ಸಾಯುವ ಮುನ್ನ ಒಮ್ಮೆಯಾದರೂ ಸ್ವರ್ಗ ನೋಡಬೇಕು ಅಂದ್ರೆ ಇಲ್ಲಿಗೆ ಬನ್ನಿ! ಹಿಮಾಲಯದ ಮಡಿಲಲ್ಲಿದೆ ಈ ಅದ್ಭುತ ತಾಣ

Published : Aug 21, 2026, 07:05 PM IST

Madhyamaheshwar: ಉತ್ತರಾಖಂಡದ ಮದ್ಮಹೇಶ್ವರವು ಪಂಚ ಕೇದಾರಗಳಲ್ಲಿ ಒಂದಾಗಿದೆ. ನೀವು ಸಾಯುವ ಮುನ್ನ ಒಂದು ಬಾರಿಯಾದರು ಸ್ವರ್ಗ ನೋಡಬೇಕು ಅಂದ್ರೆ, ನೀವು ಈ ತಾಣಕ್ಕೆ ಭೇಟಿ ನೀಡಲೇಬೇಕು. ಹಿಮಚ್ಚಾಧಿತ ಪರ್ವತಗಳು, ಶಿವನ ದೇವಾಲಯ, ಸುಂದರ ಪ್ರಕೃತಿ, ಹಸಿರು ಹೊದ್ದ ಬೆಟ್ಟಗಳು, ಇದೇ ನಿಜವಾದ ಸ್ವರ್ಗ.

PREV
16
ಮದ್ಮಹೇಶ್ವರ ಪ್ರವಾಸ

ಪರ್ವತಗಳು, ಹಸಿರು ಕಾಡುಗಳು, ಜಲಪಾತಗಳು, ನದಿಗಳು ಮತ್ತು ಹಿಮದಿಂದ ಆವೃತವಾಗಿರುವ ಎತ್ತರದ ಶಿಖರಗಳ ನಡುವೆ ನೆಮ್ಮದಿಯ ಕ್ಷಣಗಳನ್ನು ಕಳೆಯಬೇಕು ಅನ್ನೋ ಆಸೆ ನಿಮಗಿದ್ದರೆ, ಉತ್ತರಾಖಂಡದ ಮದ್ಮಹೇಶ್ವರ ನಿಮ್ಮ ಮುಂದಿನ ಪ್ರವಾಸದ ತಾಣವಾಗಬಹುದು. ರುದ್ರಪ್ರಯಾಗ ಜಿಲ್ಲೆಯಲ್ಲಿರುವ ಮದ್ಮಹೇಶ್ವರವು ಪಂಚಕೇದಾರಗಳಲ್ಲಿ ಒಂದಾಗಿದ್ದು, ಇಲ್ಲಿ ಶಿವನ ಮಧ್ಯಭಾಗ ಅಂದರೆ ನಾಭಿಯನ್ನು ಪೂಜಿಸಲಾಗುತ್ತದೆ.

26
3,497 ಮೀಟರ್ ಎತ್ತರದಲ್ಲಿರುವ ದೇವಾಲಯ

ಸಮುದ್ರಮಟ್ಟದಿಂದ ಸುಮಾರು 3,497 ಮೀಟರ್ ಎತ್ತರದಲ್ಲಿರುವ ಮದ್ಮಹೇಶ್ವರ ದೇವಾಲಯದ ಸುತ್ತಲಿನ ಪ್ರಕೃತಿ ಸೌಂದರ್ಯ ಪ್ರವಾಸಿಗರನ್ನು ಮಂತ್ರಮುಗ್ಧರನ್ನಾಗಿಸುತ್ತದೆ. ಇಲ್ಲಿಂದ ಚೌಖಂಭಾ ಸೇರಿದಂತೆ ಹಿಮಾಲಯದ ಎತ್ತರದ ಶಿಖರಗಳ ಅದ್ಭುತ ದೃಶ್ಯಗಳನ್ನು ಕಣ್ತುಂಬಿಕೊಳ್ಳಬಹುದು. ಕುಟುಂಬದೊಂದಿಗೆ ಪ್ರವಾಸ ಕೈಗೊಳ್ಳುವವರಿಗೂ ಇದು ವಿಶೇಷ ಅನುಭವ ನೀಡುವ ತಾಣವಾಗಿದೆ.

36
ದೆಹಲಿಯಿಂದ ಮದ್ಮಹೇಶ್ವರಕ್ಕೆ ಹೇಗೆ ಹೋಗುವುದು?

ದೆಹಲಿಯಿಂದ ರಸ್ತೆ ಮಾರ್ಗವಾಗಿ ಪ್ರಯಾಣಿಸುವವರು ಹರಿದ್ವಾರ, ಋಷಿಕೇಶ, ದೇವಪ್ರಯಾಗ, ಶ್ರೀನಗರ, ರುದ್ರಪ್ರಯಾಗ ಮತ್ತು ಊಖಿಮಠ ಮಾರ್ಗವಾಗಿ ರಾಂಸಿ ಗ್ರಾಮ ತಲುಪಬಹುದು. ರಾಂಸಿಯನ್ನು ಮದ್ಮಹೇಶ್ವರ ಟ್ರೆಕ್‌ನ ಪ್ರಮುಖ ಬೇಸ್ ಪಾಯಿಂಟ್ ಎಂದು ಪರಿಗಣಿಸಲಾಗುತ್ತದೆ. ರಾಂಸಿಯ ನಂತರ ವಾಹನ ಸಂಚಾರದ ಮಾರ್ಗ ಮುಗಿಯುತ್ತದೆ. ಅಲ್ಲಿಂದ ಸುಮಾರು 16ರಿಂದ 17 ಕಿಲೋಮೀಟರ್‌ಗಳಷ್ಟು ಕಾಲ್ನಡಿಗೆ ಟ್ರೆಕ್ ಮಾಡಬೇಕಾಗುತ್ತದೆ.

