ಬಿಗ್ಬಾಸ್ ಕನ್ನಡ ಸೀಸನ್ 11ರ ರನ್ನರ್ ಅಪ್ ರಕ್ಷಿತಾಗೆ, ವರ್ತೂರ್ ಸಂತೋಷ್ ಅವರು 2 ಲಕ್ಷ ರೂಪಾಯಿಗಳ ಬದಲಾಗಿ ಎರಡು ಹಳ್ಳಿಕಾರ್ ಹಸುಗಳನ್ನು ನೀಡಲು ಮುಂದಾಗಿದ್ದಾರೆ ಎಂಬ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಬಿಗ್ಬಾಸ್ ರನ್ನರ್ ಅಪ್ಗೆ 2 ಲಕ್ಷ ನಗದು ಕೊಡುವುದಾಗಿ ಘೋಷಿಸಿದ್ದ ವರ್ತೂರ್ ಸಂತೋಷ್
ಬಿಗ್ಬಾಸ್ ಕನ್ನಡ ಸೀಸನ್ 11ರಲ್ಲಿ ರನ್ನರ್ ಅಪ್ ಅದವರಿಗೆ 2 ಲಕ್ಷ ರೂಪಾಯಿ ಹಣವನ್ನು ನೀಡುವುದಾಗಿ ಈ ಹಿಂದೆ ಬಿಗ್ಬಾಸ್ನಲ್ಲಿ ಸ್ಪರ್ಧಿಯಾಗಿ ಕಾಣಿಸಿಕೊಂಡಿದ್ದ ವರ್ತೂರ್ ಸಂತೋಷ್ ಅವರು ಹೇಳಿದ್ದರು. ಅದರಂತೆ ಅವರು ಈ ಬಾರಿಯ ಬಿಗ್ಬಾಸ್ ರನ್ನರ್ ಅಪ್ ರಕ್ಷಿತಾಗೆ ಎರಡು ಲಕ್ಷ ಹಣ ನೀಡುವುದಕ್ಕೆ ಮುಂದಾಗಿದ್ದಾರೆ.
ಆದರೆ ಬಿಗ್ಬಾಸ್ ರಕ್ಷಿತಾ ಅವರು ಹಣದ ಬದಲು ತಮ್ಮಲ್ಲಿರುವ ಎರಡು ಹಳ್ಳಿಕಾರ್ ಹಸುಗಳನ್ನೇ ನೀಡುವಂತೆ ವರ್ತೂರ್ ಸಂತೋಷ್ ಬಳಿ ಮನವಿ ಮಾಡಿದ್ದಾರೆ ಎನ್ನಲಾಗಿದ್ದು, ಅದರಂತೆ ವರ್ತೂರ್ ಸಂತೋಷ್ ಅವರು ಈಗ ರಕ್ಷಿತಾ ಅವರಿಗೆ ಎರಡು ಹಸುಗಳನ್ನು ನೀಡುವುದಕ್ಕೆ ಮುಂದಾಗಿದ್ದಾರೆ ಎಂಬ ಸುದ್ದಿಯೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ವರ್ತೂರ್ ಪ್ರಕಾಶ್ ಬಿಗ್ಬಾಸ್ ಮನೆಯ ಫಿನಾಲೆ ವೇದಿಕೆಯಲ್ಲೇ ಬಿಗ್ಬಾಸ್ನಲ್ಲಿ ಸ್ಪರ್ಧಿಸಿ ಗೆದ್ದ ಹಣವನ್ನು ಏನು ಮಾಡುವಿರಿ ಎಂದು ಕೇಳಿದಾಗ ತನಗೆ ಸ್ವಲ್ಪ ಹಣದಲ್ಲಿ ಹಸುಗಳನ್ನು ಖರೀದಿಸಿ ಸಾಕುವ ಯೋಚನೆ ಇದೆ ಎಂದು ಹೇಳಿದ್ದರು.
ಈ ಮಧ್ಯೆ ಅವರು ವರ್ತೂರ್ ಅವರ ಬಳಿ ಹಣದ ಬದಲು ಹಸುವನ್ನೇ ಕೇಳಿದ್ದಾರೆ ಎಂದು ವರದಿಯಾಗಿದ್ದು, ಈ ವಿಚಾರ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಅನೇಕರು ರಕ್ಷಿತಾ ಅವರು ಇದೇ ಕಾರಣಕ್ಕೆ ನಮಗೆ ಇಷ್ಟವಾಗುತ್ತಿದ್ದಾರೆ ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಆದರೆ ಕೆಲ ಮಾಹಿತಿಗಳ ಪ್ರಕಾರ ಇದೊಂದು ಫೇಕ್ ನ್ಯೂಸ್ ಎಂದು ವರದಿಯಾಗಿದೆ.
ಇತ್ತ ಬಿಗ್ಬಾಸ್ ಮನೆಯಿಂದ ಹೊರಗೆ ಬಂದಿರುವ ರಕ್ಷಿತಾ ಶೆಟ್ಟಿ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದು, ಅವರಿಗೆ ಸಿಕ್ಕಾಪಟ್ಟೆ ಜಾಹೀರಾತು ಅವಕಾಶಗಳು ಹರಿದು ಬರುತ್ತಿವೆ. ಜನಪ್ರಿಯತೆ ಜಾಸ್ತಿಯಾದಂತೆ ಅವರ ಬಗ್ಗೆ ನಕಲಿ ಸುದ್ದಿಗಳು ಹರಿದಾಡುವುದಕ್ಕೆ ಶುರುವಾಗಿದ್ದು, ಕೆಲ ದಿನಗಳ ಹಿಂದೆ ಅವರು ತಮ್ಮೂರಿನಲ್ಲಿ ಗೋಶಾಲೆ ಆರಂಭಿಸಿದ್ದಾರೆ ಎಂಬ ಸುದ್ದಿಯೊಂದು ವೈರಲ್ ಆಗಿತ್ತು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.