Published : Dec 29, 2021, 09:13 PM ISTUpdated : Dec 29, 2021, 09:18 PM IST
ಮುಂಬೈ(ಡಿ. 29) ಬಾಲಿವುಡ್ ನಿರ್ದೇಶಕ ಕರಣ್ ಜೋಹರ್ (Karan Johar) ದಕ್ಷಿಣ ಭಾರತದ (South India) ಸಿನಿಮಾಗಳ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. ಅಲ್ಲು ಅರ್ಜುನ್ ( Allu Arjun)ಮತ್ತು ರಶ್ಮಿಕಾ ಮಂದಣ್ಣ (Rashmika Mandanna) ಪುಷ್ಪಾ (Pushpa)ಸಿನಿಮಾದ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಅಲ್ಲು ಅರ್ಜುನ್ ಪುಷ್ಪಾ ಚಿತ್ರದ ಯಶಸ್ಸನ್ನು ಕರಣ್ ಉಲ್ಲೇಖ ಮಾಡಿದರು. ಕಮರ್ಷಿಯಲ್ ಆಗಿ ತೆಲುಗು ಚಿತ್ರರಂಗ ಸಾಧನೆ ಮಾಡುತ್ತಿದೆ ಎಂದರು. ವಿಶೇಷ ಪ್ರಮೋಶನ್ ಮಾಡಲಿಲ್ಲ, ಪೋಸ್ಟರ್ ಗಳನ್ನು ಹಂಚಲಿಲ್ಲ ಆದರೂ ಪುಷ್ಪಾ ಅತ್ಯುತ್ತಮ ಸಾಧನೆ ಮಾಡಿದೆ ಎಂದು ಕೊಂಡಾಡಿದರು.
37
ಟ್ರೇಲರ್ ಮೂಲಕವೇ ಚಿತ್ರ ಸದ್ದು ಮಾಡಿತು. ನೀವು ಈ ಸಿನಾರಿಯೋವನ್ನು ಹಿಂಬಾಲಿಲೇಬೇಕು. ಇದನ್ನೇ ಪಾನ್ ಇಂಡಿಯಾ ಕ್ರೇಜ್ ಎಂದು ಕರೆಯಬಹುದು ಎಂದಿದ್ದಾರೆ.
ಧನುಷ್ ಅಸುರನ್ ಚಿತ್ರದ ಬಗ್ಗೆಯೂ ಮೆಚ್ಚುಗೆ ವ್ಯಕ್ತಪಡಿಸಿರುವ ಕರಣ್ ಜೋಹರ್ ಚಿತ್ರ ನಿರ್ಮಾಣದ ಕೋನವೇ ಬದಲಾಗಿದೆ ಎಂದಿದ್ದಾರೆ. ಪ್ರತಿಯೊಬ್ಬರು ಹೊಸ ದೃಷ್ಟಿಯಲ್ಲಿ ಯೋಚನೆ ಮಾಡುತ್ತಿದ್ದಾರೆ ಎಂದರು.
57
ಪಾನ್ ಇಂಡಿಯಾ ಕ್ರೇಜ್ ರಾಜಮೌಳಿ ಅವರ ಬಾಹುಬಲಿ ಸಿನಿಮಾದಿಂದ ಆರಂಭವಾಯಿತು. ಬಾಹುಬಲಿ 112 ಕೋಟಿ ರೂ. ವಹಿವಾಟು ನಡೆಸಿತು ಎಂಬುದನ್ನು ಮರೆಯಲು ಸಾಧ್ಯವಿಲ್ಲ ಎಂದಿದ್ದಾರೆ.
67
ರಾಜಮೌಳಿಯವರ ಮಕ್ಕಿ ಸಿನಿಮಾ ಹಿಂದಿ ಬೆಲ್ಟ್ ನಲ್ಲಿ ಕೇವಲ ಒಂದು ಕೋಟಿ ಸಂಪಾದನೆ ಮಾಡಿತು. ಆದರೆ ದಕ್ಷಿಣ ಭಾರತಕ್ಕೆ ಹೋಲಿಕೆ ಮಾಡಿದರೆ ಈ ಪರಿಸ್ಥಿತಿಯೇ ಬೇರೆ ಎಂದರು.
77
ಮುಂಬರುವ RRR ಸಿನಿಮಾ ಸಹ ಕ್ರೇಜ್ ಸೃಷ್ಟಿ ಮಾಡಿದ್ದು ಮೊದಲ ದಿನವೇ ಮೂವತ್ತು ಕೋಟಿ ರೂ. ಗಳಿಕೆ ಮಾಡಿಕೊಳ್ಳಬಹುದು ಎಂಬುದನ್ನು ಒಪ್ಪಿಕೊಂಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.