ನೋಯ್ಡಾದಲ್ಲಿ ತಲೆ ಎತ್ತಲಿದೆ ದೇಶದ ಮೊದಲ ವೇದ ವನ… ಇದರ ವೈಶಿಷ್ಟ್ಯ ತಿಳಿಯಿರಿ

First Published May 5, 2023, 11:38 AM IST

ನೋಯ್ಡಾದಲ್ಲಿ ವೇದ್ ಫಾರೆಸ್ಟ್ ಪಾರ್ಕ್ ಶೀಘ್ರದಲ್ಲೇ ಸಿದ್ಧವಾಗಲಿದೆ. ಇದು ಸಾಧುಗಳಿಗೆ ಸಮರ್ಪಿತವಾದ ರಾಜ್ಯದ ಮೊದಲ ಉದ್ಯಾನವನವಾಗಿದ್ದು, ಇದರಲ್ಲಿ ಯುವ ಪೀಳಿಗೆಗೆ ನಾಲ್ಕು ವೇದಗಳ ಬಗ್ಗೆ ಸಂಪೂರ್ಣ ಮಾಹಿತಿ ನೀಡಲಾಗುವುದು.

ನೀವು ಪ್ರತಿ ಬಾರಿಯೂ ಹೊಸ ಸ್ಥಳಗಳಿಗೆ ಭೇಟಿ ನೀಡಲು ಇಷ್ಟಪಡುತ್ತಿದ್ದರೆ, ಸ್ವಲ್ಪ ಕಾಯಿರಿ. ಶೀಘ್ರದಲ್ಲೇ ನೀವು ನೋಯ್ಡಾದಲ್ಲಿ(Noida) ಭೇಟಿ ನೀಡಲು ಉತ್ತಮ ಸ್ಥಳದ ಸೃಷ್ಟಿಯಾಗಲಿದೆ. ನೋಯ್ಡಾದ ಸೆಕ್ಟರ್ -78 ರಲ್ಲಿ ಉದ್ಯಾನವನವನ್ನು ಸಿದ್ಧಪಡಿಸಲಾಗುತ್ತಿದೆ, ಇದರಲ್ಲಿ ವೇದಗಳ ಬಗ್ಗೆ ಮಾಹಿತಿ ನೀಡಲಾಗುವುದು. ವೇದಗಳ ಬಗ್ಗೆ ಮಾಹಿತಿ ನೀಡುವ ಭಾರತದ ಮೊದಲ ವಿಶಿಷ್ಟ ಉದ್ಯಾನವನವಿದು.

ಈ ವೇದ ಅರಣ್ಯವು (Forest) 12 ಎಕರೆ ಪ್ರದೇಶದಲ್ಲಿ ಬಹುತೇಕ ಸಿದ್ಧವಾಗಿದೆ. ಇದನ್ನು ಶೀಘ್ರದಲ್ಲೇ ಉದ್ಘಾಟಿಸಲಾಗುವುದು. ನಾಲ್ಕು ವೇದಗಳ ಆಧಾರದ ಮೇಲೆ ಇಲ್ಲಿ ವಿವಿಧ ವಲಯಗಳನ್ನು ರಚಿಸಲಾಗಿದೆ. ವೇದಗಳು ವಿಶ್ವದ ಅತ್ಯಂತ ಹಳೆಯ ಸಾಹಿತ್ಯವಾಗಿದ್ದು, ಅವುಗಳನ್ನು ಭಾರತೀಯ ಸಂಸ್ಕೃತಿಯ ಆಧಾರವೆಂದು ಪರಿಗಣಿಸಲಾಗಿದೆ. ಹಾಗಾದರೆ ವೇದ ವನದ ವಿಶೇಷತೆ ಏನು ಎಂದು ತಿಳಿಯೋಣ.

