ವಾಲ್ಮೀಕಿ ರಾಮಾಯಣವು ರಾಮನ ಜನನದಿಂದ ರಾವಣನ ವಧೆಯವರೆಗಿನ ಸಂಪೂರ್ಣ ಪ್ರಯಾಣವನ್ನು ವಿವರಿಸುತ್ತದೆ. ಜೊತೆಗೆ ರಾಮ ತನ್ನ ವನವಾಸದ ಸಮಯದಲ್ಲಿ ಭೇಟಿ ನೀಡಿದ ವಿವಿಧ ಸ್ಥಳಗಳ ಕುರಿತು ಸಹ ಮಾಹಿತಿ ನೀಡುತ್ತೆ. ಇದರಲ್ಲಿ ಪಾಕಿಸ್ತಾನದ ಒಂದು ಸ್ಥಳದ ಕುರಿತೂ ಕೂಡ ಉಲ್ಲೇಖ ಇದೆ.
ವಾಲ್ಮೀಕಿ ರಾಮಾಯಣದ (Valmiki Ramayana )ಪ್ರಕಾರ, ರಾಮನು ಉತ್ತರ ಪ್ರದೇಶದ ಅವಧ್ ಎಂದೂ ಕರೆಯಲ್ಪಡುವ ಅಯೋಧ್ಯಾ ನಗರದಲ್ಲಿ ಜನಿಸಿದನು. ತನ್ನ ವನವಾಸದ ಸಮಯದಲ್ಲಿ, ರಾಮನು ಹಿಂದೆ ಭಾರತದ ಭಾಗವಾಗಿದ್ದ ಅನೇಕ ದೇಶಗಳಿಗೆ ಪ್ರಯಾಣ ಬೆಳೆಸಿದ್ದರು..
26
ಪಾಕಿಸ್ತಾನದೊಂದಿಗೆ ರಾಮನ ಸಂಪರ್ಕ
ಭಗವಾನ್ ರಾಮನು (Sri Rama) ತನ್ನ ವನವಾಸದ ಸಮಯದಲ್ಲಿ ಪಾಕಿಸ್ತಾನಕ್ಕೆ ಭೇಟಿ ನೀಡಿದ್ದನೆಂದು ಕೆಲವರು ನಂಬುತ್ತಾರೆ. ವಾಲ್ಮೀಕಿ ರಾಮಾಯಣದಲ್ಲಿ ಈ ಕುರಿತಾಗಿ ಕೆಲವೊಂದು ಮಹತ್ವದ ಮಾಹಿತಿಗಳನ್ನು ಕಾಣಬಹುದು.
36
ಭರತವರ್ಷದ ಭಾಗ
ರಾಮಾಯಣ ಕಾಲದಲ್ಲಿ ಭಾರತ, ಪಾಕಿಸ್ತಾನ, ನೇಪಾಳ, ಬಾಂಗ್ಲಾದೇಶ ಮತ್ತು ಶ್ರೀಲಂಕಾ ಪ್ರತ್ಯೇಕ ದೇಶಗಳಾಗಿರಲಿಲ್ಲ; ಬದಲಾಗಿ, ಅವೆಲ್ಲವೂ ಭರತವರ್ಷದ ಭಾಗವಾಗಿದ್ದವು. ಭರತವರ್ಷವನ್ನು ಜಂಬೂದ್ವೀಪ ಎಂದು ಕರೆಯಲಾಗುತ್ತಿತ್ತು.
ಧರ್ಮಗ್ರಂಥಗಳ ಪ್ರಕಾರ, ತನ್ನ ವನವಾಸದ ಸಮಯದಲ್ಲಿ, ರಾಮನು ಛತ್ತೀಸ್ಗಢ, ಮಹಾರಾಷ್ಟ್ರ, ಆಂಧ್ರ ಪ್ರದೇಶ ಅಂದರೆ ದಂಡಕಾರಣ್ಯ, ಕರ್ನಾಟಕ ಅಂದರೆ ಕಿಷ್ಕಿಂಧಾ ಮತ್ತು ಇಂದು ಶ್ರೀಲಂಕಾ ಎಂದು ಕರೆಯಲ್ಪಡುವ ಲಂಕಾದಂತಹ ಸ್ಥಳಗಳಿಗೆ ಭೇಟಿ ನೀಡಿದ್ದರು.
56
ರಾಮನು ಪಾಕಿಸ್ತಾನಕ್ಕೂ ಭೇಟಿ ನೀಡಿದ್ದನೇ?
ತನ್ನ ವನವಾಸದ ಸಮಯದಲ್ಲಿ, ಶ್ರೀರಾಮ ವಿವಿಧ ಕಾಡುಗಳ ಮೂಲಕ ಪ್ರಯಾಣ ಬೆಳೆಸಿದ್ದರು ಮತ್ತು ಆ ಸಮಯದಲ್ಲಿ ಭಾರತದ ಭಾಗವಾಗಿದ್ದ ಹಲವಾರು ದೇಶಗಳು ಮತ್ತು ರಾಜ್ಯಗಳಿಗೆ ಭೇಟಿ ನೀಡಿದ್ದರು. ಈ ಪ್ರದೇಶಗಳಲ್ಲಿ ಕೆಲವು ಪಾಕಿಸ್ತಾನದ ಗಡಿಯನ್ನು (Pakistan Border) ಕೂಡ ಹೊಂದಿದ್ದವು. ಹಾಗಾಗಿ ಅಲ್ಲಿಗೂ ಭೇಟಿ ನೀಡಿದ್ದರು ಎನ್ನಲಾಗಿದೆ. ಆದರೆ, ಇದನ್ನು ವಾಲ್ಮೀಕಿ ರಾಮಾಯಣ ಅಥವಾ ಇತರ ಧರ್ಮಗ್ರಂಥಗಳಲ್ಲಿ ಉಲ್ಲೇಖಿಸಲಾಗಿಲ್ಲ.
66
ಪಾಕಿಸ್ತಾನದಲ್ಲಿ ರಾಮನಿಗೆ ಅರ್ಪಿತವಾದ ದೇವಾಲಯಗಳಿವೆ
ಆದರೆ ಇಂದಿಗೂ, ಪಾಕಿಸ್ತಾನವು ಹಿಂದೂಗಳಲ್ಲಿ ವಿಶೇಷ ಪ್ರಾಮುಖ್ಯತೆಯನ್ನು ಹೊಂದಿರುವ ರಾಮನಿಗೆ ಅರ್ಪಿತವಾದ ಅನೇಕ ಪ್ರಾಚೀನ ದೇವಾಲಯಗಳನ್ನು ಹೊಂದಿದೆ. 1947 ಕ್ಕಿಂತ ಮೊದಲು ಪಾಕಿಸ್ತಾನ ಭಾರತದ ಭಾಗವಾಗಿತ್ತು ಮತ್ತು ಭಾರತ ಮತ್ತು ಪಾಕಿಸ್ತಾನ ವಿಭಜನೆಯಾದಾಗ, ಅನೇಕ ಪ್ರಾಚೀನ ದೇವಾಲಯಗಳು ಪಾಕಿಸ್ತಾನಕ್ಕೆ ಹೋದವು. ಅದರಲ್ಲಿ ರಾಮನ ದೇಗುಲವೂ ಇದೆ.