10 ವರ್ಷದ ಬಾಲಕನ ನರಬಲಿ : ಚಿಕ್ಕಪ್ಪ ಸೇರಿ ಮೂವರ ಬಂಧನ

By Anusha KbFirst Published Mar 27, 2023, 12:51 PM IST
Highlights

10 ವರ್ಷದ ಬಾಲಕನೋರ್ವನನ್ನು ನರಬಲಿ ನೀಡಿದ ಭಯಾನಕ ಹಾಗೂ ಆಘಾತಕಾರಿ ಘಟನೆ  ಉತ್ತರಪ್ರದೇಶದ ಬಹ್ರೀಚ್‌ನಲ್ಲಿ ನಡೆದಿದೆ.   ಘಟನೆಗೆ ಸಂಬಂಧಿಸಿದಂತೆ  ಬಾಲಕನ ಚಿಕ್ಕಪ್ಪ ಸೇರಿ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.  

ಲಕ್ನೋ: 10 ವರ್ಷದ ಬಾಲಕನೋರ್ವನನ್ನು ನರಬಲಿ ನೀಡಿದ ಭಯಾನಕ ಹಾಗೂ ಆಘಾತಕಾರಿ ಘಟನೆ  ಉತ್ತರಪ್ರದೇಶದ ಬಹ್ರೀಚ್‌ನಲ್ಲಿ ನಡೆದಿದೆ.   ಘಟನೆಗೆ ಸಂಬಂಧಿಸಿದಂತೆ  ಬಾಲಕನ ಚಿಕ್ಕಪ್ಪ ಸೇರಿ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.  ಬಹ್ರೀಚ್‌ನ ಪರ್ಸಾ ಗ್ರಾಮದ ನಿವಾಸಿ ಕೃಷ್ಣ ವರ್ಮಾ (Krishna Verma) ಅವರ ಪುತ್ರ 10 ವರ್ಷದ ವಿವೇಕ್ (ಮಾರ್ಚ್‌23) ಗುರುವಾರ ರಾತ್ರಿ ನಾಪತ್ತೆಯಾಗಿದ್ದ. ಅದೇ ರಾತ್ರಿ ಹೊಲದಲ್ಲಿ ಬಾಲಕನ ಶವ  ಕುತ್ತಿಗೆ ಸೀಳಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು ಎಂದು ಪೊಲೀಸ್ ವರಿಷ್ಠಾಧಿಕಾರಿ ಪ್ರಶಾಂತ್ ವರ್ಮಾ (Prashant Verma) ತಿಳಿಸಿದ್ದಾರೆ. 

ಈ 10 ವರ್ಷದ ಬಾಲಕನನ್ನು ಮೂಢ ಆಚರಣೆಗಳಿಗಾಗಿ  ನರಬಲಿ ನೀಡಲಾಗಿದೆ ಎಂದು ವಿಚಾರಣೆ ವೇಳೆ ತಿಳಿದು ಬಂದಿದೆ. ಮಂತ್ರವಾದಿಯೋರ್ವ ಬಾಲಕನನ್ನು ಬಲಿ ನೀಡಿದ್ದಾನೆ. ಮೃತ ಬಾಲಕನ  ಸೋದರ ಸಂಬಂಧಿ ಅನೂಪ್ ಹಾಗೂ ಚಿಕ್ಕಪ್ಪ  ಚಿಂತಾರಾಮ್ ಇತರ ಇಬ್ಬರು ಸೇರಿ ಬಾಲಕನನ್ನು ಅಪಹರಿಸಿ ಹತ್ಯೆ ಮಾಡಿದ್ದಾರೆ.  ಅನೂಪ್‌ಗೆ ಎರಡೂವರೆ ವರ್ಷದ ಮಗನಿದ್ದು ಆತ, ಮಾನಸಿಕವಾಗಿ ಅಸ್ವಸ್ಥನಾಗಿದ್ದ ಮತ್ತು ಅನಾರೋಗ್ಯದಿಂದ ಬಳಲುತ್ತಿದ್ದ. ಆತನಿಗೆ ಹಲವು ರೀತಿ ಚಿಕಿತ್ಸೆ ನೀಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. 

Kerala Human Sacrifice Case: ಶ್ರೀದೇವಿ ಎಂದೇಳಿ ಭಗವಾಲ್‌ಗೆ ಗಾಳ ಹಾಕಿದ್ದ ಮಾಂತ್ರಿಕ ರಶೀದ್‌!

