ನವರಾತ್ರಿ ಹೊತ್ತಲ್ಲಿ ಕಳ್ಳತನವಾಯ್ತು ದೇವಿ ಕಿರೀಟ: ಜೆಶೋರೇಶ್ವರಿ ದೇವಿಗೆ ಮೋದಿ ಕೊಟ್ಟ ಕಾಣಿಕೆ ಏನಾಯ್ತು?

ನವರಾತ್ರಿ ಹೊತ್ತಲ್ಲಿ ಕಳ್ಳತನವಾಯ್ತು ದೇವಿ ಕಿರೀಟ: ಜೆಶೋರೇಶ್ವರಿ ದೇವಿಗೆ ಮೋದಿ ಕೊಟ್ಟ ಕಾಣಿಕೆ ಏನಾಯ್ತು?

Published : Oct 12, 2024, 11:04 AM IST

ಬಾಂಗ್ಲಾದೇಶದ ಸರ್ಕಾರ ಹಿಂದೂಗಳಿಗೆ ಸಾಧ್ಯವಾದಷ್ಟು ರಕ್ಷಣೆ ಕೊಡ್ತೀವಿ, ನೀವ್ಯಾರು ಹೆದರಿಬೇಡಿ ಅಂತ ಅಭಯ ಕೊಡ್ತಿದ್ದಾರಲ್ಲಾ, ಅದರ ಹಿಂದೆ ಇರೋ ಉದ್ದೇಶ ಏನು ಗೊತ್ತಾ? ಅಲ್ಪಸಂಖ್ಯಾತರಿಗೆ ಬಲ ತುಂಬ ಬೇಕು ಅನ್ನೋದಲ್ಲ.. ಹಿಂದೂಗಳನ್ನ ರಕ್ಷಿಸಬೇಕು ಅನ್ನೋದಂತೂ ಅಲ್ವೇ ಅಲ್ಲ.. ಹಾಗಾದ್ರೆ, ಮತ್ತೇನು? ಮೋದಿ ಸರ್ಕಾರ ಏನಾದ್ರೂ ಮಾಡಿಬಿಡತ್ತೆ ಅನ್ನೋ ಭಯಾನಾ?. 

ಬೆಂಗಳೂರು(ಅ.12):  ಮೂರು ವರ್ಷಗಳ ಹಿಂದೆ, ಪ್ರಧಾನಿ ನರೇಂದ್ರ ಮೋದಿ ಅವರು ಬಾಂಗ್ಲಾದೇಶಕ್ಕೆ ಭೇಟಿ ಕೊಟ್ಟಿದ್ರು.. ಹಾಗೆ ಭೇಟಿ ಕೊಟ್ಟ ಸಂದರ್ಭದಲ್ಲಿ, ಅಲ್ಲಿನ ದೇವಿಗೊಂದು ಕಾಣಿಕೆ ಕೊಟ್ಟಿದ್ರು.. ಆದ್ರೆ, ಈಗ ಅದೇ ಕಾಣಿಕೆಯೇ ಎರಡೂ ದೇಶಗಳ ಮಧ್ಯೆ ಆತಂಕ ಹೆಚ್ಚಿಸಿದೆ. ಒಂದ್ ಕಡೆ, ಬಾಂಗ್ಲಾದೇಶ ತನ್ನೊಳಗಿನ ಕಿಚ್ಚಿಗೆ ತಾನೇ ಬಲಿಯಾಗ್ತಾ ಇದೆ. ಇನ್ನೊಂದು ಕಡೆ, ಅಲ್ಲಿರೋ ಅಲ್ಪಸಂಖ್ಯಾತರನ್ನ, ಅದರಲ್ಲೂ ಮುಖ್ಯವಾಗಿ, ಹಿಂದೂಗಳನ್ನ ಕೆಣಕಿ ಇನ್ನೂ ದೊಡ್ಡ ಆಪತ್ತಿಗೆ ಆಹ್ವಾನ ಕೊಡ್ತಾ ಇದೆ.. ಅಸಲಿಗೆ, ಮೋದಿ ಕೊಟ್ಟ ಕಾಣಿಕೆ ಯಾವ್ದು? ಅದು ಏನಾಯ್ತು? ಅಲ್ಲಿನ ಹಿಂದೂಗಳ ಸ್ಥಿತಿ ಏನಾಗಿದೆ? ಅದೆಲ್ಲದರ ಪೂರ್ತಿ ಡೀಟೇಲ್ಸ್, ಇಲ್ಲಿದೆ ನೋಡಿ..

ಅಂದ ಹಾಗೆ, ಬಾಂಗ್ಲಾದೇಶದ ಸರ್ಕಾರ ಹಿಂದೂಗಳಿಗೆ ಸಾಧ್ಯವಾದಷ್ಟು ರಕ್ಷಣೆ ಕೊಡ್ತೀವಿ, ನೀವ್ಯಾರು ಹೆದರಿಬೇಡಿ ಅಂತ ಅಭಯ ಕೊಡ್ತಿದ್ದಾರಲ್ಲಾ, ಅದರ ಹಿಂದೆ ಇರೋ ಉದ್ದೇಶ ಏನು ಗೊತ್ತಾ? ಅಲ್ಪಸಂಖ್ಯಾತರಿಗೆ ಬಲ ತುಂಬ ಬೇಕು ಅನ್ನೋದಲ್ಲ.. ಹಿಂದೂಗಳನ್ನ ರಕ್ಷಿಸಬೇಕು ಅನ್ನೋದಂತೂ ಅಲ್ವೇ ಅಲ್ಲ.. ಹಾಗಾದ್ರೆ, ಮತ್ತೇನು? ಮೋದಿ ಸರ್ಕಾರ ಏನಾದ್ರೂ ಮಾಡಿಬಿಡತ್ತೆ ಅನ್ನೋ ಭಯಾನಾ?. 

ತಾಯಿ ವಯಸ್ಸಿನ ಮಹಿಳೆ ಕೊಂದು ಶವದೊಂದಿಗೆ ಸಂಭೋಗ: ರಾಕ್ಷಸನಿಗೆ ತಕ್ಕ ಶಿಕ್ಷೆ ಆಗಲಿ ಎಂದ ಜನ!

ಜಗತ್ತಲ್ಲಿರೋ ಕೋಟಿಗಟ್ಟಲೆ ಹಿಂದೂಗಳು, ದಸರಾ ಸಂಭ್ರಮದಲ್ಲಿದ್ದಾರೆ. ಆದ್ರೆ ಬಾಂಗ್ಲಾದಲ್ಲಿರೋ ಹಿಂದೂಗಳು ಮಾತ್ರ, ಪ್ರಾಣಭೀತಿಯ ನಡುವಲ್ಲೇ, ಅದ್ದೂರಿಯಾಗಿ ದುರ್ಗೆಯ ಆರಾಧನೆ ಮಾಡ್ತಿದ್ದಾರೆ. ಅಷ್ಟಕ್ಕೂ, ಬಾಂಗ್ಲಾದಲ್ಲಿ ಹಿಂದೂಗಳ ಸ್ಥಿತಿ ಏನಾಗಿದೆ? ಸರ್ಕಾರವೇನೋ ನಾವು ಹಿಂದೂಗಳ ರಕ್ಷಣೆಗೆ ಸದಾಬದ್ಧರಾಗಿದ್ದೀವಿ ಅಂದ ಮೇಲೂ, ಆಗುಂತಕರು ಆತಂಕದ ಕಾರ್ಮೋಡ ಸೃಷ್ಟಿಸಿದ್ದು ಹೇಗೆ?

ಹಾಗಂತ ಇದು ಇಷ್ಟಕ್ಕೇ ನಿಂತು ಹೋಗುತ್ತಾ? ಇನ್ಮೇಲೆ ಹಿಂದೂಗಳು ನೆಮ್ಮದಿಯಾಗಿ ಬದುಕೋದು ಸಾಧ್ಯವಾಗುತ್ತಾ? ಅಸಲಿಗೆ, ಹಿಂದೂಗಳ ರಕ್ಷಣೆಗೆ ಭಾರತ ಏನು ಮಾಡ್ತಾ ಇದೆ?. ಬಾಂಗ್ಲಾದೇಶಕ್ಕೆ ಎಲ್ಲಕ್ಕಿಂತ ಚೆನ್ನಾಗಿ ಒಂದು ವಿಚಾರ ಅರ್ಥವಾಗಿದೆ. ಭಾರತವನ್ನ ಎದುರು ಹಾಕ್ಕೊಂದು ನೆಮ್ಮದಿಯಾಗಿ ಬದುಕೋದಕ್ಕಾಗಲ್ಲ. ಅದಕ್ಕೋಸ್ಕರ ಏನೇನೆಲ್ಲಾ ಮಾಡ್ತಾ ಇದೆ ಗೊತ್ತಾ, ಆ ನೆರೆರಾಷ್ಟ್ರ..?

ಇದೆಲ್ಲದರ ನಡುವೆ, ಈಗ ಕಳ್ಳತನವಾಗಿರೋ ದೇವಿಯ ಕಿರೀಟ, ಉಭಯ ದೇಶಗಳ ನಡುವಿನ ಬಾಂಧವ್ಯದ ಭವಿಷ್ಯ ನಿರ್ಧರಿಸಲಿದೆ.ಅದು ಹೇಗೆ ಅನ್ನೋದಕ್ಕೆ ಉತ್ತರ, ಕಾಲವೇ ಕೊಡ್ಬೇಕು. 

20:18ಮಾಯವಾಗಿದ್ದ ಮೊಜ್ತಬಾ ಖಮೇನಿ ದಿಢೀರ್ ಕಾರಿನಲ್ಲಿ ಪ್ರತ್ಯಕ್ಷವಾದ್ರಾ? ಯುದ್ಧದೊಳಗೆ ಬಿಗ್ ಟ್ವಿಸ್ಟ್
21:55ಚೆಲ್ಲಿದ ರಕ್ತ.. ಇರಾನ್ ಕೊನೆ ಆಟ? ಟ್ರಂಪ್ ಆಪ್ತಮಿತ್ರನ ಸಾವು.. ಶುರುವಾಯ್ತಾ ಇರಾನ್ ಕೊನೆ ಆಟ..?
42:55ಮುರಿದು ಬಿದ್ದ ಶಾಂತಿ ಒಪ್ಪಂದ, ಖಮೇನಿ ಅಂತ್ಯಕ್ರಿಯೆ ಮೊದಲೇ ಅಮೆರಿಕ ಇರಾನ್ ಯುದ್ಧ ಶುರು
23:38ಅಯತೊಲ್ಲಾ ಖಮೇನಿ ದೇಹಕ್ಕೆ 4 ತಿಂಗಳ ಸಂರಕ್ಷಣೆ; ಏನಿದು ಜೀವಂತ ಶವ ಎಂಬಾಮಿಂಗ್?​​
23:56ಹಾರ್ಮುಜ್ ಬಿಕ್ಕಟ್ಟಿನ ನಂತರ ಭಾರತದ ಭವಿಷ್ಯವೇನು? ಬಂಗಾರ ₹50,000 ಕುಸಿತ..! ಅಗ್ಗವಾಗುತ್ತಾ ಪೆಟ್ರೋಲ್ ದರ? ಮೋದಿ ಹೊಸ ಲೆಕ್ಕಾಚಾರ!
26:13Natural Disasters: ಭೂಕಂಪ.. ಜಲ ಪ್ರಳಯ.. ಸರ್ವನಾಶದ ಹೊಸ್ತಿಲಲ್ಲಿ ಭೂಮಂಡಲ! ವಿನಾಶದ ಮುನ್ಸೂಚನೆನಾ?
19:46108 ದಿನಗಳ ಅಮೆರಿಕ ಇರಾನ್ ಯುದ್ಧ ಅಂತ್ಯ, ತೈಲ ಬೆಲೆ , ಪೆಟ್ರೋಲ್, ಗ್ಯಾಸ್ ಬೆಲೆ ಕಡಿಮೆ ಆಗುತ್ತಾ?
24:36ಮೂರು ತಿಂಗಳ ಬಳಿಕ ಅಲಿ ಖಮೇನಿ ಅಂತ್ಯಕ್ರಿಯೆಗೆ ಡೇಟ್ ಫಿಕ್ಸ್, ವಿಳಂಬದ ಹಿಂದಿದೆ ಭಯಾನಕ ರಹಸ್ಯ
24:26ಆಫ್ರಿಕಾದ ಸಾಮಾನ್ಯ ಹುಡುಗ ಈಗ ವಿಶ್ವದ ನಂ.1 ಕುಬೇರ..! 95,00,000 ಕೋಟಿ ಇಟ್ಟುಕೊಂಡು ಮಸ್ಕ್ ಏನ್ ಮಾಡ್ಲಿಕ್ಕೆ ಹೊರಟಿದ್ದಾರೆ ಗೊತ್ತಾ..?
20:46ಸೂಪರ್ ಪವರ್ ಅಮೆರಿಕದಲ್ಲಿ ಭದ್ರತೆ ಇಷ್ಟೊಂದು ವೀಕಾ? ಟ್ರಂಪ್ ಮೇಲಿನ ದಾಳಿ ಸೀಕ್ರೆಟ್
Read more