India Latest News Live: ನಾಳೆಯಿಂದ ಎಲ್ಪಿಜಿ ಸಿಲಿಂಡರ್ ಮತ್ತಷ್ಟು ಅಗ್ಗ!

ಪಿಟಿಐ ಶ್ರೀಹರಿಕೋಟ: ಭಾರತ ಹಾಗೂ ಅಮೆರಿಕ ಮೊದಲ ಬಾರಿ ಜಂಟಿಯಾಗಿ ಅಭಿವೃದ್ಧಿಪಡಿಸಿದ ಅತ್ಯಾಧುನಿಕ ಹಾಗೂ ವಿಶ್ವದ ಅತಿ ದುಬಾರಿ ಭೂಸರ್ವೇಕ್ಷಣಾ ಉಪಗ್ರಹ 'ನಿರ್ಸಾ' ಬುಧವಾರ ಸಂಜೆ 5.40ಕ್ಕೆ ಆಂಧ್ರಪ್ರದೇಶದ ಶ್ರೀಹರಿಕೋಟದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಯಶಸ್ವಿಯಾಗಿ ಉಡಾವಣೆಯಾಗಿದೆ. ಈ ಮೂಲಕ ಶುಭಾಂಶು ಶುಕ್ಲಾ ಬಾಹ್ಯಾ ಕಾಶಯಾನದ ಬೆನ್ನಲ್ಲೇ, ಅಂತರಿಕ್ಷ ಕ್ಷೇತ್ರದಲ್ಲಿ ಭಾರತ ಮತ್ತೊಂದು ಮೈಲುಗಲ್ಲು ಸಾಧಿಸಿದೆ. 27.30 ಗಂಟೆಗಳ ಕ್ಷಣಗಣನೆ ಬಳಿಕ, ಇಸ್ರೋದ ಜಿಎಸ್ಎಲ್ವಿ-16 ರಾಕೆಟ್ ಸುಮಾರು 745 ಕಿ.ಮೀ. ದೂರ, 19 ನಿಮಿಷಗಳ ಕಾಲ ಹಾರಾಟ ನಡೆಸಿ ನಿಸಾರ್ಸಿಂಥೆಟಿಕ್ ಅಪರ್ಚ್ರ ರಾಡಾರ್ ಉಪಗ್ರಹವನ್ನು ಉದ್ದೇಶಿತ ಕಕ್ಷೆಗೆ ಸೇರಿಸಿದೆ. ಈ ಉಪಗ್ರಹದಲ್ಲಿನ ಎಸ್-ಬ್ಯಾಂಡ್ ಅನ್ನು ಒದಗಿಸಿದ್ದರೆ, ಎಲ್-ಬ್ಯಾಂಡ್ ಅನ್ನು ಇಸ್ರೋ ನಾಸಾ ಒದಗಿಸಿದೆ. ಕಾರಾಚರಣೆಯನ್ನು ಇಸ್ರೋ, ಕಕ್ಷೆ ಮತ್ತು ರಾಡಾರ್ನ ಕಾರ್ಯಾಚರಣೆಯನ್ನು ನಾಸಾ ವಹಿಸಿಕೊಂಡಿವೆ.
India latest news live 31st july 2025ನಾಳೆಯಿಂದ ಎಲ್ಪಿಜಿ ಸಿಲಿಂಡರ್ ಮತ್ತಷ್ಟು ಅಗ್ಗ!
India latest news live 31st july 2025ಬೆಂಗಳೂರಿನಲ್ಲಿ ಕಮರ್ಷಿಯಲ್ ಗ್ಯಾಸ್ ಟರ್ಬೈನ್ ಇಂಜಿನ್ ನಿರ್ಮಾಣ ಮಾಡಲಿರುವ Zomato ಸಂಸ್ಥಾಪಕನ ಏರೋಸ್ಪೇಸ್ ಕಂಪನಿ!
ಈ ಎಂಜಿನ್ ಕಂಪನಿಯ ಸಣ್ಣ ಟೇಕ್-ಆಫ್ ಮತ್ತು ಲ್ಯಾಂಡಿಂಗ್ ವಿಮಾನಗಳಿಗೆ ಶಕ್ತಿ ತುಂಬುವ ಉದ್ದೇಶವನ್ನು ಹೊಂದಿದೆ.
India latest news live 31st july 2025ಯೂರಿಯಾ ಪೂರೈಕೆಯಲ್ಲಿ ಕೇಂದ್ರ ಸರ್ಕಾರದ ನಿರ್ಲಕ್ಷ್ಯ - ಸಚಿವ ಚಲುವರಾಯಸ್ವಾಮಿ ವಾಗ್ದಾಳಿ
ಬಿಜೆಪಿ ನಾಯಕರು ರೈತರ ವಿಚಾರದಲ್ಲೂ ರಾಜಕೀಯ ಮಾಡಿ ಆಟ ಆಡಲು ನೋಡುತ್ತಿದ್ದು, ಅದನ್ನು ರಾಜ್ಯ ಸರ್ಕಾರ ಸಹಿಸುವುದಿಲ್ಲ ಎಂದು ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಹೇಳಿದ್ದಾರೆ.
India latest news live 31st july 2025ನಾಳೆಯಿಂದ UPI ಬಳಕೆಯಲ್ಲಿ ಆಗಲಿದೆ ಈ ಬದಲಾವಣೆಗಳು, ಎಚ್ಚರವಿರಲಿ!
India latest news live 31st july 2025ಪಡಿತರ ರೀತಿಯಲ್ಲಿ ರೈತರಿಗೆ ರಸಗೊಬ್ಬರ ವಿತರಿಸಿ - ಸಚಿವ ಸಂತೋಷ್ ಲಾಡ್ ಸಲಹೆ
ಪಡಿತರ ಚೀಟಿ ರೀತಿಯಲ್ಲೇ ರೈತರಿಗೆ ರಸಗೊಬ್ಬರ ಚೀಟಿ ವಿತರಿಸಲು ಕ್ರಮ ಕೈಗೊಳ್ಳುವಂತೆ ಕಾರ್ಮಿಕ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್ ಸಲಹೆ ನೀಡಿದ್ದಾರೆ.
India latest news live 31st july 2025'ಟ್ರಂಪ್ ಶೇ.25ರಷ್ಟು ತೆರಿಗೆ ತಾತ್ಕಾಲಿಕ..' ಎಂದ ಪ್ರಸಿದ್ಧ ಬ್ರೋಕರೇಜ್ ಸಂಸ್ಥೆ
India latest news live 31st july 2025ಕಮಿಷನ್ಗಾಗಿ ಕಾಳಸಂತೆಯಲ್ಲಿ ರಸಗೊಬ್ಬರ ಮಾರಾಟ - ಶ್ರೀರಾಮುಲು ಆರೋಪ
ರಾಜ್ಯದಲ್ಲಿ ಯೂರಿಯಾ ರಸಗೊಬ್ಬರಕ್ಕಾಗಿ ಹಾಹಾಕಾರ ಉಂಟಾಗಿದ್ದು, ಇತ್ತ ಕಾಂಗ್ರೆಸ್ ನಾಯಕರು ಸಿಎಂ ಕುರ್ಚಿಯಾಗಿ ಪೈಪೋಟಿಗೆ ಇಳಿದಿದ್ದಾರೆ ಎಂದು ಮಾಜಿ ಸಚಿವ ಬಿ.ಶ್ರೀರಾಮುಲು ಕಾಂಗ್ರೆಸ್ ವಿರುದ್ಧ ಹಾರಿಹಾಯ್ದರು.
India latest news live 31st july 2025ಫ್ರೀಯಾಗಿ ಕೈಗೆ ಸಿಕ್ಕಷ್ಟು ಸೇಬುಹಣ್ಣು ಎತ್ತಿಕೊಂಡು ಹೋದ ಜನ; ಲಾರಿ ಬಿದ್ದಿದ್ದೇ ಇವರಿಗೆ ಹಬ್ಬವಾಯ್ತು!
India latest news live 31st july 2025ಭೂಕುಸಿತದ ಭೀತಿಯಲ್ಲಿ ವೃದ್ಧೆಯ ಕಣ್ಣೀರಿನ ಮನವಿ - ಕೊಡಗಿನಲ್ಲಿ ಮತ್ತೊಂದು ಹೃದಯ ವಿದ್ರಾವಕ ಘಟನೆ
ಭಾರೀ ಮಳೆಗೆ ಭೂಕುಸಿತವಾಗಿದ್ದರಿಂದ ವಾಹನಗಳ ಓಡಾಟಕ್ಕೆ ಸಮಸ್ಯೆಯಾಗಬಾರದೆಂದು ಹೆದ್ದಾರಿ ಕುಸಿಯದಂತೆ ಕೋಟ್ಯಂತರ ರೂಪಾಯಿಯಲ್ಲಿ ತಡೆಗೋಡೆ ನಿರ್ಮಿಸಲಾಗಿತ್ತು.
India latest news live 31st july 2025ನರ್ಸ್ ನಿಮಿಷಾ ಪ್ರಿಯಾ ಪ್ರಕರಣ - ಕ್ಷಮಿಸುವಂತೆ ಕೇಳಿಕೊಂಡು ಕಣ್ಣೀರಿಟ್ಟ ಚಿಕ್ಕ ಮಗಳು
India latest news live 31st july 2025ಫೋನ್ಪೇ ಮೂಲಕ ಹಣ ಕಳಿಸಿದ್ದಕ್ಕೆ ಮಗಳನ್ನೇ ಕಳೆದುಕೊಂಡ ಅಪ್ಪನ ಗೋಳು, ನೀವೊಮ್ಮೆ ಕೇಳಿ!
ಫೊನ್ ಪೇ, ಗೂಗಲ್ ಪೇ ಮೂಲಕ ಹೆಣ್ಣು ಮಕ್ಕಳಿಗೆ ಹಣ ಹಾಕಿಸೋ ಮುನ್ನ ಎಚ್ಚರ. ಮಗಳ ಮೊಬೈಲ್ ನಂಬರ್ ಕೊಟ್ಟು ಹಣ ಹಾಕಿಸಿದ ತಪ್ಪಿಗೆ, ಇದೀಗ ಅಪ್ಪ ಮಗಳನ್ನು ಶಾಶ್ವತವಾಗಿ ಕಳೆದುಕೊಂಡು ಕಣ್ಣೀರು ಹಾಕುತ್ತಿದ್ದಾರೆ.
India latest news live 31st july 2025ಹುಬ್ಬಳ್ಳಿಯಲ್ಲಿ ಆಧಾರ್ ಸೇವಾ ಕೇಂದ್ರವನ್ನು ಮೇಲ್ದರ್ಜೆಗೇರಿಸಿ - ಪ್ರಲ್ಹಾದ್ ಜೋಶಿ ಮನವಿ
ಕೇಂದ್ರ ಸಚಿವ ಜೋಶಿ ಅವರು ಹುಬ್ಬಳ್ಳಿಯಲ್ಲಿ ಈಗಿರುವ ʼಆಧಾರ್ ಸೇವಾ ಕೇಂದ್ರʼವನ್ನು ಮೇಲ್ದರ್ಜೆಗೇರಿಸಬೇಕು. ಆರ್ಎಫ್ಪಿ (ರಿಕ್ವೆಸ್ಟ್ ಫಾರ್ ಪ್ರೊಪಸಲ್) ಕೇಂದ್ರವಾಗಬೇಕು ಎಂದು ಕೋರಿದರು.
India latest news live 31st july 2025ಚಿನ್ನಸ್ವಾಮಿ ಸ್ಟೇಡಿಯಂ ಕಾಲ್ತುಳಿತ ಪ್ರಕರಣ - ಅಮಾನತ್ತಾದ ಐಪಿಎಸ್ ಅಧಿಕಾರಿಗಳಿಗೆ ಮತ್ತೆ ಹೊಸ ಹುದ್ದೆ ನಿಯೋಜನೆ
India latest news live 31st july 2025ಪಾಕಿಸ್ತಾನವನ್ನು ಧ್ವಂಸ ಮಾಡಿದ್ದ ಇಸ್ರೇಲ್ ನಿರ್ಮಿತ LoRa, Sea Breaker, Rampage ಕ್ಷಿಪಣಿ ಇನ್ನು ಭಾರತದಲ್ಲೇ ಉತ್ಪಾದನೆ!
India latest news live 31st july 2025ಮೋದಿ, ಅಮಿತ್ ಶಾ ಸರ್ವಾಧಿಕಾರಿಯಂತೆ ವರ್ತಿಸುತ್ತಿದ್ದಾರೆ - ಸಚಿವ ದಿನೇಶ್ ಗುಂಡೂರಾವ್
ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮಿತ್ ಶಾ ಸರ್ವಾಧಿಕಾರಿಯಂತೆ ವರ್ತಿಸುತ್ತಿದ್ದಾರೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.
India latest news live 31st july 2025ಸಾರ್ವಜನಿಕರ ಗಮನಕ್ಕೆ; ಈ ಎರಡು ದಿನ ಅಂಚೆ ಕಚೇರಿ ಸೇವೆ ಇರಲ್ಲ, ಇಲ್ಲಿದೆ ಮಾಹಿತಿ
Post Office Service: ಹೊಸ ಡಿಜಿಟಲ್ ಸಾಫ್ಟ್ವೇರ್ ಬಿಡುಗಡೆಗೆ ಅಂಚೆ ಇಲಾಖೆ ಸಜ್ಜಾಗುತ್ತಿರುವುದರಿಂದ, ಆಯ್ದ ಸ್ಥಳಗಳಲ್ಲಿನ ಅಂಚೆ ಕಚೇರಿಗಳು ಗ್ರಾಹಕ ವ್ಯವಹಾರಗಳಿಗೆ ಮುಚ್ಚಲ್ಪಡುತ್ತವೆ.
India latest news live 31st july 2025ಕೆಂಪೇಗೌಡರು ನಿರ್ಮಿಸಿದ ಬೆಂಗಳೂರು ವಿಶ್ವಕ್ಕೆ ಮಾದರಿ - ಸಚಿವ ಕೆ.ವೆಂಕಟೇಶ್
ನಾಡಪ್ರಭು ಕೆಂಪೇಗೌಡರು ನಿರ್ಮಿಸಿದ ಬೆಂಗಳೂರು ವಿಶ್ವಕ್ಕೆ ಮಾದರಿಯಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ವೆಂಕಟೇಶ್ ಹೇಳಿದರು.
India latest news live 31st july 2025ಅಮೆರಿಕವನ್ನ ಖುಷಿಪಡಿಸಲು, 70 ಕೋಟಿ ರೈತರನ್ನ ಉಪವಾಸ ಇಡೋಕೆ ಆಗಲ್ಲ - ಕಾಂಗ್ರೆಸ್ ಸಂಸದ ಶಶಿ ತರೂರ್
ಭಾರತದ ಮೇಲೆ ಶೇ. 25ರಷ್ಟು ತೆರಿಗೆ ಹಾಕಿರುವ ಕ್ರಮವನ್ನು ಟೀಕಿಸಿರುವ ಕಾಂಗ್ರೆಸ್ ಸಂಸದ ಶಶಿ ತರೂರ್, ಅಮೆರಿಕವನ್ನ ಖುಷಿಪಡಿಸಲು 70 ಕೋಟಿ ರೈತರನ್ನ ಉಪವಾಸ ಇಡೋಕೆ ಆಗಲ್ಲ ಎಂದಿದ್ದಾರೆ.
India latest news live 31st july 2025ಮೆಟ್ರೋ ನಿಲ್ದಾಣಗಳಲ್ಲಿ ನಂದಿನಿ ಕೇಂದ್ರಗಳು - ಬಮುಲ್ ಅಧ್ಯಕ್ಷ ಡಿ.ಕೆ.ಸುರೇಶ್
ಮೆಟ್ರೋ ನಿಲ್ದಾಣಗಳಲ್ಲಿ ನಂದಿನ ಕೇಂದ್ರ ತೆರೆಯುವ ವಿಚಾರವಾಗಿ ಸ್ಥಳ ಪರೀಶಿಲನೆ ನಡೆಸಲಾಗುತ್ತಿದ್ದು, ಇದಾದ ನಂತರ ಬಿಎಂಆರ್ಸಿಎಲ್ ಜೊತೆ ಒಪ್ಪಂದ ಮಾಡಿಕೊಳ್ಳಲಾಗುವುದು ಎಂದು ಬಮುಲ್ ಅಧ್ಯಕ್ಷರಾದ ಡಿ.ಕೆ.ಸುರೇಶ್ ತಿಳಿಸಿದರು.
India latest news live 31st july 202511 ವರ್ಷಗಳ ಪ್ರೀತಿ, ಮದುವೆಗೂ ಮುನ್ನ ಗರ್ಭಿಣಿ - ದಿವ್ಯಾ ಸಾವಿಗೆ ಕಾರಣವಾಯ್ತಾ ಗರ್ಭ ನಿರೋಧಕ ಮಾತ್ರೆ!
ಹುಬ್ಬಳ್ಳಿಯಲ್ಲಿ 11 ವರ್ಷಗಳ ಪ್ರೇಮ ಸಂಬಂಧ ದುರಂತ ಅಂತ್ಯ ಕಂಡಿದೆ. ಮದುವೆಗೆ ಮುನ್ನ ಗರ್ಭಿಣಿಯಾಗಿದ್ದ ಯುವತಿ ದಿವ್ಯಾ ಸಲವಾದಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾರೆ. ಅಬಾರ್ಷನ್ ಮಾತ್ರೆ ನೀಡಿದ್ದೇ ಸಾವಿಗೆ ಕಾರಣ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.