ಭೀಮಾತೀರದಲ್ಲಿ ರಿಯಲ್ ಸಿಂಗಂ ಅಲೋಕ್ ಕುಮಾರ್!‌

ಭೀಮಾತೀರದಲ್ಲಿ ರಿಯಲ್ ಸಿಂಗಂ ಅಲೋಕ್ ಕುಮಾರ್!‌

Published : Jul 21, 2022, 06:46 PM ISTUpdated : Jul 21, 2022, 06:48 PM IST

ಕೊನೆಗೂ ಭೀಮಾತೀರದ ಪಾತಕ ಕೃತ್ಯಗಳಿಗೆ ಕೊನೆಗಾಣಿಸಲು ಸರ್ಕಾರ ತೀರ್ಮಾನಿಸಿದಂತಿದೆ.  ಎಡಿಜಿಪಿಯಾದ ಮೇಲೆ ಮೊದಲ ಬಾರಿಗೆ ಭೀಮಾತೀರಕ್ಕೆ ಭೇಟಿ ನೀಡಿದ ರಿಯಲ್‌ ಸಿಂಗಂ ಅಲೋಕ್‌ ಕುಮಾರ್‌, ಮಿಂಚಿನ ಸಂಚಾರ ಮೂಡಿಸಿದ್ದಾರೆ.
 

ವಿಜಯಪುರ (ಜುಲೈ 21):  ಅವೆರಡು ಭೀಮಾತೀರದ ನಟೋರಿಯಸ್‌ ಗ್ಯಾಂಗ್‌ಗಳು. ಒಂದು ಕಾಲದಲ್ಲಿ ಭೀಮಾತೀರದಲ್ಲಿ ರಕ್ತವನ್ನ ನೀರಂತೆ ಹರಿಸಿದ್ದ ಕುಟುಂಬಗಳು ಅವು. ಆ ಕುಟುಂಬಗಳ ನಡುವಿನ ದಶಕಗಳ ದ್ವೇಷಕ್ಕೆ ಬಿದ್ದ ಹೆಣಗಳಿಗೆ ಈ ವರೆಗು ಲೆಕ್ಕಾ ಸಿಕ್ಕಿಲ್ಲ. ಈ ಕುಟುಂಬಗಳ ಕ್ರೈಂ ಇತಿಹಾಸವನ್ನ ಕೆದಕಿದ್ರೆ ಸಿಗೋದು ಕೆಂಡದಂತ ದ್ವೇಷ, ದ್ವೇಷಕ್ಕಾಗಿ ಭೀಮೆಯನ್ನ ಕಂಪಗಾಗಿಸಿದ ರಕ್ತದ ಕೋಡಿಯ ಕರಾಳ ಕಥೆ..! ಸದ್ಯ ಎರಡು ಕುಟುಂಬಗಳ ನಡುವಿನ ಪಾರಂಪರಿಕ ದ್ವೇಷವನ್ನ ಶಮನಗೊಳಿಸಲು ಪೊಲೀಸ್‌ ಫೈರ್‌ ಬ್ರಾಂಡ್‌ ಎಂಟ್ರಿಯಾಗಿದೆ..! ಹೀಗೆ ಭೀಮತೀರಕ್ಕೆ ಕರ್ನಾಟಕದ ಸಿಂಗಂ ಅಲೋಕ್‌ ಕುಮಾರ್‌ ಎಂಟ್ರಿ ಕೊಟ್ಟು ಆ ಭಾಗದ ನಟೋರಿಯಸ್‌ಗಳಿಗೆ ಲಾಸ್ಟ್‌ ವಾರ್ನಿಂಗ್‌ ನೀಡಿದ್ದಾರೆ.

ಎಡಿಜಿಪಿ ಯಾದ ಮೇಲೆ ಮೊದಲ ಬಾರಿಗೆ ಭೀಮಾತೀರಕ್ಕೆ ಭೇಟಿ ನೀಡಿದ ಅಲೋಕ್‌ ಕುಮಾರ್‌ ಖದರ್‌ ಹೇಗಿತ್ತು ಅಂತಾ. ಒಂದೆ ಕಲ್ಲಿಗೆ ಎರಡು ಹಕ್ಕಿಗಳನ್ನ ಹೊಡೆಯೋದಕ್ಕೆ ಹೊರಟಿದ್ದಾರೆ ಅಲೋಕ್‌ ಕುಮಾರ್.‌ ಸಿಂಗಂ ಅಲೋಕ್ ಕುಮಾರ್ ಭೀಮಾತೀರಕ್ಕೆ ಎಂಟ್ರಿ ಕೊಟ್ರೋ 5 ದಶಕಗಳ ಕಾಲ ದ್ವೇಷ ಸಾದಿಸಿದ್ದ ಎರಡು ಕುಟುಂಬಗಳು ಒಂದೇ ಸ್ಟೇಜ್ ಮೇಲೆ ಬಂದುಬಿಟ್ಟಿದ್ವು. ಸಂಧಾನ ಸಭೆಯ ನೆಪದಲ್ಲಿ ಎರಡೂ ಫ್ಯಾಮಿಲಿಯವರನ್ನ ಕರೆಸಿ ಅಲೋಕ್ ಕುಮಾರ್ ಒಂದು ವಾರ್ನಿಂಗ್ ಕೊಟ್ರು. ನಿಮ್ಮವರು ಸೆರೆಂಡರ್ ಆಗಲಿಲ್ಲ ಅಂದ್ರೆ ಉತ್ತರಪ್ರದೇಶ ಮಾಡೆಲ್ ಭೀಮಾ ತೀರಕ್ಕೆ ತರಬೇಕಾಗುತ್ತೆ. ನಿಮ್ಮ ಆಸ್ತಿ ಜಪ್ತಿ ಮಾಡಬೇಕಾಗುತ್ತೆ ಅಂತ ವಾರ್ನ್ ಮಾಡಿದ್ರು. ಅಲೋಕ್ ಕುಮಾರ್ ಹೀಗೆ ಹೇಳೋದಕ್ಕೆ ಕಾರಣ ಎರಡೂ ಕುಟುಂಬಳು ಕಳೆದ 5 ದಶಕಗಳ ಕಾಲ ಭೀಮಾ ತೀರದಲ್ಲಿ ಮಾಡಿದ ಅವಾಂತರಗಳು.

Vijayapura: ಭೀಮಾ ತೀರದಲ್ಲಿ ಖಾಕಿ ಫೈರ್‌ ಬ್ರಾಂಡ್‌ ಅಲೋಕ್‌ ಕುಮಾರ್!

ಭೀಮಾತೀರದ ಈ ಇಬ್ಬರು ಮಾಸ್ಟರ್‌ ಮೈಂಡ್‌ ಸರೆಂಡರ್‌ ಆದ್ರೆ ಮಾತ್ರ ಭೀಮಾತೀರದಲ್ಲಿ ಹೊತ್ತಿಕೊಂಡಿರುವ ದ್ವೇಷದ ಜ್ವಾಲೆ ಆರೋದಕ್ಕೆ ಸಾಧ್ಯ.. ಈ ನಡುವೆ ಭೀಮಾತೀರದ ಈ ಕುಟುಂಬಗಳ ಕಥೆಯೇ ಒಂದಾದ್ರೆ, ಇವ್ರನ್ನ ಸಂಬಾಳಿಸಬೇಕಾದ ಚಡಚಣ ಠಾಣೆಯ ಪೊಲೀಸರ ಕಥೆಯೇ ಬೇರೆ.. ಎಡಿಜಿಪಿ ಅಲೋಕ್‌ ಕುಮಾರ್‌ ಎದುರೇ ಚಡಚಣ ಪೊಲೀಸರ ಮಾನ ಮರ್ಯಾದೆ ಮೂರುಕಾಸಿಗೆ ಹರಾಜಾಗಿದೆ.

25:27ಕಳ್ಳರ ಗೋಲ್ಡ್ ಬ್ಯುಸಿನೆಸ್​​: ಕಳ್ಳರು ಸಿಗಲ್ಲ, ಸಿಕ್ಕಿದ್ರೂ ಮಾಲು ಇರೊಲ್ಲ! 5 ರಾಬರಿ ಕೇಸ್, ಪೊಲೀಸರು ತನಿಖೆ ಠುಸ್!
20:43ಸಿಎಂ ಪಟ್ಟದ ಪಗಡೆಯಾಟದಲ್ಲಿ ಡಿಕೆಶಿ ವೈರಾಗ್ಯದ ನುಡಿ: ಸಿದ್ದು ಅಹಿಂದ ಬ್ರಹ್ಮಾಸ್ತ್ರಕ್ಕೆ ಸಿಂಹಾಸನ ದಿಗ್ಬಂಧನ?
22:34ರಾಹುಕಾಲ ರಹಸ್ಯ..! ಸಿದ್ದು ಆಪ್ತನ ಪತ್ರವ್ಯೂಹ.. ರಾಹುಲ್ ಕೈಯಲ್ಲಿ ಡಿ.ಕೆ.ಶಿವಕುಮಾರ್ ಪಟ್ಟ ಭವಿಷ್ಯ!
21:17ಸಿದ್ದು ಸಮರವ್ಯೂಹ.. ಡಿಕೆ ಚತುರದಾಳ.. ಡಿನ್ನರ್ ದಂಗಲ್: ಒಂದು ಸಭೆ.. ಮೂರು ಸಂದೇಶ.. ಚಾಣಾಕ್ಷ ಬಂಡೆ!
03:40Udupi: ಸರ್ಕಾರಿ ಶಾಲೆಗಳ ಟಾಯ್ಲೆಟ್ ಸ್ವಚ್ಛತೆಗೆ ರಥ: ಗೋಪಾಡಿ ಶ್ರೀನಿವಾಸ ರಾವ್ ಕೊಡುಗೆ!
26:12ಫ್ಲೇವರ್​.. ಚಿನ್ನು.. ಬಂಗಾರಿ ಕೊನೆಗೂ ಬಂದುಬಿಟ್ಟಳು: ಮತ್ತೆ ಮಂಜನ ಮಡಿಲು ಸೇರಿದ್ಲು ಲೀಲಾ!
23:31ಎಣ್ಣೆ ಪಾರ್ಟಿ ಮಾಡುವಾಗ್ಲೇ ಅವನ ಸ್ಕೆಚ್​ ರೆಡಿಯಾಯ್ತು: ಸ್ನೇಹಿತನನ್ನ ಕೊಂದು ಅಕ್ಕನಿಗೆ ವಿಡಿಯೋ ಕಾಲ್​ ಮಾಡಿದ್ದ!
19:47ಅರಸು ಆಳ್ವಿಕೆ ದಾಖಲೆ ಮುರಿಯೋವರೆಗೂ ಸಿದ್ದು ಸಿಎಂ ಕುರ್ಚಿ ಗಡದ್ದು; ಪುತ್ರನ ಹೇಳಿಕೆಯಿಂದ ಮತ್ತೆ ಮಾಡ್ತಿದೆ ಸದ್ದು!
25:05ಹಾಡಹಗಲೇ 3 ಕೆಜಿ ಚಿನ್ನ ಲೂಟಿ ಪ್ರಕರಣ; ನಾಲ್ವರು ಅರೆಸ್ಟ್, ಕಾಂಟ್ರಾಕ್ಟ್ ಮಾಸ್ಟರ್‌ಮೈಂಡ್ ಎಸ್ಕೇಪ್!
23:14ಡಿ.ಕೆ.ಶಿವಕುಮಾರ್‌ಗೆ ಇದ್ಯಾ ರಾಜಯೋಗ? ನೇರಾನೇರ ಕುರ್ಚಿ ಕಾಳಗಕ್ಕೆ ಇಳಿದದ್ದು ಅದೇ ಕಾರಣಕ್ಕಾ?
Read more