Latest Videos


ವೇದಗಳ ಜ್ಞಾನ
ವೇದದ ಬಗ್ಗೆ ಎಲ್ಲಾ ಮಾಹಿತಿಯನ್ನು ಪ್ರತಿ ವಲಯದಲ್ಲಿ ನೀಡಲಾಗುವುದು. ಇದಲ್ಲದೆ, ಪ್ರತಿ ವಲಯದಲ್ಲಿ ವೇದದ ಪ್ರಕಾರ ಬಳಸುವ ಗಿಡಮೂಲಿಕೆಗಳು ಮತ್ತು ಔಷಧಿಗಳನ್ನು(Medicine) ಸಹ ಇಲ್ಲಿ ನೆಡಲಾಗುವುದು. ಈ ಉದ್ಯಾನವನದಲ್ಲಿ ಸಪ್ತರ್ಷಿ ಹೆಸರಿನಲ್ಲಿ ವಲಯಗಳನ್ನು ಸಹ ಸಿದ್ಧಪಡಿಸಲಾಗುತ್ತಿದೆ.

7 ಋಷಿಮುನಿಗಳ (Saint) ಹೆಸರಿನಲ್ಲಿ ವಲಯಗಳನ್ನು ಸಿದ್ಧಪಡಿಸಲಾಗುತ್ತಿದೆ
ಇಡೀ ಪ್ರದೇಶವನ್ನು ಏಳು ಸಪ್ತರ್ಷಿಗಳ ಪ್ರದೇಶವಾಗಿ ವಿಂಗಡಿಸಲಾಗುವುದು. ಅವರಲ್ಲಿ ಪ್ರತಿಯೊಬ್ಬರೂ ಕಶ್ಯಪ, ಭಾರದ್ವಾಜ, ಅತ್ರಿ, ವಿಶ್ವಾಮಿತ್ರರಂತಹ ಸಂತರ ಹೆಸರನ್ನು ಹೊಂದಿರಲಿದೆ. ಇಷ್ಟೇ ಅಲ್ಲ, ಋಷಿಮುನಿಗಳ ಜೀವನಕ್ಕೆ ಸಂಬಂಧಿಸಿದ ಯಾವುದೇ ಘಟನೆಯನ್ನು ಪ್ರತಿ ವಲಯದಲ್ಲಿ ಶಿಲ್ಪಕಲೆ ಮತ್ತು ಕಲೆಯ ಮೂಲಕ ಪ್ರದರ್ಶಿಸಲಾಗುವುದು. 
 

ಉದಾಹರಣೆಗೆ, ಅಗಸ್ತ್ಯನು(Agasthya) ತನ್ನ ಮಂತ್ರ ಶಕ್ತಿಯಿಂದ ಸಮುದ್ರದ ಸಂಪೂರ್ಣ ನೀರನ್ನು ಕುಡಿದನು ಎಂದು ಹೇಳಲಾಗುತ್ತೆ. ಅವರ ಜೀವನದ ಈ ಘಟನೆಯನ್ನು ವೇದ ವನದಲ್ಲಿ ಚಿತ್ರಿಸಲಾಗುವುದು. ಇದಕ್ಕಾಗಿ, ಇಲ್ಲಿ ಒಂದು ಕೊಳವನ್ನು ನಿರ್ಮಿಸಲಾಗುತ್ತಿದೆ, ಅದರ ಮುಂದೆ, ಅಗಸ್ತ್ಯ ಋಷಿ ಅವರ ಕಲಾಕೃತಿಯನ್ನು ಸ್ಥಾಪಿಸಲಾಗುವುದು. ಇದು ಸಾಧುಗಳಿಗೆ ಸಮರ್ಪಿತವಾದ ರಾಜ್ಯದ ಮೊದಲ ಉದ್ಯಾನವನ.

ನೀವು ಮರಗಳು(Trees) ಮತ್ತು ಸಸ್ಯ ಮಾಹಿತಿ
ವೇದಗಳಲ್ಲಿ ಮರ ಮತ್ತು ಸಸ್ಯಗಳಿಗೆ ಹೆಚ್ಚಿನ ಪ್ರಾಮುಖ್ಯತೆ ಇದೆ. ಅವುಗಳನ್ನು ಸಾಮಾನ್ಯವಾಗಿ ಧಾರ್ಮಿಕ ಆಚರಣೆ, ಹವನ ಮತ್ತು ಯಜ್ಞಗಳಲ್ಲಿ ಬಳಸಲಾಗುತ್ತೆ. ಇಲ್ಲಿ ಮರಗಳನ್ನು ಹಸಿರು ಮನೆಯಾಗಿ ನೆಡಲಾಗುತ್ತೆ. ಇದರಲ್ಲಿ ಕಲ್ಪವೃಕ್ಷ, ಬೇಲ, ಆಮ್ಲಾ, ಅಶೋಕ, ಶ್ರೀಗಂಧ, ರೀತಾ, ಬಾಳೆಹಣ್ಣು, ಪಾರಿಜಾತ, ಮಂದಾರ, ಆಲದ ಮರ, ಅಮಲ್ಟಾಸ, ಅರ್ಜುನ, ಪ್ಲಮ್, ಹುಣಸೆ ಮುಂತಾದ ಸಸ್ಯಗಳು ಸೇರಿವೆ.

ಸಂಜೆ ಲೇಸರ್ ಶೋ(Laser show) ನಡೆಯಲಿದೆ
ಇಲ್ಲಿ ನಾಲ್ಕು ವೇದಗಳನ್ನು ನೆನಪಿಸುವ ಅನೇಕ ಗೋಡೆಗಳನ್ನು ನಿರ್ಮಿಸಲಾಗಿದೆ. ಪ್ರಾಚೀನ ಭಾರತೀಯ ಸಂತರ ಪ್ರತಿಮೆಗಳನ್ನು ಅವುಗಳ ಮೇಲೆ ಸ್ಥಾಪಿಸಲಾಗಿದೆ. ಇದಲ್ಲದೆ, ಸ್ಥಳೀಯ ಜನರಿಗೆ ಸಂಜೆಯನ್ನು ಸ್ಮರಣೀಯವಾಗಿಸಲು ಉದ್ಯಾನದಲ್ಲಿ ಪ್ರತಿದಿನ ವಾಟರ್ ಲೇಸರ್ ಶೋ (Water Laser Show) ನಡೆಸಲಾಗುವುದು. ಇದರಲ್ಲಿ, ವೇದಗಳು ಮತ್ತು ಪುರಾಣಗಳ ಬಗ್ಗೆ 30 ನಿಮಿಷಗಳ ಕಾಲ ಮಾಹಿತಿಯನ್ನು ನೀಡಲಾಗುತ್ತೆ. ಉದ್ಯಾನವನವು ಓಪನ್ ಜಿಮ್, ಆಂಫಿಥಿಯೇಟರ್ ಮತ್ತು ಕ್ಯಾಟರಿಂಗ್ ರೆಸ್ಟೋರೆಂಟ್  ಸಹ ಹೊಂದಿದೆ.
 

ಪ್ರವೇಶ ಉಚಿತ (Free Entry)
ಇದು ದೆಹಲಿ ಎನ್ ಸಿಆರ್‌ನ ಮೊದಲ ವಿಶಿಷ್ಟ ಉದ್ಯಾನವನ. ಇಲ್ಲಿ ಪಾದಚಾರಿಗಳಿಗೆ ಪ್ರತ್ಯೇಕ ಟ್ರ್ಯಾಕ್ ಇದೆ. ಒಳ್ಳೆಯ ವಿಷಯವೆಂದರೆ ಪ್ರವೇಶ ಉಚಿತ. ಸೆಕ್ಟರ್ -78 ರ ವಿಶಾಲ ಪ್ರದೇಶದಲ್ಲಿ ನಿರ್ಮಿಸಲಾಗುತ್ತಿರುವ ವೇದವನಕ್ಕಾಗಿ ಪ್ರಾಧಿಕಾರವು 28 ಕೋಟಿ ರೂ. ಖರ್ಚು ಮಾಡಲಿದೆ. ಆದ್ದರಿಂದ ಮುಂದಿನ ಸಲ ನೋಯ್ಡಾಗೆ ಬಂದರೆ ಮಿಸ್ ಮಾಡದೆ ವೇದ್ ಫಾರೆಸ್ಟ್ ಪಾರ್ಕ್ ಗೆ ಭೇಟಿ ನೀಡಿ.  

click me!