ಏಳು ವರ್ಷಗಳ ನಂತರ ಪ್ರಿಯಾಂಕಾ ಚೋಪ್ರಾ, ರಾಜಮೌಳಿ ನಿರ್ದೇಶನದ 'ವಾರಣಾಸಿ' ಚಿತ್ರದ ಮೂಲಕ ಭಾರತೀಯ ಚಿತ್ರರಂಗಕ್ಕೆ ಮರಳುತ್ತಿದ್ದಾರೆ. ಈ ಚಿತ್ರಕ್ಕೆ ಒಪ್ಪಿಕೊಳ್ಳುವ ಮುನ್ನ ಅವರು ನಿರ್ದೇಶಕರಿಗೆ ಒಂದು ಮನವಿ ಮಾಡಿದ್ದರಂತೆ, ಪ್ರಿಯಾಂಕಾ ಮನವಿಯ ಪರಿಣಾಮ ಮಹೇಶ್ ಬಾಬು ಮೇಲಾಯ್ತು ಹಾಗಿದ್ದರೆ ಅದೇನು?
ನಟಿ ಪ್ರಿಯಾಂಕಾ ಚೋಪ್ರಾ ಬರೋಬ್ಬರಿ ಏಳು ವರ್ಷಗಳ ನಂತರ ತಮ್ಮ ಮುಂಬರುವ ಚಿತ್ರ 'ವಾರಣಾಸಿ' ಮೂಲಕ ಭಾರತೀಯ ಚಿತ್ರರಂಗಕ್ಕೆ ಮರಳಲಿದ್ದಾರೆ. ಹೀಗಿರುವಾಗ ಅವರು ಈ ಸಿನಿಮಾಗೆ ಓಕೆ ಎಂದು ಹೇಳುವ ಮೊದಲು ನಿರ್ದೇಶಕ ಎಸ್ಎಸ್ ರಾಜಮೌಳಿ ಅವರ ಬಳಿ ಒಂದು ಷರತ್ತು ವಿಧಿಸಿದ್ದರಂತೆ. ಹೌದು ಸಿನಿಮಾಬ್ಲೆಂಡ್ಗೆ ನೀಡಿದ ಸಂದರ್ಶನವೊಂದರಲ್ಲಿ ಪ್ರಿಯಾಂಕಾ ಚೋಪ್ರಾ ಅವರು ಈ ವಿಚಾರ ಹೇಳಿದ್ದಾರೆ. ಆ ಷರತ್ತಿಗೆ ಓಕೆ ಅಂದ ನಂತರವೇ ಅವರು ಈ ಸಿನಿಮಾಗೆ ಒಪ್ಪಿಕೊಂಡರಂತೆ ಹಾಗಾದರೆ ಅವರು ವಿಧಿಸಿದ ಷರತ್ತು ಏನು?
26
ಪ್ರಿಯಾಂಕಾ ಮನವಿಯಿಂದ ಮಹೇಶ್ ಬಾಬುಗೆ ತೊಳಲಾಟ
ವಾರಣಾಸಿ ಸಿನಿಮಾದಲ್ಲಿ ಪ್ರಿಯಾಂಕಾ ಚೋಪ್ರಾ ಅವರು ಒಂದು ಡಾನ್ಸ್ ನಂಬರ್ ಮಾಡುವುದಕ್ಕೆ ಎಸ್ಎಸ್ ರಾಜಮೌಳಿ ಅವರ ಬಳಿ ಮನವಿ ಮಾಡಿದರಂತೆ ಸಿನಿಮಾಬ್ಲೆಂಡ್ ಜೊತೆ ಮಾತನಾಡುತ್ತಾ ಅವರು ಹೀಗೆ ಹೇಳಿದ್ದಾರೆ, ಕಳೆದ ಆರು ವರ್ಷಗಳಿಂದ ನಾನು ಒಂದೂ ಭಾರತೀಯ ಸಿನಿಮಾ ಮಾಡಿಲ್ಲ, ಹೀಗಾಗಿ ನಾನು ಅವರಿಗೆ ಕರೆ ಮಾಡಿ ಈ ವಿಚಾರ ಹೇಳಿದಾಗ ಅವರು ಹೇಗೆ ಹೇಳಿದರು ಎಂದರೆ ಈ ಮಹಿಳಾ ಪಾತ್ರವೂ ಬಹಳ ಕೂಲ್ ಆಗಿರುತ್ತದೆ. ನೀವು ಅದನ್ನು ಮಾಡಬೇಕು ಎಂದರು. ನಾನು ಅದೇನೆ ಇರಲಿ ನನಗೆ ಬೇರೇನು ಮನವಿಗಳಿಲ್ಲ, ನೀವು ನಾನು ಡಾನ್ಸ್ ಮಾಡೋ ತರ ಮಾಡಬಹುದೇ ದಯವಿಟ್ಟು, ಏಕೆಂದರೆ ನಾನು ಡಾನ್ಸ್ ಮಾಡದೇ ತುಂಬಾ ವರ್ಷಗಳಾಯ್ತು ಎಂದು ಕೇಳಿದೆ. ಆದರೆ ನಂತರ ನಾನು ಹಾಗೇ ಕೇಳಬಾರದಿತ್ತು ಏಕೆಂದರೆ ನಾನೊಬ್ಬಳೇ ಅಲ್ಲ ನಾವು ಡಾನ್ಸ್ ಮಾಡಬೇಕು, ಹೀಗಾಗಿ ಪಾಪದ ಮಹೇಶ್ ಬಾಬು ಅವರು ಮಾತ್ರ ಇದೆಲ್ಲವೂ ನಿನ್ನಿಂದಾಗಿ ನಿನ್ನಿಂದಾಗಿ, ನಿನ್ನಿಂದಾಗಿ ನಾನು ಕೂಡ ಡಾನ್ಸ್ ಮಾಡಬೇಕು ಎಂದು ಹೇಳಿದರು ಎಂದು ಪ್ರಿಯಾಂಕಾ ಚೋಪ್ರಾ ಹೇಳಿಕೊಂಡಿದ್ದಾರೆ.
36
ನೃತ್ಯ ಮಾಡಲು ಬಯಸಿದ್ದ ಪಿಗ್ಗಿ
ಇದು ತುಂಬಾ ಭಾವನಾತ್ಮಕವಾಗಿದೆ. ಮತ್ತು, ನಾವು ಈಗಾಗಲೇ ಅದಕ್ಕಾಗಿ ಒಂದು ಹಾಡನ್ನು ಚಿತ್ರೀಕರಿಸಿದ್ದೇವೆ ಎಂದು ನಾನು ಭಾವಿಸುತ್ತೇನೆ, ಮತ್ತು ಅದು ನಮ್ಮ ಮನಸ್ಸಿನಲ್ಲಿ ನಿರಂತರವಾಗಿ ಕೇಳಿಬರುತ್ತಿದೆ. ಮತ್ತು ಪ್ರಿಯಾಂಕ ಅದನ್ನು ಯಾವಾಗಲೂ ಹಾಡುತ್ತಲೇ ಇರುತ್ತಾಳೆ. ಮತ್ತು, ಆ ಹಾಡನ್ನು ಅವಳು ನೃತ್ಯ ಮಾಡಲು ಬಯಸಿದ್ದರಿಂದ ಅವರು ಅವಳನ್ನು ನೃತ್ಯ ಮಾಡಿಸಿದರು ಎಂದು ಮಹೇಶ್ ಬಾಬು ಹೇಳಿದ್ದಾರೆ.
ಚಿತ್ರದಲ್ಲಿ ಪ್ರಿಯಾಂಕಾ ಮತ್ತು ಮಹೇಶ್ ಬಾಬು ಅವರ ನೃತ್ಯಕ್ಕೆ ಅಭಿಮಾನಿಗಳು ಕಾಮೆಂಟ್ ಮಾಡಿದ್ದಾರೆ ಒಬ್ಬರು ಪ್ರಿಯಾಂಕಾ ಮತ್ತು ಮಹೇಶ್ ಬಾಬು ನೃತ್ಯವು ಸಂಪೂರ್ಣ ಸಿನಿಮಾ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ಹಾಡಿನ ಒಂದು ನೋಟವನ್ನು ನಮಗೆ ಈಗಾಗಲೇ ನೀಡಿ ಎಂದು ಬರೆದಿದ್ದಾರೆ. ಮತ್ತೊಬ್ಬರು, ಈ ಹಾಡನ್ನು ನೋಡಲು ಕಾಯಲು ಸಾಧ್ಯವಿಲ್ಲ ಎಂದು ಕಾಮೆಂಟ್ ಮಾಡಿದ್ದಾರೆ.
56
ಮಂದಾಕಿನಿ ಪಾತ್ರದಲ್ಲಿ ಪ್ರಿಯಾಂಕಾ
ಎಸ್.ಎಸ್. ರಾಜಮೌಳಿ(SS Rajamouli) ನಿರ್ದೇಶನದ ಈ ಚಿತ್ರವು 2022 ರಲ್ಲಿ ಬಿಡುಗಡೆಯಾದ ರಾಮ್ ಚರಣ್ ಮತ್ತು ಜೂನಿಯರ್ ಎನ್.ಟಿ.ಆರ್ ಅಭಿನಯದ ಆರ್.ಆರ್.ಆರ್ ಚಿತ್ರದ ಬ್ಲಾಕ್ಬಸ್ಟರ್ ಯಶಸ್ಸಿನ ನಂತರದ ಮತ್ತೊಂದು ಯೋಜನೆಯಾಗಿದೆ. ಈ ಚಿತ್ರವು ಪ್ರಿಯಾಂಕಾ ಅವರಿಗೆ ಭಾರತೀಯ ಸಿನಿಮಾಗೆ ರೀ ಎಂಟ್ರಿ ನೀಡಿದೆ. ಈ ಸಿನಿಮಾದಲ್ಲಿ ಅವರು ಮಂದಾಕಿನಿ ಪಾತ್ರದಲ್ಲಿ ಆಕ್ಷನ್-ಪ್ಯಾಕ್ಡ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರದಲ್ಲಿ ನಾಯಕನಾಗಿ ಮಹೇಶ್ ಬಾಬು(Mahesh Babu) ಮತ್ತು ಖಳನಾಯಕನಾಗಿ ಪೃಥ್ವಿರಾಜ್ ಸುಕುಮಾರನ್(Prithviraj Sukumaran) ನಟಿಸಿದ್ದಾರೆ.
ಈ ಚಿತ್ರವು ಕಾಲಯಾನದ ಸುತ್ತ(time travel) ಕೇಂದ್ರೀಕೃತವಾಗಿದ್ದು, ಇದು ಆಕ್ಷನ್ ಹಾಗೂ ಸಾಹಸವನ್ನು ಒಳಗೊಂಡ ಸಿನಿಮಾವಾಗಿದೆ. ಚಿತ್ರದ ಕಥಾಹಂದರದ ಬಗ್ಗೆ ಅಭಿಮಾನಿಗಳು ಕೆಲ ಸಿದ್ಧಾಂತಗಳನ್ನು ಮಂಡಿಸುತ್ತಿದ್ದಾರೆ, ಆದರೆ ಅದನ್ನು ನಿರ್ದೇಶಕರು ರಹಸ್ಯವಾಗಿಟ್ಟಿದ್ದಾರೆ. ಚಿತ್ರದ ಒಂದು ಸನ್ನಿವೇಶದಲ್ಲಿ ಮಹೇಶ್ ಬಾಬು ರಾಮನ ಪಾತ್ರವನ್ನು ನಿರ್ವಹಿಸಲಿದ್ದಾರೆ ಎಂದು ನಿರ್ದೇಶಕರು ದೃಢಪಡಿಸಿದ್ದಾರೆ ಇದು ಮತ್ತಷ್ಟು ಉತ್ಸಾಹವನ್ನು ಹೆಚ್ಚಿಸುತ್ತದೆ. ಈ ಚಿತ್ರವು ಏಪ್ರಿಲ್ 2027 ರಲ್ಲಿ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.