ಕೆಲ ತಿಂಗಳ ಹಿಂದ ಬಿಡುಗಡೆಯಾಗಿದ್ದ ಯುದ್ಧಕಾಂಡ ಸಿನಿಮಾದ ಮೇಲೆ ಅಜಯ್‌ ರಾವ್‌ ಭಾರೀ ನಿರೀಕ್ಷೆ ಇರಿಸಿಕೊಂಡಿದ್ದರು. ಆದರೆ, ಸಿನಿಮಾ ನಿರೀಕ್ಷೆಗೆ ತಕ್ಕಂತೆ ಗಲ್ಲಾಪೆಟ್ಟಿಗೆಯಲ್ಲಿ ಸದ್ಧು ಮಾಡಿರಲಿಲ್ಲ. ಈ ಸಿನಿಮಾಕ್ಕೆ ಸಾಕಷ್ಟು ಹಣ ಸುರಿದಿದ್ದಾಗಿ ಅಜಯ್‌ ರಾವ್‌ ಹೇಳಿದ್ದರು.

ಸ್ಯಾಂಡಲ್‌ವುಡ್‌ ನಟ ಅಜಯ್ ರಾವ್ (Ajay Rao) ಮತ್ತು ಸ್ವಪ್ನಾ ರಾವ್ ದಂಪತಿ ವಿಚ್ಛೇದನದ ಬಗ್ಗೆ ನಿರ್ಧರಿಸಿ ಅರ್ಜಿ ಸಲ್ಲಿಸಿದ್ದಾರೆ ಎಂಬ ಸುದ್ದಿ ನಿನ್ನೆ ಹರಡಿತ್ತು. 11 ವರ್ಷಗಳ ದಾಂಪತ್ಯ ಜೀವನದ ನಂತರ ಬೇರೆಯಾಗಲು ನಿರ್ಧರಿಸಿದ್ದಾರೆ ಎಂದು ವರದಿಯಾಗಿತ್ತು. ಆದರೆ, ಇದೀಗ ಈ ದಂಪತಿ 'ಯೂ ಟರ್ನ್' ಹೊಡೆದಿದ್ದಾರೆ. ಸತ್ಯವಾಗಿ ಹೇಳಬೇಕು ಎಂದರೆ, ದಂಪತಿಗಳ ನಡುವೆ ಅದೇನು ಮನಸ್ತಾಪ ಆಗಿತ್ತೋ ಏನೋ, ಈಗ ಮತ್ತೆ ಈ ಇಬ್ಬರೂ ಒಂದಾಗಲು ಬಯಸಿದ್ದಾರೆ. ಹಾಗಂತ ಇಬ್ಬರೂ ಸೋಷಿಯಲ್ ಮೀಡಿಯಾ ಪೋಸ್ಟ್ ಮಾಡಿ ವನಂತಿ ಮಾಡಿಕೊಂಡಿದ್ದಾರೆ.

'ಇದು ನನ್ನ ಪರ್ಸನಲ್ ವಿಷ್ಯ, ನಾವು ಇದನ್ನ ಸಾಲ್ವ್ ಮಾಡಿಕೊಳ್ತೀವಿ.. ನಾನು ನನ್ನದೇ ಅದ ಡಿಗ್ನಿಫ್ಯ್ಡ್ ರೀತಿಯಲ್ಲಿ ಇದನ್ನ ಹ್ಯಾಂಡಲ್ ಮಾಡಿ ಸಾಲ್ವ್ ಮಾಡಿಕೊಳ್ತೀನಿ. ನಾನು ಈಗ ಈ ಬಗ್ಗೆ ರಿಯಾಕ್ಟ್ ಮಾಡಿ ನನ್ನ ಮಗಳ ಭವಿಷ್ಯಕ್ಕೆ ಇದು ತೊಂದರೆ ಆಗೋದು ಬೇಡ. ನಮ್ಮ ಪ್ರೈವಸಿಯನ್ನ ಗೌರವಿಸಿ' ಎಂದು ಅಜಯ್ ರಾವ್ ಹೇಳಿದ್ದಾರೆ. ಈ ಮೂಲಕ ಅವರು ಸುದ್ದಿಯನ್ನು ಅಲ್ಲಗಳೆಯದೇ, ದಯವಿಟ್ಟು ಇಲ್ಲಿಗೇ ನಿಲ್ಲಿಸಿಬಿಡಿ' ಎಂದು ನಟ ಅಜಯ್ ರಾವ್ ವನಂತಿ ಮಾಡಿಕೊಂಡಿದ್ದರು.

ಅಜಯ್ ರಾವ್ ಪತ್ನಿ ಸ್ವಪ್ನಾ ರಾವ್ ಅವರು 'ನಮಸ್ಕಾರ, ತಾಯಿಯಾಗಿ ನನ್ನ ಮೊದಲ ಜವಾಬ್ದಾರಿ ನನ್ನ ಮಗಳ ಸುರಕ್ಷತೆ, ಗೌರವ ಮತ್ತು ಅವಳ ಭವಿಷ್ಯಕ್ಕಾಗಿ ನಾನು ಪ್ರತಿದಿನ ಧೈರ್ಯವನ್ನು ಕೂಡಿಸಿ, ನನಗೆ ತೀವ್ರವಾಗಿ ಪರೀಕ್ಷಿಸುವ ಸವಾಲುಗಳನ್ನು ಎದುರಿಸುತ್ತಿದ್ದೇನೆ. ಪ್ರಿಯ ಸ್ನೇಹಿತರೆ ಮತ್ತು ಸಹೋದರರೆ, ಈ ಹಂತದಲ್ಲಿ ನಾನು ಮತ್ತು ನನ್ನ ಮಗಳು ನಮ್ಮ ಬದುಕನ್ನು ಪುನರ್‌ ನಿರ್ಮಿಸಿಕೊಳ್ಳಲು ಮತ್ತು ನಮ್ಮ ದಾಂಪತ್ಯ ಜೀವನವನ್ನು ಪುನಃ ನಿರ್ಮಿಸಿಕೊಳ್ಳಲು ನಿಮ್ಮ ಹಾರೈಕೆಗಳು ಮತ್ತು ಪ್ರಾರ್ಥನೆಗಳನ್ನು ನಿಮ್ಮಲಿ ಕೇಳಿಕೊಳ್ಳುತ್ತಿದೇನೆಮತ್ತು ನಾನು ಅತ್ಯಂತ ಗೌರವದಿಂದ ತಿಳಿಸಲು ಬಯಸುವುದೇನೆಂದರೆ, ಈ ವಿಷಯವು ನಮ್ಮ ವೈಯಕ್ತಿಕ, ಆಳವಾದ ಭಾವನಾತ್ಮಕ ಮತ್ತು ದಾಂಪತ್ಯ ಜೀವನಕ್ಕೆ ಮಾತ್ರ ಸಂಬಂಧಿಸಿದ್ದು ಹೊರತು ಬೇರೆ ಯಾವುದೇ ರೀತಿಯಲ್ಲಿ ಸಂಬಂಧಿಸಿಲ್ಲ ಎಂದು ತಿಳಿಸಲು ಬಯಸುತ್ತೇನೆ.' ಎಂದು ಇಂದು ಪೋಸ್ಟ್ ಮಾಡಿದ್ದಾರೆ.

ಅಚ್ಚರಿ ಎಂಬಂತೆ, ನಟ ಅಜಯ್ ರಾವ್ ಅವರು ಇತ್ತೀಚೆಗೆ ತೆರೆ ಕಂಡಿದ್ದ ತಮ್ಮ 'ಯುದ್ಧಕಾಂಡ' ಸಿನಿಮಾದ ವೇಳೆ ಜ್ಯೋತಿಷಿಯೊಬ್ಬರು ಹೇಳಿದ್ದ ಮಾತನ್ನು ಬಹಿರಂಗ ಪಡಿಸಿದ್ದರು. 'ಈ ಸಿನಿಮಾ ಡಿಸಾಸ್ಟರ್ ಕಣೋ.. ಕೆಟ್ಟ ಮಹೂರ್ತದಲ್ಲಿ ವಿವಾಹ ಆಗಿದ್ದೀಯಾ, ಆದರೆ ನಿನ್ನ ಮದುವೆ ಒಂದು ವರ್ಷ ಕೂಡ ಬರೋದಿಲ್ಲ, ಡಿವೋರ್ಸ್‌ ಆಗುತ್ತದೆ' ಎಂದು ಜ್ಯೋತಿಷಿಯೊಬ್ಬರು ಹಿಂದೆ ಹೇಳಿದ್ದರು ಎಂದು ಅಜಯ್‌ ರಾವ್‌ ಸಂದರ್ಶನದಲ್ಲಿ ತಿಳಿಸಿದ್ದರು. ಆದರೆ, ದಂಪತಿಗಳು ಈಗ ತೆಗೆದುಕೊಂಡ ನಿರ್ಧಾರ ನೋಡಿದರೆ ಆ ಜ್ಯೋತಿಷಿ ಹೇಳಿದ್ದ ಮಾತನ್ನು ಸುಳ್ಳು ಮಾಡಲು ಹೊರಟಿದ್ದಾರೆ ಎನ್ನಬಹುದು.

ಅಜಯ್ ರಾವ್ ಈ ಹಿಂದೆ ನಟಿಸಿದ್ದ ಯುದ್ಧಕಾಂಡ ಸಿನಿಮಾದಲ್ಲಿ ನಟರಾಗಿ ಮಾತ್ರವಲ್ಲ, ನಿರ್ಮಾಣವನ್ನೂ ಮಾಡಿದ್ದರು. ಆದರೆ ಅಜಯ್‌ ರಾವ್‌ ಅದರಲ್ಲಿ ಯಶಸ್ಸು ಕಂಡುಕೊಂಡಿರಲಿಲ್ಲ. ಆ ವೇಳೆ ನೀಡಿದ ಸಂದರ್ಶನದ ವೇಳೆ ತಮ್ಮ ಮದುವೆ-ಸಂಸಾರದ ಬಗ್ಗೆಯೂ ಮಾತನಾಡಿದ್ದರು. ತಮ್ಮ ಯಶಸ್ಸು ಹಾಗೂ ವೈಫಲ್ಯದ ಲೈಫ್ ಜರ್ನಿ ಬಗ್ಗೆ ಮಾತನಾಡಿದ್ದರು. ಮುಹೂರ್ತದ ನಂಬಿಕೆಗಳ ಬಗ್ಗೆ, ಆ ಬಗ್ಗೆ ತಮ್ಮ ದೃಷ್ಟಿಕೋನದ ಬಗ್ಗೆಯೂ ತಿಳಿಸಿದ್ದರು.

'ನಾನು ಯಾವ ಮುಹೂರ್ತವನ್ನೂ ನೋಡೋದಿಲ್ಲ. ನನಗೆ ಜ್ಯೋತಿಷ್ಯ ಬರುತ್ತದೆ. ಕೆಲಸ ಮಾಡಿದ ಬಳಿಕ ನೋಡಿದಾಗ ಅದು ತಪ್ಪಾದ ಮುಹೂರ್ತ ಅಂತ ಗೊತ್ತಾಯ್ತು. 'ಕೃಷ್ಣಾರ್ಪಣಮಸ್ತು' ಅಂದೆ ಅಷ್ಟೇ. ಅವನೇ ಮಾಡಿಸ್ತಾ ಇದಾನೆ’ ಎಂದು ಅಜಯ್‌ ರಾವ್‌ ಹೇಳಿದ್ದರು. ಕೆಲ ವರ್ಷಗಳ ಕಾಲ ಪ್ರೀತಿಸಿದ್ದ ಜೋಡಿ 2014ರಲ್ಲಿ ಅದ್ದೂರಿಯಾಗಿ ವಿವಾಹವಾಗಿದ್ದರು. 11 ವರ್ಷಗಳ ಕಾಲ ನಡೆಸಿದ್ದ ಸಂಸಾರವೀಗ ಬೇರೆ ಬೇರೆ ಆಗುತ್ತಿದೆ ಎನ್ನಲಾಗಿತ್ತು. ಆದರೆ, ಈಗ ಮತ್ತೆ ಪ್ಯಾಚಪ್ ಆಗುವ ಸುದ್ದಿ ಬಂದಿದೆ.

ಕೆಲ ತಿಂಗಳ ಹಿಂದ ಬಿಡುಗಡೆಯಾಗಿದ್ದ ಯುದ್ಧಕಾಂಡ ಸಿನಿಮಾದ ಮೇಲೆ ಅಜಯ್‌ ರಾವ್‌ ಭಾರೀ ನಿರೀಕ್ಷೆ ಇರಿಸಿಕೊಂಡಿದ್ದರು. ಆದರೆ, ಸಿನಿಮಾ ನಿರೀಕ್ಷೆಗೆ ತಕ್ಕಂತೆ ಗಲ್ಲಾಪೆಟ್ಟಿಗೆಯಲ್ಲಿ ಸದ್ಧು ಮಾಡಿರಲಿಲ್ಲ. ಈ ಸಿನಿಮಾಕ್ಕೆ ಸಾಕಷ್ಟು ಹಣ ಸುರಿದಿದ್ದಾಗಿ ಅಜಯ್‌ ರಾವ್‌ ಹೇಳಿದ್ದರು. ಅಲ್ಲದೆ, ತಮ್ಮ ಇಷ್ಟದ ಬಿಎಂಡಬ್ಲ್ಯು ಕಾರು ಕೂಡ ಮಾರಾಟ ಮಾಡಿದ್ದರು. ಆ ಸುದ್ದಿ ಭಾರೀ ವೈರಲ್‌ ಆಗಿತ್ತು.

'ಎಕ್ಸ್‌ಕ್ಯೂಸ್ ಮಿ' ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ನಟ ಅಜಯ್ ರಾವ್ ಅವರು ಬಳಿಕ ಬಹಳಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ. ನಟಿ ಪೂಜಾ ಗಾಧಿಯ ಜೊತೆ ‘ತಾಜ್‌ ಮಹಲ್’ ಚಿತ್ರದಲ್ಲಿ ಸಹ ಅಜಯ್ ರಾವ್ ಅವರು ನಾಯಕನಟರಾಗಿದ್ದರು. ಈ ಚಿತ್ರ ಸೂಪರ್ ಹಿಟ್ ಆಗಿದೆ. ಕೃಷ್ಣ ಸೇರಿದಂತೆ ಅಜಯ್ ರಾವ್ ಅಚರ ನಟಿಸಿದ ಕನ್ನಡ ಚಿತ್ರಗಳ ಲಿಸ್ಟ್ ಸಾಕಷ್ಟು ದೊಡ್ಡದಿದೆ. ಇತ್ತೀಚೆಗಷ್ಟೇ ಅಜಯ್ ರಾವ್ ನಿರ್ಮಾಣ ಹಾಗೂ ನಟನೆಯ ‘ಯುದ್ಧಕಾಂಡ’ ಸಿನಿಮಾ ಬಿಡುಗಡೆ ಆಗಿತ್ತು.

ನಟ-ನಿರ್ಮಾಪಕ ಅಜಯ್ ರಾವ್ ಅವರು ಹೆಚ್ಚಾಗಿ 'ಕೃಷ್ಣ' ಹೆಸರಿನ ಸಿನಿಮಾಗಳಲ್ಲಿ ನಟಿಸಿದ್ದರಿಂದ ಅವರಿಗೆ ‘ಕೃಷ್ಣ ಅಜಯ್ ರಾವ್’ ಎಂಬ ಮರುನಾಮಕರಣವೂ ಸಿಕ್ಕಿದೆ. ಅದೆಷ್ಟೋ ಜನರಿಗೆ ಕೃಷ್ಣ ಆಜಯ್ ರಾವ್ ಎಂದರೇನೇ ಗೊತ್ತಾಗೋದು ಎಂಬಷ್ಟರ ಮಟ್ಟಿಗೆ ನಟ ಅಜಯ್ ರಾವ್ ಅವರು ಕೃಷ್ಣನ ಪಾತ್ರದ ಮೂಲಕ ಪ್ರಸಿದ್ಧರಾಗಿದ್ದಾರೆ. ಇದೀಗ, ದಾಂಪತ್ಯದಲ್ಲಿ ಮೂಡಿದ ಬಿರುಕು ಮೂಡಿದೆ ಎಂಬಸುದ್ದಿ ಹಬ್ಬಿದೆ. ಅದಕ್ಕೆ ಸ್ಪಷ್ಟೀಕರಣವನ್ನು ಅವರೇ ಕೊಡಬೇಕಿದೆ.