MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Entertainment
  • TV Talk
  • ಜೀ ಕನ್ನಡ ಧಾರಾವಾಹಿಗಳಲ್ಲಿ ಯಾರೂ ಊಹಿಸಲಾರದ ತಿರುವು... ಕಾದಿದೆ ಭರ್ಜರಿ ಸಂಚಿಕೆ

ಜೀ ಕನ್ನಡ ಧಾರಾವಾಹಿಗಳಲ್ಲಿ ಯಾರೂ ಊಹಿಸಲಾರದ ತಿರುವು... ಕಾದಿದೆ ಭರ್ಜರಿ ಸಂಚಿಕೆ

ಜೀ ಕನ್ನಡದಲ್ಲಿ ಭರ್ಜರಿ ಮನರಂಜನೆ ಶುರುವಾಗಲಿದೆ. ಟಾಪ್ ಧಾರಾವಾಹಿಗಳಲ್ಲಿ ಯಾರೂ ಊಹಿಸಲಾರದ ಟ್ವಿಸ್ಟ್ ತೆರೆದುಕೊಳ್ಳಲಿದೆ. ಅಣ್ಣಯ್ಯ, ಶ್ರಾವಣಿ ಸುಬ್ರಹ್ಮಣ್ಯ ಮತ್ತು ನಾ ನಿನ್ನ ಬಿಡಲಾರೆ ಮಹಾ ತಿರುವು ಏನು?

2 Min read
Pavna Das
Published : Aug 21 2025, 04:26 PM IST
Share this Photo Gallery
  • FB
  • TW
  • Linkdin
  • Whatsapp
17
Image Credit : Asianet News

ಭರ್ಜರಿ ಮನರಂಜನೆ ಕೊಡೋದಕ್ಕೆ ಹೆಸರುವಾಸಿಯಾಗಿರುವ ಜೀ ಕನ್ನಡದ ಧಾರಾವಾಹಿಗಳಲ್ಲಿ ಇನ್ನು ಮುಂದಿನ ದಿನಗಳಲ್ಲಿ ಟ್ವಿಸ್ಟ್ ಮೇಲೆ ಟ್ವಿಸ್ಟ್ ಸಿಗಲಿದೆ. ಅಣ್ಣಯ್ಯ, ನಾ ನಿನ್ನ ಬಿಡಲಾರೆ ಹಾಗೂ ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿಯಲ್ಲಿ ಇನ್ನು ಮುಂದೆ ಮಹಾ ತಿರುವಿನ ಮೂಲಕ ಕಥೆ ಬೇರೆಡೆಗೆ ತಿರುಗಲಿದೆ.

27
Image Credit : Asianet News

ಅಣ್ಣಯ್ಯ ಧಾರಾವಾಹಿಯಲ್ಲಿ ರಾಣಿಯ ಮದುವೆಯ ಬಳಿಕ ಮನೆ ಭಿಕೋ ಎನ್ನುತ್ತಿದೆ. ರಾಣಿಯ ಗಂಡ ಪೆದ್ದ ಎನ್ನುವ ಸುಳ್ಳನ್ನು ಪಾರು ಶಿವುನಿಂದ ಮುಚ್ಚಿಟ್ಟಿದ್ದಾಳೆ. ಮನೆಯಲ್ಲಿ ಜನ ಕಡಿಮೆಯಾದಂತೆ ಶಿವು ಪುಟ್ಟ ತಂಗಿಗೆ ಬೇರೊಂದು ಆಸೆ ಚಿಗುರೊಡೆದಿದೆ.

Related Articles

Related image1
Shravani Subramanya Serial: ಅಪ್ಪ ಕಟ್ಟಿದ ತಾಳಿ ಮಗಳು ಧರಿಸ್ಬೋದಾ? 'ಶ್ರಾವಣಿ-ಸುಬ್ರಹ್ಮಣ್ಯ' ನೋಡಿ ನೆಟ್ಟಿಗರು ಶಾಕ್​!
Related image2
Annayya Serial: ತಾಯಿಯಂಥ ಅತ್ತಿಗೆ ಪಾರು ವಿರುದ್ಧವೇ ಸಿಡಿದೆದ್ದ ರಾಣಿ; 'ಮನೆ ಮಗಳು' ಸಿನಿಮಾ ಥರ ಆಗೋಯ್ತು!
37
Image Credit : Asianet News

ಈ ಮನೆಗೆ ಪುಟ್ಟ ಮಗು ಬಂದ್ರೆ ಚೆನ್ನಾಗಿರುತ್ತೆ ಅಲ್ವಾ? ಎಂದು ತಂಗಿ ರಮ್ಯಾ ಹೇಳುತ್ತಿದ್ದರೆ. ಶಿವು ಕೈಯನ್ನು ಗಟ್ಟಿಯಾಗಿ ಹಿಡಿದು ಪಾರು ಈ ಮನೆಗೆ ಹೊಸಬ್ಬರು ಬಂದೇ ಬರುತ್ತಾರೆ. ನಾನು ಹೇಳಿದ್ದು ನಿಮ್ಮ ತಾಯಿ ಬಗ್ಗೆ ಎನ್ನುತ್ತಾಳೆ ಪಾರು. ಅಮ್ಮ ಅಂದರೇನೆ ಸಿಡಿದು ಬೀಳುವ ಶಿವು ಇದನ್ನು ಕೇಳಿ ಸುಮ್ಮನಿರುತ್ತಾನೆಯೇ? ಕಾದು ನೋಡಬೇಕು.

47
Image Credit : Asianet News

ಇನ್ನು ನಾ ನಿನ್ನ ಬಿಡಲಾರೆ ಧಾರಾವಾಹಿಯಲ್ಲಿ ತಾನೇ ಏನೆ ತಂತ್ರ ಹೂಡಿದರೂ ಅದಕ್ಕೆ ತದ್ವಿರುದ್ಧವಾಗಿ ಏನಾದರೊಂದು ಆಗುತ್ತಿದೆಯಲ್ಲ ಎಂದು ದುರ್ಗಾ ಹಿಂದೆ ಬಂದ ಮಾಳವಿಕಾಗೆ ಅಲ್ಲೊಂದು ದೊಡ್ಡ ಅಘಾತವೇ ಎದುರಾಗುತ್ತದೆ.

57
Image Credit : Asianet News

ಶಂಭುವಿನ ಮುಖಾಮುಖಿಯಾದ ಮಾಳವಿಕ, ಆತನ್ನು ಬಂಧಿಸಲು ತನ್ನ ಶಕ್ತಿ ಪ್ರಯೋಗ ಮಾಡುತ್ತಾಳೆ. ಆದರೆ ನನ್ನ ಬಂಧನ ಭ್ರಮೆ, ಸಾವು ಭ್ರಮೆ ಎನ್ನುತ್ತಾ, ನಿನ್ನ ಮರಣ ಯುಗಾಂತ್ಯ ಆರಂಭ ಎಂದು ಮಾಳಾವಿಕಾಳನ್ನೆ ತನ್ನ ಶಕ್ತಿಯಿಂದ ಬಂಧಿಸುತ್ತಾನೆ ಶಂಭು. ಇವರಿಬ್ಬರಿಗೂ ಏನು ಸಂಬಂಧ, ಶಂಭು ಮುಂದೆ ಸೋತು ಬಿಡ್ತಾಳ ಮಾಳವಿಕಾ ಕಾದು ನೋಡಬೇಕು.

67
Image Credit : Asianet News

ಮತ್ತೊಂದು ಕಡೆ ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿಯಲ್ಲಿ ಶ್ರಾವಣಿ ಮತ್ತು ಸುಬ್ಬು ಮದುವೆಯಾಗಿಲ್ಲ ಎಂದು ಗೊತ್ತಾದ ಬಳಿಕ ಮನೆಗೆ ಕರೆಯಿಸಿಕೊಂಡಿದ್ದಾರೆ ಶ್ರಾವಣಿ ತಂದೆ. ಇದೀಗ ಕೊನೆಗೂ ಸುಬ್ಬುಗೆ ತಾನು ಶ್ರಾವಣಿಯನ್ನು ಪ್ರೀತಿ ಮಾಡುತ್ತಿರುವ ಅರಿವಾಗಿ, ಆಕೆಯನ್ನು ಮದುವೆಯಾಗಲು ತುದಿಗಾಲಲ್ಲಿ ನಿಂತಿದ್ದಾನೆ ಸುಬ್ಬು.

77
Image Credit : Asianet News

ಆದರೆ ಅಲ್ಲೂ ದೊಡ್ಡ ಟ್ವಿಸ್ಟ್. ಶ್ರಾವಣಿಗೆ ಹುಡುಗನನ್ನು ಬೇರೆಲ್ಲೂ ಹುಡುಕೋದು ಬೇಡ, ನಮ್ಮ ಸುಬ್ಬುನೇ ಇದ್ದಾನಲ್ಲ ಎಂದು ಆತನನ್ನು ಬಳಿ ಕರೆದು, ಶ್ರಾವಣಿಗೆ ತಕ್ಕನಾದ ಹುಡುಗನನ್ನು ಸುಬ್ಬುನೇ ಹುಡುಕುತ್ತಾನೆ ಎನ್ನುತ್ತಾರೆ. ಇದರಿಂದ ಎಲ್ಲರಿಗೂ ಶಾಕ್. ಈಗಲಾದರೂ ಈ ಜೋಡಿ ತಮ್ಮ ಮನಸಿನ ಭಾವನೆಯನ್ನು ಒಬ್ಬರಿಗೊಬ್ಬರು ಹೇಳಿಕೊಳ್ಳುತ್ತಾರೆಯೇ? ಏನಾಗುತ್ತೆ ಅನ್ನೋದನ್ನು ಕಾದು ನೋಡಬೇಕು.

About the Author

PD
Pavna Das
ಮೂಲತಃ ಮಂಗಳೂರಿನವಳು. ಮಂಗಳೂರು ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮದ ಸ್ನಾತಕೋತ್ತರ ಪದವಿ . ಕಳೆದ 12 ವರ್ಷಗಳಿಂದ ಪತ್ರಿಕೆ ಹಾಗೂ ಡಿಜಿಟಲ್ ಮಾಧ್ಯಮಗಳಲ್ಲಿ ಕೆಲಸ . ಸುದ್ದಿ ಬಿಡುಗಡೆ, ಗಲ್ಫ್ ಕನ್ನಡಿಗ, ಈ ಟಿವಿ ಭಾರತ್, ಕನ್ನಡ ನ್ಯೂಸ್ ನೌ, ವಿಜಯಕರ್ನಾಟಕದಲ್ಲಿ ಕೆಲಸ ಮಾಡಿದ ಅನುಭವ. ಈಗ ಏಷ್ಯಾನೆಟ್ ಸುವರ್ಣದಲ್ಲಿ ಫ್ರೀಲಾನ್ಸರ್ . ಮನೋರಂಜನೆ, ಲೈಫ್ ಸ್ಟೈಲ್, ಟ್ರಾವೆಲ್ ಬರವಣಿಗೆ ಇಷ್ಟ.
ಜೀ ಕನ್ನಡ
ಶ್ರಾವಣಿ ಸುಬ್ರಮಣ್ಯ
ಅಣ್ಣಯ್ಯ ಧಾರಾವಾಹಿ
ನಾ ನಿನ್ನ ಬಿಡಲಾರೆ ಧಾರಾವಾಹಿ

Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved