ದಂತಕಥೆಯ ಪ್ರಕಾರ, ನರ್ಮದಾ ಮತ್ತು ಶೋನಾ ಭದ್ರಾ ಮದುವೆಯಾಗಲು ಹೊರಟಿದ್ದರು, ಆದರೆ ಮದುವೆಗೆ ಸ್ವಲ್ಪ ಮೊದಲು, ಭದ್ರಾ ತನ್ನ ಸೇವಕಿ ಜುಹಿಲಾದಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದಾನೆ ಎಂದು ನರ್ಮದಾಗೆ ತಿಳಿಯಿತು. ನರ್ಮದಾ ಈ ಅವಮಾನವನ್ನು ತಡೆಯಲಾರದೆ ಮಂಟಪವನ್ನು ಬಿಟ್ಟು ವಿರುದ್ಧ ದಿಕ್ಕಿನಲ್ಲಿ ಹೋದಳು. ಶೋನಾ ಭದ್ರಾ ಅವಳನ್ನು ತಡೆಯಲು ಬಹಳ ಪ್ರಯತ್ನಿದರೂ ಆಕೆ ನಿಲ್ಲಲಿಲ್ಲವಂತೆ.. ಆದ್ದರಿಂದ, ನರ್ಮದಾ ಇನ್ನೂ ವಿರುದ್ಧ ದಿಕ್ಕಿನಲ್ಲಿ ಹರಿಯುತ್ತದೆ ಎಂದು ನಂಬಲಾಗಿದೆ.