ರಾಧಾ ರಾಣಿ ಮತ್ತು ಶ್ರೀಕೃಷ್ಣನ ಒಬ್ಬರನ್ನೊರು ಬಹಳವಾಗಿ ಪ್ರೀತಿಸುತ್ತಿದ್ದರು. ಅವರಿಬ್ಬರ ಪ್ರೀತಿ ಅಮರವಾದುದು, ಅಂತಹ ಪ್ರೀತಿ ಬೇರೆಲ್ಲೂ ಕಾಣ ಸಿಗದು ಎನ್ನಲಾಗುತ್ತೆ. ಆದರೆ, ನಾರದರ ಶಾಪದಿಂದಾಗಿ, ರಾಧಾ ರಾಣಿ ಮತ್ತು ಭಗವಾನ್ ಕೃಷ್ಣನು ಜೊತೆಯಾಗಿ ಬಾಳಲು ಮತ್ತು ಮದುವೆಯಾಗಲು ಸಾಧ್ಯವಾಗಲಿಲ್ಲ. ನಂತರ, ರಾಧಾ ರಾಣಿಗೆ ವಯಸ್ಸಾದಾಗ, ಕೃಷ್ಣನು ಅರಮನೆಯಲ್ಲಿ ವಾಸಿಸುತ್ತಿದ್ದನು. ಆದರೆ ಕೃಷ್ಣನಿಗೆ ರಾಧಾಳಿಂದ ದೂರವಾದ ವಿರಹ ವೇದನೆ ಎಂದಿಗೂ ಕಾಡುತ್ತಿದ್ದು ಎನ್ನಲಾಗಿದೆ.