MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • TV Talk
  • ಜಯಂತ್‌ಗೆ ಸಿಕ್ತು ಚಿನ್ನು ಮರಿ ಬಳೆ, ಅಸಲಿ ಆಟ ಈಗ ಶುರು..ಯಾರಿಗೆ ಕಾದಿದೆ ಗ್ರಹಚಾರ?

ಜಯಂತ್‌ಗೆ ಸಿಕ್ತು ಚಿನ್ನು ಮರಿ ಬಳೆ, ಅಸಲಿ ಆಟ ಈಗ ಶುರು..ಯಾರಿಗೆ ಕಾದಿದೆ ಗ್ರಹಚಾರ?

Jayant finds bangles: ಮೊದಲೇ ಅವನು ಸೈಕೋ. ಜಾಹ್ನವಿ ಮೇಲೆ ಹುಚ್ಚು ಪ್ರೀತಿ ಬೇರೆ. ಆದ್ದರಿಂದ ಬಳೆಯ ಜಾಡನ್ನು ಹಿಡಿದು ಆತ ತನ್ನ ಚಿನ್ನು ಮರಿಯನ್ನ ಹುಡುಕಿದರೂ ಆಶ್ಚರ್ಯವೇನಿಲ್ಲ. ಇಲ್ಲಿ ಇನ್ನೊಂದು ಅನುಮಾನ ಎದುರಾಗುತ್ತದೆ. 

2 Min read
Author : Ashwini HR
Published : Oct 18 2025, 09:54 PM IST
Share this Photo Gallery
  • FB
  • TW
  • Linkdin
  • Whatsapp
16
ವಿಶ್ವ, ಜಾಹ್ನವಿಗೂ ಗೊತ್ತು
Image Credit : Zee Kannada

ವಿಶ್ವ, ಜಾಹ್ನವಿಗೂ ಗೊತ್ತು

ಸದ್ಯ ಜಯಂತ್‌ ಮನೋವೈದ್ಯರಿಂದ ಚಿಕಿತ್ಸೆ ಪಡೆಯುತ್ತಿದ್ದಾನೆ. ವೈದ್ಯರು ಎಷ್ಟೇ ಔಷಧಿ ಕೊಟ್ಟರೂ, ಸಮಾಧಾನ ಹೇಳಿದರೂ "ನನ್ನ ಜಾನು ಸತ್ತಿಲ್ಲ, ಬದುಕಿದ್ದಾಳೆ" ಎಂದು ಪದೇ ಪದೇ ಹೇಳುತ್ತಿದ್ದಾನೆ ಜಯಂತ್‌. ಇದನ್ನೆಲ್ಲಾ ನೋಡಿದ ವೈದ್ಯರು ಜಯಂತ್‌ ಜಾಹ್ನವಿ ಇದ್ದಾಳೆ ಎಂಬ ಭ್ರಮೆಯಲ್ಲಿ ಬದುಕುತ್ತಿದ್ದಾನೆ ಎಂದು ಹೇಳುತ್ತಾರೆ. ಈ ವಿಷಯ ಈಗ ವಿಶ್ವ, ಜಾಹ್ನವಿಗೂ ತಿಳಿದಿದೆ.

26
ತೀವ್ರ ಗೊಂದಲ
Image Credit : Zee Kannada

ತೀವ್ರ ಗೊಂದಲ

ಜಯಂತ್ ಮುಂದೆ ನಿಜವಾಗಲೂ ಜಾಹ್ನವಿ ಕಂಡರೂ ಅದನ್ನು ಭ್ರಮೆ ಎಂಬಂತಲೇ ಬಿಂಬಿಸಲು ಹೊರಟಿದ್ದಾರೆ ಜಾಹ್ನವಿ-ವಿಶ್ವ. ಇದರಿಂದ ತೀವ್ರ ಗೊಂದಲಕ್ಕೆ ಒಳಗಾಗಿದ್ದಾನೆ ಜಯಂತ್. ಅಷ್ಟೇ ಅಲ್ಲ, ಶಾಂತಮ್ಮನ ಬಳಿ ಜಾಹ್ನವಿ ತನ್ನ ಮುಂದೆ ಕಾಣಿಸಿಕೊಂಡಿದ್ದನ್ನ ಜಯಂತ್‌ ಹೇಳಿದಾಗ "ಅಯ್ಯೋ, ಅವಳು ನಿಜಕ್ಕೂ ಕಾಣಿಸಿಕೊಂಡಳಾ ಅಥವಾ ಈತನಿಗೆ ನಿಜಕ್ಕೂ ಆಕೆ ಬದುಕಿದ್ದಾಳೆ ಎಂಬ ಭ್ರಮೆ ಹೊಕ್ಕಿದೆಯೋ" ಅಂದುಕೊಳ್ಳುತ್ತಾಳೆ ಶಾಂತಮ್ಮ.

Related Articles

Related image1
ಕೊನೆಗೂ ಸಿಡಿದೆದ್ದ ಸಿದ್ದೇಗೌಡ್ರು ಹೆಂಡ್ರು, ಭಾವನಾಳ ಇನ್ನೊಂದು ರೂಪ ವೀಕ್ಷಕರ ಕಣ್ಮುಂದೆ!
Related image2
ಈ 3 ಪಾತ್ರಗಳ ಮೂಲಕ ಸ್ಟ್ರಾಂಗ್‌ ಮೆಸೇಜ್‌ ಕೊಟ್ಟ ಲಕ್ಷ್ಮೀನಿವಾಸ ನಿರ್ದೇಶಕರು
36
ನಂಬಿಕೆ, ಅನುಮಾನ
Image Credit : Instagram

ನಂಬಿಕೆ, ಅನುಮಾನ

ಆದರೆ ಜಯಂತ್‌ ಹೀಗೆ ಶಾಂತಮ್ಮನ ಬಳಿ ಮಾತನಾಡುತ್ತಿರುವಾಗ ಅಂದು ಜಾಹ್ನವಿ ಜಯಂತ್‌ ಮನೆಗೆ ಹೋದಾಗ ಮನೆಯಲ್ಲೇ ಬಿಟ್ಟು ಹೋಗಿದ್ದ ಎರಡು ಹಸಿರು ಬಳೆಗಳು ಸೋಫಾದ ಬಳಿ ಸಿಕ್ಕಿವೆ. ಇದರಿಂದ ಜಯಂತ್‌ಗೆ ತನ್ನ ಜಾಹ್ನವಿ ಬದುಕಿದ್ದಾಳೆ ಎಂಬ ಬಲವಾದ ನಂಬಿಕೆ, ಅನುಮಾನ ಎರಡು ಶುರುವಾಗಿದೆ.

46
ಇನ್ನೊಂದು ಅನುಮಾನ
Image Credit : Instagram

ಇನ್ನೊಂದು ಅನುಮಾನ

ಅಲ್ಲಿಗೆ ಜಯಂತ್‌ಗೆ ಜಾನು ಸಿಗುವ ಸಮಯ ಖಂಡಿತ ಬಂದಂತಾಗಿದೆ. ಅತ್ತ ಕಡೆ ಜಯಂತ್‌ ಬಗ್ಗೆ ಮತ್ತಷ್ಟು ಮಾಹಿತಿ ಕಲೆ ಹಾಕಲು ವಿಶ್ವ-ಜಾಹ್ನವಿ ಸಿದ್ಧರಾಗಿರುವಾಗಲೇ, ಇತ್ತ ಕಡೆ ಜಯಂತ್‌ಗೆ ಸುಳಿವು ಸಿಕ್ಕಿರುವುದರಿಂದ ಆತ ಸುಮ್ಮನಿರುತ್ತಾರೆಯೇ? ಮೊದಲೇ ಅವನು ಸೈಕೋ. ಜಾಹ್ನವಿ ಮೇಲೆ ಹುಚ್ಚು ಪ್ರೀತಿ ಬೇರೆ. ಆದ್ದರಿಂದ ಬಳೆಯ ಜಾಡನ್ನು ಹಿಡಿದು ಆತ ತನ್ನ ಚಿನ್ನು ಮರಿಯನ್ನ ಹುಡುಕಿದರೂ ಆಶ್ಚರ್ಯವೇನಿಲ್ಲ. ಇಲ್ಲಿ ಇನ್ನೊಂದು ಅನುಮಾನ ಎದುರಾಗುತ್ತದೆ.

56
ಎಲ್ಲಾ ತಂತ್ರಗಳನ್ನು ಅರಿತವ
Image Credit : Instagram

ಎಲ್ಲಾ ತಂತ್ರಗಳನ್ನು ಅರಿತವ

ಅದೇನೆಂದರೆ ನಿಜಕ್ಕೂ ಜಯಂತ್‌ ಜಾಹ್ನವಿ ಎಲ್ಲಿದ್ದಾಳೆ ಎಂದು ಕಂಡುಹಿಡಿಯಲು ತನಗೆ ಏನೋ ಆಗಿದೆ ಎಂಬಂತೆ ಎಲ್ಲರನ್ನೂ ನಂಬಿಸುತ್ತಿರಬಹುದು. ಏಕೆಂದರೆ ಜಯಂತ್‌ ಎಲ್ಲಾ ತಂತ್ರಗಳನ್ನು ಅರಿತವ. ಮಂಕುಬೂದಿ ಎರಚುವುದು ಗೊತ್ತು. ಹಾಗಾಗಿ ಅವನು ನಾಟಕವಾಡುತ್ತಲೇ ಜಾಹ್ನವಿಯನ್ನ ಮತ್ತೆ ಮನೆಗೆ ಕರೆತರುವ ಸಾಧ್ಯತೆಗಳಿವೆ.

66
ಒಟ್ಟಿಗೆ ಇದ್ದರೇನೇ ಚೆನ್ನ
Image Credit : Zee Kannada FB

ಒಟ್ಟಿಗೆ ಇದ್ದರೇನೇ ಚೆನ್ನ

ಒಟ್ಟಿನಲ್ಲಿ ಜಯಂತ್‌ ಏನೇ ಮಾಡಿದ್ರೂ ಅದು ಜಾನು ಪ್ರೀತಿಗೋಸ್ಕರ. ಹಾಗಾಗಿ ಅವರಿಬ್ಬರೂ ಒಟ್ಟಿಗೆ ಇದ್ದರೇನೇ ಚೆನ್ನ ಎನ್ನುವ ಮಂದಿಯೂ ಇದ್ದಾರೆ. ಹಾಗಾಗಿ ಮುಂಬರುವ ಸಂಚಿಕೆಗಳಲ್ಲಿ ಜಾಹ್ನವಿ-ಜಯಂತ್‌ ಇಬ್ಬರೂ ಒಂದಾದರೆ ಅವರ ಅಭಿಮಾನಿಗಳಿಗಂತೂ ಸಿಕ್ಕಾಪಟ್ಟೆ ಖುಷಿಯಾಗಲಿದೆ ಬಿಡಿ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

AH
Ashwini HR
ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ದಿನಪತ್ರಿಕೆ 'ಕ್ರಾಂತಿದೀಪ'ದಲ್ಲಿ ಉಪ ಸಂಪಾದಕಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 14 ವರ್ಷಗಳ ಅನುಭವ. ರಾಜ್ಯಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್‌ಸೈಟ್‌ಗಳಲ್ಲಿ ರಾಜಕೀಯ, ಮನರಂಜನೆ, ಶಿಕ್ಷಣ, ಆರೋಗ್ಯ, ಟ್ರೆಂಡಿಂಗ್‌, ಲೈಫ್‌ಸ್ಟೈಲ್‌ ಕುರಿತಾದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ.ಪ್ರಸ್ತುತ ಸುವರ್ಣ ಡಿಜಿಟಲ್‌ ತಂಡದ ಭಾಗವಾಗಿ ವೃತ್ತಿ ಜೀವನ ಮುಂದುವರಿಸುತ್ತಿದ್ದೇನೆ.
ಮನರಂಜನಾ ಸುದ್ದಿ
ಲಕ್ಷ್ಮೀ ನಿವಾಸ ಧಾರಾವಾಹಿ
ಟಿವಿ ಶೋ

Latest Videos
Recommended Stories
Recommended image1
ಅಣ್ಣಯ್ಯ ಸೀರಿಯಲ್ ಪಾರುಗೆ ರಿಯಲ್‌ನಲ್ಲಿ ಬ್ರೇಕಪ್ ಆಗೋಯ್ತಾ? ಯಾರ್ ಜೊತೆ, ಏನ್ ಕಥೆ!
Recommended image2
ಪ್ರೀತಮ್‌ನಲ್ಲಿ 'ಕಾಳಿದಾಸ'ನನ್ನು ಕಂಡ ಶಿವಣ್ಣ: ಅಪ್ಪಾಜಿನೇ ಅಂದ್ಕೊಂಡು 7 ವರ್ಷದ ಬಾಲಕನ ಕಾಲಿಗೆ ಮುತ್ತಿಟ್ಟ ಹ್ಯಾಟ್ರಿಕ್ ಹೀರೋ!
Recommended image3
37ನೇ ವಯಸ್ಸಿಗೆ ಸಾವು ಕಂಡ ರಿಯಾಲಿಟಿ ಶೋ ಖ್ಯಾತಿಯ ಮಿಸ್ಟರ್ ಇಂಡಿಯಾ ವಿನ್ನರ್
Related Stories
Recommended image1
ಕೊನೆಗೂ ಸಿಡಿದೆದ್ದ ಸಿದ್ದೇಗೌಡ್ರು ಹೆಂಡ್ರು, ಭಾವನಾಳ ಇನ್ನೊಂದು ರೂಪ ವೀಕ್ಷಕರ ಕಣ್ಮುಂದೆ!
Recommended image2
ಈ 3 ಪಾತ್ರಗಳ ಮೂಲಕ ಸ್ಟ್ರಾಂಗ್‌ ಮೆಸೇಜ್‌ ಕೊಟ್ಟ ಲಕ್ಷ್ಮೀನಿವಾಸ ನಿರ್ದೇಶಕರು
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved