MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Entertainment
  • TV Talk
  • BBK 12: ಎಲ್ರೂ ಸುಮ್ನಿದ್ದಾಗ ಮೋಸ, ಸುಳ್ಳಿನ ವಿರುದ್ಧ ಸಿಡಿದೆದ್ದ ಏಕೈಕ ಸ್ಪರ್ಧಿಗೆ ಈ ವಾರದ ಕಿಚ್ಚನ ಚಪ್ಪಾಳೆ

BBK 12: ಎಲ್ರೂ ಸುಮ್ನಿದ್ದಾಗ ಮೋಸ, ಸುಳ್ಳಿನ ವಿರುದ್ಧ ಸಿಡಿದೆದ್ದ ಏಕೈಕ ಸ್ಪರ್ಧಿಗೆ ಈ ವಾರದ ಕಿಚ್ಚನ ಚಪ್ಪಾಳೆ

ಬಿಗ್‌ ಬಾಸ್‌ ಕನ್ನಡ 12 ಶೋನಲ್ಲಿ ಕಿಚ್ಚನ ಚಪ್ಪಾಳೆಗೋಸ್ಕರ ಸ್ಪರ್ಧಿಗಳು ಕಾಯೋದುಂಟು. ಕಳೆದ ಬಾರಿ ಕರ್ನಾಟಕದ ಜನತೆಗೆ ಸುದೀಪ್‌ ಚಪ್ಪಾಳೆ ನೀಡಿದ್ದರು. ಉಳಿದಂತೆ ಯಾರೂ ಕೂಡ ತಮ್ಮ ವ್ಯಕ್ತಿತ್ವ ಇದೇ ಎಂದು ತೋರಿಸುವಂತೆ ಆಟ ಆಡಿರಲಿಲ್ಲ. ಮೂರನೇ ವಾರ ಸ್ಪರ್ಧಿಯೋರ್ವರಿಗೆ ಕಿಚ್ಚನ ಚಪ್ಪಾಳೆ ಸಿಕ್ಕಿದೆ. 

1 Min read
Padmashree Bhat
Published : Oct 19 2025, 07:36 AM IST
Share this Photo Gallery
  • FB
  • TW
  • Linkdin
  • Whatsapp
15
ರಕ್ಷಿತಾ ಶೆಟ್ಟಿ ಡಿಫೇಮ್‌ ಮಾಡಿದ್ರು
Image Credit : Asianet News

ರಕ್ಷಿತಾ ಶೆಟ್ಟಿ ಡಿಫೇಮ್‌ ಮಾಡಿದ್ರು

ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ಶೋನಲ್ಲಿ ರಕ್ಷಿತಾ ಶೆಟ್ಟಿ ಅವರು ರಾತ್ರಿ ತುಂಬ ಟೈಮ್‌ ಬಾತ್‌ರೂಮ್‌ಗೆ ಹೋಗ್ತಾರೆ, ಅಲ್ಲಿ ಡ್ಯಾನ್ಸ್‌ ಮಾಡ್ತಾರೆ, ನಗ್ತಾರೆ ಎಂಬ ವಿಷಯ ಇಟ್ಟುಕೊಂಡು ಅಶ್ವಿನಿ ಗೌಡ, ಜಾಹ್ನವಿ ಅವರು ರಾ ರಾ ಎಂದು ಹಾಡಿಕೊಂಡು ಡ್ಯಾನ್ಸ್‌ ಮಾಡ್ತಾರೆ, ನಾಗವಲ್ಲಿ ಎಂದೆಲ್ಲ ಬಿಂಬಿಸಿದರು. ನಾವು ಏನೂ ಮಾಡಿಲ್ಲ, ನಮ್ಮ ತಪ್ಪಿಲ್ಲ ಎಂದು ಹೇಳಿದ್ದರು. ಇದು ರಕ್ಷಿತಾ ಶೆಟ್ಟಿಗೆ ತುಂಬ ಬೇಸರ ತಂದಿತ್ತು. 

25
ಯಾರು?
Image Credit : Asianet News

ಯಾರು?

ಈ ವಿಚಾರವನ್ನು ಕಾವ್ಯ ಶೈವ ಅವರು ಬಗೆಹರಿಸಲು ಟ್ರೈ ಮಾಡಿದ್ದರು. ಆದರೆ ಜಾಹ್ನವಿ ನೀವು ಮಧ್ಯೆ ಬರಬೇಡಿ ಎಂದಿದ್ದಕ್ಕೆ ಕಾವ್ಯ ಸೈಲೆಂಟ್‌ ಆದರು. ಚಂದ್ರಪ್ರಭ ಅವರಿಗೂ ಕೂಡ ರಾತ್ರಿ ಕಾಲ್ಗೆಜ್ಜೆ ಸೌಂಡ್‌ ಮಾಡಿ, ಅದನ್ನು ರಕ್ಷಿತಾ ಶೆಟ್ಟಿ ಮೇಲೆ ಹಾಕಿದ್ದು ಕೂಡ ಜಾಹ್ನವಿ ಎನ್ನೋದು ಗೊತ್ತಾಗಿದ್ದರೂ ಕೂಡ, ತಮ್ಮ ಜೊತೆಗಿದ್ದವರ ಜೊತೆ ಮಾತನಾಡಿಕೊಂಡರೂ ಕೂಡ ಅದರ ಬಗ್ಗೆ ದನಿ ಎತ್ತಲೇ ಇಲ್ಲ.

Related Articles

Related image1
BBK 12: ಮೊದಲ ಫಿನಾಲೆಯಲ್ಲಿ ಇಬ್ಬರು ಘಟಾನುಘಟಿಗಳೇ ಔಟ್; ಯಾರದು?
Related image2
BBK 12: ಬುದ್ದಿ ಕಲಿಸದೇ ಬಿಡೋದೇ ಇಲ್ಲ: ವೀಕೆಂಡ್ ಸಂಚಿಕೆಯಲ್ಲಿ ಸುದೀಪ್ ಗುಡುಗು
35
ಜಗಳ ನೋಡಿಕೊಂಡು ನಿಂತರು
Image Credit : Asianet News

ಜಗಳ ನೋಡಿಕೊಂಡು ನಿಂತರು

ಉಳಿದಂತೆ ಮಂಜು ಭಾಷಿಣಿ ಸೇರಿದಂತೆ ಕೆಲವರಿಗೆ ಜಾಹ್ನವಿ, ಅಶ್ವಿನಿ ಗೌಡ ವಿರುದ್ಧವೇ ಡೌಟ್‌ ಇತ್ತು. ಆದರೂ ಕೂಡ ಯಾರು ಮಾತನಾಡಲಿಲ್ಲ. ಇನ್ನು ಅಶ್ವಿನಿ ಗೌಡ, ಜಾಹ್ನವಿ ಸೇರಿಕೊಂಡು ರಕ್ಷಿತಾ ಮೇಲೆ ವಾಕ್‌ ದಾಳಿ ಮಾಡಿದಾಗಲೂ ಎಲ್ಲರೂ ಜಗಳ ನೋಡಿಕೊಂಡು ಇದ್ದರೆ ವಿನಃ ಏನೂ ಮಾತನಾಡಿರಲಿಲ್ಲ.

45
ಧ್ರುವಂತ್‌ ಸುಮ್ಮನಿದ್ದರು
Image Credit : Colors Kannada

ಧ್ರುವಂತ್‌ ಸುಮ್ಮನಿದ್ದರು

ಧ್ರುವಂತ್‌ ಕೂಡ ಒಮ್ಮೆ ರಕ್ಷಿತಾ ಪರವಾಗಿ, ಇನ್ನೊಮ್ಮೆ ರಕ್ಷಿತಾ ವಿರುದ್ಧವಾಗಿ ಮಾತನಾಡಿದರು. ಇದು ಕೂಡ ಕಿಚ್ಚ ಸುದೀಪ್‌ ಗಮನಕ್ಕೆ ಬಂದಿದ್ದು, ತಿಳಿ ಹೇಳಿದ್ದರು. ಇನ್ನು ಈ ವಾರ ಸಿಕ್ಕಾಪಟ್ಟೆ ಕೂಗಾಡಿದ ಧ್ರುವಂತ್‌ಗೆ ಕಿಚ್ಚ ಸುದೀಪ್‌ ಕಿವಿ ಹಿಂಡಿದ್ದಾರೆ.

55
ಕಿಚ್ಚನ ಚಪ್ಪಾಳೆ ಯಾರಿಗೆ?
Image Credit : Colors Kannada

ಕಿಚ್ಚನ ಚಪ್ಪಾಳೆ ಯಾರಿಗೆ?

ಗಿಲ್ಲಿ ನಟ ಮಾತ್ರ ಸಾಕಷ್ಟು ಬಾರಿ ಜಾಹ್ನವಿ, ಅಶ್ವಿನಿ ಗೌಡಗೆ ನೀವು ರಕ್ಷಿತಾ ವಿರುದ್ಧ ಮಾಡುತ್ತಿರೋದು ತಪ್ಪು ಎಂದು ಪದೇ ಪದೇ ಹೇಳಿದ್ದರು. ಇದನ್ನೇ ಇಟ್ಟುಕೊಂಡು ಅವರು ಹಾಡಿನ ಮೂಲಕ ಹೇಳಿದ್ದರು, ವ್ಯಂಗ್ಯ ಮಾಡಿದ್ದರು. ಈ ಬಗ್ಗೆ ದನಿ ಎತ್ತಿದ್ದಕ್ಕೆ ಗಿಲ್ಲಿ ನಟ ಅವರಿಗೆ ಈ ಬಾರಿಯ ಕಿಚ್ಚನ ಚಪ್ಪಾಳೆ ಸಿಕ್ಕಿದೆ.

About the Author

PB
Padmashree Bhat
ಪದ್ಮಶ್ರೀ ಭಟ್. ವಿಜಯವಾಣಿ, ಒನ್ ಇಂಡಿಯಾ, ವಿಜಯ ಕರ್ನಾಟಕ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದು, ಒಟ್ಟು ಎಂಟು ವರ್ಷಗಳಿಗೂ ಅಧಿಕ ವೃತ್ತಿಜೀವನದ ಅನುಭವವಿದೆ.‌ ಸಿನಿಮಾ, ಟಿವಿ ಕ್ಷೇತ್ರದಲ್ಲಿ ಆಸಕ್ತಿ ಇದ್ದು, ಈಗಾಗಲೇ ಸಾಕಷ್ಟು ಸುಪ್ರಸಿದ್ಧ ತಾರೆಯರ, ಸಾಧಕರ ಸಂದರ್ಶನ ಮಾಡಿರುವೆ. ಅಷ್ಟೇ ಅಲ್ಲದೆ ಬ್ಯೂಟಿ, ಆರೋಗ್ಯ, ಧಾರ್ಮಿಕ ವಿಷಯಗಳನ್ನು ಬರೆಯೋದು ನಂಗಿಷ್ಟ. ಪುಸ್ತಕ ಓದುವುದು, ಇನ್ನುಳಿದಂತೆ ಇತರರ ಸಂದರ್ಶನ ಕೇಳೋದು, ಪ್ರವಾಸ ನನ್ನ ಹವ್ಯಾಸಗಳಲ್ಲೊಂದು. ಉತ್ತರ ಕನ್ನಡದ ಸಿರಸಿಯವಳು.
ಮನರಂಜನಾ ಸುದ್ದಿ
ಬಿಗ್ ಬಾಸ್
ಬಿಗ್ ಬಾಸ್ ಕನ್ನಡ
ಕಲರ್ಸ್ ಕನ್ನಡ

Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved