ಜನರು ಇದನ್ನು ತಮ್ಮ ಮನೆಗಳಲ್ಲಿ ಬೆಳೆಸುತ್ತಿರುವುದಲ್ಲದೆ, ತಮ್ಮ ಆಹಾರದ ಭಾಗವಾಗಿಸಲು ಪ್ರಾರಂಭಿಸಿದ್ದಾರೆ. ಈ ಸಸ್ಯವು ವರ್ಷವಿಡೀ ಕಾಯಿಗಳನ್ನು ನೀಡುತ್ತದೆ ಮತ್ತು ಇದರ ಕಾಯಿ ಅಂದರೆ ನುಗ್ಗೆಕಾಯಿ ತಿನ್ನಲು ರುಚಿಕರವಾಗಿರುತ್ತದೆ ಮತ್ತು ಔಷಧೀಯ ಗುಣಗಳಿಂದ ಕೂಡಿದೆ.
ಮಧ್ಯಪ್ರದೇಶದ ಛತ್ತರ್ಪುರ ಜಿಲ್ಲೆ ಇತ್ತೀಚಿನ ದಿನಗಳಲ್ಲಿ ನುಗ್ಗೇಕಾಯಿ ಕಾರಣದಿಂದಾಗಿ ಸುದ್ದಿಯಲ್ಲಿದೆ. ಮೊರಿಂಗಾ ಎಂದೂ ಕರೆಯಲ್ಪಡುವ ನುಗ್ಗೇಕಾಯಿ ತನ್ನ ಆರೋಗ್ಯ ಪ್ರಯೋಜನಗಳಿಂದಾಗಿ ಸಾಕಷ್ಟು ಜನಪ್ರಿಯವಾಗಿದೆ. ಈ ನುಗ್ಗೇಮರವು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಅಷ್ಟೇ ಅಲ್ಲ, ಇದರ ಕಾಯಿ, ಸೊಪ್ಪು ರುಚಿಕರ ಮತ್ತು ಪೌಷ್ಟಿಕಾಂಶದಿಂದ ಕೂಡಿದೆ. ಛತ್ತರ್ಪುರದ ಗ್ರಾಮೀಣ ಪ್ರದೇಶಗಳಲ್ಲಿ ನುಗ್ಗೇಕಾಯಿಗೆ ಬೇಡಿಕೆ ವೇಗವಾಗಿ ಹೆಚ್ಚುತ್ತಿದೆ. ಏಕೆಂದರೆ ಜನರು ಅದನ್ನು ತಮ್ಮ ಮನೆಗಳಲ್ಲಿ ಬೆಳೆಸುತ್ತಿರುವುದಲ್ಲದೆ, ಅದನ್ನು ತಮ್ಮ ಆಹಾರದ ಭಾಗವಾಗಿಸಲು ಪ್ರಾರಂಭಿಸಿದ್ದಾರೆ.
27
ಶ್ರಮ ಮತ್ತು ಕಾಳಜಿ ಅಗತ್ಯವಿಲ್ಲ
ರೈತರು ಈಗ ಇದನ್ನು ಲಾಭದಾಯಕ ಬೆಳೆಯೆಂದು ನೋಡುತ್ತಿದ್ದಾರೆ. ಏಕೆಂದರೆ ನುಗ್ಗೇಕಾಯಿಗೆ ಹೆಚ್ಚಿನ ಶ್ರಮ ಮತ್ತು ಕಾಳಜಿ ಅಗತ್ಯವಿಲ್ಲ. ಈ ಸಸ್ಯವು ಬಂಜರು ಮತ್ತು ಒಣ ಪ್ರದೇಶಗಳಲ್ಲಿಯೂ ಸಹ ಸುಲಭವಾಗಿ ಬೆಳೆಯುತ್ತದೆ. ಈ ಕಾರಣದಿಂದಾಗಿ ಇದು ಬುಂದೇಲ್ಖಂಡ್ನಂತಹ ಪ್ರದೇಶಕ್ಕೆ ಸೂಕ್ತವೆಂದು ಪರಿಗಣಿಸಲಾಗಿದೆ.
37
ಆಯುರ್ವೇದದಲ್ಲೂ ಮಹತ್ವದ ಸ್ಥಾನ
ನುಗ್ಗೇಕಾಯಿ ವೈಜ್ಞಾನಿಕ ಹೆಸರು ಮೊರಿಂಗಾ ಒಲಿಫೆರಾ. ಆಯುರ್ವೇದದಲ್ಲಿ, ಇದನ್ನು 300 ಕ್ಕೂ ಹೆಚ್ಚು ರೋಗಗಳಿಗೆ ಚಿಕಿತ್ಸೆ ನೀಡಲು ಬಳಸಲಾಗುತ್ತದೆ. ಈ ಸಸ್ಯವು ವರ್ಷವಿಡೀ ಕಾಯಿಗಳನ್ನು ನೀಡುತ್ತದೆ ಮತ್ತು ಇದರ ಕಾಯಿ ಅಂದರೆ ನುಗ್ಗೆಕಾಯಿ ತಿನ್ನಲು ರುಚಿಕರವಾಗಿರುತ್ತದೆ ಮತ್ತು ಔಷಧೀಯ ಗುಣಗಳಿಂದ ಕೂಡಿದೆ.
ಛತ್ತರ್ಪುರದ ಆಯುರ್ವೇದ ತಜ್ಞ ಡಾ. ರಾಜೇಶ್ ಅಗರ್ವಾಲ್, ಮಾಧ್ಯಮದೊಂದಿಗೆ ಮಾತನಾಡುತ್ತಾ, ಮೊರಿಂಗಾ ಮಧುಮೇಹ ವಿರೋಧಿ, ಉತ್ಕರ್ಷಣ ನಿರೋಧಕ ಮತ್ತು ಉರಿಯೂತ ನಿವಾರಕ ಗುಣಗಳನ್ನು ಹೊಂದಿದೆ ಎಂದು ಹೇಳುತ್ತಾರೆ. ಇದು ಉಸಿರಾಟದ ಕಾಯಿಲೆಗಳಲ್ಲಿ ಬಹಳ ಪರಿಣಾಮಕಾರಿಯಾಗಿದೆ, ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸುತ್ತದೆ ಮತ್ತು ದೇಹದ ಉರಿಯೂತವನ್ನು ಕಡಿಮೆ ಮಾಡುತ್ತದೆ. ಇದರ ಎಲೆಗಳು ಮತ್ತು ಕಾಯಿ ಎರಡನ್ನೂ ಔಷಧೀಯ ದೃಷ್ಟಿಕೋನದಿಂದ ಪ್ರಯೋಜನಕಾರಿ ಎಂದು ಪರಿಗಣಿಸಲಾಗುತ್ತದೆ.
57
ರುಚಿಕರ ಮತ್ತು ಪೌಷ್ಟಿಕವಾದ ತರಕಾರಿ
ಮೊರಿಂಗಾ ಕೇವಲ ಔಷಧೀಯ ಸಸ್ಯವಲ್ಲ, ಅದರ ಕಾಯಿಯಿಂದ ತಯಾರಿಸಿದ ಕರಿ ಕೂಡ ಅದ್ಭುತವಾಗಿರುತ್ತದೆ. ನುಗ್ಗೇಕಾಯಿ, ಬೇಳೆ, ಆಲೂಗಡ್ಡೆಯೊಂದಿಗೆ ಬೇಯಿಸಿ ಮಾಡಿದ ಸಾಂಬಾರ್ ಅಥವಾ ಸೊಪ್ಪಿನ ಒಗ್ಗರಣೆಯಂತೂ ಪರಾಮೃತ. ವಿಶೇಷವಾಗಿ ಚಳಿಗಾಲದಲ್ಲಿ, ಇದು ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ರುಚಿ ಮತ್ತು ಆರೋಗ್ಯ ಎರಡರ ಅತ್ಯುತ್ತಮ ಸಂಯೋಜನೆಯು ಮೊರಿಂಗಾವನ್ನು ಪ್ರತಿ ಮನೆಯಲ್ಲೂ ನೆಚ್ಚಿನ ಸಸ್ಯವನ್ನಾಗಿ ಮಾಡಿದೆ.
67
ಇದರ ಕೃಷಿಯಲ್ಲಿ ಆಸಕ್ತಿ
ಇದೇ ಕಾರಣಕ್ಕಾಗಿ ಛತ್ತರ್ಪುರ ಮತ್ತು ಸುತ್ತಮುತ್ತಲಿನ ಪ್ರದೇಶಗಳ ಜನರು ಈಗ ತಮ್ಮ ಮನೆಗಳಲ್ಲಿ ನುಗ್ಗೇಕಾಯಿ ಗಿಡಗಳನ್ನು ನೆಡಲು ಪ್ರಾರಂಭಿಸಿದ್ದಾರೆ. ಇದಕ್ಕೆ ಕಾರಣವೆಂದರೆ ಮೊರಿಂಗ ಬಂಜರು ಭೂಮಿಯಲ್ಲಿಯೂ ಸುಲಭವಾಗಿ ಬೆಳೆಯುತ್ತದೆ ಮತ್ತು ಅದನ್ನು ನೋಡಿಕೊಳ್ಳಲು ಹೆಚ್ಚಿನ ಶ್ರಮ ಅಗತ್ಯವಿಲ್ಲ. ರೈತರು ಇದರ ಕೃಷಿಯಲ್ಲಿ ಆಸಕ್ತಿ ವಹಿಸುತ್ತಿದ್ದಾರೆ, ಇದು ಆರ್ಥಿಕವಾಗಿ ಪ್ರಯೋಜನಕಾರಿ ಎಂದು ಪರಿಗಣಿಸಿದ್ದಾರೆ. ಈ ರೀತಿಯಾಗಿ, ಮೊರಿಂಗ ಆರೋಗ್ಯದ ನಿಧಿ ಮಾತ್ರವಲ್ಲದೆ, ರೈತರು ಮತ್ತು ಗ್ರಾಮೀಣ ಪ್ರದೇಶಗಳಿಗೆ ಉತ್ತಮ ಆದಾಯದ ಮೂಲವೂ ಆಗುತ್ತಿದೆ.
77
ಆರೋಗ್ಯ ಮತ್ತು ಸಮೃದ್ಧಿ
ಜನರು ಈಗ ನೈಸರ್ಗಿಕ ಮತ್ತು ಆರೋಗ್ಯಕರ ಆಹಾರದತ್ತ ಹೆಚ್ಚಿನ ಗಮನ ಹರಿಸುತ್ತಿರುವುದರಿಂದ ಭವಿಷ್ಯದಲ್ಲಿ ಇದರ ಬೇಡಿಕೆ ಇನ್ನಷ್ಟು ಹೆಚ್ಚಾಗುತ್ತದೆ ಎಂದು ಮೊರಿಂಗಾ ಕೃಷಿಗೆ ಸಂಬಂಧಿಸಿದ ಜನರು ಹೇಳುತ್ತಾರೆ. ಛತ್ತರ್ಪುರದಲ್ಲಿ, ಈ ಸಸ್ಯವು ಜನರ ಜೀವನದಲ್ಲಿ ಆರೋಗ್ಯ ಮತ್ತು ಸಮೃದ್ಧಿ ಎರಡನ್ನೂ ತರುತ್ತಿದೆ.