MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Karnataka Districts
  • ಮಕ್ಕಳ ಜೊತೆ ಮೈಸೂರು ರಾಜಕುವರಿ ತ್ರಿಷಿಕಾ ಕುಮಾರಿಯ ಕ್ಯೂಟ್​ photoshoot​ ವೈರಲ್​

ಮಕ್ಕಳ ಜೊತೆ ಮೈಸೂರು ರಾಜಕುವರಿ ತ್ರಿಷಿಕಾ ಕುಮಾರಿಯ ಕ್ಯೂಟ್​ photoshoot​ ವೈರಲ್​

ಮೈಸೂರು ಅರಮನೆಯಲ್ಲಿ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಮತ್ತು ತ್ರಿಷಿಕಾ ಕುಮಾರಿ ದಂಪತಿಗೆ ಎರಡನೇ ಮಗು ಜನಿಸಿದೆ. ದತ್ತು ಪಡೆದ ಯದುವೀರ್ ಅವರಿಗೆ ಜೈವಿಕ ಮಗುವಿನ ಜನನ ಮಹತ್ವದ ಘಟನೆಯಾಗಿದೆ. ತ್ರಿಷಿಕಾ ಕುಮಾರಿ ಅವರ ಸರಳತೆ ಮತ್ತೊಮ್ಮೆ ಸುದ್ದಿಯಲ್ಲಿದೆ.

2 Min read
Author : Suchethana D
Published : Sep 15 2025, 11:25 AM IST
Share this Photo Gallery
  • FB
  • TW
  • Linkdin
  • Whatsapp
16
ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಮದುವೆ
Image Credit : Asianet News

ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಮದುವೆ

ಭಾರತದ ಪ್ರಸಿದ್ಧ ರಾಜಮನೆತನದಲ್ಲಿ ಒಂದು ಮೈಸೂರಿನ ಒಡೆಯರ್ ರಾಜವಂಶ. ಈ ಕುಟುಂಬದ ಪ್ರಸ್ತುತ ಮುಖ್ಯಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಅವರು ಮಾರ್ಚ್ 24, 1992 ರಂದು ಜನಿಸಿದರು. ಅವರು ವಂಶಾವಳಿಯ 27 ನೇ ರಾಜ. 2016 ರಲ್ಲಿ, ಅವರು ರಾಜಕುಮಾರಿ ತ್ರಿಷಿಕಾ ಕುಮಾರಿಯನ್ನು ವಿವಾಹವಾಗಿದ್ದು, 2017ರಲ್ಲಿ ಮಗ ಆದ್ಯವೀರ್ ನರಸಿಂಹರಾಜ ಒಡೆಯರ್ ಅವರನ್ನು ಸ್ವಾಗತಿಸಿದರು. ಅವರಿಗೆ ಕಳೆದ ಮಾರ್ಚ್​ನಲ್ಲಿ ಎರಡನೆಯ ಮಗು ಕೂಡ ಆಗಿದೆ.

26
ದತ್ತು ತೆಗೆದುಕೊಳ್ಳುವ ಪ್ರಕ್ರಿಯೆ
Image Credit : our own

ದತ್ತು ತೆಗೆದುಕೊಳ್ಳುವ ಪ್ರಕ್ರಿಯೆ

ಇದಕ್ಕೂ ಮೊದಲು, ಒಡೆಯರ್ ರಾಜವಂಶವು ಸಂಬಂಧಿಕರಿಂದ ಉತ್ತರಾಧಿಕಾರಿಗಳನ್ನು ದತ್ತು ತೆಗೆದುಕೊಳ್ಳುವ ಸಂಪ್ರದಾಯವನ್ನು ಅನುಸರಿಸಿತು, ಏಕೆಂದರೆ ಶತಮಾನಗಳಿಂದ ಯಾವುದೇ ಜೈವಿಕ ಮಗು ಜನಿಸಿಲ್ಲ. ಆದ್ದರಿಂದ, ಏಳು ವರ್ಷಗಳ ಹಿಂದೆ ತ್ರಿಷಿಕಾ ತಾಯಿಯಾದಾಗ, ಅದು ಒಂದು ಮಹತ್ವದ ಸಂದರ್ಭವಾಗಿದೆ. ಅಷ್ಟಕ್ಕೂ ಅತ್ಯಂತ simplicityಗೆ ಹೆಸರಾದವರು ತ್ರಿಷಿಕಾ ಕುಮಾರಿ. ರಾಜಮನೆತನದ ಸ್ಥಾನಮಾನದ ಹೊರತಾಗಿಯೂ, ತ್ರಿಷಿಕಾ ಕುಮಾರಿ ಸರಳ ಶೈಲಿಗೆ ಹೆಸರುವಾಸಿಯಾಗಿದ್ದಾರೆ.

Related Articles

Related image1
ಬಾನು ಮುಷ್ತಾಕ್ Dasara ಉದ್ಘಾಟನೆ: ಸ್ಪಷ್ಟನೆ ಕೇಳಿದ ಯದುವೀರ- ರಾಣಿ ಪ್ರಮೋದಾ ದೇವಿ ಏನಂದ್ರು?
Related image2
ದಸರಾ ಉದ್ಘಾಟನೆ ಹೈಕೋರ್ಟ್​ ಅಂಗಳಕ್ಕೆ: Banu Mushtaq ವಿರುದ್ಧ ಆರೋಪ- ಅರ್ಜಿಯಲ್ಲಿ ಏನಿದೆ?
36
ತ್ರಿಷಿಕಾ ಕುಮಾರಿ ಹಿನ್ನೆಲೆ
Image Credit : our own

ತ್ರಿಷಿಕಾ ಕುಮಾರಿ ಹಿನ್ನೆಲೆ

ತ್ರಿಷಿಕಾ ಕುಮಾರಿ ಸಿಂಗ್, ರಾಜಸ್ಥಾನದ ಡುಂಗರ್‌ಪುರ ರಾಜಮನೆತನದ ಹರ್ಷವರ್ಧನ್ ಸಿಂಗ್ ಮತ್ತು ಮಹೇಶಿ ಕುಮಾರಿ ಅವರ ಪುತ್ರಿ. ಸದಾ ಸಾಂಪ್ರದಾಯಿಕ ಭಾರತೀಯ ಉಡುಪಿನಲ್ಲಿ ಕಾಣಿಸಿಕೊಂಡರೂ ಅಥವಾ ಕ್ಯಾಶುಯಲ್ ಉಡುಗೆಯಲ್ಲಿ ಕಾಣಿಸಿಕೊಂಡರೂ ಸಹ ಅವರು ಎಲ್ಲಿಯೂ ಎಲ್ಲೆಯನ್ನೂ ಮೀರಿದವರಲ್ಲ. ಸದಾ ನಗುಮೊಗದಿಂದಲೇ, ಸಾಮಾನ್ಯ ಜನರಲ್ಲಿ ಸಾಮಾನ್ಯರಾಗಿ ಅವರು ವರ್ತಿಸುತ್ತಾರೆ. ಮಹಾರಾಣಿ ಎನ್ನುವ ಅಹಂಕಾರದ ಛಾಯೆ ಅವರಲ್ಲಿ ಎಂದಿಗೂ ಮೂಡದೇ ಇರುವುದರಿಂದಲೇ ಅವರು ಜನರಿಗೆ ಕೂಡ ತುಂಬಾ ಹತ್ತಿರವಾದವರು.

46
ಸರಳತೆಗೆ ಫೇಮಸ್​
Image Credit : Instagram

ಸರಳತೆಗೆ ಫೇಮಸ್​

ಅವರ ಈ ಸರಳತೆಗೆ ಸಾಕ್ಷಿಯಾಗಿ ಈಗ ಇನ್ನೊಂದು ಪೋಸ್ಟ್​ ವೈರಲ್​ ಆಗಿದೆ. ತಮ್ಮ ಸಹೋದರನ ಮಗುವಿನ ಹುಟ್ಟಿದ ಹಬ್ಬಕ್ಕೆ ತ್ರಿಷಿಕಾ ಕುಮಾರಿ ವಿಷ್​ ಮಾಡಿದ್ದಾರೆ. ಸದಾ ಕ್ಯೂಟ್​ ಕಂದಮ್ಮ ಎಂದು ಅವರು ಹೇಳಿದ್ದಾರೆ. ನಿನ್ನನ್ನು ರಕ್ಷಿಸಲು ಸದಾ ಈ ಚಿಕ್ಕಮ್ಮ ನಿನ್ನ ಬಳಿ ಇರುತ್ತಾಳೆ ಎಂದು ಬರೆದುಕೊಂಡಿದ್ದಾರೆ.

56
ದತ್ತು ಪಡೆದ ಬಗೆ
Image Credit : Instagram

ದತ್ತು ಪಡೆದ ಬಗೆ

ಬೆಟ್ಟದ ಕೋಟೆ ಕುಟುಂಬದ ಸದಸ್ಯರಾದ ಯದುವೀರ್ ಕೃಷ್ಣದತ್ತ ಚಾಮರಾಜ (YKC) ಒಡೆಯರ್ ಅವರನ್ನು ಫೆಬ್ರವರಿ 23, 2015 ರಂದು ಪ್ರಮೋದಾ ದೇವಿ ಒಡೆಯರ್ ದತ್ತು ಪಡೆದರು. ಡಿಸೆಂಬರ್ 10, 2013 ರಂದು ಅವರ ಪತಿ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರ ನಿಧನದ ನಂತರ ದತ್ತು ಸ್ವೀಕಾರ ನಡೆದಿತ್ತು.

66
ಪಟ್ಟಾಭಿಷೇಕ
Image Credit : Instagram

ಪಟ್ಟಾಭಿಷೇಕ

ಮೇ 28, 2015 ರಂದು ಯದು ರಾಜವಂಶದ 27 ನೇ ಮಹಾರಾಜರಾಗಿ ಅಧಿಕೃತವಾಗಿ ಪಟ್ಟಾಭಿಷೇಕ ಮಾಡಲಾಯಿತು. ಜೂನ್ 27, 2016 ರಂದು, ಯದುವೀರ್ ರಾಜ್‌ಕೋಟ್‌ನ ರಾಜಮನೆತನದ ತ್ರಿಷಿಕಾ ದೇವಿಯನ್ನು ವಿವಾಹವಾದರು. ಈ ದಂಪತಿಗಳು ಡಿಸೆಂಬರ್ 6, 2017 ರಂದು ತಮ್ಮ ಮೊದಲ ಮಗು ಆದ್ಯವೀರ್ ನರಸಿಂಹದತ್ತ ಒಡೆಯರ್ ಅವರನ್ನು ಸ್ವಾಗತಿಸಿದರು. ಅವರು 2024 ರಲ್ಲಿ ಮೈಸೂರಿನ ಯಾದವಗಿರಿಯ ಖಾಸಗಿ ಆಸ್ಪತ್ರೆಯಲ್ಲಿ ತಮ್ಮ ಎರಡನೇ ಮಗುವಿಗೆ - ಗಂಡು ಮಗುವಿಗೆ ಜನ್ಮ ನೀಡಿದರು., ಅದು ಆಯುಧ ಪೂಜೆಯ ದಿನವೂ ಆಗಿದ್ದುದು ವಿಶೇಷ.

 
 
 
 
View this post on Instagram
 
 
 
 
 
 
 
 
 
 
 

A post shared by Trishikha Kumari Wadiyar (@trishikhakumariwadiyarofficial)

About the Author

SD
Suchethana D
Suchetana ಮಲೆನಾಡಿನ ಹೆಬ್ಬಾಗಿಲು ಶಿರಸಿಯವಳು. ಓದಿದ್ದು LLB, ಒಲಿದದ್ದು ಪತ್ರಿಕೋದ್ಯಮ, ಪ್ರಜಾವಾಣಿಯಲ್ಲಿ 15 ವರ್ಷಗಳ ಅನುಭವ. ಇದರಲ್ಲಿ 10 ವರ್ಷ ನ್ಯಾಯಾಂಗ ವರದಿಗಾರಿಕೆ. ಕಾನೂನು ಮತ್ತು ಮಹಿಳಾ ಸಂವೇದನೆಗೆ ಸಂಬಂಧಿಸಿದ ಲೇಖನಗಳಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿ, ಮುಂಬೈನ ಲಾಡ್ಲಿ ಮೀಡಿಯಾ ಅವಾರ್ಡ್​, ರೋಟರಿ ಎಕ್ಸಲೆನ್ಸ್​ ಅವಾರ್ಡ್​ ಸೇರಿದಂತೆ ಕೆಲವು ಪ್ರಶಸ್ತಿಗಳು ಲಭಿಸಿವೆ. ಚೀನಾದಲ್ಲಿ ನಡೆದ ಭಾರತ ಮಟ್ಟದ ಯುವ ನಿಯೋಗದಲ್ಲಿ ಮಾಧ್ಯಮ ಕ್ಷೇತ್ರದಿಂದ ಪ್ರತಿನಿಧಿಯಾಗಿ ಆಯ್ಕೆ. ವಿಜಯವಾಣಿಯಲ್ಲಿ ಕೆಲಸ ಮಾಡಿ ಈಗ ದೂರದರ್ಶನ ಚಂದನದಲ್ಲಿ ಮತ್ತು ಏಷ್ಯಾನೆಟ್​ ಸುವರ್ಣದಲ್ಲಿ ಫ್ರೀಲ್ಯಾನ್ಸರ್​ ಆಗಿ ಕೆಲಸ ನಿರ್ವಹಣೆ.
ಯದುವೀರ್ ಒಡೆಯರ್
ಮೈಸೂರು
ಸಂಬಂಧಗಳು

Latest Videos
Recommended Stories
Recommended image1
Koppal: ವಸತಿ ಶಾಲೆ ಶೌಚಾಲಯದಲ್ಲಿಯೇ ವಿದ್ಯಾರ್ಥಿನಿ ಹೆರಿಗೆ ಪ್ರಕರಣ: ಸೋದರಮಾವನ ಬಂಧನ
Recommended image2
ಪೋಕ್ಸೋ ಕೇಸ್‌ನಲ್ಲಿ ಅರೆಸ್ಟ್ ಆಗಿದ್ದ ಗಾಯಕ ಮ್ಯೂಸಿಕ್ ಮೈಲಾರಿಗೆ ಷರತ್ತುಬದ್ಧ ಜಾಮೀನು
Recommended image3
ಲಾಡ್-ಜಕ್ಕಪ್ಪನವರ ಜಟಾಪಟಿ: 120 ಎಕರೆ ಭೂಮಿ ಹುಡುಕಾಟದಲ್ಲಿ ಹೈರಾಣದ್ರು ಅಧಿಕಾರಿಗಳು
Related Stories
Recommended image1
ಬಾನು ಮುಷ್ತಾಕ್ Dasara ಉದ್ಘಾಟನೆ: ಸ್ಪಷ್ಟನೆ ಕೇಳಿದ ಯದುವೀರ- ರಾಣಿ ಪ್ರಮೋದಾ ದೇವಿ ಏನಂದ್ರು?
Recommended image2
ದಸರಾ ಉದ್ಘಾಟನೆ ಹೈಕೋರ್ಟ್​ ಅಂಗಳಕ್ಕೆ: Banu Mushtaq ವಿರುದ್ಧ ಆರೋಪ- ಅರ್ಜಿಯಲ್ಲಿ ಏನಿದೆ?
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved