ಜನಪ್ರಿಯ ಮಾಧ್ಯಮದ ಸಂದರ್ಶನವೊಂದರಲ್ಲಿ ಪ್ರಸಿದ್ಧ ಸರ್ಪ ತಜ್ಞ ಡಾ. ಡಿ.ಎಸ್. ಶ್ರೀವಾಸ್ತವ ಅವರು ಈ ಬಗ್ಗೆ ಕೆಲವು ಪ್ರಮುಖ ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ. ಅವರ ಪ್ರಕಾರ, ಇಚ್ಛಾಧಾರಿ ನಾಗ-ನಾಗಿಣಿಯರ ಬಗ್ಗೆ ಇದುವರೆಗೆ ಯಾವುದೇ ವೈಜ್ಞಾನಿಕ ಪುರಾವೆಗಳು ಸಿಕ್ಕಿಲ್ಲ. ಹಾವುಗಳು ಮನುಷ್ಯನ ರೂಪ ತಾಳುತ್ತವೆ ಎನ್ನುವುದಕ್ಕೆ ಯಾವುದೇ ಸಾಕ್ಷ್ಯಗಳಿಲ್ಲ. ಪುರಾಣಗಳಲ್ಲಿ ಹಾವುಗಳು ನೂರು ವರ್ಷ ತಪಸ್ಸು ಮಾಡಿದರೆ ರೂಪ ಬದಲಿಸುವ ಶಕ್ತಿ ಪಡೆಯುತ್ತವೆ ಎಂದು ಹೇಳಲಾಗುತ್ತದೆ. ಆದರೆ ಇದು ಕೇವಲ ಕಲ್ಪನೆ ಮಾತ್ರ. ನಾವು 'ನಾಗ' ಎಂದು ಕರೆಯುವುದು ಬೇರೆ ಯಾವುದೋ ಜೀವಿಯನ್ನಲ್ಲ, ನಾಗರಹಾವನ್ನೇ. ಹಾವಿಗೆ ಅಪಾಯ ಎದುರಾದಾಗ ಅಥವಾ ಭಯವಾದಾಗ ಮಾತ್ರ ಅದು ಹೆಡೆ ಬಿಚ್ಚಿ ನಿಲ್ಲುತ್ತದೆ. ಇದು ಅದರ ಆತ್ಮರಕ್ಷಣೆಯ ಕ್ರಮವಷ್ಟೇ.