Published : Dec 30, 2021, 07:43 PM ISTUpdated : Dec 30, 2021, 07:45 PM IST
ಹೈದರಾಬಾದ್(ಡಿ. 30) ಕನ್ನಡದ (Sandalwood) ಕಿರಿಕ್ ಪಾರ್ಟಿ (Kirrak Party) ಚಿತ್ರದ ಮೂಲಕ ಬೆಳ್ಳಿ ತೆರೆಗೆ ಪದಾರ್ಪಣೆ ಮಾಡಿದ ಕೊಡಗಿನ (Kodagu) ಚೆಲುವೆ ರಶ್ಮಿಕಾ ಮಂದಣ್ಣ(Rashmika Mandanna) ಸಂತಸದ ವಿಚಾರವೊಂದನ್ನು (Social Media) ಹಂಚಿಕೊಂಡಿದ್ದಾರೆ. ರಶ್ಮಿಕಾ ಮಂದಣ್ಣ ಚಿತ್ರರಂಗಕ್ಕೆ ಕಾಲಿಟ್ಟು ಐದು ವರ್ಷಗಳು ಸಂದಿವೆ.
ಜೀವನದಲ್ಲಿ ಯಾವುದೂ ಸುಲಭವಲ್ಲ ಎಂಬುದು ನನಗೆ ಗೊತ್ತಿದೆ. ಪ್ರತಿಯೊಂದು ಸಂದರ್ಭದಲ್ಲಿಯೂ ಜಾಗರೂಕವಾಗಿ ಹೆಜ್ಜೆ ಇಡಬೇಕು ಎಂದಿದ್ದಾರೆ.
49
ತಾಳ್ಮೆ ಬಹಳ ಮುಖ್ಯ, ಕೆಲವೊಂದು ಸಂದರ್ಭದಲ್ಲಿ ವಿಷಯಗಳು ನಿಮ್ಮನ್ನು ಕಂಗೆಡಿಸಬಹುದು ಆದರೆ ಎಚ್ಚರಿಕೆಯಿಂದ ನಡೆದುಕೊಳ್ಳಬೇಕಾಗುತ್ತದೆ ಎಂದಿದ್ದಾರೆ.
59
ನಿಮ್ಮ ಕುಟುಂಬಕ್ಕೂ ಸಮಯ ನೀಡಬೇಕು. ಭಾವನೆಗಳನ್ನು ಹಿಡಿದು ಇಟ್ಟುಕೊಲ್ಳಬಾರದು. ಕಲಿಕೆಗೆ ತೆರೆದುಕೊಳ್ಳಬೇಕು ಎಂದು ತಿಳಿಸಿದ್ದಾರೆ.
69
ವೃತ್ತಿಯಾಗಿದ್ದರೆ - ಅದಕ್ಕೆ ಸಮಯ ನೀಡಿ. ಅದು ಪ್ರೀತಿಯಾಗಿದ್ದರೆ - ಅದಕ್ಕೆ ಸಮಯ ನೀಡಿ ನಿಮಗಾಗಿ ಸಮಯ ಮೀಸಲಿಟ್ಟುಕೊಳ್ಳಿ. ನಿಮ್ಮನ್ನು ನೀವು ಪ್ರೀತಿಸಿ ಎಂದು ಕಿವಿಮಾತು ಹೇಳಿದ್ದಾರೆ.
79
ಸಮಯವನ್ನು ಸದುಪಯೋಗ ಮಾಡಿಕೊಳ್ಳಿ. ವಿಮಾನಗಳು ನಿಮಗಾಗಿ ಎಂದಿಗೂ ಕಾಯುವುದಿಲ್ಲ. ಸ್ವಚ್ಛವಾಗಿ ತಿನ್ನಬೇಕು, ಚೆನ್ನಾಗಿ ನಿದ್ದೆ ಮಾಡಬೇಕು, ಹೆಚ್ಚು ಕೆಲಸ ಮಾಡಬೇಕು, ದೊಡ್ಡದಾಗಿ ನಗಬೇಕು, ಮುಕ್ತವಾಗಿ ಪ್ರೀತಿಸಬೇಕು ಎಂದು ರಶ್ಮಿಕಾ ಹೇಳಿದ್ದಾರೆ.
89
ಕನ್ನಡದ ಕಿರಿಕ್ ಪಾರ್ಟಿ ಮೂಲಕ ಚಿತ್ರರಂಗ ಪ್ರವೇಶ ಮಾಡಿದ ರಶ್ಮಿಕಾ ನಂತರ ತೆಲುಗು ಚಿತ್ರರಂಗದಲ್ಲಿ ದೊಡ್ಡ ಹೆಸರು ಸಂಪಾದನೆ ಮಾಡಿಕೊಂಡರು. ವಿಜಯ್ ದೇವರಕೊಂಡ ಜತೆಗಿನ ಸಿನಿಮಾಗಳು ಹಿಟ್ ಪಟ್ಟಿ ಸೇರಿದವು.
99
ಇದೀಗ ರಶ್ಮಿಕಾ ಪುಷ್ಪಾ ಯಶಸ್ಸಿನ ಅಲೆಯಲ್ಲಿ ಇದ್ದಾರೆ. ಅಲ್ಲು ಅರ್ಜುನ್ ಜತೆ ಸ್ಕ್ರೀನ್ ಶೇರ್ ಮಾಡಿಕೊಂಡಿದ್ದಾರೆ. ಭಿನ್ನವಾಗಿ ಕಾಣಿಸಿಕೊಂಡಿರುವ ರಶ್ಮಿಕಾಗೆ ಮೆಚ್ಚುಗೆಗಳ ಸುರಿಮಳೆ ಹರಿದು ಬಂದಿದೆ.