ಒಂದು ಕಪ್ ಓಟ್ಸ್ ಅನ್ನು ಕಡಿಮೆ ಉರಿಯಲ್ಲಿ ಹುರಿಯಿರಿ. ನಂತ್ರ ಅದನ್ನು ಶುದ್ಧ ಬಟ್ಟಲಿಗೆ ಹಾಕಿಡಿ. ಪ್ಯಾನ್ ಗೆ 2 ಚಮಚ ಎಣ್ಣೆ ಹಾಕಿ, ಬಿಸಿ ಆದ್ಮೇಲೆ ಅರ್ಧ ಚಮಚ ಸಾಸಿವೆ ಮತ್ತು ಅರ್ಧ ಚಮಚ ಜೀರಿಗೆ ಸೇರಿಸಿ. ಸಾಸಿವೆ ಸಿಡಿದ ಮೇಲೆ ಅದಕ್ಕೆ 1 ಚಮಚ ಉದ್ದಿನ ಬೇಳೆ, 1 ಚಮಚ ಕಡಲೆ ಬೇಳೆ ಮತ್ತು 8-10 ಗೋಡಂಬಿ ಸೇರಿಸಿ. ಇದು ಹುರಿದ ಮೇಲೆ 2 ಕತ್ತರಿಸಿದ ಹಸಿರು ಮೆಣಸಿನಕಾಯಿಗಳು, 1 ಚಮಚ ಸಣ್ಣಗೆ ಹೆಚ್ಚಿದ ಶುಂಠಿ ಮತ್ತು ಐದಾರು ಕರಿಬೇವಿನ ಎಲೆ ಸೇರಿಸಿ, ಹುರಿಯಿರಿ. ಅರ್ಧ ಕಪ್ ಸಣ್ಣಗೆ ಹೆಚ್ಚಿದ ಈರುಳ್ಳಿಯನ್ನು ಸೇರಿಸಿ, ನಂತ್ರ 1 ಕಪ್ ಮಿಶ್ರ ತರಕಾರಿ ಸೇರಿಸಿ 3 -4 ನಿಮಿಷ ಹುರಿಯಿರಿ. ರುಚಿಗೆ ತಕ್ಕಷ್ಟು ಅರಿಶಿನ ಮತ್ತು ಉಪ್ಪು ಸೇರಿಸಿ ಮಿಕ್ಸ್ ಮಾಡಿ. ಆ ನಂತ್ರ ಅದಕ್ಕೆ 1 ಕಪ್ ನೀರು ಸೇರಿಸಿ. ನೀರು ಕುದಿಯುತ್ತಿರುವಾಗ ಹುರಿದ ಓಟ್ಸ್ ಸೇರಿಸಿ, ಚೆನ್ನಾಗಿ ಮಿಶ್ರಣ ಮಾಡಿ ಮತ್ತು ಎಲ್ಲಾ ನೀರು ಹೀರಿಕೊಳ್ಳುವವರೆಗೆ ಬೇಯಿಸಿ. ಗ್ಯಾಸ್ ಬಂದ್ ಮಾಡಿ 1 ಚಮಚ ನಿಂಬೆ ರಸ ಮತ್ತು 2 ಚಮಚ ಕೊತ್ತಂಬರಿ ಸೊಪ್ಪು ಸೇರಿಸಿ, ಚೆನ್ನಾಗಿ ಮಿಶ್ರಣ ಮಾಡಿ. ಇದು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುತ್ತದೆ.