46
ದಾರಿಯುದ್ದಕ್ಕೂ ಸಿಗಲಿದೆ ಪ್ರಕೃತಿಯ ಅದ್ಭುತ ಅನುಭವ

ಟ್ರೆಕ್ ಆರಂಭಿಸಿದ ಬಳಿಕ ಗೊಂಡಾರ್ ಮತ್ತು ಬಂತೋಲಿ ಸೇರಿದಂತೆ ಹಲವು ಸುಂದರ ಬೆಟ್ಟದ ಹಳ್ಳಿಗಳು ಎದುರಾಗುತ್ತವೆ. ಕಾಡು, ನದಿ, ಜಲಪಾತ ಮತ್ತು ಎತ್ತರದ ಪರ್ವತಗಳ ನಡುವೆ ಸಾಗುವ ಈ ಟ್ರೆಕ್ ಸ್ವತಃ ಒಂದು ಮರೆಯಲಾಗದ ಅನುಭವ. ಮಾರ್ಗಮಧ್ಯೆ ಪ್ರವಾಸಿಗರಿಗೆ ತಂಗಲು ಮತ್ತು ಊಟ ಮಾಡಲು ಮೂಲಭೂತ ಸೌಲಭ್ಯಗಳಿರುವ ಹೋಂಸ್ಟೇಗಳು ಹಾಗೂ ಸಣ್ಣ ವಸತಿ ಸ್ಥಳಗಳು ಕೂಡ ಸಿಗುತ್ತವೆ.

56
ಮದ್ಮಹೇಶ್ವರದಿಂದ ಕಾಣುತ್ತೆ ಅದ್ಭುತ ದೃಶ್ಯ

ಮದ್ಮಹೇಶ್ವರ ದೇವಾಲಯದಿಂದ ಸುಮಾರು 2 ಕಿಲೋಮೀಟರ್ ಮುಂದೆ ಬುದ್ಧ ಮದ್ಮಹೇಶ್ವರ ಇದೆ. ಇಲ್ಲಿಂದ ಚೌಖಂಭಾ, ನೀಲಕಂಠ ಸೇರಿದಂತೆ ಹಿಮದಿಂದ ಆವೃತವಾಗಿರುವ ಹಲವು ಪರ್ವತ ಶಿಖರಗಳ ಅದ್ಭುತ ನೋಟ ಕಾಣಿಸುತ್ತದೆ. ಇದರ ಜೊತೆಗೆ ಕಾಂಚನಿ ತಾಲ್ ಎಂಬ ಎತ್ತರ ಪ್ರದೇಶದಲ್ಲಿರುವ ಹಿಮನದಿ ಸರೋವರವೂ ಇದೆ. ಆದರೆ ಅಲ್ಲಿಗೆ ತಲುಪಲು ಪ್ರತ್ಯೇಕ ಟ್ರೆಕ್ ಮಾಡಬೇಕಾಗುತ್ತದೆ.

66
ಟ್ರೆಕ್‌ಗೂ ಮುನ್ನ ಈ ವಿಷಯ ಮರೆಯಬೇಡಿ

ಮದ್ಮಹೇಶ್ವರ ಟ್ರೆಕ್ ಸುಲಭವಾದ ಪ್ರಯಾಣ ಅಲ್ಲ. ಎತ್ತರ ಮತ್ತು ಬದಲಾಗುವ ಹವಾಮಾನವನ್ನು ಗಮನದಲ್ಲಿಟ್ಟುಕೊಂಡು ದೈಹಿಕ ಸಾಮರ್ಥ್ಯ, ಬೆಚ್ಚಗಿನ ಬಟ್ಟೆ, ಸಾಕಷ್ಟು ನೀರು ಮತ್ತು ಅಗತ್ಯ ವಸ್ತುಗಳನ್ನು ಕೊಂಡೊಯ್ಯಬೇಕು. ವಿಶೇಷವಾಗಿ ಮಳೆಗಾಲದಲ್ಲಿ ರಸ್ತೆಗಳು ಮತ್ತು ಟ್ರೆಕ್ ಮಾರ್ಗಗಳ ಪರಿಸ್ಥಿತಿ ಬದಲಾಗುವ ಸಾಧ್ಯತೆ ಇರುವುದರಿಂದ ಸ್ಥಳೀಯ ಆಡಳಿತ ಅಥವಾ ಅನುಭವಿ ಗೈಡ್‌ಗಳಿಂದ ಹವಾಮಾನ ಹಾಗೂ ಮಾರ್ಗದ ಮಾಹಿತಿ ಪಡೆದುಕೊಂಡ ನಂತರವೇ ಪ್ರಯಾಣ ಆರಂಭಿಸುವುದು ಉತ್ತಮ. ಮದ್ಮಹೇಶ್ವರವು ಕೇವಲ ಧಾರ್ಮಿಕ ತಾಣವಲ್ಲ; ಹಿಮಾಲಯದ ಅದ್ಭುತ ಪ್ರಕೃತಿ ಸೌಂದರ್ಯವನ್ನು ಹತ್ತಿರದಿಂದ ಅನುಭವಿಸಲು ಬಯಸುವವರಿಗೆ ಇದು ನೆನಪಿನಲ್ಲಿ ಉಳಿಯುವ ಪ್ರವಾಸದ ಅನುಭವವಾಗಬಹುದು.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories