ಭೀಮಾತೀರದಲ್ಲಿ ರಿಯಲ್ ಸಿಂಗಂ ಅಲೋಕ್ ಕುಮಾರ್!‌

ಭೀಮಾತೀರದಲ್ಲಿ ರಿಯಲ್ ಸಿಂಗಂ ಅಲೋಕ್ ಕುಮಾರ್!‌

Published : Jul 21, 2022, 06:46 PM ISTUpdated : Jul 21, 2022, 06:48 PM IST

ಕೊನೆಗೂ ಭೀಮಾತೀರದ ಪಾತಕ ಕೃತ್ಯಗಳಿಗೆ ಕೊನೆಗಾಣಿಸಲು ಸರ್ಕಾರ ತೀರ್ಮಾನಿಸಿದಂತಿದೆ.  ಎಡಿಜಿಪಿಯಾದ ಮೇಲೆ ಮೊದಲ ಬಾರಿಗೆ ಭೀಮಾತೀರಕ್ಕೆ ಭೇಟಿ ನೀಡಿದ ರಿಯಲ್‌ ಸಿಂಗಂ ಅಲೋಕ್‌ ಕುಮಾರ್‌, ಮಿಂಚಿನ ಸಂಚಾರ ಮೂಡಿಸಿದ್ದಾರೆ.
 

ವಿಜಯಪುರ (ಜುಲೈ 21):  ಅವೆರಡು ಭೀಮಾತೀರದ ನಟೋರಿಯಸ್‌ ಗ್ಯಾಂಗ್‌ಗಳು. ಒಂದು ಕಾಲದಲ್ಲಿ ಭೀಮಾತೀರದಲ್ಲಿ ರಕ್ತವನ್ನ ನೀರಂತೆ ಹರಿಸಿದ್ದ ಕುಟುಂಬಗಳು ಅವು. ಆ ಕುಟುಂಬಗಳ ನಡುವಿನ ದಶಕಗಳ ದ್ವೇಷಕ್ಕೆ ಬಿದ್ದ ಹೆಣಗಳಿಗೆ ಈ ವರೆಗು ಲೆಕ್ಕಾ ಸಿಕ್ಕಿಲ್ಲ. ಈ ಕುಟುಂಬಗಳ ಕ್ರೈಂ ಇತಿಹಾಸವನ್ನ ಕೆದಕಿದ್ರೆ ಸಿಗೋದು ಕೆಂಡದಂತ ದ್ವೇಷ, ದ್ವೇಷಕ್ಕಾಗಿ ಭೀಮೆಯನ್ನ ಕಂಪಗಾಗಿಸಿದ ರಕ್ತದ ಕೋಡಿಯ ಕರಾಳ ಕಥೆ..! ಸದ್ಯ ಎರಡು ಕುಟುಂಬಗಳ ನಡುವಿನ ಪಾರಂಪರಿಕ ದ್ವೇಷವನ್ನ ಶಮನಗೊಳಿಸಲು ಪೊಲೀಸ್‌ ಫೈರ್‌ ಬ್ರಾಂಡ್‌ ಎಂಟ್ರಿಯಾಗಿದೆ..! ಹೀಗೆ ಭೀಮತೀರಕ್ಕೆ ಕರ್ನಾಟಕದ ಸಿಂಗಂ ಅಲೋಕ್‌ ಕುಮಾರ್‌ ಎಂಟ್ರಿ ಕೊಟ್ಟು ಆ ಭಾಗದ ನಟೋರಿಯಸ್‌ಗಳಿಗೆ ಲಾಸ್ಟ್‌ ವಾರ್ನಿಂಗ್‌ ನೀಡಿದ್ದಾರೆ.

ಎಡಿಜಿಪಿ ಯಾದ ಮೇಲೆ ಮೊದಲ ಬಾರಿಗೆ ಭೀಮಾತೀರಕ್ಕೆ ಭೇಟಿ ನೀಡಿದ ಅಲೋಕ್‌ ಕುಮಾರ್‌ ಖದರ್‌ ಹೇಗಿತ್ತು ಅಂತಾ. ಒಂದೆ ಕಲ್ಲಿಗೆ ಎರಡು ಹಕ್ಕಿಗಳನ್ನ ಹೊಡೆಯೋದಕ್ಕೆ ಹೊರಟಿದ್ದಾರೆ ಅಲೋಕ್‌ ಕುಮಾರ್.‌ ಸಿಂಗಂ ಅಲೋಕ್ ಕುಮಾರ್ ಭೀಮಾತೀರಕ್ಕೆ ಎಂಟ್ರಿ ಕೊಟ್ರೋ 5 ದಶಕಗಳ ಕಾಲ ದ್ವೇಷ ಸಾದಿಸಿದ್ದ ಎರಡು ಕುಟುಂಬಗಳು ಒಂದೇ ಸ್ಟೇಜ್ ಮೇಲೆ ಬಂದುಬಿಟ್ಟಿದ್ವು. ಸಂಧಾನ ಸಭೆಯ ನೆಪದಲ್ಲಿ ಎರಡೂ ಫ್ಯಾಮಿಲಿಯವರನ್ನ ಕರೆಸಿ ಅಲೋಕ್ ಕುಮಾರ್ ಒಂದು ವಾರ್ನಿಂಗ್ ಕೊಟ್ರು. ನಿಮ್ಮವರು ಸೆರೆಂಡರ್ ಆಗಲಿಲ್ಲ ಅಂದ್ರೆ ಉತ್ತರಪ್ರದೇಶ ಮಾಡೆಲ್ ಭೀಮಾ ತೀರಕ್ಕೆ ತರಬೇಕಾಗುತ್ತೆ. ನಿಮ್ಮ ಆಸ್ತಿ ಜಪ್ತಿ ಮಾಡಬೇಕಾಗುತ್ತೆ ಅಂತ ವಾರ್ನ್ ಮಾಡಿದ್ರು. ಅಲೋಕ್ ಕುಮಾರ್ ಹೀಗೆ ಹೇಳೋದಕ್ಕೆ ಕಾರಣ ಎರಡೂ ಕುಟುಂಬಳು ಕಳೆದ 5 ದಶಕಗಳ ಕಾಲ ಭೀಮಾ ತೀರದಲ್ಲಿ ಮಾಡಿದ ಅವಾಂತರಗಳು.

Vijayapura: ಭೀಮಾ ತೀರದಲ್ಲಿ ಖಾಕಿ ಫೈರ್‌ ಬ್ರಾಂಡ್‌ ಅಲೋಕ್‌ ಕುಮಾರ್!

ಭೀಮಾತೀರದ ಈ ಇಬ್ಬರು ಮಾಸ್ಟರ್‌ ಮೈಂಡ್‌ ಸರೆಂಡರ್‌ ಆದ್ರೆ ಮಾತ್ರ ಭೀಮಾತೀರದಲ್ಲಿ ಹೊತ್ತಿಕೊಂಡಿರುವ ದ್ವೇಷದ ಜ್ವಾಲೆ ಆರೋದಕ್ಕೆ ಸಾಧ್ಯ.. ಈ ನಡುವೆ ಭೀಮಾತೀರದ ಈ ಕುಟುಂಬಗಳ ಕಥೆಯೇ ಒಂದಾದ್ರೆ, ಇವ್ರನ್ನ ಸಂಬಾಳಿಸಬೇಕಾದ ಚಡಚಣ ಠಾಣೆಯ ಪೊಲೀಸರ ಕಥೆಯೇ ಬೇರೆ.. ಎಡಿಜಿಪಿ ಅಲೋಕ್‌ ಕುಮಾರ್‌ ಎದುರೇ ಚಡಚಣ ಪೊಲೀಸರ ಮಾನ ಮರ್ಯಾದೆ ಮೂರುಕಾಸಿಗೆ ಹರಾಜಾಗಿದೆ.

19:47ಅರಸು ಆಳ್ವಿಕೆ ದಾಖಲೆ ಮುರಿಯೋವರೆಗೂ ಸಿದ್ದು ಸಿಎಂ ಕುರ್ಚಿ ಗಡದ್ದು; ಪುತ್ರನ ಹೇಳಿಕೆಯಿಂದ ಮತ್ತೆ ಮಾಡ್ತಿದೆ ಸದ್ದು!
25:05ಹಾಡಹಗಲೇ 3 ಕೆಜಿ ಚಿನ್ನ ಲೂಟಿ ಪ್ರಕರಣ; ನಾಲ್ವರು ಅರೆಸ್ಟ್, ಕಾಂಟ್ರಾಕ್ಟ್ ಮಾಸ್ಟರ್‌ಮೈಂಡ್ ಎಸ್ಕೇಪ್!
23:14ಡಿ.ಕೆ.ಶಿವಕುಮಾರ್‌ಗೆ ಇದ್ಯಾ ರಾಜಯೋಗ? ನೇರಾನೇರ ಕುರ್ಚಿ ಕಾಳಗಕ್ಕೆ ಇಳಿದದ್ದು ಅದೇ ಕಾರಣಕ್ಕಾ?
21:10ಮಹಾಕ್ರಾಂತಿ ಮಹಾ ಮುಹೂರ್ತ ಫಿಕ್ಸ್: ಪದತ್ಯಾಗನಾ? ಪಟ್ಟಾಭಿಷೇಕನಾ? ದೆಹಲಿಯಲ್ಲಿ ಕ್ಲೈಮ್ಯಾಕ್ಸ್..!
22:40ಕುರ್ಚಿ ಕಿತ್ತಾಟ: 'ಜೋಡೆತ್ತು'ಗಳ ಜಲ್ಲಿಕಟ್ಟು, ಡಿಕೆಶಿ-ಸತೀಶ್ ಜಾರಕಿಹೊಳಿ ಮಧ್ಯರಾತ್ರಿ ರಹಸ್ಯ ರಿವೀಲ್!
21:17ಸಿಎಂ ಸಿಂಹಾಸನ ಸಮರ: 'ಕೊಟ್ಟ ಮಾತು ಉಳಿಸಿಕೊಳ್ಳಿ'! ಅಧ್ಯಕ್ಷ ಖರ್ಗೆಗೆ ಡಿಕೆಶಿ 'ಆತ್ಮಸಾಕ್ಷಿ' ಅಸ್ತ್ರ!
26:10ಮಾಯಕೊಂಡ ಬೇಬಿ! ಸಿನಿಮಾ ಬಿಟ್ಟು ರಾಜಕೀಯಕ್ಕೆ ಬಂದಳು, ಎಂಎಲ್​ಎ ಆಗಬೇಕಿದ್ದವಳು ಜೈಲು ಪಾಲು!
25:39ರೇಷ್ಮೆ ಹುಳುವಿನ ಸೂಪ್, ಜಿರಳೆ ಪಕೋಡ ಈ ಸಲದ ಜಿಕೆವಿಕೆ ಕೃಷಿಮೇಳದ ಹೈಲೈಟ್ಸ್!
24:25NDA ದಿಗ್ವಿಜಯ.. ಸಿದ್ದರಾಮಯ್ಯ ಸಿಂಹಾಸನ ಭದ್ರ? ಕರುನಾಡ ಪಟ್ಟ ಕದನದ ದಿಕ್ಕು ಬದಲು?
07:51ವಂಚನೆ ಕೇಸ್ ತನಿಖೆ ವಿಳಂಬ: SP ಕಚೇರಿ ಮುಂದೆ ವಿಷ ಕುಡಿದು ಆತ್ಮಹ*ತ್ಯೆಗೆ ಯತ್ನಿಸಿದ ಉದ್ಯಮಿ
Read more