ಮಾನವನಾಗಿ ಹುಟ್ಟಿದ್ಮೇಲೆ ಭಾರತದ ಈ ಅದ್ಭುತ ತಾಣಗಳನ್ನು ಒಮ್ಮೆ ನೋಡಲೇಬೇಕು!

First Published Mar 5, 2021, 12:38 PM IST

ಭಾರತದಲ್ಲಿ ಪ್ರವಾಸಿಗರು ಆಯ್ಕೆ ಮಾಡಿಕೊಳ್ಳಲು ಅಪರಿಮಿತ ಪ್ರವಾಸಿ ತಾಣಗಳಿವೆ. ಭವ್ಯವಾದ ಪರ್ವತಗಳು, ನಯನ ಮನೋಹರ ಸೌಂದರ್ಯ, ಸ್ಫಟಿಕ ಜಲಪಾತಗಳು, ವಿಚಿತ್ರವಾದ ಕಡಲ ತೀರಗಳು, ಜನನಿಬಿಡ ನಗರಗಳು ಮತ್ತು ಐತಿಹಾಸಿಕವಾಗಿ ಮತ್ತು ಸಾಂಸ್ಕೃತಿಕ ಸ್ಮಾರಕಗಳನ್ನು ಆನಂದಿಸಬಹುದು. ಪ್ರವಾಸಿಗರು ತಮ್ಮ ಸ್ನೇಹಿತರು, ಕುಟುಂಬ ಅಥವಾ ಸೋಲೋ ಟ್ರಿಪ್ ಮಾಡಲು ಭಾರತದಲ್ಲಿ ವಿವಿಧ ಪ್ರವಾಸಗಳನ್ನು ಯೋಜಿಸಬಹುದು. ಭಾರತದಲ್ಲಿ ಪ್ರತಿಯೊಬ್ಬರೂ ನೋಡಲೇಬೇಕಾದ ಪ್ರದೇಶಗಳು ಇಲ್ಲಿವೆ... 

ಕಾಶ್ಮೀರ: ಕಾಶ್ಮೀರವನ್ನು ಭೂಮಿ ಮೇಲಿನ ಸ್ವರ್ಗ ಎನ್ನುತ್ತಾರೆ. ಇದು ನೀವು ಭೇಟಿ ನೀಡಲೇಬೇಕಾದ ತಾಣಗಳು.ನೀವು ನಿಮ್ಮ ಕುಟುಂಬ, ಸ್ನೇಹಿತರೊಂದಿಗೆ ರಜೆಯನ್ನು ಯೋಜಿಸುತ್ತಿದ್ದರೆ ಅಥವಾ ಸೋಲೋ ಟ್ರಿಪ್‌ಗಾಗಿ ಎದುರು ನೋಡುತ್ತಿದ್ದರೆ, ಕಾಶ್ಮೀರವು ಎಲ್ಲಾ ರೀತಿಯ ಪ್ರವಾಸ ಯೋಜನೆಗಳಿಗೆ ಸೂಕ್ತ ಸ್ಥಳ. ನದಿಗಳು, ಸುಂದರ ಜಲಪಾತಗಳು, ಹಣ್ಣಿನ ಆರ್ಕಿಡ್ ಗಳು, ವೈಬ್ರೆಂಟ್ ಕಣಿವೆ ಮತ್ತು ಹಚ್ಚ ಹಸಿರಿನ ದಟ್ಟ ಅರಣ್ಯವನ್ನು ಹೊಂದಿರುವ ಈ ತಾಣ ಮಂತ್ರ ಮುಗ್ಧಗೊಳಿಸುತ್ತದೆ.
undefined
ತಾಜ್ ಮಹಲ್: ಆಗ್ರಾ ಹೆಚ್ಚಿನ ಜನ ಭೇಟಿ ನೀಡುವ ತಾಣ. ಪ್ರೇಮಸೌಧ ತಾಜ್ ಮಹಲ್ ಎಲ್ಲಾ ಮೂಲೆ ಮೂಲೆಯಿಂದ ಜನರನ್ನು ಸೆಳೆಯುತ್ತದೆ. ಪ್ರಪಂಚದ ಏಳು ಅದ್ಭುತಗಳಲ್ಲಿ ಒಂದಾದ ಇದನ್ನು ನೋಡಲೇಬೇಕು.
undefined
ಲೇಹ್: ಇದು ಪ್ರತಿ ಪ್ರಯಾಣ ಉತ್ಸಾಹಿ ಬಕೆಟ್ ಲಿಸ್ಟ್‌ನಲ್ಲಿ ಖಂಡಿತವಾಗಿಯೂ ಇರುವ ಸ್ಥಳ. ಲಡಾಖ್‌ನ ಆಕರ್ಷಕ ನಾಡಿನಲ್ಲಿ ನೆಲೆಗೊಂಡ ಲೇಹ್ ತನ್ನ ಸೌಂದರ್ಯದಿಂದ ಪ್ರವಾಸಿಗರನ್ನು ಸೆಳೆಯುತ್ತದೆ. ಲೇಹ್‌ನಲ್ಲಿ ಪರ್ವತಾರೋಹಣ, ಚಾರಣ, ಬೈಕಿಂಗ್, ಜೀಪ್ ಪ್ರವಾಸ ಮತ್ತು ರಾಫ್ಟಿಂಗ್ ಸೇರಿದಂತೆ ರೋಮಾಂಚಕಾರಿ ಮತ್ತು ಸಾಹಸಮಯ ಚಟುವಟಿಕೆಗಳನ್ನು ಆನಂದಿಸಬಹುದು.
undefined
ಅಜಂತಾ ಗುಹೆ: ಇಲ್ಲಿನ ಅದ್ಭುತ ಶಿಲ್ಪ ಕಲಾಕೃತಿಗಳನ್ನು ನೋಡುವುದು ಕಣ್ಣಿಗೆ ಹಬ್ಬ. 1819ರವರೆಗೆ ಯಾರಿಗೂ ಈ ಬಗ್ಗೆ ಗೊತ್ತಿರಲಿಲ್ಲ. ಅದರ ನಂತರವಷ್ಟೇ ಇದನ್ನು ಕಂಡು ಹಿಡಿದರು. ಇಲ್ಲಿನ ಗುಹೆಗಳನ್ನು ನೋಡುವುದೇ ಕಣ್ಣಿಗೆ ಹಬ್ಬ.
undefined
ಜೈಸಲ್ಮೇರ್ : ಇದು ರಾಜಸ್ಥಾನದ ಮೂಲೆಯಲ್ಲಿರುವ ಹಾಗು ಪಾಕಿಸ್ತಾನದ ಗಡಿಯಲ್ಲಿರುವಂತಹ ಒಂದು ಸುಂದರ ತಾಣ. ಇಲ್ಲಿನ ಲೇಕ್, ಅರಮನೆಗಳು, ಮರಳು.. ಎಲ್ಲವೂ ಗೋಲ್ಡನ್ ಸಿಟಿಯನ್ನಾಗಿ ಮಾರ್ಪಾಡು ಮಾಡಿದೆ.
undefined
ಮಡಿಕೇರಿ: ಹಚ್ಚ ಹಸಿರಿನ ನಡುವೆ ಮತ್ತು ಪ್ರಕೃತಿನಡುವೆ ಸ್ವಲ್ಪ ಸಮಯ ಕಳೆಯಲು ಬಯಸುವವರಿಗೆ ಕೂರ್ಗ್ ಸೂಕ್ತ ಸ್ಥಳ. ಕೂರ್ಗ್‌ನಲ್ಲಿರುವಾಗ, ಅಬ್ಬಿ ಜಲಪಾತ, ನಲ್ಕಂದ್ ಅರಮನೆ, ಬರಪೊಳೆ ನದಿ, ಬ್ರಹ್ಮಗಿರಿ ಶಿಖರ, ಇರುಪ್ಪು ಜಲಪಾತ, ನಾಗರಹೊಳೆ ರಾಷ್ಟ್ರೀಯ ಉದ್ಯಾನ ಸೇರಿಹಲವು ಸುಂದರ ತಾಣಗಳನ್ನು ಭೇಟಿ ಮಾಡಬಹುದು.
undefined
ಗೋಕರ್ಣ: ಇದು ಒಂದು ಅಸಾಂಪ್ರದಾಯಿಕ ಸ್ಥಳ, ಇದು ಮುಖ್ಯವಾಹಿನಿಯ ಪ್ರವಾಸೋದ್ಯಮ ಯೋಜನೆಗಳಲ್ಲಿ ಅಷ್ಟೊಂದು ಜನಪ್ರಿಯವಾಗಿಲ್ಲ. ಆಫ್ ಬೀಟ್ ಸ್ಥಳಗಳಿಗೆ ಭೇಟಿ ನೀಡಲು ನಿಜವಾಗಿಯೂ ಇಷ್ಟಪಡುವ ಜನರು ತಮ್ಮ ಮುಂದಿನ ಪ್ರಯಾಣ ಯೋಜನೆಗಾಗಿ ಗೋಕರ್ಣವನ್ನು ಪರಿಗಣಿಸಬಹುದು. ಗೋಕರ್ಣವು ಕರ್ನಾಟಕದಲ್ಲಿದ್ದು, ಹಿಂದೂ ಯಾತ್ರಾ ಸ್ಥಳವಾಗಿಯೂ ಸಹ ಬೆಳೆಯುತ್ತಿದೆ.
undefined
ಮನಾಲಿ: ಸುತ್ತಲೂ ಇರುವ ಗಿರಿಶ್ರೇಣಿಗಳ ಬಿಯಾಸ್ ನದಿ, ಸುತ್ತಲೂ ಅದ್ಭುತವಾದ ಪರ್ವತಗಳು, ಆಹ್ಲಾದಕರ ಹವಾಮಾನ, ಕಾಲಾತೀತ ಸೌಂದರ್ಯದಿಂದ ಮನಾಲಿ ಖಂಡಿತವಾಗಿಯೂ ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತದೆ. ಸ್ನೇಹಿತರೊಂದಿಗೆ ಅಥವಾ ಸೋಲೋ ಟ್ರಿಪ್‌ನಲ್ಲಿ ಮೊದಲ ಟ್ರಿಪ್ ಪ್ಲಾನ್ ಮಾಡುವವರು ಮನಾಲಿಗೆ ಬಂದರೆ ಅದ್ಭುತವಾದ ಅನುಭವ ನೀಡುವುದರಲ್ಲಿ ಅನುಮಾನವವೇ ಇಲ್ಲ.
undefined
click me!