ಎಚ್ಚರಿಸಲು ಓಡಿ ಬಂದರೂ, ಆತ ಬದಲಾಗಿರುವುದು ಮಲ್ಲಿಗೆ ಗೊತ್ತಿಲ್ಲವಲ್ಲ, ಆದ್ದರಿಂದ ಅಲ್ಲಿಂದ ತಪ್ಪಿಸಿಕೊಂಡು ಓಡಿದ್ದಾಳೆ. ಅತ್ತ ಜೈದೇವ್ ಮತ್ತು ಇತ್ತ ರೌಡಿಗಳು ತನ್ನನ್ನು ಹುಡುಕುತ್ತಾ ಇರುವುದು ಆಕೆಗೆ ತಿಳಿದು ಶಾಕ್ ಆಗಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.