ಬಿಗ್ ಬಾಸ್-8 ಖ್ಯಾತಿಯ ಅರವಿಂದ್ ಕೆ.ಪಿ ಮತ್ತು ದಿವ್ಯಾ ಉರುಡಗ ಜೋಡಿಯ ಬ್ರೇಕಪ್ ಸುದ್ದಿ ಹರಿದಾಡುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ಪರಸ್ಪರ ಅನ್ಫಾಲೋ ಮಾಡಿದ್ದಾರೆ ಎನ್ನಲಾಗಿದ್ದು, ಈ ಬಗ್ಗೆ ನಿರ್ದೇಶಕ ಚಕ್ರವರ್ತಿ ಚಂದ್ರಚೂಡ್ ಪ್ರತಿಕ್ರಿಯಿಸಿದ್ದಾರೆ.
ಬಿಗ್ಬಾಸ್ನಲ್ಲಿ ಲವ್ ಆಗಿ ಸ್ನೇಹ ಬೆಳೆಸೋರ ಮಧ್ಯೆ, ಮದುವೆಯಾಗಿಯೋ, ಮದುವೆವರೆಗೆ ಹೋಗಿರೋ ಜೋಡಿ ನಡುವೆ ಬ್ರೇಕಪ್ ಆಗೇ ಆಗತ್ತೆ ಎಂದು ಈ ಹಿಂದೆ ಖ್ಯಾತ ಗುರೂಜಿ ಒಬ್ಬರು ಭವಿಷ್ಯ ನುಡಿದಿದ್ದರು. ಅದರಂತೆಯೇ ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ನಡುವೆ ಡಿವೋರ್ಸ್ ಆಯ್ತು. ಇದೀಗ ಬಿಗ್ಬಾಸ್-8 (Bigg Boss-8) ಮೂಲಕ ಫೇಮಸ್ ಆಗಿದ್ದ ಜೋಡಿ, ಅರವಿಂದ ಕೆ.ಪಿ ಮತ್ತು ದಿವ್ಯಾ ಉರುಡಗ ನಡುವೆ ಬ್ರೇಕಪ್ ಆಗಿದೆ ಎನ್ನುವ ಸುದ್ದಿ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ.
26
ಬಿಗ್ಬಾಸ್ 8ರ ಲವ್ ಬರ್ಡ್ಸ್
ಅಷ್ಟಕ್ಕೂ ಈ ಜೋಡಿ 2021ರಂದು ನಡೆದಿದ್ದ ‘ಬಿಗ್ ಬಾಸ್ ಕನ್ನಡ 8’ ಕಾರ್ಯಕ್ರಮದಲ್ಲಿ ಇವರಿಬ್ಬರೂ ಭಾಗಿಯಾಗಿದ್ದರು. ಕಾರ್ಯಕ್ರಮದ ಆರಂಭದಲ್ಲಿ ದಿವ್ಯಾ ಉರುಡುಗ ಹಾಗೂ ಕೆ.ಪಿ.ಅರವಿಂದ್ ಮಧ್ಯೆ ಮಾತುಕತೆ ಇರಲಿಲ್ಲ. ಆದರೆ, ನಂತರ ಆತ್ಮೀಯತೆ ಬೆಳೆಯಿತು. ‘ಬಿಗ್ ಬಾಸ್’ ಮನೆಯಲ್ಲೇ ತಮ್ಮ ಕೈಯಲ್ಲಿದ್ದ ಚಿನ್ನದ ಉಂಗುರವನ್ನ ಬಿಚ್ಚಿ ಕೆ.ಪಿ.ಅರವಿಂದ್ ಕೈಬೆರಳಿಗೆ ದಿವ್ಯಾ ಉರುಡುಗ ತೊಡಿಸಿದ್ದರು. ಬಳಿಕ ನಾಲ್ಕೈದು ವರ್ಷ ಇವರ ಪ್ರೀತಿ ಮುಂದುವರೆಯಿತು. ಮದುವೆಯವರೆಗೂ ಸುದ್ದಿ ಬಂದು, ಶೀಘ್ರದಲ್ಲಿಯೇ ಮದುವೆ ಎಂದು ಘೋಷಿಸಿದ್ದರು.
36
ಮದುವೆಯ ಬಗ್ಗೆ ಗಪ್ಚುಪ್
ಇವರಿಬ್ಬರ ಮದ್ವೆ ಯಾವಾಗ ಎಂದು ಎಲ್ಲರೂ ಕೇಳುತ್ತಲೇ ಇದ್ದರು. ಅಂದಹಾಗೆ ಈ ಜೋಡಿ ‘ಅರ್ಧಂಬರ್ಧ ಪ್ರೇಮ ಕಥೆ’ ಸಿನಿಮಾದಲ್ಲಿ ನಟಿಸಿದೆ. ಈ ಸಿನಿಮಾ ರಿಲೀಸ್ ನಂತರ ಈ ಜೋಡಿ ದಾಂಪತ್ಯ ಜೀವನಕ್ಕೆ (Wedding) ಕಾಲಿಡಲಿದ್ದಾರೆ ಎನ್ನಲಾಗಿತ್ತು. ಆದರೆ ಕುತೂಹಲದ ಸಂಗತಿಯೇನೆಂದ್ರೆ ಲವ್ ಆಗಿ ಮೂರು ವರ್ಷ ಆಗಿದ್ದರೂ ಇಬ್ಬರೂ ಪ್ರಪೋಸ್ ಮಾಡಿರಲಿಲ್ಲ. ಬಳಿಕ 2023ರಲ್ಲಿ ಮೊದಲ ಬಾರಿಗೆ ಸಾರ್ವಜನಿಕವಾಗಿ ಪ್ರಪೋಸ್ ಮಾಡಿದ್ದರು.
ಆದರೆ, ಮದುವೆಗೆ ಮುನ್ನವೇ ಈ ಜೋಡಿ ಬ್ರೇಕಪ್ ಆಗಿರುವುದಾಗಿ ಸದ್ದು ಮಾಡುತ್ತಿದೆ. ಇದಕ್ಕೆ ಕಾರಣ, ಇವರಿಬ್ಬರೂ ಅನ್ಫಾಲೋ ಮಾಡಿಕೊಂಡಿದ್ದಾರೆ ಎಂಬ ಸುದ್ದಿ ಸಾಕಷ್ಟು ಚರ್ಚೆಯಾಗುತ್ತಿದೆ. ಅಷ್ಟಕ್ಕೂ ಜಾಲತಾಣಗಳಲ್ಲಿ ವೈರಲ್ ಆಗುವ ಸುದ್ದಿಗಳೆಲ್ಲವೂ ಸತ್ಯವೇ ಆಗಿರುವುದಿಲ್ಲ. ಚಿಕ್ಕದೊಂದು ವಿಷಯ ಬಹುದೊಡ್ಡದಾಗುವುದು ಇದೆ. ಇಲಿ ಹೋದರೆ, ಹುಲಿ ಹೋಯಿತು ಎನ್ನುವಂತೆ ಇದೆ ಜಾಲತಾಣದ ಸ್ಥಿತಿ. ಆದರೆ ಇದರ ಹೊರತಾಗಿಯೂ ಈ ಜೋಡಿಯ ಬ್ರೇಕಪ್ ಬಗ್ಗೆ ಇವರ ಆಪ್ತರಾಗಿರುವ ಪತ್ರಕರ್ತ ಹಾಗೂ ನಿರ್ದೇಶಕ ಚಕ್ರವರ್ತಿ ಚಂದ್ರಚೂಡ್ ಅವರು ರಿಯಾಕ್ಟ್ ಮಾಡಿದ್ದಾರೆ.
56
ನಿರ್ದೇಶಕ ಚಕ್ರವರ್ತಿ ಚಂದ್ರಚೂಡ್ ಏನ್ ಹೇಳಿದ್ರು?
ಅಂದಹಾಗೆ ಈ ಜೋಡಿ ಎಲ್ಲಿಯೂ ರಿಯಾಕ್ಟ್ ಮಾಡಲಿಲ್ಲ. ಜೊತೆಗೆ, ಇವರಿಬ್ಬರ ಇನ್ಸ್ಟಾಗ್ರಾಮ್ ಫಾಲೋವರ್ಸ್ಗಳನ್ನು ಅವರಷ್ಟೇ ನೋಡಲು ಸಾಧ್ಯವಾಗಿರುವ ಹಿನ್ನೆಲೆಯಲ್ಲಿ ಇದರ ಸತ್ಯಾಸತ್ಯತೆಯನ್ನೂ ಬೇರೆಯವರು ಪರಿಶೀಲಿಸುವಂತೆ ಇಲ್ಲ. ಆದರೂ ಈ ಬಗ್ಗೆ ಆ್ಯಂಕರ್ ಯಶವಂತ್ ಅವರ ಚಾನೆಲ್ಗೆ ನೀಡಿರುವ ಸಂದರ್ಶನದಲ್ಲಿ ಅವರು, ಚಕ್ರವರ್ತಿ ಚಂದ್ರಚೂಡ್ ಅವರು ಕೆಲವೊಂದಿಷ್ಟು ಮಾಹಿತಿಯನ್ನು ನೀಡಿದ್ದಾರೆ.
66
ವಿಚಿತ್ರ ದಿನ ಬಂದುಬಿಟ್ಟಿದೆ
“ಅರವಿಂದ್ ಕೆಪಿ ನನ್ನ ತಮ್ಮ ಹಾಗೂ ದಿವ್ಯಾ ಉರುಡುಗ ನನಗೆ ತಂಗಿ ಇದ್ದಂಗೆ. ಆದರೆ ಇವತ್ತಿನ ದಿನಗಳಲ್ಲಿ ಹೇಗಾಗಿಬಿಟ್ಟಿದೆ ಎಂದರೆ, ನಾನು ನಿನ್ನನ್ನ ಬಿಟ್ಟೆ ಅಂತ ಹೇಳೋಕೆ ಇನ್ಸ್ಟಾಗ್ರಾಮ್ನಲ್ಲಿ ಅನ್ಫಾಲೋ ಮಾಡಿ ಸೂಚನೆ ಕೊಡೋ ತರಹ ಆಗಿಬಿಟ್ಟಿದೆ ಎಂದಿರುವ ಚಂದ್ರಚೂಡ ಅವರು, ನಿಜಕ್ಕೂ ಇವರಿಬ್ಬರ ಸ್ಟೇಟಸ್ ಏನು ಎನ್ನೋದು ನನಗೆ ಗೊತ್ತಿಲ್ಲ. ಇತ್ತೀಚಿನ ದಿನಗಳಲ್ಲಿ ನಾನು ಮಾತನಾಡಿಲ್ಲ. ದಿವ್ಯಾ ಇತ್ತೀಚೆಗೆ ಬ್ಯಾಡ್ಮಿಂಟನ್ ಆಡ್ತಾ ಇದ್ರು. ನನ್ನ ಪ್ರಕಾರ, ಅವರಿಬ್ಬರು ಚೆನ್ನಾಗಿರ್ತಾರೆ, ಚೆನ್ನಾಗಿರ್ಲಿ. ನಾನು ಅಷ್ಟೇ ಹೇಳಬಲ್ಲೆ” ಎಂದಿದ್ದಾರೆ ಅವರು.
ಆರೋಗ್ಯ, ಸೌಂದರ್ಯ, ಫಿಟ್ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.