MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Astrology
  • Festivals
  • ನಾಗದೇವತೆಗೆ ಈ ವಿಧಾನದ ಮೂಲಕ ಪೂಜಿಸಿದ್ರೆ ಸಕಲ ಸಂಕಷ್ಟಗಳಿಂದ ಮುಕ್ತಿ; ಮನೆಯಲ್ಲಿ ಸಂಪತ್ತು!

ನಾಗದೇವತೆಗೆ ಈ ವಿಧಾನದ ಮೂಲಕ ಪೂಜಿಸಿದ್ರೆ ಸಕಲ ಸಂಕಷ್ಟಗಳಿಂದ ಮುಕ್ತಿ; ಮನೆಯಲ್ಲಿ ಸಂಪತ್ತು!

ಹಿಂದೂ ಧರ್ಮದಲ್ಲಿ ಹಾವುಗಳಿಗೆ ವಿಶೇಷ ಮಹತ್ವವಿದೆ. ನಾಗಪಂಚಮಿ ಹಾವುಗಳಿಗೆ ಮೀಸಲಾದ ಹಬ್ಬವಾಗಿದೆ. ಈ ದಿನದಂದು ನಾಗದೇವರನ್ನು ಶ್ರದ್ಧಾಭಕ್ತಿಯಿಂದ ಪೂಜಿಸಲಾಗುತ್ತದೆ ಪ್ರತಿ ವರ್ಷ  ಶ್ರಾವಣ ಮಾಸದ ಶುಕ್ಲ ಪಕ್ಷದ ಐದನೇ ದಿನದಂದು ಆಚರಿಸಲಾಗುತ್ತದೆ.

2 Min read
Ravi Janekal
Published : Aug 09 2024, 06:20 PM IST| Updated : Aug 09 2024, 06:39 PM IST
Share this Photo Gallery
  • FB
  • TW
  • Linkdin
  • Whatsapp
13

Nag Panchami 2024: ನಾಗಪಂಚಮಿಯಂದು ಶಿವನು ವಿಶೇಷವಾಗಿ ಪೂಜಿತನಾಗುತ್ತಾನೆ. ನಾಗದೇವತೆ ಶಿವನ ಕೊರಳಿನ ಸೌಂದರ್ಯವನ್ನು ಹೆಚ್ಚಿಸುತ್ತದೆ. ಹಿಂದೂಗಳು ಪುರಾಣ ಕಾಲದಿಂದಲೂ ಹಾವುಗಳನ್ನು ದೇವರಂತೆ ಪೂಜಿಸಲಾಗುತ್ತಿದೆ. ಹಾವನ್ನು ಪೂಜಿಸುವುದರಿಂದ ಹಾವು ಕಡಿತದ ಭಯ ನಿವಾರಣೆಯಾಗುತ್ತದೆ ಎಂಬ ನಂಬಿಕೆ ಇದೆಯಿದೆ.

23

ನಾಗ ಪಂಚಮಿಯ ದಿನದಂದು ಶಿವನ ಆರಾಧನೆಯ ಜೊತೆಗೆ ನಾಗರ ಆರಾಧನೆಗೆ ಮಹತ್ವವಿದೆ. ಈ ದಿನ ಜನರು ನಾಗ ದೇವರನ್ನು ಪೂಜಿಸಿ ಹಾಲೆರೆಯುತ್ತಾರೆ. ಹಿಂದೂಗಳ ಮಹತ್ವದ ಹಬ್ಬಗಳಲ್ಲೊಂದಾದ ನಾಗಪಂಚಮಿ ಹಬ್ಬದ ದಿನ ಶಿವ ಮತ್ತು ಸರ್ಪಗಳನ್ನು ಪೂಜಿಸಲು ಆಚರಿಸಲಾಗುತ್ತದೆ. ಶಿವ, ನಾಗದೇವರ ದೇಗುಗಳಿಗೆ ತೆರಳಿ ಹಾವುಗಳಿಗೆ ಹಾಲು ಮತ್ತು ಮೊಸರು ಹಣ್ಣು ಇತ್ಯಾದಿಗಳನ್ನು ಅರ್ಪಿಸುತ್ತಾರೆ. ಅಲ್ಲದೆ ಕೆಲವೊಮ್ಮೆ ಜಾತಕದಲ್ಲಿ ಸರ್ಪದೋಷವಿದ್ದರೆ ಅದನ್ನು ಹೋಗಲಾಡಿಸಲು ನಾನಾ ಕ್ರಮಗಳ ಮೂಲಕ ಪೂಜಿಸಲಾಗುತ್ತದೆ. 

33

ನಾಗ ಪಂಚಮಿ ಮುಹೂರ್ತ

ಎಲ್ಲ ಸಮಯದಲ್ಲೂ ಪೂಜಿಸುವುದಿಲ್ಲ ನಾಗದೇವತೆ ಪೂಜಿಸಲು ಹಿಂದೂ ಪಂಚಾಂಗ ಪ್ರಕಾರ ಈ ವರ್ಷದ ಶ್ರಾವಣಮಾಸ ಶುಕ್ಲಪಕ್ಷಪ ಆ.9, 20214 ಮಧ್ಯರಾತ್ರಿ 12.36ಕ್ಕೆ ಪ್ರಾರಂಭವಾಗುತ್ತದೆ. ಇದು ಆಗಸ್ಟ್ 10 ರಂದು ಮಧ್ಯಾಹ್ನ 03:14 ಕ್ಕೆ ಕೊನೆಗೊಳ್ಳುತ್ತದೆ. ನಾಗ ಪಂಚಮಿ ಪೂಜೆಯು ಬೆಳಗ್ಗೆ 05:47 ರಿಂದ 08:27 ರವರೆಗೆ ನಡೆಯಲಿದೆ. ಅಭಿಜಿತ್ ಮುಹೂರ್ತ ಮಧ್ಯಾಹ್ನ 12 ರಿಂದ 12:53 ರವರೆಗೆ ಇರುತ್ತದೆ. ಅಮೃತ್ ಕಾಲ ಸಂಜೆ 07:57 ರಿಂದ 09:45 ರವರೆಗೆ ಇರುತ್ತದೆ.  

ನಾಗ ಪಂಚಮಿ ಪೂಜೆಯ ಪ್ರಯೋಜನ

ಭಗವಾನ್ ಶಿವನ ಕೊರಳಲ್ಲಿ ನಾಗದೇವತೆಯೂ ಸುತ್ತಿಕೊಂಡಿದೆ. ಧಾರ್ಮಿಕ ನಂಬಿಕೆಯ ಪ್ರಕಾರ, ನಾಗ ಪಂಚಮಿಯ ದಿನದಂದು ನಾಗದೇವತೆಯನ್ನು ಪೂಜಿಸುವುದರಿಂದ, ಭಕ್ತರು ಶಿವನ ಆಶೀರ್ವಾದವನ್ನು ಪಡೆಯುತ್ತಾರೆ ಮತ್ತು ಅನೇಕ ರೀತಿಯ ಮಂಗಳಕರ ಫಲಿತಾಂಶಗಳನ್ನು ಸಹ ಪಡೆಯುತ್ತಾರೆ. ಶಿವನ ಆರಾಧನೆಯಿಂದ ಗ್ರಹದೋಷ, ಹಾವು ಕಡಿತ, ಅಕಾಲಿಕ ಮರಣ, ವಿಶೇಷವಾಗಿ ಸರ್ಪದೋಷ ನಿವಾರಣೆಯಾಗುತ್ತದೆ. ಹೀಗಾಗಿ ಈ ದಿನ ನಾಗದೇವತೆಯನ್ನು ಪೂಜಿಸುವುದರಿಂದ ಮನೆಯಲ್ಲಿ ಸುಖ, ಸಮೃದ್ಧಿ ನೆಲೆಸುತ್ತದೆ ಎಂಬ ನಂಬಿಕೆ ಇದೆ. ಈ ಬಾರಿ ನಾಗಪಂಚಮಿ ಹಬ್ಬವನ್ನು ವಿಶೇಷ ರೀತಿಯಲ್ಲಿ ಆಚರಿಸಲಾಗುತ್ತದೆ. ಅದರಲ್ಲೂ ಹಾವುಗಳನ್ನು ಸಂಪತ್ತಿನ ರಕ್ಷಕ ಎಂದು ಪರಿಗಣಿಸಲಾಗುತ್ತದೆ. ನಾಗ ದೇವರನ್ನು ಪೂಜಿಸುವುದರಿಂದ ಸಂಪತ್ತು ಬರುತ್ತದೆ ಎಂದು ಹಿಂದೂಗಳು ನಂಬುತ್ತಾರೆ.

ನಾಗ ಪಂಚಮಿ ಪೂಜೆ ವಿಧಿ ಹೇಗೆ?

ನಾಗಪಂಚಮಿಯ ದಿನ ಬೆಳಗ್ಗೆ ಬೇಗ ಎದ್ದು ಸ್ನಾನ ಮಾಡಿ, ಇಡೀ ದಿನ ಶಿವನನ್ನೂ ಸ್ಮರಿಸಿ. ನೀವು ನಾಗ ಪಂಚಮಿಯಂದು ಉಪವಾಸ ಮಾಡುತ್ತಿದ್ದರೆ ಸಂಕಲ್ಪ ಮಾಡಿ ಇದರ ನಂತರ, ಮನೆಯಲ್ಲಿ ಹಾವಿನ ಮೂರ್ತಿ ಅಥವಾ ಊರಿನ ಶಿವ ದೇವಾಲಯದಲ್ಲಿನ ನಾಗದೇವನಿಗೆ ಹಾಲಿನ ಅಭಿಷೇಕ, ಆರತಿ ಬೆಳಗಿ ಮಾಡಿ ಹೂ ಹಣ್ಣು ಸಿಹಿತಿಂಡಿ ನೈವೇದ್ಯ ಮಾಡಿ. ಒಂದು ವೇಳೆ ಜಾತಕದಲ್ಲಿ ಸರ್ಪದೋಷವಿದ್ದರೆ ಶಿವಲಿಂಗದ ಮೇಲೆ ಒಂದು ಜೋಡಿ ಬೆಳ್ಳಿ ಹಾವುಗಳನ್ನು ಅರ್ಪಿಸಿ ಇದರಿಂದ ಸರ್ಪದೋಷದ ಅಹಿತಕರ ಘಟನೆಗಳಿಂದ ಮುಕ್ತಿ ಸಿಗುತ್ತದೆ.

About the Author

RJ
Ravi Janekal
ಪ್ರಸ್ತುತ, ಏಷಿಯಾನೆಟ್ ಸುವರ್ಣನ್ಯೂಸ್‌ನಲ್ಲಿ ಉಪ ಸಂಪಾದಕ. ಪತ್ರಿಕೋದ್ಯಮದಲ್ಲಿ 8 ವರ್ಷಗಳ ಅನುಭವ. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಲ್ಲಿ ನ್ಯೂಸ್ ಮಾನಿಟರಿಂಗ್ ಆಗಿ ಹಲವು ವರ್ಷಗಳ ಸೇವೆ, ಕೊರೊನಾ ವಾರಿಯರ್ಸ್ ಅವಾರ್ಡ್, ಮೂಲತಃ ರಾಯಚೂರು ಜಿಲ್ಲೆಯ ಜಾನೇಕಲ್ ಗ್ರಾಮದವರಾದ ಇವರು ಓದು, ಬರೆವಣಿಗೆ ಮತ್ತು ಸಾಹಿತ್ಯಾಸಕ್ತರು.
ನಾಗ ಪಂಚಮಿ
Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved