MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Entertainment
  • TV Talk
  • Amruthadhaareಯಲ್ಲಿ ಬಂದೇ ಬಿಡ್ತು ವೀಕ್ಷಕರು ಕಾಯ್ತಿದ್ದ ಅಮೃತ ಘಳಿಗೆ! ರೌಡಿ MLAಗೆ ರುಚಿ ತೋರಿಸಿದ ಗೌತಮ್​

Amruthadhaareಯಲ್ಲಿ ಬಂದೇ ಬಿಡ್ತು ವೀಕ್ಷಕರು ಕಾಯ್ತಿದ್ದ ಅಮೃತ ಘಳಿಗೆ! ರೌಡಿ MLAಗೆ ರುಚಿ ತೋರಿಸಿದ ಗೌತಮ್​

ಅಮೃತಧಾರೆ ಧಾರಾವಾಹಿಯಲ್ಲಿ ಶಾಲೆಯ ವಿಚಾರಕ್ಕಾಗಿ ಎಂಎಲ್ಎ, ಭೂಮಿಕಾಳ ಮಗ ಆಕಾಶ್‌ನನ್ನು ಕಿಡ್ನ್ಯಾಪ್ ಮಾಡಿಸುತ್ತಾನೆ. ಈ ಸಂಕಷ್ಟದ ಸಮಯದಲ್ಲಿ ಗೌತಮ್, ಆಪದ್ಬಾಂಧವನಾಗಿ ಬಂದು ಮಗನನ್ನು ರಕ್ಷಿಸುತ್ತಾನೆ. ಈ ಘಟನೆಯು ಗೌತಮ್ ಮತ್ತು ಭೂಮಿಕಾಳ ಪ್ರೇಮಕಥೆಯ ಭಾಗ-2ಕ್ಕೆ ನಾಂದಿ ಹಾಡಿದೆ.

2 Min read
Suchethana D
Published : Sep 28 2025, 01:48 PM IST
Share this Photo Gallery
  • FB
  • TW
  • Linkdin
  • Whatsapp
17
ಅಮೃತಧಾರೆ ಟ್ವಿಸ್ಟ್​
Image Credit : Instagram

ಅಮೃತಧಾರೆ ಟ್ವಿಸ್ಟ್​

Amruthadhaareಯಲ್ಲಿ ಬೇಗ ಬೇಗ ಭೂಮಿಕಾ ಮತ್ತು ಗೌತಮ್​ರನ್ನು ಒಂದುಮಾಡಿಸಿ ಎಂದು ನೆಟ್ಟಿಗರು ಸೋಷಿಯಲ್​ ಮೀಡಿಯಾದಲ್ಲಿ ಪದೇ ಪದೇ ಹೇಳುತ್ತಲೇ ಬಂದಿದ್ದಾರೆ. ಭೂಮಿಕಾದು ಸ್ವಲ್ಪ ಅತಿಯಾಯ್ತು ಎಂದು ಬೈದುಕೊಳ್ಳುತ್ತಿರುವವರೂ ಹಲವರು. ಅದೇ ಇನ್ನೊಂದೆಡೆ, ಗೌತಮ್​ ತನ್ನ ಪ್ರೀತಿಯನ್ನು ವಾಪಸ್​ ಪಡೆದುಕೊಳ್ಳಲು ಪಣ ತೊಟ್ಟಿದ್ದಾನೆ. ಮಗನ ಜೊತೆ ಹೇಗೋ ಫ್ರೆಂಡ್​ಷಿಪ್​ ಆಗಿದೆ. ಈಗ ಏನಿದ್ದರೂ ಭೂಮಿಕಾಳ ಮನಸ್ಸನ್ನು ಬದಲಿಸೋದು ಮಾತ್ರ ಬಾಕಿ ಇರೋದು.

27
ವೀಕ್ಷಕರು ಕಾಯ್ತಿದ್ದ ದಿನ
Image Credit : Instagram

ವೀಕ್ಷಕರು ಕಾಯ್ತಿದ್ದ ದಿನ

ಇದರ ನಡುವೆಯೇ ವೀಕ್ಷಕರು ಕಾಯ್ತಿದ್ದ ಆ ದಿನ ಕೊನೆಗೂ ಬಂದೇ ಬಿಟ್ಟಂತಿದೆ. ಇದಾಗಲೇ ಅನಿರೀಕ್ಷಿತ ತಿರುವಿನಲ್ಲಿ ಅಪ್ಪ-ಮಗನ ಭೇಟಿಯಾಗಿದೆ. ಅಮ್ಮನಿಂದ ಬಚಾವಾಗಲು ಆಕಾಶ್​, ಗೌತಮ್​ನನ್ನೇ ತನ್ನ ಅಪ್ಪ ಎಂದು ಸುಳ್ಳು ಹೇಳಿ ಶಾಲೆಗೂ ಕರೆದುಕೊಂಡು ಹೋಗಿದ್ದ. ಆದರೆ ಕೊನೆಗೆ ಆತನೇ ತನ್ನ ಮಗ ಎನ್ನುವುದು ತಿಳಿದಿದೆ. ಹೇಗಾದರೂ ಭೂಮಿಕಾಳ ಮನಸ್ಸನ್ನು ಓಲೈಸಲು ಆತ ಪ್ರಯತ್ನ ಪಡುತ್ತಿದ್ದಾನೆ.

Related Articles

Related image1
Brahmagantu ದೀಪಾ, ದಿಶಾ ಆಗಿದ್ಹೇಗೆ? ಹೆಲಿಕಾಪ್ಟರ್​ನಿಂದ ಇಳಿಯುವಾಗ ಏನಾಯ್ತು? ಮೇಕಿಂಗ್​ ವಿಡಿಯೋ ಇಲ್ಲಿದೆ
Related image2
ಸುದೀಪ್​ ಸರ್ ಪ್ಲೀಸ್​ ಛಾನ್ಸ್​ ಕೊಡಿ.. ನನ್​ ಅಪ್ಪನ ಮೇಲಾಣೆ, ಮಗು ಥರ ಬರ್ತೀನಿ Huccha Venkat ಕಣ್ಣೀರು
37
ಗೌತಮ್​-ಭೂಮಿ ಒಂದಾಗೋ ಹೊತ್ತು
Image Credit : Instagram

ಗೌತಮ್​-ಭೂಮಿ ಒಂದಾಗೋ ಹೊತ್ತು

ಆದರೆ ಭೂಮಿ ಮಿಸ್ಸು ಸುಮ್ಮನೇ ಅಲ್ವಲ್ಲಾ. ಆದರೆ ಯಾವ ಮಗನಿಂದ ಇಬ್ಬರೂ ಹತ್ತಿರವಾಗಬೇಕು ಎಂದು ವೀಕ್ಷಕರು ಅಂದುಕೊಂಡಿದ್ದರೋ, ಅದೇ ಮಗನಿಂಗಲೇ ಈಗ ಹತ್ತಿರ ಆಗೋ ಟೈಮ್​ ಬಂದಿದೆ. ಎಂಎಲ್​ಎ ಮಗ ಶಾಲೆಯಲ್ಲಿ ಸ್ಮೋಕ್ ಮಾಡುತ್ತಿದ್ದ ಕಾರಣಕ್ಕೆ, ಅಪ್ಪನನ್ನು ಕರೆಸಿ ಬುದ್ಧಿ ಹೇಳಿಸಿದ್ದಳು ಭೂಮಿಕಾ. ದೊಡ್ಡವರು ಎನ್ನುವ ಹಣೆಪಟ್ಟಿ ಕಟ್ಟಿಕೊಂಡಿರುವ ಇಂಥ ಅದೆಷ್ಟೋ ಮನುಷ್ಯರಿಗೆ ಇವೆಲ್ಲಾ ಸಹಿಸೋದು ಕಷ್ಟ ಅಲ್ವಾ? ಮಕ್ಕಳು ಏನೇ ಮಾಡಿದ್ರೂ, ಅವರನ್ನು ಪೊಲೀಸರ ಕೈಯಿಂದ ರಕ್ಷಿಸುವುದು ಹೇಗೆ ಎನ್ನೋದು ಈ ಸೋ ಕಾಲ್ಡ್​ ದೊಡ್ಡವರಿಗೆ ಗೊತ್ತೇ ಇರುತ್ತದೆ. ಇದು ಪ್ರತಿನಿತ್ಯ ನೋಡ್ತಿರುವ ಘಟನೆಯೇ ಅಲ್ಲವೆ? ಯಾವ ಯಾವ ಕೇಸ್​ನಲ್ಲಿ ಅದೆಂಥ ಅಪರಾಧ ಮಾಡಿರುವ ಇಂಥ ಮಕ್ಕಳು ಹೇಗೆಲ್ಲಾ ಬಚಾವ್​ ಆಗ್ತಿದ್ದಾರೆ ಎನ್ನುವುದು ನಮ್ಮ ಕಣ್ಣಮುಂದೆಯೇ ಇದೆ.

47
ಎಂಎಲ್​ಎ ರೌಡಿಸಂ
Image Credit : Instagram

ಎಂಎಲ್​ಎ ರೌಡಿಸಂ

ಅದೇ ರೀತಿ, ಇಲ್ಲಿ ತನ್ನ ಮಗನಿಗೆ ಟೀಚರ್​ ಒಬ್ಬಳು ಬುದ್ಧಿ ಹೇಳೋದಾ ಎಂದು ಸಿಟ್ಟು ಬಂದಿದೆ. ತನ್ನದಲ್ಲದ ತಪ್ಪಿಗೆ ಭೂಮಿಕಾಳು ಈಗ ಕ್ಷಮೆ ಕೋರಿ ಪತ್ರ ಬರೆದುಕೊಡಬೇಕಿದೆ. ಆದರೆ ಸ್ವಾಭಿಮಾನಿ ಭೂಮಿಕಾ ಹಾಗೆ ಮಾಡಲು ಒಪ್ಪಿರಲಿಲ್ಲ. ಮಗ ಹಾಳಾಗಿ ಸತ್ತರೂ ಪರವಾಗಿಲ್ಲ, ದುಡ್ಡಿನ ಅಮಲಿನಲ್ಲಿ ತೇಲಾಡುತ್ತಿರುವ ಇಂಥ ರಾಜಕಾರಣಿಗಳು ಏನು ಮಾಡುತ್ತಾರೋ ಅದನ್ನೇ ಈ ಸೀರಿಯಲ್​ನಲ್ಲಿ ಆ ಬಾಲಕನ ಅಪ್ಪನೂ ಮಾಡಿದ್ದಾನೆ.

57
ಆಕಾಶ್ ಕಿಡ್​ನ್ಯಾಪ್​
Image Credit : Instagram

ಆಕಾಶ್ ಕಿಡ್​ನ್ಯಾಪ್​

ಭೂಮಿಕಾಳ ಮಗ ಆಕಾಶ್​ನನ್ನು ಕಿಡ್​ನ್ಯಾಪ್​ ಮಾಡಿಸಿದ್ದಾನೆ. ಆಕಾಶ್​ ಕಾಣದೇ ಇದ್ದಾಗ ಗೌತಮ್​ನೇ ಆತನನ್ನು ಕರೆದುಕೊಂಡು ಹೋಗಿದ್ದಾನೆ ಎಂದು ಭೂಮಿಕಾ ಸಿಟ್ಟಿನಲ್ಲಿ ಕರೆ ಮಾಡಿದ್ದಾಳೆ. ಕೊನೆಗೆ ತಾನು ಕರೆದುಕೊಂಡು ಹೋಗಿಲ್ಲ ಎಂದು ಹೇಳಿದಾಗ ಅವಳಿಗೂ ಶಾಕ್​ ಆಗಿದೆ.

67
ಆಪದ್ಬಾಂಧವನಾಗಿ ಅಪ್ಪ
Image Credit : Instagram

ಆಪದ್ಬಾಂಧವನಾಗಿ ಅಪ್ಪ

ಇದರ ಬೆನ್ನಟ್ಟಿ ಹೋದಾಗ ಗೌತಮ್​ಗೆ ಆಕಾಶ್​ ಕಿಡ್​ನ್ಯಾಪ್​ ಆಗಿರೋದು ತಿಳಿದಿದೆ. ಅಲ್ಲಿಗೆ ಹೋಗಿ ಫೈಟ್​ ಮಾಡಿ, ಮಗನ ಜೀವ ಕಾಪಾಡಿದ್ದಾನೆ. ನೀನ್ಯಾರು ಎಂದು ಎಂಎಲ್​ಎ ಕೇಳಿದಾಗ, ನಾನು ಅವನ ಆಪದ್ಬಾಂಧವ ಎಂದಿದ್ದಾನೆ.

77
​Amruthadhaare Part-2 Love story
Image Credit : Instagram

​Amruthadhaare Part-2 Love story

ಒಟ್ಟಿನಲ್ಲಿ ​Amruthadhaare Part-2 Love story ಶುರುವಾಗಿದೆ. ಇವರಿಬ್ಬರನ್ನು ಮಗನ ಮೂಲಕ ಒಂದಾಗಿಸಲು ಆನಂದ್​ ಮತ್ತು ಮಲ್ಲಿ ಎಷ್ಟು ಸಕ್ಸಸ್​​ ಆಗೋದನ್ನು, ಅತ್ತ ಜೈದೇವ ಮತ್ತು ಶಕುಂತಲಾ ಬೀದಿಗೆ ಬರುವುದನ್ನು ನೋಡಲು ಎಲ್ಲರೂ ಕಾತರದಿಂದ ಕಾಯುತ್ತಿದ್ದಾರೆ.

About the Author

SD
Suchethana D
Suchetana ಮಲೆನಾಡಿನ ಹೆಬ್ಬಾಗಿಲು ಶಿರಸಿಯವಳು. ಓದಿದ್ದು LLB, ಒಲಿದದ್ದು ಪತ್ರಿಕೋದ್ಯಮ, ಪ್ರಜಾವಾಣಿಯಲ್ಲಿ 15 ವರ್ಷಗಳ ಅನುಭವ. ಇದರಲ್ಲಿ 10 ವರ್ಷ ನ್ಯಾಯಾಂಗ ವರದಿಗಾರಿಕೆ. ಕಾನೂನು ಮತ್ತು ಮಹಿಳಾ ಸಂವೇದನೆಗೆ ಸಂಬಂಧಿಸಿದ ಲೇಖನಗಳಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿ, ಮುಂಬೈನ ಲಾಡ್ಲಿ ಮೀಡಿಯಾ ಅವಾರ್ಡ್​, ರೋಟರಿ ಎಕ್ಸಲೆನ್ಸ್​ ಅವಾರ್ಡ್​ ಸೇರಿದಂತೆ ಕೆಲವು ಪ್ರಶಸ್ತಿಗಳು ಲಭಿಸಿವೆ. ಚೀನಾದಲ್ಲಿ ನಡೆದ ಭಾರತ ಮಟ್ಟದ ಯುವ ನಿಯೋಗದಲ್ಲಿ ಮಾಧ್ಯಮ ಕ್ಷೇತ್ರದಿಂದ ಪ್ರತಿನಿಧಿಯಾಗಿ ಆಯ್ಕೆ. ವಿಜಯವಾಣಿಯಲ್ಲಿ ಕೆಲಸ ಮಾಡಿ ಈಗ ದೂರದರ್ಶನ ಚಂದನದಲ್ಲಿ ಮತ್ತು ಏಷ್ಯಾನೆಟ್​ ಸುವರ್ಣದಲ್ಲಿ ಫ್ರೀಲ್ಯಾನ್ಸರ್​ ಆಗಿ ಕೆಲಸ ನಿರ್ವಹಣೆ.
ಅಮೃತಧಾರೆ
ಜೀ ಕನ್ನಡ
ಸಂಬಂಧಗಳು
ಕನ್ನಡ ಧಾರಾವಾಹಿ

Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved