ಆದರೆ ಅಪ್ಪ ಅಮ್ಮನಾಗಿದ್ದ ನಮ್ಮ ಸಂಬಂಧದಲ್ಲಿ ಒಡಕು ಶುರುವಾಗಿತ್ತು. ಕಾಲಾನಂತರದಲ್ಲಿ, ನನ್ನ ಹೆಂಡತಿ ಮತ್ತು ನನ್ನ ನಡುವಿನ ಅಸಮಾಧಾನ ಹೆಚ್ಚಾಗಲು ಪ್ರಾರಂಭಿಸಿದವು. ಭಿನ್ನಾಭಿಪ್ರಾಯಗಳು ಹೆಚ್ಚಾಗುತ್ತಿದ್ದಂತೆ ನಾವು ದೂರವಾಗಬೇಕು ಎಂಬುದನ್ನು ನಾವು ತಿಳಿದೆವು. ಹೀಗಾಗಿ. ಕೋವಿಡ್ ನಂತರ ನಾವು ವಿಚ್ಛೇದನ ಪಡೆದೆವು. ಆದರೆ ಈ ವಿಚ್ಛೇದನ ಪ್ರಕ್ರಿಯೆಯು ಮೂರು ವರ್ಷಗಳ ಕಾಲ ನಡೆಯಿತು.
ನನ್ನ ಹೆಂಡತಿ ಇಬ್ಬರು ಮಕ್ಕಳಲ್ಲಿ ಒಬ್ಬೊಬ್ಬರು ಒಬ್ಬೊಬ್ಬರನ್ನು ನೋಡಿಕೊಳ್ಳಬೇಕು ಎಂದು ಸೂಚಿಸಿದಳು. ಆದರೆ ಇದನ್ನು ಒಪ್ಪಿಕೊಳ್ಳಲು ನಾನು ಸಿದ್ಧನಿರಲಿಲ್ಲ, ನನ್ನ ಇಬ್ಬರು ಹೆಣ್ಣುಮಕ್ಕಳನ್ನು ಬೇರ್ಪಡಿಸಲು ನಾನು ನಿರಾಕರಿಸಿದೆ. ಏಕೆಂದರೆ ನಮ್ಮ ಹೆಣ್ಣುಮಕ್ಕಳಾದ ಕುದ್ರತ್ ಮತ್ತು ಕಿಸ್ಮತ್ ಕೇವಲ ಸಹೋದರಿಯರಾಗಿರಲಿಲ್ಲ, ಅವರು ಆತ್ಮ ಸಂಗಾತಿಗಳು. ಆತ್ಮೀಯ ಸ್ನೇಹಿತರಾಗಿದ್ದರು, ಒಬ್ಬರನ್ನು ಬಿಟ್ಟು ಒಬ್ಬರು ಇರುತ್ತಿರಲಿಲ್ಲ, ಹೀಗಾಗಿ ಅವರನ್ನು ಬೇರ್ಪಡಿಸುವುದು ನನಗೆ ಇಷ್ಟವಿರಲಿಲ್ಲ,