MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • News
  • State
  • ಧರ್ಮಸ್ಥಳ ಬುರುಡೆ ಪ್ರಕರಣದಲ್ಲಿ ಹೊಸ ತಿರುವು: ಕಾಡಿನಿಂದ ಬುರುಡೆ ತಂದಿರುವ ಅಸಲಿ ವಿಡಿಯೋ ಪತ್ತೆ!

ಧರ್ಮಸ್ಥಳ ಬುರುಡೆ ಪ್ರಕರಣದಲ್ಲಿ ಹೊಸ ತಿರುವು: ಕಾಡಿನಿಂದ ಬುರುಡೆ ತಂದಿರುವ ಅಸಲಿ ವಿಡಿಯೋ ಪತ್ತೆ!

ಧರ್ಮಸ್ಥಳ ಬುರುಡೆ ಪ್ರಕರಣದಲ್ಲಿ ಕಾಡಿನಿಂದ ಬುರುಡೆ ತರುವ ವಿಡಿಯೋ ಬಹಿರಂಗವಾಗಿದ್ದು, ತನಿಖೆಗೆ ಹೊಸ ತಿರುವು ನೀಡಿದೆ. ಕೇರಳದ ಯೂಟ್ಯೂಬರ್‌ಗಳ ಸುಳ್ಳು ಪ್ರಚಾರದ ಬಗ್ಗೆಯೂ ತನಿಖೆ ನಡೆಯುತ್ತಿದೆ.

2 Min read
Gowthami K
Published : Sep 05 2025, 11:33 AM IST
Share this Photo Gallery
  • FB
  • TW
  • Linkdin
  • Whatsapp
15
Image Credit : Asianet News

ಧರ್ಮಸ್ಥಳ ಬುರುಡೆ ಪ್ರಕರಣದಲ್ಲಿ ಹೊಸ ತಿರುವು ಕಂಡುಬಂದಿದೆ. ಕಾಡಿನಿಂದ ಬುರುಡೆ ತಂದಿರುವ ಅಸಲಿ ವಿಡಿಯೋ ಇದೀಗ ಲಭ್ಯವಾಗಿದೆ. ಕೇರಳ ಮೂಲದ ಯೂಟ್ಯೂಬರ್ ಮನಾಫ್ ತನ್ನ ಯೂಟ್ಯೂಬ್ ಚಾನೆಲ್‌ನಲ್ಲಿ ಜುಲೈ 11ರಂದು ಈ ವಿಡಿಯೋವನ್ನು ಅಪ್ಲೋಡ್ ಮಾಡಿದ್ದಾನೆ. ವಿಡಿಯೋದಲ್ಲಿ ಜಯಂತ್ ಎಂಬಾತನು ಧರ್ಮಸ್ಥಳ ಬಂಗ್ಲೆಗುಡ್ಡೆಯ ಮೇಲ್ಭಾಗದಲ್ಲಿದ್ದ ಬುರುಡೆಯನ್ನು ಕತ್ತಿಯ ಸಹಾಯದಿಂದ ಎತ್ತಿ ತರುತ್ತಿರುವ ದೃಶ್ಯಗಳು ಸ್ಪಷ್ಟವಾಗಿ ದಾಖಲಾಗಿವೆ. ಮರಕ್ಕೆ ಸೀರೆ ಬಿಗಿದ ಸ್ಥಳದ ಪಕ್ಕದಲ್ಲೇ ಬುರುಡೆ ಪತ್ತೆಯಾದ ಹಿನ್ನೆಲೆ ಈ ವಿಡಿಯೋ ಪ್ರಕರಣಕ್ಕೆ ಹೊಸ ಬೆಳಕು ಚೆಲ್ಲುತ್ತಿದೆ.

25
Image Credit : Asianet news Suvarna

ವಿಡಿಯೋದಲ್ಲಿ ಕಾಣಿಸಿದ ಪ್ರಮುಖ ಅಂಶಗಳು

ಈ ವಿಡಿಯೋದಲ್ಲಿ ಜಯಂತ್ ಎಂಬಾತನು ಬಂಗ್ಲೆಗುಡ್ಡೆಯ ಮೇಲ್ಬಾಗದಲ್ಲೇ ಬಿದ್ದಿದ್ದ ಬುರುಡೆಯನ್ನು ಎತ್ತಿ ತರುತ್ತಿರುವುದು ಕಾಣಿಸಿದೆ.

ವಿಡಿಯೋವನ್ನು ಕಾಡು ಪ್ರದೇಶದಲ್ಲಿ ಶೂಟ್ ಮಾಡಲಾಗಿದ್ದು, ಮರಕ್ಕೆ ಸೀರೆ ಬಿಗಿದ ಸ್ಥಳದ ಪಕ್ಕದಲ್ಲೇ ಬುರುಡೆ ಪತ್ತೆಯಾದ ದೃಶ್ಯ ದಾಖಲಾಗಿದೆ.

ಜಯಂತ್ ತನ್ನ ಕೈಯಲ್ಲಿದ್ದ ಕತ್ತಿಯ ಸಹಾಯದಿಂದ ಬುರುಡೆಯನ್ನು ಎತ್ತಿ ತರುತ್ತಿರುವುದು ಸ್ಪಷ್ಟವಾಗಿ ವಿಡಿಯೋದಲ್ಲಿ ಕಾಣುತ್ತದೆ.

ಧರ್ಮಸ್ಥಳ ಭಾಗದಲ್ಲೇ ಈ ಬುರುಡೆ ಸಿಕ್ಕಿರುವ ಸಾಧ್ಯತೆ ಇದೆ ಎಂಬ ಅನುಮಾನಗಳು ಮತ್ತಷ್ಟು ಬಲಗೊಂಡಿವೆ.

ಈ ವಿಡಿಯೋ ಹೊರಬಂದ ನಂತರ, ಬುರುಡೆ ನಿಜವಾಗಿಯೂ ಕಾಡಿನಿಂದಲೇ ತಂದು ಇರಿಸಲಾಗಿದೆ ಎಂಬ ಅಂಶ ತನಿಖೆಗೆ ಹೊಸ ತಿರುವು ನೀಡಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಹಲವಾರು ಶಂಕೆಗಳು ವ್ಯಕ್ತವಾಗಿದ್ದರೆ, ಈ ದೃಶ್ಯಾವಳಿ ತನಿಖಾ ಅಧಿಕಾರಿಗಳಿಗೆ ಮತ್ತಷ್ಟು ಆಧಾರ ಒದಗಿಸಿದೆ.

Related Articles

Related image1
ಬುರುಡೆ ಪ್ರಕರಣದ ತನಿಖೆ ಎನ್‌ಐಎ ವಹಿಸಲು ಅಮಿತ್‌ ಶಾಗೆ ಸ್ವಾಮೀಜಿ ನಿಯೋಗ ಮನವಿ
Related image2
Now Playing
ಎರಡು ವರ್ಷ... ಎರಡು ಗ್ಯಾಂಗ್.. ಒಂದೇ ತಲೆಬುರುಡೆ: ಬುರುಡೆ ಗ್ಯಾಂಗ್ ಷಡ್ಯಂತ್ರ ಸರ್ಕಾರಕ್ಕೆ ಮೊದಲೇ ಗೊತ್ತಿತ್ತಾ?
35
Image Credit : Asianet News

ಎಸ್ಐಟಿ ಮುಂದುವರಿದ ವಿಚಾರಣೆ

ಬುರುಡೆ ಪ್ರಕರಣದ ತನಿಖೆಯಲ್ಲಿ ಎಸ್ಐಟಿ ತಂಡ ತನ್ನ ಡ್ರಿಲ್ ಮುಂದುವರೆಸಿದ್ದು, ಯೂಟ್ಯೂಬರ್ ಅಭಿಷೇಕ್ ಅವರನ್ನು ತೀವ್ರ ವಿಚಾರಣೆಗೆ ಒಳಪಡಿಸಿದೆ. ನಿನ್ನೆ ತಡರಾತ್ರಿ 2.30ರವರೆಗೆ ವಿಚಾರಣೆ ನಡೆಸಿದ ನಂತರ ಅವರನ್ನು ಬಿಡುಗಡೆ ಮಾಡಲಾಗಿತ್ತು. ಆದರೆ ಇಂದು ಮೂರನೇ ದಿನವೂ ವಿಚಾರಣೆ ನಡೆಯುತ್ತಿದ್ದು, ಅಭಿಷೇಕ್ ಇನ್ನೂ ಬೆಳ್ತಂಗಡಿ ಎಸ್ಐಟಿ ಠಾಣೆಯಲ್ಲೇ ಇದ್ದಾರೆ. ಅದೇ ರೀತಿ ಜಯಂತ್.ಟಿ ಅವರನ್ನೂ ನಿನ್ನೆ ತಡರಾತ್ರಿ ತನಕ ಪ್ರಶ್ನಿಸಲಾಯಿತು. ಇಂದು ಮತ್ತೆ ವಿಚಾರಣೆಗೆ ಹಾಜರಾಗಲು ಅವರಿಗೆ ಸೂಚನೆ ನೀಡಲಾಗಿದೆ.

45
Image Credit : Asianet News

ಕೇರಳ ಲಿಂಕ್ ಪತ್ತೆ

ಈ ಪ್ರಕರಣಕ್ಕೆ ಕೇರಳ ಸಂಪರ್ಕವಿರುವುದು ಎಸ್ಐಟಿ ತನಿಖೆಯಿಂದ ಬಹಿರಂಗವಾಗಿದೆ. ಕೇರಳ ಮೂಲದ ಯೂಟ್ಯೂಬರ್ ಮನಾಫ್ ವಿರುದ್ಧ ಎಸ್ಐಟಿ ನೋಟಿಸ್ ಜಾರಿ ಮಾಡಿದ್ದು, ಬೆಳಿಗ್ಗೆ 10 ಗಂಟೆಗೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಾಗಿದೆ. ಮನಾಫ್, ಉತ್ತರ ಕನ್ನಡದ ಶಿರೂರು ಗುಡ್ಡ ಕುಸಿತ ದುರಂತದಲ್ಲಿ ಸಾವಿಗೀಡಾದ ಲಾರಿ ಚಾಲಕ ಅರ್ಜುನ್‌ನ ಲಾರಿಯ ಮಾಲೀಕರಾಗಿದ್ದಾನೆ. ಅದೇ ಸಮಯದಲ್ಲಿ ಅವರು ಯೂಟ್ಯೂಬರ್ ಆಗಿಯೂ ಕಾರ್ಯನಿರ್ವಹಿಸುತ್ತಿದ್ದು, ಧರ್ಮಸ್ಥಳ ಬುರುಡೆ ಪ್ರಕರಣದ ಕುರಿತಾಗಿ ತನ್ನ ಚಾನೆಲ್‌ನಲ್ಲಿ ಕಥೆ ಕಟ್ಟುತ್ತಾ ಬಂದಿದ್ದಾನೆ.

ಮನಾಫ್ ತನ್ನ ವೀಡಿಯೋಗಳ ಮೂಲಕ ಜಯಂತ್ ನೀಡಿದ ಮಾಹಿತಿಯನ್ನು ಕೇರಳಕ್ಕೂ ಹಬ್ಬಿಸಿದ್ದಾನೆ. ಅಲ್ಲದೆ, ಕೇರಳ ಮಾಧ್ಯಮಗಳು ಕೂಡಾ ಈ ಸುಳ್ಳು ಕಥೆಯನ್ನು ನಂಬುವಂತೆ ಮಾಡಲಾಗಿದೆ ಎಂದು ಎಸ್ಐಟಿ ತನಿಖೆಯಲ್ಲಿ ತಿಳಿದುಬಂದಿದೆ. ಸುಜಾತ ಭಟ್ ಪ್ರಕರಣ ಹಾಗೂ ಬುರುಡೆ ವಿಷಯವನ್ನು ಜೋಡಿಸಿ, ಧರ್ಮಸ್ಥಳದಲ್ಲಿ ನೂರಾರು ಮಹಿಳೆಯರ ಮೇಲೆ ಅತ್ಯಾ8ಚಾರ ಹಾಗೂ ಕೊ8ಲೆ ನಡೆದಿದೆ ಎಂದು ಮನಾಫ್ ಪ್ರಚಾರ ನಡೆಸಿರುವುದು ತನಿಖಾ ತಂಡಕ್ಕೆ ಶಂಕೆ ಮೂಡಿಸಿದೆ.

55
Image Credit : Asianet News

ಎಸ್ಐಟಿ ಮುಖ್ಯಸ್ಥರ ಭೇಟಿ

ಪ್ರಕರಣ ಗಂಭೀರ ಸ್ವರೂಪ ಪಡೆದುಕೊಂಡ ಹಿನ್ನೆಲೆಯಲ್ಲಿ, ಎಸ್ಐಟಿ ಮುಖ್ಯಸ್ಥರಾದ ಡಿಜಿಪಿ ಪ್ರಣಬ್ ಮೊಹಾಂತಿ ಅವರು ಇಂದು ಬೆಳಗ್ಗೆ 11 ಗಂಟೆಗೆ ಬೆಳ್ತಂಗಡಿ ಎಸ್ಐಟಿ ಕಚೇರಿಗೆ ಭೇಟಿ ನೀಡಲಿದ್ದಾರೆ. ಅವರು ತನಿಖೆಯ ಪ್ರಗತಿಯನ್ನು ಪರಿಶೀಲಿಸುವುದರ ಜೊತೆಗೆ, ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮುಂದಿನ ತನಿಖಾ ಕ್ರಮಗಳ ಕುರಿತು ನಿರ್ದೇಶನ ನೀಡಲಿದ್ದಾರೆ. ನಾಳೆ ಚಿನ್ನಯ್ಯನ ಪೊಲೀಸ್ ಕಸ್ಟಡಿ ಅಂತ್ಯಗೊಳ್ಳಲಿರುವುದರಿಂದ, ಪ್ರಕರಣದ ಮುಂದಿನ ಹಂತದ ತನಿಖೆಗೆ ಸಂಬಂಧಿಸಿದಂತೆ ಸ್ಪಷ್ಟ ಮಾರ್ಗದರ್ಶನ ನೀಡುವ ಸಾಧ್ಯತೆಯಿದೆ.

ಈ ರೀತಿಯಾಗಿ, ಧರ್ಮಸ್ಥಳ ಬುರುಡೆ ಪ್ರಕರಣವು ಹೊಸ ತಿರುವು ಪಡೆದುಕೊಂಡಿದ್ದು, ಕೇರಳದ ಯೂಟ್ಯೂಬರ್‌ಗಳ ಪಾತ್ರ ಹಾಗೂ ಸುಳ್ಳು ಪ್ರಚಾರಗಳು ತನಿಖೆಗೆ ಹೊಸ ದಿಕ್ಕು ತೋರಿಸುತ್ತಿವೆ. ಎಸ್ಐಟಿ ಶೀಘ್ರದಲ್ಲೇ ಪ್ರಕರಣದ ನಿಜಸ್ವರೂಪ ಬಹಿರಂಗಪಡಿಸುವ ನಿರೀಕ್ಷೆ ವ್ಯಕ್ತವಾಗಿದೆ.

About the Author

GK
Gowthami K
ಒನ್ ಇಂಡಿಯಾ, ಡೈಲಿಹಂಟ್‌, ವಿಜಯ ಕರ್ನಾಟಕ ವೆಬ್‌, ಈಗ ಏಷ್ಯಾನೆಟ್ ಕನ್ನಡ ಸೇರಿ 10 ವರ್ಷಗಳಿಂದಲೂ ಡಿಜಿಟಲ್ ಮಾಧ್ಯಮದಲ್ಲಿದ್ದೇನೆ. ಉಜಿರೆಯ ಎಸ್‌ಡಿಎಂನಲ್ಲಿ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯಾಗಿದೆ. ಸುಳ್ಯ ತಾಲೂಕಿನ ಕುಕ್ಕುಜಡ್ಕದವಳು. ಉದ್ಯೋಗ, ರಾಜಕೀಯ, ದೇಶ-ವಿದೇಶ, ವಿಜ್ಞಾನ ಮತ್ತು ವಾಣಿಜ್ಯ, ಸಿನೆಮಾವೆಂದರೆ ಹೆಚ್ಚು ಆಸಕ್ತಿ. ಹಿನ್ನೆಲೆ ಧ್ವನಿ ನೀಡುವುದು ಹವ್ಯಾಸ.
ಧರ್ಮಸ್ಥಳ
ದಕ್ಷಿಣ ಕನ್ನಡ
ಕೇರಳ
ಯೂಟ್ಯೂಬರ್
ಮಂಗಳೂರು
ಸೌಜನ್ಯ ಪ್ರಕರಣ

Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved