ಚಿನ್ನದ ಹುಡುಗ ನೀರಜ್‌ಗೆ ತರಬೇತಿ ಕೊಟ್ಟಿದ್ದು ಉತ್ತರ ಕನ್ನಡದ ಗುರು ಕಾಶಿನಾಥ್

Aug 7, 2021, 9:10 PM IST

ಉತ್ತರಕನ್ನಡ(ಆ.  07)  ಒಲಿಂಪಿಕ್ಸ್ ಬಂಗಾರದ ಹುಡುಗ  ನೀರಜ್ ಚೋಪ್ರಾ ಅವರಿಗೆತರಬೇತಿ ಕೊಟ್ಟಿದ್ದು ಉತ್ತರಕನ್ನಡ ಜಿಲ್ಲೆಯ ಶಿರಸಿಯ ಗುರು ಕಾಶಿನಾಥ್.  2015ರಿಂದ 2017ರವರೆಗೆ ನೀರಜ್ ಚೋಪ್ರಾಗೆ ಕಾಶಿನಾಥ್ ತರಬೇತಿ ನೀಡಿದ್ದರು.

ಶತಮಾನದ ಚಿನ್ನ ಗೆದ್ದ ನೀರಜ್ ಚೋಪ್ರಾ

ಜಾವೆಲಿನ್ ಥ್ರೋನಲ್ಲಿ ಭಾರತದ ನೀರಜ್‌ಗೆ ಬಂಗಾರದ ಸಾಧನೆ ಮಾಡಿದ್ದಾರೆ.ಪ್ರಸ್ತುತ ಪುಣೆಯ ಸೇನಾ ಕ್ರೀಡಾ ಇನ್‌ಸ್ಟಿಟ್ಯೂಟ್‌ನಲ್ಲಿ ತರಬೇತುದಾರರಾಗಿರುವ ಕಾಶಿನಾಥ ಮೂಲತ ಉತ್ತರಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಬೆಂಗಳೆ ಗ್ರಾಮದವರು. ನೀರಜ್ ಚಿನ್ನ ಗೆದ್ದಿರುವ ಸಂತಸವನ್ನು  ಕಾಶಿನಾಥ್ ಹಂಚಿಕೊಂಡಿದ್ದಾರೆ.