MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Entertainment
  • TV Talk
  • ಲಕ್ಷ್ಮೀ ನಿವಾಸ ವೀಕ್ಷಕರ ಮಾತು ನಿರ್ದೇಶಕರಿಗೆ ಕೇಳುತ್ತಾ? ವಿಶ್ವನ ಸಂಕಟಕ್ಕೆ ಇದುವೇ ಪರಿಹಾರವಂತೆ!

ಲಕ್ಷ್ಮೀ ನಿವಾಸ ವೀಕ್ಷಕರ ಮಾತು ನಿರ್ದೇಶಕರಿಗೆ ಕೇಳುತ್ತಾ? ವಿಶ್ವನ ಸಂಕಟಕ್ಕೆ ಇದುವೇ ಪರಿಹಾರವಂತೆ!

ವಿಶ್ವ, ಜಾಹ್ನವಿ ಮತ್ತು ಜಯಂತ್ ತ್ರಿಕೋನ ಪ್ರೇಮಕಥೆಯ ಬೆಳವಣಿಗೆಗಳು ಕುತೂಹಲ ಮೂಡಿಸಿವೆ. ಜಾನು ಮನೆಗೆಲಸ ಮಾಡುವುದನ್ನು ವಿಶ್ವ ನೋಡಲಾರದೆ ಚಿಂತಿತನಾಗಿದ್ದು, ವೀಕ್ಷಕರು ಪರಿಹಾರ ಸೂಚಿಸಿದ್ದಾರೆ. ಜಯಂತ್ ತನ್ನ ತಪ್ಪುಗಳನ್ನು ತಿದ್ದಿಕೊಳ್ಳುತ್ತಿದ್ದಾನೆ.

1 Min read
Mahmad Rafik
Published : Aug 12 2025, 02:46 PM IST
Share this Photo Gallery
  • FB
  • TW
  • Linkdin
  • Whatsapp
15
Image Credit : Zee Kannada

ವಿಶ್ವ, ಜಾಹ್ನವಿ ಮತ್ತು ಜಯಂತ್ ತ್ರಿಕೋನ ಪ್ರೇಮಕಥೆ ಮುಂದೆ ಹೇಗೆ ಸಾಗುತ್ತೆ ಎಂಬ ಕುತೂಹಲ ವೀಕ್ಷಕರಲ್ಲಿ ಮನೆ ಮಾಡಿದೆ. ತನು ಜೊತೆ ಎಂಗೇಜ್ಮೆಂಟ್ ಮಾಡಿಕೊಂಡ ಬಳಿಕ ಜಾಹ್ನವಿಯನ್ನು ವಿಶ್ವ ಭೇಟಿಯಾಗಿದ್ದನು. ಇದಾದ ಬಳಿಕ ನಾನು ಕೇವಲ ನಿನ್ನ ಸ್ನೇಹಿತ ಮಾತ್ರ ಎಂದು ಊರು ಬಿಟ್ಟು ಹೊರಟಿದ್ದ ಜಾಹ್ನವಿಯನ್ನು ಮನೆಗೆ ಕರೆದುಕೊಂಡು ಬಂದಿದ್ದನು.

25
Image Credit : Zee Kannada

ಇತ್ತ ಜಾಹ್ನವಿ ಬದುಕಿರೋ ವಿಷಯ ಜಯಂತ್‌ಗೆ ಗೊತ್ತಾಗಿದೆ. ಆದ್ರೆ ಜಾಹ್ನವಿ ಎಲ್ಲಿದ್ದಾಳೆ ಮತ್ತು ಮನೆಗೆ ಬಂದು ಚೀಟಿ ಬರೆದಿಟ್ಟು ಹೋದ ಆ ಗೂಬೆ ಯಾರು ಅಂತ ಮಾತ್ರ ಗೊತ್ತಾಗುತ್ತಿಲ್ಲ. ಈ ಎಲ್ಲಾ ಬೆಳವಣಿಗೆ ನಡುವೆ ಜಾನು ಮನೆಗೆಲಸದವಳಾಗಿ ಕೆಲಸ ಮಾಡುತ್ತಿರೋದನ್ನು ವಿಶ್ವನಿಂದ ನೋಡಲು ಆಗುತ್ತಿಲ್ಲ.

Related Articles

Related image1
ಲಕ್ಷ್ಮೀ ನಿವಾಸ ವೀಕ್ಷಕರೇ, ಸೈಕೋ ಜಯಂತ್ ವಿಷಯ ಗೊತ್ತಾಯ್ತಾ? ಇದು ಬಿಗ್ ಬ್ರೇಕಿಂಗ್ ನ್ಯೂಸ್!
Related image2
ವಿಶ್ವ-ಜಾನು ಅಥವಾ ಜಾನು-ಜಯಂತ್; ಈ ಜೋಡಿಯಲ್ಲಿ ಮೊದಲು ಮುಖಾಮುಖಿ ಆಗೋದು ಯಾರು?
35
Image Credit : Zee Kannada

ತನು ಮತ್ತು ವಿಶ್ವ ಫೋನ್ ನೋಡುತ್ತಾ ಕುಳಿತಿದ್ರೆ, ಜಾನು ಕಸ ಗುಡಿಸುತ್ತಿರುತ್ತಾಳೆ. ಈ ವೇಳೆ ತನು ಕುಡಿಯಲು ನೀರು ಕೇಳುತ್ತಾರೆ. ಆನಂತರ ವಿಶ್ವನ ತಾಯಿ ಲಲಿತಾ ಬಂದು, ತುಂಬಾ ತಲೆನೋವು, ಕಾಫಿ ಮಾಡಿಕೊಡುವಂತೆ ಕೇಳುತ್ತಾರೆ. ಇದದನ್ನೆಲ್ಲಾ ನೋಡಿ ವಿಶ್ವನಿಗೆ ಸಂಕಟವಾಗುತ್ತದೆ. ಇದೀಗ ಸೀರಿಯಲ್ ವೀಕ್ಷಕರು ವಿಶ್ವನ ಸಂಕಟಕ್ಕೆ ಪರಿಹಾರವನ್ನು ನೀಡಿದ್ದಾರೆ.

45
Image Credit : Zee Kannada

ಲಕ್ಷ್ಮೀ ನಿವಾಸ ವೀಕ್ಷಕರು ವಿಶ್ವನ ಕಷ್ಟಕ್ಕೆ ಮರುಗಿದ್ದಾರೆ. ಮನೆಗೆಲಸ ಮಾಡೋದನ್ನು ನೋಡಲು ಆಗದಿದ್ದರೆ ಆಕೆಗೊಂದು ಹೊರಗೆ ಕೆಲಸ ಕೊಡಿಸು ಎಂದು ಸಲಹೆಯನ್ನು ನೀಡಿದ್ದಾರೆ. ಮತ್ತೊಂದೆಡೆ ಮೂವರ ಪ್ರೇಮಕಥೆಗೆ ಶೀಘ್ರದಲ್ಲಿಯೇ ಮತ್ತೊಂದು ತಿರುವು ನೀಡಿ. ಜಾನು ಮತ್ತು ಜಯಂತ್ ಮುಖಾಮುಖಿಯಾಗುವಂತೆ ಮಾಡಿ ಎಂದು ವೀಕ್ಷಕರು ನಿರ್ದೇಶಕರು ಕೇಳಿಕೊಂಡಿದ್ದಾರೆ.

55
Image Credit : Zee Kannada

ಇನ್ನು ಕೆಲವರು ಜಾನು ಮತ್ತು ವಿಶ್ವನ ಜೋಡಿ ತುಂಬಾ ಮುದ್ದಾಗಿ ಕಾಣಿಸುತ್ತಿದೆ ಎಂದು ಕಮೆಂಟ್ ಮಾಡಿದ್ದಾರೆ. ಇತ್ತ ಜಯಂತ್ ತನ್ನ ತಪ್ಪುಗಳನ್ನು ತಿದ್ದುಕೊಳ್ಳುತ್ತಿದ್ದಾನೆ. ಮನೆಯಲ್ಲಿ ಇರಿಸಿದ್ದ ರಹಸ್ಯ ಕ್ಯಾಮೆರಾಗಳನ್ನು ತೆಗೆದು ಬೆಂಕಿಗೆ ಹಾಕಿದ್ದಾನೆ. ಜಾಹ್ನವಿ ಮೇಲಿನ ಅನುಮಾನದಿಂದ ಕ್ಯಾಮೆರಾ ಹಾಕಿರಲಿಲ್ಲ. ನನ್ನ ಮೇಲಿನ ಪ್ರೀತಿ ಕಡಿಮೆ ಆಗಬಾರದು ಎಂಬ ಉದ್ದೇಶಕ್ಕೆ ಕ್ಯಾಮೆರಾ ಹಾಕಿದ್ದೆ ಎಂದು ಹೇಳಿಕೊಂಡಿದ್ದಾನೆ.

About the Author

MR
Mahmad Rafik
ಮಹ್ಮದ್ ರಫಿಕ್ವಿಜಯಪುರದ ಬೇನಾಳ RC ಗ್ರಾಮದವನು. ಪಬ್ಲಿಕ್ ಟಿವಿ ಡಿಜಿಟಲ್, ನ್ಯೂಸ್ 18 ಕನ್ನಡ, ಇದೀಗ ಏಷ್ಯಾನೆಟ್ ಕನ್ನಡ ಸೇರಿ ಡಿಜಿಟಲ್ ಮಾಧ್ಯಮದಲ್ಲಿ 8 ವರ್ಷಗಳ ಅನುಭವ. ಎಂ.ಕಾಂ. ಓದಿ ಕೆಲಸ ಆರಂಭಿಸಿದ್ದು ಖಾಸಗಿ ಬ್ಯಾಂಕ್‌ವೊಂದರಲ್ಲಿ. ಆಕರ್ಷಿಸಿದ್ದು ಪತ್ರಿಕೋದ್ಯಮ. ಯಾವ ಟಾಪಿಕ್ ಕೊಟ್ಟರೂ ಬರೆಯಬಲ್ಲೆ. ಓಟಿಟಿ ಮೂವಿ ನೋಡೋದು ಇಷ್ಟ.
ಲಕ್ಷ್ಮೀ ನಿವಾಸ ಧಾರಾವಾಹಿ
ಕನ್ನಡ ಧಾರಾವಾಹಿ
ಜೀ ಕನ್ನಡ

Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved