MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Entertainment
  • News
  • ಅಪ್ಪು ಸಾಯುವ ಹಿಂದಿನ ದಿನ ರಮೇಶ್-ಪುನೀತ್ ಮಾತನಾಡಿದ್ದು 'ಈ ವಿಷಯದ ಬಗ್ಗೆ...' ಫ್ಯಾನ್ಸ್ ಭಾವುಕ

ಅಪ್ಪು ಸಾಯುವ ಹಿಂದಿನ ದಿನ ರಮೇಶ್-ಪುನೀತ್ ಮಾತನಾಡಿದ್ದು 'ಈ ವಿಷಯದ ಬಗ್ಗೆ...' ಫ್ಯಾನ್ಸ್ ಭಾವುಕ

Appu last conversation: ಇದೇ ಸಂದರ್ಭದಲ್ಲಿ ನಿರೂಪಕಿ ಅನುಶ್ರಿ ನಟ ರಮೇಶ್ ಅರವಿಂದ್ ಅವರಿಗೆ ನೀವು ಅಪ್ಪು ಜೊತೆ ಕಳೆದ ಕ್ಷಣಗಳನ್ನು ಹೇಳುವಂತೆ ಕೇಳಿಕೊಂಡಾಗ ರಮೇಶ್ ಅಪ್ಪು ಬಗ್ಗೆ ಮಾತನಾಡಿರುವುದು ಎಲ್ಲರ ಕಣ್ಣಂಚಲ್ಲಿ ನೀರು ತರಿಸಿತು. 

2 Min read
Ashwini HR
Published : Nov 02 2025, 01:07 PM IST
Share this Photo Gallery
  • FB
  • TW
  • Linkdin
  • Whatsapp
16
ಎಲ್ಲರ ಕಣ್ಣಂಚಲ್ಲಿ ನೀರು
Image Credit : Instagram

ಎಲ್ಲರ ಕಣ್ಣಂಚಲ್ಲಿ ನೀರು

ಜೀ ಕನ್ನಡ ವಾಹಿನಿಯಲ್ಲಿ ಮಹಾನಟಿ & ಹಳ್ಳಿ ಪವರ್ 'ಮಹಾಸಂಗಮ' ಪ್ರಸಾರವಾಗುತ್ತಿದೆ. ಈ ಸಂದರ್ಭದಲ್ಲಿ ಕರ್ನಾಟಕ ರತ್ನ, ಅಭಿಮಾನಿಗಳ ಪರಮಾತ್ಮ ಅಪ್ಪು ಅವರ 4ನೇ ವರ್ಷದ ಪುಣ್ಯಸ್ಮರಣೆ ಹಿನ್ನೆಲೆಯಲ್ಲಿ ಎಲ್ಲರೂ ದೀಪ ಬೆಳಗಿಸಿ ನಮನ ಸಲ್ಲಿಸಿದರು. ಇದೇ ಸಂದರ್ಭದಲ್ಲಿ ನಿರೂಪಕಿ ಅನುಶ್ರಿ ನಟ ರಮೇಶ್ ಅರವಿಂದ್ ಅವರಿಗೆ ನೀವು ಅಪ್ಪು ಜೊತೆ ಕಳೆದ ಕ್ಷಣಗಳನ್ನು ಹೇಳುವಂತೆ ಕೇಳಿಕೊಂಡಾಗ ರಮೇಶ್ ಅಪ್ಪು ಬಗ್ಗೆ ಮಾತನಾಡಿರುವುದು ಎಲ್ಲರ ಕಣ್ಣಂಚಲ್ಲಿ ನೀರು ತರಿಸಿತು.

26
ಹೀ ಈಸ್ ಲಾಫಿಂಗ್....
Image Credit : Instagram

ಹೀ ಈಸ್ ಲಾಫಿಂಗ್....

ರಮೇಶ್, "ಮೊನ್ನೆ ಮೊನ್ನೆಯಷ್ಟೇ ಅಪ್ಪು ಜೊತೆ ಮಾತನಾಡಿದ ಹಾಗಿದೆ. ಹೀಗೆ ಖುಷಿ ಖುಷಿಯಾಗಿ ಮಾತಾಡಿದ್ದೇವೆ. ನಕ್ಕಿದ್ದೇವೆ. ಮರುದಿನ ಬೆಳಗ್ಗೆ ಅವರು ಇಲ್ಲ ಎಂಬ ನ್ಯೂಸ್ ಕೇಳ್ತೇವೆ. ಅಪ್ಪು ಸಾಯುವ ಮುನ್ನ ನಾವು ಮಾತನಾಡಿದ್ದು ಏನೆಂದರೆ ಬುದ್ಧ ಹೇಳ್ತಾನೆ ಅಪ್ಪು, ನೀನು ಏನೇನು ಇಷ್ಟಪಡ್ತಿಯೋ ಅದನ್ನೆಲ್ಲಾ ಒಂದು ದಿನ ಕಳಕೊಬೇಕಾಗುತ್ತೆ. ಅದೇ ಜೀವನ. ನಿನಗೆ ಕೂದಲು ಇಷ್ಟ ಅಲ್ವಾ ಅದು ಒಂದು ದಿನ ಹೋಗುತ್ತೆ. ನಿನಗೆ ಯೌವ್ವನ ಅಂತ ಜಂಭ ಅಲ್ವಾ ಅದು ಒಂದು ದಿನ ಹೋಗಿಬಿಡುತ್ತೆ. ನಗ್ತಾ ಇರ್ತಿಯಾ ಅಲ್ವಾ ಹಲ್ಲು ಅದು ಒಂದು ದಿನ ಹೋಗಿಬಿಡುತ್ತೆ ಅಂದ್ರೆ ಅಪ್ಪು ಬಂದು ಅದನ್ನೆಲ್ಲಾ ಕೇಳಿಸಿಕೊಂಡು ಹೀ ಈಸ್ ಲಾಫಿಂಗ್. ಏನೇನೋ ಮಾತಾಡಿದ್ದೇವೆ ಸಂಬಂಧನೆ ಇಲ್ಲದೆ ಅಂದು ನಾವು" ಎಂದು ಹೇಳಿದ್ದಾರೆ.

Related Articles

Related image1
ಮೆಟ್ರೋ ಬೋಗಿ ಮೇಲೆ ರಾರಾಜಿಸಿದ ಪುನೀತ್!
Related image2
ಪುನೀತ್ ರಾಜ್‌ಕುಮಾರ್ ನೆನಪಿನಲ್ಲಿ ನಾಲ್ಕು ವರ್ಷ: ಕನ್ನಡ ಚಿತ್ರರಂಗ ಕಳೆದುಕೊಂಡ ಐದು ಶುದ್ಧ ಮೌಲ್ಯಗಳು
36
"ಸೋ ವೆಲ್ ಡಿಸರ್ವರ್ಡ್"
Image Credit : Instagram

"ಸೋ ವೆಲ್ ಡಿಸರ್ವರ್ಡ್"

ಮರುದಿನ ಬೆಳಗ್ಗೆ ಅಪ್ಪು ಸಾವಿನ ಸುದ್ದಿನ ಕೇಳಿದಾಗ ನನಗನಿಸಿದ್ದು.."ನಿನ್ನೆ ಈ ತರಹವೆಲ್ಲಾ ಮಾತನಾಡಿದ್ದೇವೆ ಎಂದು ನಮಗೆ ನಾವೇ ಬೇರೆ ಅರ್ಥಗಳನ್ನೆಲ್ಲಾ ಕಟ್ಟಿಕೊಳ್ತೀವಿ. ಅಪ್ಪು 100 ನೇ ದಿನ ಕಾರ್ಯಕ್ರಮದಲ್ಲಿ ನಾನಿದನ್ನ ಮಾತನಾಡಿದ್ದೇನೆ. ವೀಕೆಂಡ್ ವಿಥ್ ರಮೇಶ್ ಕುರ್ಚಿಯಲ್ಲಿ ಫಸ್ಟ್ ಅತಿಥಿ ಅವರು. ಡಾನ್ಸ್, ಫೈಟ್ ಅದನ್ನೆಲ್ಲಾ ದಾಟಿ ಆ ವ್ಯಕ್ತಿಯಲ್ಲಿ ಇದೆಯಲ್ಲ ಒಳ್ಳೆತನ. ಅದು ಅವರನ್ನ ಕರ್ನಾಟಕ ರತ್ನ ಮಾಡಿದ್ದು. ಸೋ ವೆಲ್ ಡಿಸರ್ವರ್ಡ್" ಎಂದು ಪ್ರಶಂಸೆ ವ್ಯಕ್ತಪಡಿದ್ದಾರೆ ರಮೇಶ್.

46
ಬಹಳ ಇಷ್ಟವಾಗುತ್ತೆ ಅವರ ವ್ಯಕ್ತಿತ್ವ
Image Credit : Instagram

ಬಹಳ ಇಷ್ಟವಾಗುತ್ತೆ ಅವರ ವ್ಯಕ್ತಿತ್ವ

"ಇವತ್ತಿಗೂ ಅಪ್ಪು ಅವರನ್ನ ನೆನಪು ಮಾಡಿಕೊಂಡ್ರೆ ಒಂದು ಕಹಿಯಾದ ಭಾವನೆ ಬರಲ್ಲ. ಯಾರೇ ಆಗಲಿ, ಒಂದಲ್ಲ ಒಂದು ಸಾರಿ ಒಬ್ರ ಬಗ್ಗೆ ತಪ್ಪಾಗಿ ಮಾತಾಡ್ತಾರೆ. ತಪ್ಪಾಗಿ ಕೆಲವು ವಿಷಯಗಳನ್ನ ಹೇಳ್ತಾರೆ. ಆ ತರಹ ಅಪ್ಪು ಜೊತೆ ಎಂದೂ ಆಗಿಲ್ಲ. ನನಗಂತೂ ಪರ್ಸನಲಿ. ಅದಕ್ಕೆ ಬಹಳ ಇಷ್ಟವಾಗುತ್ತೆ ಅವರ ವ್ಯಕ್ತಿತ್ವ" ಎಂದಿದ್ದಾರೆ ರಮೇಶ್.

56
ಅಪ್ಪು ಫೋಟೋ ಇಂದಿಗೂ ತೆಗೆದಿಲ್ಲ. ತೆಗೆಯೊಲ್ಲ
Image Credit : Instagram

ಅಪ್ಪು ಫೋಟೋ ಇಂದಿಗೂ ತೆಗೆದಿಲ್ಲ. ತೆಗೆಯೊಲ್ಲ

ಇದೇ ಸಂದರ್ಭದಲ್ಲಿ ನಟಿ ನಿಶ್ವಿಕಾ ನಾಯ್ಡು ಕೂಡ ಅಪ್ಪು ಬಗ್ಗೆ ಮಾತನಾಡಿದ್ದು, ಪ್ರತಿ ಸಾರಿ ಅವರ ಬಗ್ಗೆ ಮಾತನಾಡುವಾಗ ಮನಸ್ಸು ಭಾರವಾಗುತ್ತೆ. ಕಣ್ಣು ಒದ್ದೆಯಾಗುತ್ತೆ. ಯಾವತ್ತು ಅವರ ಜೊತೆ ಸ್ಕ್ರೀನ್ ಶೇರ್ ಮಾಡೋಕೆ ಆಗ್ಲಿಲ್ಲ, ಆ ಅವಕಾಶ ಹೊರಟು ಹೋಯ್ತಲ್ಲ ಎಂಬುದು ನನಗೊಂದು ಕೊರಗಾದರೆ, ಅವರು ನನ್ನ ಎರಡು ಸಿನಿಮಾಗಳಿಗೆ ಹಾಡಿದ್ದಾರೆ ಎಂಬುದೇ ಬಿಗ್ ಅಚೀವ್‌ಮೆಂಟ್ ಎಂದಿದ್ದಾರೆ. ನಾವು ಯಾವಾಗ್ಲೂ ಅವರನ್ನ ಖುಷಿ ಖುಷಿಯಾಗಿ ಸೆಲೆಬ್ರೇಟ್ ಮಾಡಬೇಕು ಅಂದಿದ್ದಾರೆ. ನನ್ನ ಡಿಪಿಯಲ್ಲಿ ಅಪ್ಪು ಫೋಟೋ ಹಾಕಿದ್ದು, ಇಂದಿಗೂ ತೆಗೆದಿಲ್ಲ. ತೆಗೆಯೊಲ್ಲ ಎಂದು ಹೇಳಿದ್ದಾರೆ ನಿಶ್ವಿಕಾ.

66
ಅಪ್ಪು ಮಗ್ಧತನ, ಒಳ್ಳೆತನ
Image Credit : Instagram

ಅಪ್ಪು ಮಗ್ಧತನ, ಒಳ್ಳೆತನ

ಈ ಸಂಚಿಕೆ ನಿನ್ನೆ ಶನಿವಾರ ಜೀ ವಾಹಿನಿಯಲ್ಲಿ ಪ್ರಸಾರವಾಗಿದ್ದು, ಮತ್ತೆ ಅಪ್ಪು ನೆನೆದ ಅಭಿಮಾನಿಗಳು ಕಣ್ಣೀರು ಹಾಕಿದ್ದು, ಅಪ್ಪು ಕಾರ್ಯವನ್ನ ಸ್ಮರಿಸಿಕೊಂಡಿದ್ದಾರೆ. ಶೋನಲ್ಲಿ ನಿಶ್ವಿಕಾ ನಾಯ್ಡು, ರಮೇಶ್ ಅರವಿಂದ್ ಮಾತ್ರವಲ್ಲದೆ ಅನುಶ್ರೀ ಹಾಗೂ ಅಕುಲ್ ಕೂಡ ಮಾತನಾಡಿದ್ದು, ಅಪ್ಪುವಿನ ಮಗ್ಧತನವನ್ನ, ಒಳ್ಳೆತನವನ್ನ ಸಾರಿ ಸಾರಿ ಹೊಗಳಿದ್ದಾರೆ.

About the Author

AH
Ashwini HR
ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ದಿನಪತ್ರಿಕೆ 'ಕ್ರಾಂತಿದೀಪ'ದಲ್ಲಿ ಉಪ ಸಂಪಾದಕಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 14 ವರ್ಷಗಳ ಅನುಭವ. ರಾಜ್ಯಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್‌ಸೈಟ್‌ಗಳಲ್ಲಿ ರಾಜಕೀಯ, ಮನರಂಜನೆ, ಶಿಕ್ಷಣ, ಆರೋಗ್ಯ, ಟ್ರೆಂಡಿಂಗ್‌, ಲೈಫ್‌ಸ್ಟೈಲ್‌ ಕುರಿತಾದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ.ಪ್ರಸ್ತುತ ಸುವರ್ಣ ಡಿಜಿಟಲ್‌ ತಂಡದ ಭಾಗವಾಗಿ ವೃತ್ತಿ ಜೀವನ ಮುಂದುವರಿಸುತ್ತಿದ್ದೇನೆ.
ಮನರಂಜನಾ ಸುದ್ದಿ
ಪುನೀತ್ ರಾಜ್‌ಕುಮಾರ್
ಸ್ಯಾಂಡಲ್‌ವುಡ್
ರಮೇಶ್ ಅರವಿಂದ್
Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved