ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ದೇವರಗಡ್ಡಿ ಗ್ರಾಮಸ್ಥರು ಕೃಷ್ಣಾ ನದಿಯ ಪ್ರವಾಹದ ನಡುವೆಯೂ ಗೆದ್ದಮ್ಮ ದೇವಿಯ ತೆಪ್ಪೋತ್ಸವವನ್ನು ಆಚರಿಸಿದ್ದಾರೆ. ಈ ಧೈರ್ಯದ ಭಕ್ತಿಯನ್ನು ಸೆರೆಹಿಡಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಭಕ್ತರ ಈ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.

ಯಾದಗಿರಿ (ಆ.20): ಉಕ್ಕಿ ಹರಿಯುತ್ತಿರುವ ಕೃಷ್ಣಾ ನದಿಯ ಪ್ರವಾಹ ಲೆಕ್ಕಿಸದೇ, ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ದೇವರಗಡ್ಡಿ ಗ್ರಾ ಮಸ್ಥರು ಭಕ್ತಿಭಾವದಿಂದ ಗೆದ್ದಮ್ಮ ದೇವಿಯ ತೆಪ್ಪೋತ್ಸವವನ್ನು ಆಚರಿಸಿದ್ದಾರೆ. ಶ್ರಾವಣ ಮಾಸದ ಕೊನೆಯ ಮಂಗಳವಾರದಂದು (ನಿನ್ನೆ) ನಡೆದ ಈ ಅಪರೂಪದ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ನಿನ್ನೆ, ದೇವರಗಡ್ಡಿ ಗ್ರಾಮದ ಭಕ್ತರು ಗೆದ್ದಮ್ಮ ದೇವಿಯ ಮೂರ್ತಿಯನ್ನು ಹೊತ್ತು ಕೃಷ್ಣಾ ನದಿಯ ತೀರಕ್ಕೆ ಬಂದಿದ್ದರು. ಪ್ರವಾಹದ ಆತಂಕದ ನಡುವೆಯೂ, ಭಕ್ತರು ದೇವಿಯ ಮೂರ್ತಿಗೆ ವಿಶೇಷ ಪೂಜೆ-ಕೈಂಕರ್ಯ ನೆರವೇರಿಸಿದರು. ಹೂವಿನಿಂದ ಅಲಂಕರಿಸಲ್ಪಟ್ಟ ತೆಪ್ಪವನ್ನು ಭಕ್ತಿಪೂರ್ವಕವಾಗಿ ಪೂಜಿಸಿ, ಉತ್ಸವವನ್ನು ಆಚರಿಸಿದರು. ತೆಪ್ಪದಲ್ಲಿ ಹುಗ್ಗಿ, ಮಡಿಕೆ ಇತ್ಯಾದಿಗಳನ್ನು ಇಟ್ಟು, ಭಕ್ತರು ಕೃಷ್ಣಾ ನದಿಯ ಅರ್ಧಕ್ಕೆ ಸಾಗಿ ತೆಪ್ಪವನ್ನು ಅರ್ಪಿಸಿದರು.

ಈ ಧೈರ್ಯದಿಂದ ಕೂಡಿದ ಭಕ್ತಿಯ ಕಾರ್ಯವನ್ನು ವ್ಯಕ್ತಿಯೊಬ್ಬರು ಸೆರೆಹಿಡಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಪ್ರವಾಹದ ಭೀತಿಯ ನಡುವೆಯೂ ತಮ್ಮ ಸಂಪ್ರದಾಯವನ್ನು ಉಳಿಸಿಕೊಂಡ ಗ್ರಾಮಸ್ಥರ ಈ ಕಾರ್ಯಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ. ಇನ್ನು ಕೆಲವರು 'ನದಿ ರಭಸವಾಗಿ ಹರಿಯುವಾಗ ಪ್ರಾಣಾಪಾಯ ತರುವ ಈ ಆಚರಣೆ ಬೇಕಾ' ಎಂದು ಪ್ರಶ್ನಿಸಿದ್ದಾರೆ. ಅದೇನೆ ಇರಲಿ, ಗೆದ್ದಮ್ಮ ದೇವಿಯ ತೆಪ್ಪೋತ್ಸವವು ದೇವರಗಡ್ಡಿ ಗ್ರಾಮದ ಜನರ ಭಕ್ತಿಯ ಶಕ್ತಿ, ಸಂಪ್ರದಾಯದ ಮಹತ್ವ ತೋರಿಸಿದೆ.