MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Astrology
  • Festivals
  • ವಾರಣಾಸಿಯ ಮಸಾನ್ ಹೋಳಿ : ಚಿತಾ ಭಸ್ಮದ ಜೊತೆ ಹೋಳಿಯಾಡಲು ಇಲ್ಲಿಗೆ ಶಿವ ಬರ್ತಾನಂತೆ!

ವಾರಣಾಸಿಯ ಮಸಾನ್ ಹೋಳಿ : ಚಿತಾ ಭಸ್ಮದ ಜೊತೆ ಹೋಳಿಯಾಡಲು ಇಲ್ಲಿಗೆ ಶಿವ ಬರ್ತಾನಂತೆ!

ವಾರಣಾಸಿಯಲ್ಲಿ, ಹೋಳಿ ಮತ್ತು ಮಸಾನ್ ಹೋಳಿ ಹಬ್ಬಕ್ಕೆ ವಿಶೇಷ ಮಹತ್ವವಿದೆ. ರಂಗ್ಭರಿ ಏಕಾದಶಿ ದಿನದಿಂದ, ಬಾಬಾ ವಿಶ್ವನಾಥ್ ತನ್ನ ನಗರದ ಭಕ್ತರು ಮತ್ತು ದೇವತೆಗಳೊಂದಿಗೆ ಹೋಳಿ ಆಡುತ್ತಾರೆ ಮತ್ತು ಮರುದಿನ ಭಸ್ಮಾ ಹೋಳಿ ಆಡಲಾಗುತ್ತದೆ ಎಂದು ನಂಬಲಾಗಿದೆ.  

2 Min read
Suvarna News
Published : Feb 23 2024, 01:59 PM IST
Share this Photo Gallery
  • FB
  • TW
  • Linkdin
  • Whatsapp
17

ಹೋಳಿ (Holi) ಹಬ್ಬ ಸನಾತನ ಧರ್ಮದಲ್ಲಿ ವಿಶೇಷ ಮಹತ್ವ ಹೊಂದಿದೆ ಮತ್ತು ಹೋಳಿಯನ್ನು ದೇಶಾದ್ಯಂತ ಬಹಳ ಸಂಭ್ರಮ ಮತ್ತು ಸಂತೋಷದಿಂದ ಆಚರಿಸಲಾಗುತ್ತದೆ. ಈ ಬಣ್ಣಗಳ ಹಬ್ಬವನ್ನು ವಿವಿಧ ರಾಜ್ಯಗಳಲ್ಲಿ ವಿಭಿನ್ನ ಶೈಲಿಗಳಲ್ಲಿ ಆಚರಿಸಲಾಗುತ್ತದೆ, ಆದರೆ ಧಾರ್ಮಿಕ ನಗರವಾದ (spiritual city) ಕಾಶಿಯಲ್ಲಿ ಚಿತೆಯ ಚಿತಾಭಸ್ಮದೊಂದಿಗೆ ಹೋಳಿ ಆಡುವುದು ವಿಶೇಷ ಮಹತ್ವ ಹೊಂದಿದೆ ಎಂದು ತಿಳಿದರೆ ನಿಮಗೆ ಆಶ್ಚರ್ಯವಾಗುತ್ತದೆ.
 

27

ಹೌದು, ಕಾಶಿಯಲ್ಲಿ ರಂಗ್ಭರಿ ಏಕಾದಶಿಯ ಎರಡನೇ ದಿನದಂದು, ಮಹಾ ಸ್ಮಶಾನವಾದ ಮಣಿಕರ್ಣಿಕಾ ಘಾಟಿನಲ್ಲಿ (Manikarnika Ghat) ಮಸನ್ ಕಿ ಹೋಳಿಯನ್ನು ಅಂದರೆ ಸ್ಮಶಾನದ ಹೋಳಿ ಆಡಲಾಗುತ್ತದೆ. ವಾರಣಾಸಿಯಲ್ಲಿ ನಡೆಯುವ ಈ ಹೋಳಿಯ ಮಹತ್ವವೇನು? ಅನ್ನೋದನ್ನು ತಜ್ಞರಿಂದ ತಿಳಿದುಕೊಳ್ಳೋಣ. 
 

37

ವಾರಣಾಸಿಯಲ್ಲಿ ನಡೆಯುವ ಮಸಾನ್ ಹೋಳಿ ಮಹತ್ವ 
ಉತ್ತರ ಪ್ರದೇಶದ ಧಾರ್ಮಿಕ ನಗರವಾದ ವಾರಣಾಸಿಯ ಮಹಾಸ್ಮಾಶನ್ (Masan ki Holi) ಅಥವಾ ಮಹಾ ಸ್ಮಶಾನ ಎಂದು ಕರೆಯಲ್ಪಡುವ ಮಣಿಕರ್ಣಿಕಾ ಘಾಟ್‌ನಲ್ಲಿ ಹೋಳಿಯನ್ನು ಸಂಪೂರ್ಣ ಸಂಭ್ರಮ ಸಡಗರದಿಂದ, ಜೊತೆಗೆ ಉತ್ಸಾಹದಿಂದ ಆಡಲಾಗುತ್ತದೆ. ಇಲ್ಲಿ ಶಿವ ಭಕ್ತರ ಚಿತಾಭಸ್ಮದೊಂದಿಗೆ ಹೋಳಿ ಆಡಲಾಗುತ್ತದೆ. 

47

ವಾರಣಾಸಿಯಲ್ಲಿ (Varanasi) ಡಮರುವಿನ ಪ್ರತಿಧ್ವನಿ ಜೊತೆಗೆ, ಶಿವ ಭಕ್ತರು ವಿಶೇಷವಾಗಿ ಮಸನ್ ನಾಥ್ ದೇವಾಲಯದಲ್ಲಿ ಭೋಲೆನಾಥನನ್ನು ಪೂಜಿಸುತ್ತಾರೆ ಮತ್ತು ಚಿತಾಭಸ್ಮವನ್ನು ಅರ್ಪಿಸುತ್ತಾರೆ. ಇದರ ನಂತರ, ಅವರು ಪರಸ್ಪರ ಚಿತೆಯ ಚಿತಾಭಸ್ಮವನ್ನು ಹಚ್ಚುವ ಮೂಲಕ ಮಸಾನ್ ಹೋಳಿ ಹಬ್ಬವನ್ನು ಸಂಭ್ರಮದಿಂದ ಆಚರಿಸುತ್ತಾರೆ.
 

57

ಮಸಾನ್ ಹೋಳಿಯ ಧಾರ್ಮಿಕ ನಂಬಿಕೆಗಳು  
ಧಾರ್ಮಿಕ ನಂಬಿಕೆಗಳ ಪ್ರಕಾರ, ರಂಗ್ಭರಿ ಏಕಾದಶಿಯ ಎರಡನೇ ದಿನದಂದು, ಶಿವನು (Lord Shiva) ಮಣಿಕರ್ಣಿಕಾ ಘಾಟ್ನಲ್ಲಿ ಎಲ್ಲಾ ಭಕ್ತರಿಗೆ ದರ್ಶನ ನೀಡುತ್ತಾನೆ ಮತ್ತು ಭಸ್ಮಾ ಹೋಳಿ ಆಡುತ್ತಾನೆ ಎಂದು ಜನರು ನಂಬುತ್ತಾರೆ. ಏಕೆಂದರೆ ಶಿವನು ಭಸ್ಮನನ್ನು ತುಂಬಾ ಪ್ರೀತಿಸುತ್ತಾನೆ ಮತ್ತು ಅವನು ಭಸ್ಮದಿಂದ ಮಾತ್ರ ತನ್ನನ್ನು ಅಲಂಕರಿಸುತ್ತಾನೆ ಅನ್ನೊ ನಂಬಿಕೆ ಜನರಲ್ಲಿ. 

67

ಜನರ ನಂಬಿಕೆಯ ಪ್ರಕಾರ ರಂಗ್ಭರಿ ಏಕಾದಶಿ ದಿನದಂದು, ಶಿವ ಮತ್ತು ತಾಯಿ ಪಾರ್ವತಿಯ ವಿವಾಹದ ನಂತರ, ಶಿವನು ಪಾರ್ವತಿಯನ್ನು ಬಹಳ ಗೌರವ, ಸನ್ಮಾನದಿಂದ ತನ್ನ ನಿವಾಸಕ್ಕೆ ಕರೆತಂದನು. ನಂತರ ಶಿವನು ಸಂಭ್ರಮದಿಂದ ಇತರ ದೇವರುಗಳು ಮತ್ತು ದೇವತೆಗಳೊಂದಿಗೆ ಬಣ್ಣಗಳ ಹೋಳಿ ಆಡಿದನು, ಆದರೆ ಈ ಹೋಳಿಯಲ್ಲಿ, ಶಿವನ ಪ್ರೀತಿಯ ಜನರು, ದೆವ್ವಗಳು, ರಕ್ತಪಿಶಾಚಿಗಳು ಸೇರಲು ಸಾಧ್ಯವಾಗಲಿಲ್ಲ ಎಂದು ಹೇಳಲಾಗುತ್ತದೆ. ಹಾಗಾಗಿ, ಶಿವನು ಸ್ವತಃ ಹೋಳಿ ಆಡಲು ಮಸನ್ ಘಾಟ್ಗೆ (masan ghat) ಬಂದು ಎಲ್ಲರೊಂದಿಗೂ ಭಸ್ಮಾ ಹೋಳಿ ಆಡಿದನು ಎನ್ನುವ ಕಥೆ ಇದೆ..
 

77

ಮಣಿಕರ್ಣಿಕಾ ಘಾಟ್ ನಲ್ಲಿರುವ ಮಸನ್ ದೇವಾಲಯದ ಇತಿಹಾಸ ತಿಳಿಯಿರಿ
ಐತಿಹಾಸಿಕ ನಂಬಿಕೆಗಳ ಪ್ರಕಾರ, 16 ನೇ ಶತಮಾನದಲ್ಲಿ, ಜೈಪುರದ ರಾಜ ಮಾನ್ ಸಿಂಗ್ ಗಂಗಾ ನದಿಯ ದಡದಲ್ಲಿರುವ ಮಣಿಕರ್ಣಿಕಾ ಘಾಟ್ನಲ್ಲಿ ಮಸನ್ ದೇವಾಲಯವನ್ನು (Masan Mandir) ನಿರ್ಮಿಸಿದರು ಎಂದು ಹೇಳಲಾಗುತ್ತದೆ. ಇದನ್ನು ಧಾರ್ಮಿಕ ಗ್ರಂಥಗಳಲ್ಲಿಯೂ ಉಲ್ಲೇಖಿಸಲಾಗಿದೆ ಮತ್ತು ಪ್ರತಿದಿನ 100 ಜನರನ್ನು ಇಲ್ಲಿ ಅಂತ್ಯಕ್ರಿಯೆ ಮಾಡಲಾಗುತ್ತದೆ. ಮಸಾನ್ ಹೋಳಿಯಲ್ಲಿ ಹೋಳಿ ಆಡಲು 4000 ರಿಂದ 5000 ಕೆಜಿ ಕಟ್ಟಿಗೆಯನ್ನು ವಿಶೇಷವಾಗಿ ಇಲ್ಲಿ ಸುಡಲಾಗುತ್ತದೆ.  

About the Author

SN
Suvarna News
ಹೋಳಿ ಹಬ್ಬ
ಶಿವ

Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved