ಸೌತಡ್ಕ ಶ್ರೀ ಮಹಾಗಣಪತಿ ದೇವಾಲಯ (Sauthadka Mahaganapati)
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನಲ್ಲಿರುವ ಕೊಕ್ಕಡದಿಂದ ಮೂರು ಕಿಲೋ ಮೀಟರ್ ದೂರದಲ್ಲಿರುವ ಸೌತಡ್ಕದಲ್ಲಿರುವ ಈ ದೇವಾಲಯದಲ್ಲಿ ದೇವರಿಗೆ ಗುಡಿಯೇ ಇಲ್ಲ. ಬಯಲಲ್ಲೇ ನೆಲೆಸಿರುವ ಗಣಪತಿಗೆ ಇಲ್ಲಿ ಪೂಜಿಸಲಾಗುತ್ತೆ. ದನ ಕಾಯುವ ಗೊಲ್ಲರಿಗೆ ಈ ವಿಗ್ರಹ ಸಿಕ್ಕಿತಂತೆ, ಅವರು ಇದನ್ನು ಮರದ ಬುಡದಲ್ಲಿ ಇಟ್ಟು, ಸೌತೆಕಾಯಿ ಮಿಡಿಗಳನ್ನು ಪ್ರತಿದಿನ ನೈವೇದ್ಯವಾಗಿಟ್ಟು ಪೂಜೆ ಮಾಡುತ್ತಾ ಬಂದರಂತೆ, ಅಂದಿನಿಂದ ಇಲ್ಲಿಗೆ ಸೌತಡ್ಕ ಎಂದು ಹೆಸರು ಬಂತು. ಈ ದೇಗುಲಕ್ಕೆ ಗುಡಿ ಕಟ್ಟುವ ಬಗ್ಗೆ ನಿರ್ಧರಿಸಲಾಗಿತ್ತು, ಆದರೆ ಕನಸಿನಲ್ಲಿ ಬಂದ ಬಾಲ ಗಣಪತಿ ಗೋಪುರ ಕಟ್ಟೊದಾದರೆ ದಿನಬೆಳಗಾಗೋದರ ಒಳಗೆ ಕಾಶಿ ವಿಶ್ವನಾಥನಿಗೆ ಕಾಣುವಷ್ಟು ಎತ್ತರದಲ್ಲಿ ಗೋಪು ನಿರ್ಮಿಸಬೇಕು ಎಂದರಂತೆ, ಇದು ಅಸಾಧ್ಯವಾದ ಕಾರಣ ಅದನ್ನು ಮಾಡದೇ ಹಾಗೇ ಉಳಿಸಲಾಯಿತು.