ಕೋಟಿ ಬೆಲೆಬಾಳುವ ಜಮೀನು ವಿವಾದದ ಹಿನ್ನೆಲೆಯಲ್ಲಿ ಗ್ರಾಮ ಪಂಚಾಯ್ತಿ ಸದಸ್ಯನೊಬ್ಬನನ್ನು ಆತನ ಸಂಬಂಧಿಕರೇ ಬರ್ಬರವಾಗಿ ಹತ್ಯೆ ಮಾಡಿದ್ದಾರೆ. 10 ದಿನಗಳ ತನಿಖೆಯ ನಂತರ, ಪೊಲೀಸರು ಸಿನಿಮೀಯ ರೀತಿಯಲ್ಲಿ ನಡೆದ ಈ ಕೊಲೆಯ ರಹಸ್ಯವನ್ನು ಭೇದಿಸಿ, ಆರು ಆರೋಪಿಗಳನ್ನು ಬಂಧಿಸಿದ್ದಾರೆ.
ಇನ್ನು ರಾಜು ಖರೆಯನ್ನ ಹತ್ಯೆ ಮಾಡಿದ ಈ ೬ ಜನರು ಆತನಿಗೆ ದೂರಿನ ಸಂಬಂಧಿಕರೆ. ಒಂದು ಕಾಲದ ಸ್ನೇಹಿತರು.. ಇವರ ನಡುವೆ ಬಂದ ಅದೊಂದು ಭಿನ್ನಾಭಿಪ್ರಾಯ ಒಂದು ಹತ್ಯಾಕಾಂಡವೇ ನಡೆಯುವಂತೆ ಮಾಡಿದೆ. ಅಷ್ಟಕ್ಕು ಈ ಭೀಕರ ಹತ್ಯೆಯ ಬಗ್ಗೆ ಆರೋಪಿಗಳು ಬಾಯ್ಬಿಟ್ಟ ಸತ್ಯ ಏನು..?