MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Entertainment
  • Sandalwood
  • ಅಮೃತವರ್ಷಿಣಿ-2 ಸಿನಿಮಾಕ್ಕೆ ಲಕ್ಷ್ಮೀನಿವಾಸ ಸೈಕೋ ಜಯಂತೇ ನಾಯಕ! ಅನೌನ್ಸ್​ ಮಾಡಿದ್ರು ರಮೇಶ್​...

ಅಮೃತವರ್ಷಿಣಿ-2 ಸಿನಿಮಾಕ್ಕೆ ಲಕ್ಷ್ಮೀನಿವಾಸ ಸೈಕೋ ಜಯಂತೇ ನಾಯಕ! ಅನೌನ್ಸ್​ ಮಾಡಿದ್ರು ರಮೇಶ್​...

೧೯೯೭ರ ಬ್ಲಾಕ್‌ಬಸ್ಟರ್ ಚಿತ್ರ 'ಅಮೃತವರ್ಷಿಣಿ' ಮಧುರ ಗೀತೆಗಳು ಮತ್ತು ಕಥೆಯಿಂದ ಇಂದಿಗೂ ಜನಮನದಲ್ಲಿ ಉಳಿದಿದೆ. ಈ ಚಿತ್ರದ ರೀಮೇಕ್ ಬಗ್ಗೆ ಚರ್ಚೆಗಳು ನಡೆಯುತ್ತಿದ್ದು, ರಮೇಶ್ ಅರವಿಂದ್ ಅವರು ಲಕ್ಷ್ಮೀ ನಿವಾಸ ಸೈಕೋ ಜಯಂತ್ ಮತ್ತು ವಂಶಿ ಅವರನ್ನು ನಾಯಕ-ನಾಯಕಿಯಾಗಿ ಆಯ್ಕೆ ಮಾಡಿದ್ದಾರೆ.

2 Min read
Suchethana D
Published : Aug 18 2025, 11:19 PM IST
Share this Photo Gallery
  • FB
  • TW
  • Linkdin
  • Whatsapp
18
27 ವರ್ಷಕಳೆದರೂ ಎವರ್​ಗ್ರೀನ್​ ಚಿತ್ರ
Image Credit : amruthavarshini Kannada Movie

27 ವರ್ಷಕಳೆದರೂ ಎವರ್​ಗ್ರೀನ್​ ಚಿತ್ರ

ಕೆಲವು ಚಿತ್ರಗಳೇ ಹಾಗೆ. ಎಷ್ಟೇ ದಶಕ ಕಳೆದರೂ ಆ ಸಿನಿಮಾಗಳನ್ನು ಮತ್ತೆ ಮತ್ತೆ ನೋಡಬೇಕು ಎನ್ನುವ ಆಸೆ ಹುಟ್ಟುತ್ತದೆ. ಅದರಲ್ಲಿ ಇರುವ ಹಾಡುಗಳನ್ನು ಮೆಲುಕು ಹಾಕಿದರೆ ಅದೇನೋ ಆನಂದ. ಇತ್ತೀಚಿನ ಹೊಡಿ, ಬಡಿ, ಲಾಂಗು, ಮಚ್ಚು, ಕೊ*ಲೆ, ರ*ಕ್ತಪಾತವನ್ನೇ ವಿಜೃಂಭಿಸುವ ದೊಡ್ಡ ನಾಯಕರ ದಂಡೇ ಇದೆ. ಆದರೆ ಅವುಗಳ ಪೈಕಿ ಅಂಥದ್ದೇ ಮನಸ್ಥಿತಿ ಇರುವ ಸಿನಿಪ್ರಿಯರಿಂದ ಕೆಲವು ಬ್ಲಾಕ್​ ಬಸ್ಟರ್​ ಎಂದು ಸಾಬೀತಾದರೂ ಕೆಲವೇ ವರ್ಷಗಳಲ್ಲಿ ಮರೆತು ಹೋಗುತ್ತವೆ. ಆದರೆ ಇನ್ನು ಕೆಲವು ನವೀರಾದ ಕಥೆಯುಳ್ಳ ಚಿತ್ರಗಳ ಜನಮಾನಸದಲದಲ್ಲಿ ಅಚ್ಚಳಿಯದೇ ನಿಲ್ಲುವುದು ಉಂಟು. ಅವುಗಳಲ್ಲಿ ಒಂದು 1997ರಲ್ಲಿ ತೆರೆಕಂಡ ಚಿತ್ರ ಅಮೃತವರ್ಷಿಣಿ.

28
ಹಾಡುಗಳೂ ಸೂಪರ್​ ಡೂಪರ್​
Image Credit : Amruthavarshini Kannada Movie

ಹಾಡುಗಳೂ ಸೂಪರ್​ ಡೂಪರ್​

ಇದರ ಕಥೆ ಮಾತ್ರವಲ್ಲದೇ, ಬಹುತೇಕ ಎಲ್ಲಾ ಹಾಡುಗಳೂ ಸೂಪರ್ ಡೂಪರ್​. ದೇವಾ ಸಂಗೀತ ಸಂಯೋಜನೆಯ ‘ತುಂತುರು..’, ‘ಈ ಸುಂದರ ಬೆಳದಿಂಗಳ..’, ‘ಮನಸೇ ಬದುಕು..’, ‘ತಂಪು ತಂಗಾಳಿ..’, ‘ಭಲೇ ಭಲೇ ಚಂದದ ಚಂದುಳ್ಳಿ ಹೆಣ್ಣು ನೀನು..’, ‘ಎಲ್ಲಾ ಶಿಲ್ಪಗಳಿಗೂ..’ ಹಾಡುಗಳನ್ನು ಕೇಳಿದರೆ ಏನೋ ಖುಷಿ ಕೊಡುವಂತಿದೆ. ರಮೇಶ್ ಅರವಿಂದ್ , ಸುಹಾಸಿನಿ , ಶರತ್ ಬಾಬು, ನಿವೇದಿತಾ ಜೈನ್ ಅಭಿನಯದ ತ್ರಿಕೋನ ಪ್ರೇಮಕಥೆಯ ಸಿನಿಮಾ ಇದಾಗಿದೆ. 1997ರಲ್ಲಿ ಅತಿ ಹೆಚ್ಚು ಕಲೆಕ್ಷನ್ ಮಾಡಿದ ಸಿನಿಮಾಗಳ ಪೈಕಿ ‘ಅಮೃತವರ್ಷಿಣಿ’ ಕೂಡ ಒಂದು.

Related Articles

Related image1
ಕೊನೆಗೂ ಈಡೇರಿತು ಫ್ಯಾನ್ಸ್​ ಆಸೆ: ಭವ್ಯ ಬಂಗಲೆಯ ಸಂಪೂರ್ಣ ದರ್ಶನ ಮಾಡಿಸಿದ ನಟಿ ಮೇಘನಾ ರಾಜ್​
Related image2
ಮದುವೆ ಬಗ್ಗೆ ಕೊನೆಗೂ ಮೌನ ಮುರಿದ ಸ್ಯಾಂಡಲ್​ವುಡ್​ ಬ್ಯೂಟಿ ಅಂಕಿತಾ ಅಮರ್​: ನಟಿ ಹೇಳಿದ್ದೇನು ಕೇಳಿ...
38
ದಿನೇಶ್ ಬಾಬು ನಿರ್ದೇಶನದ ಚಿತ್ರ
Image Credit : Amruthavarshini Kannada Movie

ದಿನೇಶ್ ಬಾಬು ನಿರ್ದೇಶನದ ಚಿತ್ರ

ದಿನೇಶ್ ಬಾಬು ಈ ಚಿತ್ರಕ್ಕೆ ಕಥೆ-ಚಿತ್ರಕಥೆ ಬರೆದು ನಿರ್ದೇಶಿಸಿದ್ದರು. ಇಂದಿಗೂ ಅದರ ರೀಮೇಕ್​ ಮಾಡಿದರೆ ಖಂಡಿತವಾಗಿಯೂ ಮತ್ತೊಮ್ಮೆ ಚಿತ್ರ ಹಿಟ್​ ಆಗುವಲ್ಲಿ ಆಶ್ಚರ್ಯವೇ ಇಲ್ಲ. ಇದೀಗ ರಿಮೇಕ್​ ಮಾಡಿದರೆ ಹೀರೋ, ಹೀರೋಯಿನ್​ ಯಾರಾಗಬೇಕು ಎಂಬ ಪ್ರಶ್ನೆಗೆ ಹಲವರು ತಮ್ಮ ನೆಚ್ಚಿನ ನಾಯಕ-ನಾಯಕಿಯ ಹೆಸರು ಹೇಳುತ್ತಾರೆ.

48
ಸೈಕೋ ಜಯಂತ್​ ಅಮೃತವರ್ಷಿಣಿ ರೀಮೇಕ್​ಗೆ ನಾಯಕ
Image Credit : Instagram

ಸೈಕೋ ಜಯಂತ್​ ಅಮೃತವರ್ಷಿಣಿ ರೀಮೇಕ್​ಗೆ ನಾಯಕ

ಆದರೆ, ಈ ಚಿತ್ರದ ನಾಯಕ ರಮೇಶ್​ ಅರವಿಂದ್​ ಅವರು ಈ ಚಿತ್ರಕ್ಕೆ ಲಕ್ಷ್ಮಿ ನಿವಾಸ ಸೈಕೋ ಜಯಂತ್​ ಅರ್ಥಾತ್​ ದೀಪಕ್​ ಸುಬ್ರಹ್ಮಣ್ಯ ಅವರೇ ಎಂದಿದ್ದಾರೆ. ನಾಯಕಿಯಾಗಿ ಮಹಾನಟಿಯಲ್ಲಿ ನಟಿಸ್ತಿರೋ ವಂಶಿ ಎಂದಿದ್ದಾರೆ ರಮೇಶ್​. ಅಷ್ಟಕ್ಕೂ ಮಹಾನಟಿ ಸೀಸನ್​-2 ನಲ್ಲಿ ಈ ವಾರ ಅಮೃತವರ್ಷಿಣಿಯ ಕ್ಲೈಮ್ಯಾಕ್ಸ್​ ಸೀನ್​ಗೆ ಈ ಇಬ್ಬರು ನಟಿಸಿದ್ದರು. ಅವರ ಅದ್ಭುತ ನಟನೆಯನ್ನು ಕಂಡು ರಮೇಶ್​ ಮನಸೋತಿದ್ದಾರೆ.

58
ಅಮೃತವರ್ಷಿಣಿ ರೀಮೇಕ್​ಗೆ ನಾಯಕ-ನಾಯಕಿ
Image Credit : Instagram

ಅಮೃತವರ್ಷಿಣಿ ರೀಮೇಕ್​ಗೆ ನಾಯಕ-ನಾಯಕಿ

ಆದ್ದರಿಂದ ಇವರಿಬ್ಬರೇ ಅಮೃತವರ್ಷಿಣಿ ರೀಮೇಕ್​ಗೆ ನಾಯಕ-ನಾಯಕಿ ಆಗಬೇಕು ಎಂದಿದ್ದಾರೆ. 2025ರಲ್ಲಿ ಒಂದು ವೇಳೆ ಈ ಚಿತ್ರವನ್ನು ರೀಮೇಕ್​ ಮಾಡಿದ್ದೇ ಆದಲ್ಲಿ ಇವರೇ ನಾಯಕ-ನಾಯಕಿ ಎಂದಿದ್ದಾರೆ.

68
ಸಿನಿಮಾ ಸ್ಟೋರಿ ಹೀಗಿದೆ...
Image Credit : Amruthavarshini Kannada Movie

ಸಿನಿಮಾ ಸ್ಟೋರಿ ಹೀಗಿದೆ...

ಇನ್ನು ಈ ಸಿನಿಮಾ ಸ್ಟೋರಿ ಹೇಳುವುದಾದರೆ, ಹೇಮಂತ್ ಮತ್ತು ವೀಣಾ ಮದುವೆಯಾಗಿ ಸುಖ ಸಂಸಾರ ನಡೆಸುತ್ತಿರುತ್ತಾರೆ. ಇವರಿಬ್ಬರ ಹೇಮಂತ್ ಗೆಳೆಯನಾದ ಅಭಿಷೇಕ್ ಭಾರದ್ವಾಜ್ ಬರುತ್ತಾನೆ. ಗೆಳತಿ ಶ್ರುತಿ ಸಾವಿನಿಂದ ಅಭಿಷೇಕ್ ಮಾನಸಿಕವಾಗಿ ಖಿನ್ನತೆಗೊಳಗಾಗಿರುತ್ತಾನೆ. ಈ ವೇಳೆ ಗೆಳೆಯ ಶರತ್ ಪತ್ನಿ ವೀಣಾ ತನ್ನವಳನ್ನಾಗಿ ಮಾಡಿಕೊಳ್ಳಬೇಕೆಂಬ ಹುಚ್ಚು ಹಠಕ್ಕೆ ಬರುತ್ತಾನೆ.

78
ತ್ರಿಕೋನ ಪ್ರೇಮಕಥೆ ಅಮೃತವರ್ಷಿಣಿ
Image Credit : Amruthavarshini Kannada Movie

ತ್ರಿಕೋನ ಪ್ರೇಮಕಥೆ ಅಮೃತವರ್ಷಿಣಿ

ಹೀಗಿರುವಾಗ ಒಮ್ಮೆ ಪ್ರವಾಸಿ ಸ್ಥಳದಲ್ಲಿ ಬೆಟ್ಟದಿಂದ ಗೆಳೆಯನನ್ನು ಬೆಟ್ಟದಿಂದ ತಳ್ಳಿ ಸಾಯಿಸಿ, ನಂತರ ಅದೊಂದು ಅಪಘಾತ ಎಂಬಂತೆ ಬಿಂಬಿಸುವಲ್ಲಿಯೂ ಅಭಿಷೇಕ್ ಯಶಸ್ವಿಯಾಗುತ್ತಾನೆ. ಗಂಡನ ಸಾವಿನ ಬಳಿಕ ಒಂಟಿಯಾದ ವೀಣಾ ಸ್ವಲ್ಪ ಸಮಯದವರೆಗೆ ಮನೆಯಲ್ಲಿರುವಂತೆ ಅಭಿಷೇಕ್ ಬಳಿ ಮನವಿ ಮಾಡಿಕೊಳ್ಳುತ್ತಾಳೆ. ವೀಣಾ ಮಾತಿನಿಂದ ಖುಷಿಯಾಗಿ ಅಭಿಷೇಕ್ ಸಹ ಉಳಿದುಕೊಳ್ಳುತ್ತಾನೆ.

 
 
 
 
View this post on Instagram
 
 
 
 
 
 
 
 
 
 
 

A post shared by Zee Kannada (@zeekannada)

88
ಅಮೃತವರ್ಷಿಣಿ ಕ್ಲೈಮ್ಯಾಕ್ಸ್​
Image Credit : Amruthavarshini Kannada Movie

ಅಮೃತವರ್ಷಿಣಿ ಕ್ಲೈಮ್ಯಾಕ್ಸ್​

ಮುಂದೆ ವೀಣಾಗೆ ತನ್ನ ಗಂಡನ ಸಾವು ಕೊಲೆ ಮತ್ತು ಅದು ಅಭಿಷೇಕ್ ಮಾಡಿದ್ದು ಅನ್ನೋದು ಗೊತ್ತಾಗುತ್ತದೆ. ಮುಂದೆ ವೀಣಾ ತೆಗೆದುಕೊಳ್ಳುವ ನಿರ್ಧಾರಗಳು ಅಭಿಷೇಕ್‌ನನ್ನು ತೀವ್ರ ವಿಚಲಿತನಾಗುವಂತೆ ಮಾಡುತ್ತದೆ. ಅಭಿಷೇಕ್‌ನನ್ನು ವೀಣಾ ಕ್ಷಮಿಸ್ತಾಳಾ? ಅಭಿಷೇಕ್ ತನ್ನ ತಪ್ಪನ್ನು ಒಪ್ಪಿಕೊಳ್ಳುತ್ತಾನಾ ಅನ್ನೋದು ಚಿತ್ರದ ಸಸ್ಪೆನ್ಸ್.

 
 
 
 
View this post on Instagram
 
 
 
 
 
 
 
 
 
 
 

A post shared by Zee Kannada (@zeekannada)

About the Author

SD
Suchethana D
Suchetana ಮಲೆನಾಡಿನ ಹೆಬ್ಬಾಗಿಲು ಶಿರಸಿಯವಳು. ಓದಿದ್ದು LLB, ಒಲಿದದ್ದು ಪತ್ರಿಕೋದ್ಯಮ, ಪ್ರಜಾವಾಣಿಯಲ್ಲಿ 15 ವರ್ಷಗಳ ಅನುಭವ. ಇದರಲ್ಲಿ 10 ವರ್ಷ ನ್ಯಾಯಾಂಗ ವರದಿಗಾರಿಕೆ. ಕಾನೂನು ಮತ್ತು ಮಹಿಳಾ ಸಂವೇದನೆಗೆ ಸಂಬಂಧಿಸಿದ ಲೇಖನಗಳಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿ, ಮುಂಬೈನ ಲಾಡ್ಲಿ ಮೀಡಿಯಾ ಅವಾರ್ಡ್​, ರೋಟರಿ ಎಕ್ಸಲೆನ್ಸ್​ ಅವಾರ್ಡ್​ ಸೇರಿದಂತೆ ಕೆಲವು ಪ್ರಶಸ್ತಿಗಳು ಲಭಿಸಿವೆ. ಚೀನಾದಲ್ಲಿ ನಡೆದ ಭಾರತ ಮಟ್ಟದ ಯುವ ನಿಯೋಗದಲ್ಲಿ ಮಾಧ್ಯಮ ಕ್ಷೇತ್ರದಿಂದ ಪ್ರತಿನಿಧಿಯಾಗಿ ಆಯ್ಕೆ. ವಿಜಯವಾಣಿಯಲ್ಲಿ ಕೆಲಸ ಮಾಡಿ ಈಗ ದೂರದರ್ಶನ ಚಂದನದಲ್ಲಿ ಮತ್ತು ಏಷ್ಯಾನೆಟ್​ ಸುವರ್ಣದಲ್ಲಿ ಫ್ರೀಲ್ಯಾನ್ಸರ್​ ಆಗಿ ಕೆಲಸ ನಿರ್ವಹಣೆ.
ಸ್ಯಾಂಡಲ್‌ವುಡ್
ರಮೇಶ್ ಅರವಿಂದ್
ಮನರಂಜನಾ ಸುದ್ದಿ
ಸಂಬಂಧಗಳು

Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved