- Home
- News
- India News
- ಕೇರಳ ನರ್ಸ್ ನಿಮಿಷಾ ಪ್ರಿಯಾ ಪ್ರಕರಣ; ಸುಪ್ರೀಂ ಕೋರ್ಟ್ಗೆ ಮಹತ್ವದ ಮಾಹಿತಿ ನೀಡಿದ ಕೇಂದ್ರ ಸರ್ಕಾರ
ಕೇರಳ ನರ್ಸ್ ನಿಮಿಷಾ ಪ್ರಿಯಾ ಪ್ರಕರಣ; ಸುಪ್ರೀಂ ಕೋರ್ಟ್ಗೆ ಮಹತ್ವದ ಮಾಹಿತಿ ನೀಡಿದ ಕೇಂದ್ರ ಸರ್ಕಾರ
ಯೆಮೆನ್ನಲ್ಲಿ ಮರಣದಂಡನೆಗೆ ಗುರಿಯಾಗಿರುವ ನರ್ಸ್ ನಿಮಿಷಾ ಪ್ರಿಯಾ ಬಿಡುಗಡೆಗಾಗಿ ಕೇಂದ್ರ ಸರ್ಕಾರ ಹೊಸ ಮಧ್ಯವರ್ತಿಯನ್ನು ನೇಮಿಸಿದೆ ಎಂದು ಸುಪ್ರೀಂ ಕೋರ್ಟ್ಗೆ ತಿಳಿಸಿದೆ. ಸದ್ಯ ಗಲ್ಲು ಶಿಕ್ಷೆಗೆ ತಡೆ ನೀಡಲಾಗಿದ್ದು, ಯೆಮೆನ್ ಪ್ರಜೆ ತಲಾಲ್ ಹತ್ಯೆ ಪ್ರಕರಣದಲ್ಲಿ ನಿಮಿಷಾ ಶಿಕ್ಷೆಗೊಳಗಾಗಿದ್ದಾರೆ.

ನಿಮಿಷಾ ಪ್ರಿಯಾ
ನವದೆಹಲಿ : ನಿಮಿಷಾ ಪ್ರಿಯಾ ಬಿಡುಗಡೆಗೆ ಸಂಬಂಧಿಸಿದಂತೆ ಮಾತುಕತೆಗಾಗಿ ಹೊಸ ಮಧ್ಯವರ್ತಿಯನ್ನು ನೇಮಿಸಲಾಗಿದೆ ಎಂದು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್ಗೆ ತಿಳಿಸಿದೆ. ಈ ಹಿಂದೆ ಅರ್ಜಿ ಸಲ್ಲಿಸಿದ್ದ ಕೆ.ಎ. ಪೌಲ್ ಅವರೇನಾ ಎಂಬ ನ್ಯಾಯಾಲಯದ ಪ್ರಶ್ನೆಗೆ, ಮಧ್ಯವರ್ತಿ ನೇಮಕ ಮಾಡಿಲ್ಲ ಎಂದು ಕೇಂದ್ರ ಉತ್ತರಿಸಿದೆ.
ಗಲ್ಲು ಶಿಕ್ಷೆಗೆ ತಡೆ
ನಿಮಿಷಾ ಪ್ರಿಯಾ ಬಿಡುಗಡೆಗೆ ಮಾತುಕತೆ ನಡೆಯುತ್ತಿದ್ದು, ಸದ್ಯ ಗಲ್ಲು ಶಿಕ್ಷೆಗೆ ತಡೆ ನೀಡಲಾಗಿದೆ ಎಂದು ಕೇಂದ್ರ ಸರ್ಕಾರ ನ್ಯಾಯಾಲಯಕ್ಕೆ ಮಾಹಿತಿ ನೀಡಿದೆ. ಪ್ರಕರಣವನ್ನು ಜನವರಿಗೆ ಮುಂದೂಡಲಾಗಿದೆ.
ಸುಪ್ರೀಂ ಕೋರ್ಟ್
ನಿಮಿಷಾ ಪ್ರಿಯಾ ಪ್ರಕರಣವನ್ನು ಸುಪ್ರೀಂ ಕೋರ್ಟ್ ಇಂದು ವಿಚಾರಣೆ ನಡೆಸಿತ್ತು. ಕಳೆದ ಬಾರಿ ಪ್ರಕರಣದ ವಿಚಾರಣೆ ವೇಳೆ, ಸದ್ಯದ ಪರಿಸ್ಥಿತಿಯಲ್ಲಿ ಗಲ್ಲು ಶಿಕ್ಷೆಗೆ ತಡೆ ನೀಡಲಾಗಿದೆ ಎಂದು ಕೇಂದ್ರ ಸುಪ್ರೀಂ ಕೋರ್ಟ್ಗೆ ತಿಳಿಸಿತ್ತು.
ಏನಿದು ಪ್ರಕರಣ?
ಕೇರಳ ಮೂಲದ ನಿಮಿಷಾ ಪ್ರಿಯಾ ಯೆಮೆನ್ನಲ್ಲಿ ನರ್ಸ್ ಆಗಿ ಕೆಲಸ ಮಾಡುತ್ತಿದ್ದರು. ಕುಟುಂಬದೊಂದಿಗೆ ಯೆಮೆನ್ನಲ್ಲಿಯೇ ನಿಮಿಷಾ ಪ್ರಿಯಾ ವಾಸವಾಗಿದ್ದರು. ಜಾಗತಿಕ ಮಟ್ಟದ ಬೆಳವಣಿಗೆಯಿಂದ ಗಂಡ ಮತ್ತು ಮಗಳು ಭಾರತಕ್ಕೆ ಹಿಂದಿರುಗಿದ್ದರು. ಆದ್ರೆ ಅಲ್ಲಿಯೇ ಉಳಿದುಕೊಂಡಿದ್ದ ನಿಮಿಷಾ ಪ್ರಿಯಾ, ಯೆಮೆನ್ ಪ್ರಜೆ ತಲಾಲ್ ಪಾಲುದಾರಿಕೆಯಲ್ಲಿ ಕ್ಲಿನಿಕ್ ಆರಂಭಿಸಿದ್ದರು.
ತಲಾಲ್ ಕಿರುಕುಳ
ಒಂದು ಬಾರಿ ನಿಮಿಷಾ ಪ್ರಿಯಾ ಜೊತೆಯಲ್ಲಿಯೇ ಭಾರತಕ್ಕೆ ಬಂದು ಹೋಗಿದ್ದನು. ಉದ್ಯಮದಲ್ಲಿ ಹಿಡಿತ ಸಾಧಿಸುವ ವಿಚಾರದಲ್ಲಿ ನಿಮಿಷಾ ಪ್ರಿಯಾ ಮತ್ತು ತಲಾಲ್ ನಡುವೆ ಮನಸ್ತಾಪ ಉಂಟಾಗಿತ್ತು. ಈ ಸಂದರ್ಭದಲ್ಲಿ ತಲಾಲ್ ಕಿರುಕುಳ ಸಹಿಸಲಾರದೇ ಭೀಕರವಾಗಿ ಹೊಡೆದು ಕೊ*ಲೆ ಮಾಡಿದ್ದಳು. ಯೆಮೆನ್ ನ್ಯಾಯಾಲಯ ನಿಮಿಷಾ ಪ್ರಿಯಾಗೆ ಮರಣದಂಡನೆ ಶಿಕ್ಷೆ ವಿಧಿಸಿದೆ.
ಪರಿಹಾರ ಧನ
ತಲಾಲ್ ಕುಟುಂಬಸ್ಥರು ಪರಿಹಾರ ಧನ ಸ್ವೀಕರಿಸಿದರೆ ಶಿಕ್ಷೆ ರದ್ದು ಆಗುತ್ತದೆ. ಆದ್ರೆ ತಲಾಲ್ ಕುಟುಂಬ ಪರಿಹಾರ ಧನ ಸ್ವೀಕರಿಸಲು ಒಪ್ಪಿಲ್ಲ.
ಇದನ್ನೂ ಓದಿ : ಡೇಟ್ ಮುಂದೂಡಿಕೆ ನಿರಾಳತೆಯಲ್ಲಿದ್ದ ಕೇರಳ ನರ್ಸ್ ನಿಮಿಷಾ ಪ್ರಿಯಾ ಕುಟುಂಬಸ್ಥರಿಗೆ ಬಿಗ್ ಶಾಕ್
ಇದನ್ನೂ ಓದಿ: ನಾನು ಅಮ್ಮನನ್ನ ತುಂಬಾ ಮಿಸ್ ಮಾಡ್ಕೊಳ್ತಿದ್ದೀನಿ, ನನ್ನೊಂದಿಗೆ ತಾಯಿಯನ್ನು ಕಳಿಸಿ: ನಿಮಿಷಾ ಪ್ರಿಯಾ ಮಗಳ ಕಣ್ಣೀರಿನ ಮನವಿ