MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Entertainment
  • TV Talk
  • ಮಾಡಿದ ತಪ್ಪಿಗೆ ಅಪ್ಪುಗೆಯೇ ದಂಡ! ಗೌತಮ್ - ಭೂಮಿ ದೂರ ಮಾಡಲು ಇನ್ನೇನು ಮಾಡ್ತಾರೆ ಕೇಡಿಗಳು

ಮಾಡಿದ ತಪ್ಪಿಗೆ ಅಪ್ಪುಗೆಯೇ ದಂಡ! ಗೌತಮ್ - ಭೂಮಿ ದೂರ ಮಾಡಲು ಇನ್ನೇನು ಮಾಡ್ತಾರೆ ಕೇಡಿಗಳು

ಅಮೃತಧಾರೆ ಧಾರಾವಾಹಿಯಲ್ಲಿ ಇನ್ನೇನು ಭೂಮಿಕಾ ಮತ್ತು ಗೌತಮ್ ದಿವಾನ್ ದಾಂಪತ್ಯದಲ್ಲಿ ಬಿರುಕು ಕಾಣುತ್ತೆ ಎಂದು ನೀರೀಕ್ಷಿಸಿದ್ದ ವೀಕ್ಷಕರಿಗೆ ಮತ್ತೊಂದು ಟ್ವಿಸ್ಟ್ ಎದುರಾಗಿದೆ. ಇನ್ನೇನು ಮಾಡ್ತಾರೆ ರೌಡಿಗಳು ನೋಡಬೇಕು.

2 Min read
Pavna Das
Published : Aug 25 2025, 03:47 PM IST
Share this Photo Gallery
  • FB
  • TW
  • Linkdin
  • Whatsapp
16
Image Credit : Asianet News

ಜೀ ವಾಹಿನಿಯಲ್ಲಿ ಪ್ರಸಾರವಾಗುವ ಅಮೃತಧಾರೆ ಧಾರಾವಾಹಿ ತನ್ನ ವೇಗದ ಕಥೆ ಮತ್ತು ಟ್ವಿಸ್ಟ್ ಮೂಲಕ ಜನಮನ ಗೆಲ್ಲುತ್ತಾ ಸಾಗುತ್ತಿದೆ. ಇತ್ತೀಚಿನ ಎಪಿಸೋಡಲ್ಲಿ ಇನ್ನೇನು ಭೂಮಿಕಾ ಮತ್ತು ಗೌತಮ್ ದಾಂಪತ್ಯ ಜೀವನದಲ್ಲಿ ಬಿರುಕು ಮೂಡುತ್ತಿದೆ ಎಂದು ಜನ ಅಂದುಕೊಳ್ಳುತ್ತಿರುವಾಗಲೇ ದೊಡ್ಡದೊಂದು ಟ್ವಿಸ್ಟ್ ಸಿಕ್ಕಿದೆ.

26
Image Credit : Asianet News

ಕಥೆಯ ಪ್ರಕಾರ ಗೌತಮ್ ದಿವಾನ್ ಬಿಸಿನೆಸ್ ಮೀಟಿಂಗ್ ಗಾಗಿ ವಿದೇಶಕೆ ತೆರಳಬೇಕಿತ್ತು. ಆದರೆ ಭೂಮಿಕಾಗೆ ಇದು ಇಷ್ಟವಿರಲಿಲ್ಲ. ನೀವು ಫಾರಿನ್ ಹೋಗೋದು ಬೇಡ ಎಂದೇ ಭೂಮಿ ಹೇಳುತ್ತಾಳೆ. ಗೌತಮ್ ಸಾಧ್ಯ ಇಲ್ಲ ಎಂದಾಗ, ಭೂಮಿ ನಿಮ್ಮ ಪಾಸ್ ಪೋರ್ಟ್ ಕದ್ದಿಟ್ಟರೆ ಹೇಗೆ ಹೋಗ್ತೀರಾ ಎಂದು ಹೇಳಿ ನಗುತ್ತಾಳೆ.

Related Articles

Related image1
Amruthadhaare Serial: ಭೂಮಿಗೆ ಆ ರೀತಿ ಪಟ್ಟ ಕಟ್ಟಿದ ಗೌತಮ್; ಆ ಎಪಿಸೋಡ್‌ ನೋಡಿ ನಿಗಿ ನಿಗಿ ಕೆಂಡವಾದ ವೀಕ್ಷಕರು!
Related image2
Amruthadhaare ಸುಧಾಗೆ ಕಂಕಣಭಾಗ್ಯ: ಭಾವಿ ಪತಿಯ ವಿಶೇಷ ವಿಡಿಯೋ ಶೇರ್‌ ಮಾಡಿದ ನಟಿ ಮೇಘಾ ಶೆಣೈ
36
Image Credit : Asianet News

ಗೌತಮ್ ಕಾರು ಏರಿ ಏರ್ ಪೋರ್ಟ್ ಗೆ ಹೊರಡುತ್ತಿರುವಾಗ ಬ್ಯಾಗಲ್ಲಿ ಪಾಸ್ ಪೋರ್ಟ್ ಇಲ್ಲದೇ ಇರೋದು ಗೊತ್ತಾಗಿದೆ ಅರ್ಧ ದಾರಿಯಿಂದಲೇ ವಾಪಾಸ್ ಬರುವ ಗೌತಮ್, ಪಾಸ್ ಪೋರ್ಟ್ ತೆಗೆದಿಟ್ಟಿರೋದು ಭೂಮಿ ಎಂದು ಆಕೆಯ ಮೇಲೆ ರೇಗಾಡುತ್ತಾನೆ. ಭೂಮಿಕಾ ಪಾಸ್ ಪೋರ್ಟ್ ಬ್ಯಾಗಲ್ಲೇ ಇಟ್ಟಿದ್ದೀನಿ ಅಂದ್ರೂನು ಗೌತಮ್ ಕೇಳೋದಿಲ್ಲ.

46
Image Credit : Asianet News

ರೊಚ್ಚಿಗೆದ್ದ ಗೌತಮ್, ‘ನಿಮಗೆ ಇತ್ತೀಚೆಗೆ ಹುಚ್ಚು ಹಿಡಿದಿದೆ. ಅದಕ್ಕಾಗಿ ಈ ರೀತಿ ಆಡುತ್ತಿದ್ದೀರಾ’ ಎಂದದಾಗ. ‘ನಾನು ಅದನ್ನು ಎತ್ತಿಟ್ಟಿಲ್ಲ. ನೀವು ನಂಬೋದಾದರೆ ನಂಬಿ ಬಿಡೋದಾದರೆ ಬಿಡಿ’ ಎಂದು ಹೇಳುತ್ತಲೇ ಭೂಮಿಕಾ ಹೊರಟು ಹೋಗುತ್ತಾಳೆ. ಅಷ್ಟರಲ್ಲಿ ಗೌತಮ್ ಗೆ ತಾನು ಮೀಟಿಂಗ್ ಗೆ ಹೋಗಬೇಕಾದ ಜಾಗದಲ್ಲಿ ಬೆಂಕಿ ಬಿದ್ದು, ಹಲವರು ಸಾವನ್ನಪ್ಪಿರೋದು ಗೊತ್ತಾಗುತ್ತೆ.

56
Image Credit : Asianet News

ಮನೆಯಲ್ಲಿ ಅಜ್ಜಿ, ನೀನು ಇವತ್ತು ಉಳಿದುಕೊಂಡಿರೋದಕ್ಕೆ ಕಾರಣವೇ ಭೂಮಿಕಾ. ಅವಳು ಮಾಡಿದ್ರಲ್ಲಿ ತಪ್ಪೇನಿಲ್ಲ ಎನ್ನುತ್ತಾರೆ. ಈವಾಗ ಗೌತಮ್, ಭೂಮಿಕಾ ಬಳಿ ಹೋಗಿ, ನಿಮ್ಮ ಪ್ರೀತಿ ಎಷ್ಟಿದೆ ಅನ್ನೋದು ಗೊತ್ತು. ನನ್ನನ್ನು ಕ್ಷಮಿಸಿ, ಸಾರಿ, ನಿಮ್ಮಿಂದಾಗಿ ನಾನು ಇವತ್ತು ಬದುಕುಳಿದೆ ಎನ್ನುತ್ತಾರೆ.

66
Image Credit : Asianet News

ಭೂಮಿ ಕೂಡ, ಗೌತಮ್ ನನ್ನು ತಬ್ಬಿ ಹಿಡಿಯುತ್ತಾಳೆ. ಇದೀಗ ಈ ಸಲವೂ ತನ್ನ ಪ್ಲ್ಯಾನ್ ಉಲ್ಟಾ ಹೊಡೆದಿರುವುದಕ್ಕೆ ಕೋಪಗೊಂಡಿರುವ ಶಾಕುಂತಲಾ, ತನ್ನ ಮುದ್ದಿನ ಮಗ ಜೈ ದೇವ್ ಬಳಿ ಹೋಗಿ ಎಲ್ಲವನ್ನೂ ಹೇಳುತ್ತಾಳೆ. ಆದಷ್ಟು ಬೇಗ ಮಗುವನ್ನು ಸಾಯಿಸಬೇಕು ಎನ್ನುತ್ತಾಳೆ. ಮುಂದೆ ಈ ಕೇಡಿಗಳಿಂದ ಗೌತಮ್ -ಭೂಮಿ ಬಾಳಲ್ಲಿ ಏನೆಲ್ಲಾ ಆಗುತ್ತೆ ಅನ್ನೋದನ್ನು ನೋಡಬೇಕು.

About the Author

PD
Pavna Das
ಮೂಲತಃ ಮಂಗಳೂರಿನವಳು. ಮಂಗಳೂರು ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮದ ಸ್ನಾತಕೋತ್ತರ ಪದವಿ . ಕಳೆದ 12 ವರ್ಷಗಳಿಂದ ಪತ್ರಿಕೆ ಹಾಗೂ ಡಿಜಿಟಲ್ ಮಾಧ್ಯಮಗಳಲ್ಲಿ ಕೆಲಸ . ಸುದ್ದಿ ಬಿಡುಗಡೆ, ಗಲ್ಫ್ ಕನ್ನಡಿಗ, ಈ ಟಿವಿ ಭಾರತ್, ಕನ್ನಡ ನ್ಯೂಸ್ ನೌ, ವಿಜಯಕರ್ನಾಟಕದಲ್ಲಿ ಕೆಲಸ ಮಾಡಿದ ಅನುಭವ. ಈಗ ಏಷ್ಯಾನೆಟ್ ಸುವರ್ಣದಲ್ಲಿ ಫ್ರೀಲಾನ್ಸರ್ . ಮನೋರಂಜನೆ, ಲೈಫ್ ಸ್ಟೈಲ್, ಟ್ರಾವೆಲ್ ಬರವಣಿಗೆ ಇಷ್ಟ.
ಅಮೃತಧಾರೆ
ಕನ್ನಡ ಧಾರಾವಾಹಿ
ಸೀರಿಯಲ್ ಶೂಟಿಂಗ್

Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved