ನವರಾತ್ರಿ ಹೊತ್ತಲ್ಲಿ ಕಳ್ಳತನವಾಯ್ತು ದೇವಿ ಕಿರೀಟ: ಜೆಶೋರೇಶ್ವರಿ ದೇವಿಗೆ ಮೋದಿ ಕೊಟ್ಟ ಕಾಣಿಕೆ ಏನಾಯ್ತು?

ನವರಾತ್ರಿ ಹೊತ್ತಲ್ಲಿ ಕಳ್ಳತನವಾಯ್ತು ದೇವಿ ಕಿರೀಟ: ಜೆಶೋರೇಶ್ವರಿ ದೇವಿಗೆ ಮೋದಿ ಕೊಟ್ಟ ಕಾಣಿಕೆ ಏನಾಯ್ತು?

Published : Oct 12, 2024, 11:04 AM IST

ಬಾಂಗ್ಲಾದೇಶದ ಸರ್ಕಾರ ಹಿಂದೂಗಳಿಗೆ ಸಾಧ್ಯವಾದಷ್ಟು ರಕ್ಷಣೆ ಕೊಡ್ತೀವಿ, ನೀವ್ಯಾರು ಹೆದರಿಬೇಡಿ ಅಂತ ಅಭಯ ಕೊಡ್ತಿದ್ದಾರಲ್ಲಾ, ಅದರ ಹಿಂದೆ ಇರೋ ಉದ್ದೇಶ ಏನು ಗೊತ್ತಾ? ಅಲ್ಪಸಂಖ್ಯಾತರಿಗೆ ಬಲ ತುಂಬ ಬೇಕು ಅನ್ನೋದಲ್ಲ.. ಹಿಂದೂಗಳನ್ನ ರಕ್ಷಿಸಬೇಕು ಅನ್ನೋದಂತೂ ಅಲ್ವೇ ಅಲ್ಲ.. ಹಾಗಾದ್ರೆ, ಮತ್ತೇನು? ಮೋದಿ ಸರ್ಕಾರ ಏನಾದ್ರೂ ಮಾಡಿಬಿಡತ್ತೆ ಅನ್ನೋ ಭಯಾನಾ?. 

ಬೆಂಗಳೂರು(ಅ.12):  ಮೂರು ವರ್ಷಗಳ ಹಿಂದೆ, ಪ್ರಧಾನಿ ನರೇಂದ್ರ ಮೋದಿ ಅವರು ಬಾಂಗ್ಲಾದೇಶಕ್ಕೆ ಭೇಟಿ ಕೊಟ್ಟಿದ್ರು.. ಹಾಗೆ ಭೇಟಿ ಕೊಟ್ಟ ಸಂದರ್ಭದಲ್ಲಿ, ಅಲ್ಲಿನ ದೇವಿಗೊಂದು ಕಾಣಿಕೆ ಕೊಟ್ಟಿದ್ರು.. ಆದ್ರೆ, ಈಗ ಅದೇ ಕಾಣಿಕೆಯೇ ಎರಡೂ ದೇಶಗಳ ಮಧ್ಯೆ ಆತಂಕ ಹೆಚ್ಚಿಸಿದೆ. ಒಂದ್ ಕಡೆ, ಬಾಂಗ್ಲಾದೇಶ ತನ್ನೊಳಗಿನ ಕಿಚ್ಚಿಗೆ ತಾನೇ ಬಲಿಯಾಗ್ತಾ ಇದೆ. ಇನ್ನೊಂದು ಕಡೆ, ಅಲ್ಲಿರೋ ಅಲ್ಪಸಂಖ್ಯಾತರನ್ನ, ಅದರಲ್ಲೂ ಮುಖ್ಯವಾಗಿ, ಹಿಂದೂಗಳನ್ನ ಕೆಣಕಿ ಇನ್ನೂ ದೊಡ್ಡ ಆಪತ್ತಿಗೆ ಆಹ್ವಾನ ಕೊಡ್ತಾ ಇದೆ.. ಅಸಲಿಗೆ, ಮೋದಿ ಕೊಟ್ಟ ಕಾಣಿಕೆ ಯಾವ್ದು? ಅದು ಏನಾಯ್ತು? ಅಲ್ಲಿನ ಹಿಂದೂಗಳ ಸ್ಥಿತಿ ಏನಾಗಿದೆ? ಅದೆಲ್ಲದರ ಪೂರ್ತಿ ಡೀಟೇಲ್ಸ್, ಇಲ್ಲಿದೆ ನೋಡಿ..

ಅಂದ ಹಾಗೆ, ಬಾಂಗ್ಲಾದೇಶದ ಸರ್ಕಾರ ಹಿಂದೂಗಳಿಗೆ ಸಾಧ್ಯವಾದಷ್ಟು ರಕ್ಷಣೆ ಕೊಡ್ತೀವಿ, ನೀವ್ಯಾರು ಹೆದರಿಬೇಡಿ ಅಂತ ಅಭಯ ಕೊಡ್ತಿದ್ದಾರಲ್ಲಾ, ಅದರ ಹಿಂದೆ ಇರೋ ಉದ್ದೇಶ ಏನು ಗೊತ್ತಾ? ಅಲ್ಪಸಂಖ್ಯಾತರಿಗೆ ಬಲ ತುಂಬ ಬೇಕು ಅನ್ನೋದಲ್ಲ.. ಹಿಂದೂಗಳನ್ನ ರಕ್ಷಿಸಬೇಕು ಅನ್ನೋದಂತೂ ಅಲ್ವೇ ಅಲ್ಲ.. ಹಾಗಾದ್ರೆ, ಮತ್ತೇನು? ಮೋದಿ ಸರ್ಕಾರ ಏನಾದ್ರೂ ಮಾಡಿಬಿಡತ್ತೆ ಅನ್ನೋ ಭಯಾನಾ?. 

ತಾಯಿ ವಯಸ್ಸಿನ ಮಹಿಳೆ ಕೊಂದು ಶವದೊಂದಿಗೆ ಸಂಭೋಗ: ರಾಕ್ಷಸನಿಗೆ ತಕ್ಕ ಶಿಕ್ಷೆ ಆಗಲಿ ಎಂದ ಜನ!

ಜಗತ್ತಲ್ಲಿರೋ ಕೋಟಿಗಟ್ಟಲೆ ಹಿಂದೂಗಳು, ದಸರಾ ಸಂಭ್ರಮದಲ್ಲಿದ್ದಾರೆ. ಆದ್ರೆ ಬಾಂಗ್ಲಾದಲ್ಲಿರೋ ಹಿಂದೂಗಳು ಮಾತ್ರ, ಪ್ರಾಣಭೀತಿಯ ನಡುವಲ್ಲೇ, ಅದ್ದೂರಿಯಾಗಿ ದುರ್ಗೆಯ ಆರಾಧನೆ ಮಾಡ್ತಿದ್ದಾರೆ. ಅಷ್ಟಕ್ಕೂ, ಬಾಂಗ್ಲಾದಲ್ಲಿ ಹಿಂದೂಗಳ ಸ್ಥಿತಿ ಏನಾಗಿದೆ? ಸರ್ಕಾರವೇನೋ ನಾವು ಹಿಂದೂಗಳ ರಕ್ಷಣೆಗೆ ಸದಾಬದ್ಧರಾಗಿದ್ದೀವಿ ಅಂದ ಮೇಲೂ, ಆಗುಂತಕರು ಆತಂಕದ ಕಾರ್ಮೋಡ ಸೃಷ್ಟಿಸಿದ್ದು ಹೇಗೆ?

ಹಾಗಂತ ಇದು ಇಷ್ಟಕ್ಕೇ ನಿಂತು ಹೋಗುತ್ತಾ? ಇನ್ಮೇಲೆ ಹಿಂದೂಗಳು ನೆಮ್ಮದಿಯಾಗಿ ಬದುಕೋದು ಸಾಧ್ಯವಾಗುತ್ತಾ? ಅಸಲಿಗೆ, ಹಿಂದೂಗಳ ರಕ್ಷಣೆಗೆ ಭಾರತ ಏನು ಮಾಡ್ತಾ ಇದೆ?. ಬಾಂಗ್ಲಾದೇಶಕ್ಕೆ ಎಲ್ಲಕ್ಕಿಂತ ಚೆನ್ನಾಗಿ ಒಂದು ವಿಚಾರ ಅರ್ಥವಾಗಿದೆ. ಭಾರತವನ್ನ ಎದುರು ಹಾಕ್ಕೊಂದು ನೆಮ್ಮದಿಯಾಗಿ ಬದುಕೋದಕ್ಕಾಗಲ್ಲ. ಅದಕ್ಕೋಸ್ಕರ ಏನೇನೆಲ್ಲಾ ಮಾಡ್ತಾ ಇದೆ ಗೊತ್ತಾ, ಆ ನೆರೆರಾಷ್ಟ್ರ..?

ಇದೆಲ್ಲದರ ನಡುವೆ, ಈಗ ಕಳ್ಳತನವಾಗಿರೋ ದೇವಿಯ ಕಿರೀಟ, ಉಭಯ ದೇಶಗಳ ನಡುವಿನ ಬಾಂಧವ್ಯದ ಭವಿಷ್ಯ ನಿರ್ಧರಿಸಲಿದೆ.ಅದು ಹೇಗೆ ಅನ್ನೋದಕ್ಕೆ ಉತ್ತರ, ಕಾಲವೇ ಕೊಡ್ಬೇಕು. 

46:25ಯುದ್ಧ ನಿಲ್ಲಿಸೋ ಒತ್ತಡದಲ್ಲಿ ಅಮೆರಿಕ; ಇರಾನ್ ಯುದ್ಧದಿಂದ ದೊಡ್ಡಣ್ಣನಿಗೆ 35 ಬಿಲಿಯನ್ ಹೊರೆ
20:35Suvarna Focus: ಅಮೆರಿಕದಲ್ಲಿ 'ನೋ ಕಿಂಗ್ಸ್' ಆರ್ಭಟ, ಟ್ರಂಪ್‌ ಯುದ್ಧದಾಹದ ವಿರುದ್ಧ 90 ಲಕ್ಷ ಜನರ ಮಹಾ ಸಮರ
45:47ಭೂ ದಾಳಿಯ ಡ್ರಾಮಾ ಮಾಡ್ತಿದಾರಾ ಅಮೆರಿಕಾ ಅಧ್ಯಕ್ಷ? ಇರಾನ್‌ ಯುದ್ಧದಲ್ಲಿ ಉತ್ತರಕುಮಾರನಾದ ಅಮೆರಿಕ ಸೇನೆ
25:00ಅಮೆರಿಕ ಬ್ರಹ್ಮಾಸ್ತ್ರಕ್ಕೆ ನಲುಗಿದ ಇರಾನ್! ಭಸ್ಮವಾಯ್ತಾ ಇಸ್ಫಹಾನ್ ಪಾತಾಳ ಲೋಕದ ಮಿಸೈಲ್ ನಗರ?
45:45ಇರಾನ್ ವಿರುದ್ಧ ಯುದ್ಧದಲ್ಲಿ ಟ್ರಂಪ್​ಗೆ ಕೈ ಕೊಟ್ಟ ಆಪ್ತ ದೇಶಗಳು: ಅಮೆರಿಕಾಗೆ ಬಿಗ್ ಶಾಕ್
24:58ದೊಡ್ಡಣ್ಣನ ಸೂಪರ್ ಪವರ್ ಸಂಚು: ಡಾಲರ್ ಅಸ್ತ್ರ, 70 ದೇಶಗಳು.. ಅಮೆರಿಕದ 750 ಸೇನಾನೆಲೆಗಳು!
03:18ಜಗತ್ತನ್ನೇ ಕಂಗೆಡಿಸಿದ ಇಸ್ರೇಲ್-ಇರಾನ್ ಯುದ್ಧಕ್ಕೆ ಒಂದು ತಿಂಗಳು: ಮುಂದುವರಿದ ಭೀಕರ ಸಂಘರ್ಷ
25:43ಯುದ್ಧದ ಚಿತೆ ಮೇಲೆ ಹಣದ ಸಾಮ್ರಾಜ್ಯ ಕಟ್ಟಿದ ಸಾವಿರಾರು ಕೋಟಿಯ ಮೂವರು ವ್ಯಕ್ತಿಗಳ ಕಥೆ
20:34ಭಸ್ಮಾಸುರನ ಗರ್ವಭಂಗ! ಇರಾನ್ ಎದುರು ಹೆಜ್ಜೆ ಹಿಂದಿಟ್ಟಿದ್ದೇಕೆ ಟ್ರಂಪ್? ನಿಗೂಢಾಸ್ತ್ರಕ್ಕೆ ಹೆದರಿದನಾ ದೊಡ್ಡಣ್ಣ?
20:31Israel's role in Iran conflict ಹಾರ್ಮುಜ್ ಹಸ್ತಕ್ಷೇಪ; ಇರಾನ್ ಕೊರಳಿಗೆ 22 ರಾಷ್ಟ್ರಗಳ ಉರುಳು!
Read more