ರಜಾಕಾರರು ನಡೆಸಿದ್ದ ವರವಟ್ಟಿ ಹತ್ಯಾಕಾಂಡದಲ್ಲಿ ಬದುಕುಳಿದ ಮಗು ಈ ಮಲ್ಲಿಕಾರ್ಜುನ ಖರ್ಗೆ

ರಜಾಕಾರರು ನಡೆಸಿದ್ದ ವರವಟ್ಟಿ ಹತ್ಯಾಕಾಂಡದಲ್ಲಿ ಬದುಕುಳಿದ ಮಗು ಈ ಮಲ್ಲಿಕಾರ್ಜುನ ಖರ್ಗೆ

Published : Nov 14, 2024, 12:13 PM IST

ಸ್ವಾತಂತ್ರ್ಯ ನಂತರ ಹೈದರಾಬಾದ್ ನಿಜಾಮನ ವಿರುದ್ಧ ದಂಗೆ ಎದ್ದವರನ್ನು ಹತ್ತಿಕ್ಕಲು ರಜಾಕಾರರು ವರವಟ್ಟಿ ಗ್ರಾಮದ ಮೇಲೆ ದಾಳಿ ಮಾಡಿ ಹಲವರನ್ನು ಕೊಂದರು. ಈ ಘಟನೆಯಲ್ಲಿ ಮನೆಗೆ ಬೆಂಕಿ ಬಿದ್ದು ಕುಟುಂಬವನ್ನೇ ಕಳೆದುಕೊಂಡ ಮಾಪಣ್ಣ, ತಮ್ಮ ಮಗುವನ್ನು ಜೋಲಿಯಲ್ಲಿ ಜೀವಂತವಾಗಿ ಕಂಡುಕೊಂಡರು. ಈ ಮಗುವೇ ಮಲ್ಲಿಕಾರ್ಜುನ ಖರ್ಗೆ ಎಂದು ಯೋಗಿ ಆದಿತ್ಯನಾಥ್ ಹೇಳಿದ್ದಾರೆ.

ಸ್ವಾತಂತ್ರ್ಯ ನಂತರ ಹೈದರಾಬಾದ್ ನಿಜಾಮನ ವಿರುದ್ಧ ದಂಗೆ ಎದ್ದವರನ್ನು ಹತ್ತಿಕ್ಕಲು ರಜಾಕಾರರು ವರವಟ್ಟಿ ಗ್ರಾಮದ ಮೇಲೆ ದಾಳಿ ಮಾಡಿ ಹಲವರನ್ನು ಕೊಂದರು. ಈ ಘಟನೆಯಲ್ಲಿ ಮನೆಗೆ ಬೆಂಕಿ ಬಿದ್ದು ಕುಟುಂಬವನ್ನೇ ಕಳೆದುಕೊಂಡ ಮಾಪಣ್ಣ, ತಮ್ಮ ಮಗುವನ್ನು ಜೋಲಿಯಲ್ಲಿ ಜೀವಂತವಾಗಿ ಕಂಡುಕೊಂಡರು. ಈ ಮಗುವೇ ಮಲ್ಲಿಕಾರ್ಜುನ ಖರ್ಗೆ ಎಂದು ಯೋಗಿ ಆದಿತ್ಯನಾಥ್ ಹೇಳಿದ್ದಾರೆ.

ದೇಶಕ್ಕೆ ಸ್ವಾತಂತ್ರ್ಯ ಸಿಕ್ಕ ಸಂದರ್ಭ. ಆಗ 560ಕ್ಕೂ ಹೆಚ್ಚು ರಾಜ ಸಂಸ್ಥಾನಗಳು ಭಾರತದಲ್ಲಿದ್ದವು. ಆ ರಾಜ ಸಂಸ್ಥಾನಗಳ ಪೈಕಿ ಹೈದರಾಬಾದ್ ನಿಜಾಮನ ಹೈದರಾಬಾದ್ ಸಂಸ್ಥಾನವೂ ಒಂದು. ಕರ್ನಾಟಕದ ಕಲಬುರಗಿ ಸೇರಿದಂತೆ ಹಲವಾರು ಭಾಗಗಳು ಆಗ ನಿಜಾಮನ ಆಳ್ವಿಕೆಗೆ ಒಳ ಪಟ್ಟಿದ್ದವು. ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಾಗ ಬಹುತೇಕ ಎಲ್ಲಾ ರಾಜ ಸಂಸ್ಥಾನಗಳು ಭಾರತದ ಒಕ್ಕೂಟ ಸೇರಿದ್ರೆ, ಹೈದರಾಬಾದ್ ನಿಜಾಮ ಮಾತ್ರ ತಗಾದೆ ತೆಗೆದಿದ್ದ. ಯಾವಾಗ ಹೈದರಾಬಾದ್ ನಿಜಾಮ ತಗಾದೆ ತೆಗೆದನೋ, ಆಗ ನಿಜಾಮನ ವಿರುದ್ಧ ಜನ ಸಿಡಿದೆದ್ದು ಬಿಟ್ಟರು. ಆ ಸಂದರ್ಭದಲ್ಲಿ ಹೈದರಾಬಾದ್ ಸಂಸ್ಥಾನಕ್ಕೆ ಸೇರಿದ್ದ ಕರ್ನಾಟಕದ ಕೆಲ ಪ್ರದೇಶಗಳಲ್ಲಿ ನಿಜಾಮನ ವಿರುದ್ಧ ಜನ ದಂಗೆ ಎದ್ದಿದ್ದರು. ಹೀಗೆ ದಂಗೆ ಎದ್ದ ಜನರನ್ನು ಹತ್ತಿಕ್ಕಲು ಮುಂದಾದ ನಿಜಾಮ ತನ್ನ ಕ್ರೂರ ರಜಾಕಾರರ ಪಡೆಯನ್ನು ಅಖಾಡಕ್ಕಿಳಿಸಿದ್ದನು.

ಇದನ್ನೂ ಓದಿ : ಮೋದಿ ಬಡವರನ್ನ ಬೆಳೆಸುವ ಬದಲು ಅದಾನಿಯನ್ನ ಬೆಳೆಸುತ್ತಿದ್ದಾರೆ: ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ

ದಂಗೆ ಎದ್ದವರನ್ನು ಹತ್ತಿಕ್ಕುತ್ತಾ ಬಂದ ರಜಾಕಾರರ ಪಡೆ ಬೀದರ್ ಜಿಲ್ಲೆ ಹುಮ್ನಾಬಾದ್ ತಾಲೂಕಿನ ವರವಟ್ಟಿ ಎಂಬ ಗ್ರಾಮಕ್ಕೆ ಲಗ್ಗೆ ಹಾಕಿತು. ಆ ಗ್ರಾಮದಲ್ಲಿ ಸಿಕ್ಕ ಸಿಕ್ಕವರನ್ನೆಲ್ಲಾ ಕೊಚ್ಚಿ ಹಾಕಿ ಇಡೀ ಊರಿಗೆ ಊರನ್ನೇ ಸ್ಮಶಾನ ಮಾಡಿ ಬಿಟ್ಟಿತು. ವರವಟ್ಟಿ ಗ್ರಾಮದಲ್ಲಿ ಗುಡಿಸಲೊಂದಕ್ಕೆ ರಜಾಕಾರರು ಬೆಂಕಿಯಿಟ್ಟ ಪರಿಣಾಮ ಆ ಮನೆಯಲ್ಲಿದ್ದವರೆಲ್ಲಾ ಸುಟ್ಟು ಬೂದಿಯಾಗಿ ಹೋಗ್ತಾರೆ. ಮನೆ ಪಕ್ಕದಲ್ಲೇ ಕೆಲಸ ಮಾಡುತ್ತಿದ್ದ ಆ ತಾಯಿ-ಮಗಳನ್ನ ಹಿಂಸಿಸಿ ಬೆಂಕಿ ಹಚ್ಚಿ ಕೊಂದು ಬಿಡ್ತಾರೆ ರಜಾಕಾರರು.

ಈ ಘಟನೆ ನಡೆದಾಗ ಬೇರೆ ಊರಿಗೆ ಹೋಗಿದ್ದ ಮನೆಯ ಯಜಮಾನ ಮಾಪಣ್ಣ, ವಾಪಸ್ ಬಂದು ನೋಡಿದರೆ ಮನೆಗೆ ಮನೆಯೇ ಭಸ್ಮ. ಮಾಪಣ್ಣನ ಹೃದಯವೇ ಒಡೆದು ಹೋಗತ್ತೆ, ನಿಂತ ನೆಲದಲ್ಲೇ ಕುಸಿದು ಬೀಳ್ತಾರೆ. ಮಣ್ಣಲ್ಲಿ ಬಿದ್ದು ಹೃದಯವಿದ್ರಾವಕವಾಗಿ ಒದ್ದಾಡ್ತಾರೆ. ಅಷ್ಟರಲ್ಲಿ ದೂರದ ಮರವೊಂದಕ್ಕೆ ಕಟ್ಟಿದ್ದ ಜೋಲಿಯಿಂದ ಮಗುವೊಂದು ಅಳುವ ಸದ್ದು ಕೇಳಿಸಿತ್ತು. ನೋವಿನಲ್ಲೂ ಧಡಬಡಿಸಿ ಎದ್ದ ಮಾಪಣ್ಣ ಜೋಲಿಯ ಹತ್ತಿರ ಹೋಗಿ ನೋಡಿದರೆ ಅಲ್ಲಿದ್ದದ್ದು ಆತನದ್ದೇ ಮಗು. ಅವರೇ ಈ ಮಲ್ಲಿಕಾರ್ಜುನ ಖರ್ಗೆ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದ್ದಾರೆ.

03:40Udupi: ಸರ್ಕಾರಿ ಶಾಲೆಗಳ ಟಾಯ್ಲೆಟ್ ಸ್ವಚ್ಛತೆಗೆ ರಥ: ಗೋಪಾಡಿ ಶ್ರೀನಿವಾಸ ರಾವ್ ಕೊಡುಗೆ!
26:12ಫ್ಲೇವರ್​.. ಚಿನ್ನು.. ಬಂಗಾರಿ ಕೊನೆಗೂ ಬಂದುಬಿಟ್ಟಳು: ಮತ್ತೆ ಮಂಜನ ಮಡಿಲು ಸೇರಿದ್ಲು ಲೀಲಾ!
23:31ಎಣ್ಣೆ ಪಾರ್ಟಿ ಮಾಡುವಾಗ್ಲೇ ಅವನ ಸ್ಕೆಚ್​ ರೆಡಿಯಾಯ್ತು: ಸ್ನೇಹಿತನನ್ನ ಕೊಂದು ಅಕ್ಕನಿಗೆ ವಿಡಿಯೋ ಕಾಲ್​ ಮಾಡಿದ್ದ!
19:47ಅರಸು ಆಳ್ವಿಕೆ ದಾಖಲೆ ಮುರಿಯೋವರೆಗೂ ಸಿದ್ದು ಸಿಎಂ ಕುರ್ಚಿ ಗಡದ್ದು; ಪುತ್ರನ ಹೇಳಿಕೆಯಿಂದ ಮತ್ತೆ ಮಾಡ್ತಿದೆ ಸದ್ದು!
25:05ಹಾಡಹಗಲೇ 3 ಕೆಜಿ ಚಿನ್ನ ಲೂಟಿ ಪ್ರಕರಣ; ನಾಲ್ವರು ಅರೆಸ್ಟ್, ಕಾಂಟ್ರಾಕ್ಟ್ ಮಾಸ್ಟರ್‌ಮೈಂಡ್ ಎಸ್ಕೇಪ್!
23:14ಡಿ.ಕೆ.ಶಿವಕುಮಾರ್‌ಗೆ ಇದ್ಯಾ ರಾಜಯೋಗ? ನೇರಾನೇರ ಕುರ್ಚಿ ಕಾಳಗಕ್ಕೆ ಇಳಿದದ್ದು ಅದೇ ಕಾರಣಕ್ಕಾ?
21:10ಮಹಾಕ್ರಾಂತಿ ಮಹಾ ಮುಹೂರ್ತ ಫಿಕ್ಸ್: ಪದತ್ಯಾಗನಾ? ಪಟ್ಟಾಭಿಷೇಕನಾ? ದೆಹಲಿಯಲ್ಲಿ ಕ್ಲೈಮ್ಯಾಕ್ಸ್..!
22:40ಕುರ್ಚಿ ಕಿತ್ತಾಟ: 'ಜೋಡೆತ್ತು'ಗಳ ಜಲ್ಲಿಕಟ್ಟು, ಡಿಕೆಶಿ-ಸತೀಶ್ ಜಾರಕಿಹೊಳಿ ಮಧ್ಯರಾತ್ರಿ ರಹಸ್ಯ ರಿವೀಲ್!
21:17ಸಿಎಂ ಸಿಂಹಾಸನ ಸಮರ: 'ಕೊಟ್ಟ ಮಾತು ಉಳಿಸಿಕೊಳ್ಳಿ'! ಅಧ್ಯಕ್ಷ ಖರ್ಗೆಗೆ ಡಿಕೆಶಿ 'ಆತ್ಮಸಾಕ್ಷಿ' ಅಸ್ತ್ರ!
26:10ಮಾಯಕೊಂಡ ಬೇಬಿ! ಸಿನಿಮಾ ಬಿಟ್ಟು ರಾಜಕೀಯಕ್ಕೆ ಬಂದಳು, ಎಂಎಲ್​ಎ ಆಗಬೇಕಿದ್ದವಳು ಜೈಲು ಪಾಲು!
Read more