ಮಗನಿಗೆ ನೀಡಿದ  ಚಿಕಿತ್ಸೆಯು ಸಕಾರಾತ್ಮಕ ಫಲಿತಾಂಶವನ್ನು ನೀಡದಿದ್ದಾಗ, ಅನೂಪ್ ತನ್ನ ಹಳ್ಳಿಯ ಸಮೀಪವಿರುವ ಮಂತ್ರವಾದಿ ಬಳಿ ತೆರಳಿ ಆತನ ಸಲಹೆ ಪಡೆದಿದ್ದಾನೆ. ಆತ ಮಗನ ಚಿಕಿತ್ಸೆಗಾಗಿ ಆರೋಗ್ಯವಂತ ಬಾಲಕನ ಬಲಿ ನೀಡುವಂತೆ ಅನೂಪ್‌ಗೆ ಸಲಹೆ ನೀಡಿದ್ದಾನೆ.  ಅದರಂತೆ ಅನೂಪ್, ತನ್ನ ಸಹವರ್ತಿ ಚಿಂತಾರಾಮ್‌ನ ಅಣ್ಣನ ಮಗ ವೀವೇಕ್‌ನನ್ನು ಅಪಹರಿಸಿದ್ದಾರೆ.  ನಂತರ ಇಬ್ಬರೂ ಸೇರಿ ಆತನನ್ನು ಗುದ್ದಲಿ (ಕೊಟ್ಟು) ಯಿಂದ ಹೊಡೆದು ಕೊಂದಿದ್ದಾರೆ. 

ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳಾದ ಅನೂಪ್ (Anoop), ಚಿಂತಾರಾಮ್ (Chintaram) ಮತ್ತು ಮಂತ್ರವಾದಿಯನ್ನು (occultist) ಪೊಲೀಸರು ಬಂಧಿಸಿದ್ದಾರೆ. ಆರೋಪಿ ವಿರುದ್ಧ ಕೊಲೆ ಪ್ರಕರಣ ದಾಖಲಾಗಿದೆ. ಕಾಲ ಎಷ್ಟೇ ಮುಂದುವರಿದರು ಈ ಮೂಢನಂಬಿಕೆಗಳು ಮೂಢ ಆಚರಣೆಗಳು ನಮ್ಮ ಸಮಾಜವನ್ನು ಬಿಟ್ಟು ಹೋಗಿಲ್ಲ ಎಂಬುದಕ್ಕೆ ಈ ಘಟನೆ ಸಾಕ್ಷ್ಯಿಯಾಗಿದ್ದು, ಬದುಕಿ ಬಾಳಬೇಕಾದ ಅಮಾಯಕ ಜೀವವೊಂದು ಅನಾಚಾರಕ್ಕೆ ಬಲಿಯಾಗಿದೆ. 

Kerala ನರಬಲಿ ಪ್ರಕರಣ ಆರೋಪಿ ವಿಕೃತ ಕಾಮಿ; ಇನ್ನೂ 19 ಮಹಿಳೆಯರು ಮಿಸ್ಸಿಂಗ್‌ 

ನೆಲಮಂಗಲ ಬಾಲಕಿ ನರಬಲಿ ನೀಡಲು ಪೂಜೆ ನಡೆಸಿರುವ ಶಂಕೆ, ಸ್ಥಳೀಯರಿಂದ ರಕ್ಷಣೆ

ಬಾಲಕಿಯೊಬ್ಬಳಿಗೆ ಅರಿಶಿನ, ಕುಂಕುಮ, ನಿಂಬೆಹಣ್ಣು ಹಾಕಿ ಮಾಂತ್ರಿಕರೊಬ್ಬರು ಕ್ಷುದ್ರ ಪೂಜೆ ಮಾಡಿರುವ ಘಟನೆ ನೆಲಮಂಗಲ ತಾಲೂಕಿನ ಗ್ರಾಮೀಣ ಪ್ರದೇಶದಲ್ಲಿ ಕಳೆದ ವರ್ಷ ನಡೆದಿತ್ತು. ಬಾಲಕಿಯನ್ನು ನರಬಲಿ ಕೊಡಲು ಸಿದ್ಧತೆ ಮಾಡಿರುವ ಶಂಕೆ ವ್ಯಕ್ತವಾಗಿತ್ತು. ಈ ವಿಚಾರ ಗೊತ್ತಾಗುತ್ತಿದ್ದಂತೆ ಸ್ಥಳೀಯರು ಬಾಲಕಿಯನ್ನು ರಕ್ಷಿಸಿದ್ದಾರೆ. ಮಾಂತ್ರಿಕ ಪರಾರಿಯಾಗಿದ್ದು, ಐವರನ್ನು ಪೊಲೀಸರು ವಶಕ್ಕೆ ಪಡೆದಿದ್ದರು.

click me!