150 ರೂ. ಇದ್ದ ಟೊಮೆಟೋ ಬೆಲೆ 20 ರೂಪಾಯಿಗೆ ಕುಸಿತ: ಅನ್ನದಾತ ಕಂಗಾಲು

150 ರೂ. ಇದ್ದ ಟೊಮೆಟೋ ಬೆಲೆ 20 ರೂಪಾಯಿಗೆ ಕುಸಿತ: ಅನ್ನದಾತ ಕಂಗಾಲು

Published : Sep 22, 2023, 12:46 PM IST

ಮೂರು ತಿಂಗಳ ಹಿಂದೆ ಟೊಮ್ಯಾಟೊ ಅಂದರೆ ಬಂಗಾರದ ಬೆಳೆ ಆಗಿತ್ತು. ಒಂದು ಎಕರೆಯಲ್ಲಿ ಟೊಮ್ಯಾಟೊ ಬೆಳೆ ಇದ್ದರೆ ಸಾಕು ಲಕ್ಷಾಧಿಪತಿ ಎನ್ನುತ್ತಿದ್ದರು. ಆದರೆ ಈಗ ಟೊಮ್ಯಾಟೋ ದರ ಧಿಡೀರ್ ಕುಸಿತ ಆಗಿದೆ. ಭರಪೂರ ಇಳುವರಿ ಬಂದಿರುವ ರೈತ ಸೂಕ್ತ ಬೆಲೆ ಸಿಗದೇ ಸಂಕಷ್ಟಕ್ಕೆ ಸಿಲುಕುವಂತ ಪರಿಸ್ಥಿತಿ ನಿರ್ಮಾಣಗೊಂಡಿದೆ. 
 

ರೈತರ ಪರಿಸ್ಥಿತಿ ಒಂದು ರೀತಿ ಲಾಟರಿ ಖರೀದಿಸಿದ ಹಾಗೆ ಆಗಿದೆ. ಬೀದರ್‌(Bidar) ಜಿಲ್ಲೆಯಲ್ಲಿ ರೈತನ ಪರಿಸ್ಥಿತಿ ಅದೇ ಆಗಿದೆ. ಟೊಮ್ಯಾಟೊಗೆ(Tomato) ಭರ್ಜರಿ ಬೆಲೆ ಸಿಗುತ್ತಿದೆ ಎಂದು 3 ತಿಂಗಳ ಹಿಂದೆ 5 ಲಕ್ಷಕ್ಕೂ ಅಧಿಕ ಹಣ ಖರ್ಚು ಮಾಡಿ 3 ಎಕರೆ ಭೂಮಿಯಲ್ಲಿ ಟೊಮ್ಯಾಟೊ ಬೆಳೆದಿದ್ದ. ಆದ್ರೆ, ಟೊಮ್ಯಾಟೋಗೆ ಇವತ್ತು ಬೆಲೆ ಸಿಗದೇ ಸಂಕಷ್ಟಕ್ಕೆ ಸಿಲುಕುವಂತೆ ಮಾಡಿದೆ. ಟೊಮ್ಯಾಟೊ ಕಟಾವು ಮಾಡಿ ಮಾರುಕಟ್ಟೆಗೆ ತೆಗೆದುಕೊಂಡು ಹೋದ್ರೂ ಕಟಾವು ಮಾಡಲು ಕೂಲಿಗೆ ಹಾಕಿದ ಹಣ ಸಿಗದಂತ ಪರಿಸ್ಥಿತಿ ನಿರ್ಮಾಣಗೊಂಡಿದೆ. ಬಡ್ಡಿಗೆ 5 ಲಕ್ಷದವೆಗೂ ಸಾಲ ತಂದು 3 ಎಕರೆ ಜಮೀನನಲ್ಲಿ ಟೊಮ್ಯಾಟೊ ಬೆಳೆದಿದ್ದ. ಭಾಲ್ಕಿ ತಾಲೂಕಿನ ಹಾಲಹಿಪ್ಪರ್ಗಾ ಗ್ರಾಮದ ರೈತ(Farmer) ವೈಜನಾಥ್ ಸಂಕಷ್ಟಕ್ಕೆ ಸಿಲುಕಿದ್ದಾನೆ. ಒಂದೂವರೆ ತಿಂಗಳ ಹಿಂದೆ 120 ರಿಂದ 150 ಕೆಜಿ ಇದ್ದ ಟೊಮ್ಯಾಟೊ ಈಗ ಕೇವಲ 20 ರಿಂದ 25 ರೂ. ಕೆಜಿಗೆ ಇಳಿದಿದೆ. ರೈತ ದೇಶದ ಬೆನ್ನೆಲುಬು ಅಂತಾರೆ. ಆದ್ರೆ, ರೈತನಿಗೆ ಒಮ್ಮೆ ಅತಿವೃಷ್ಠಿ-ಮತ್ತೊಮ್ಮೆ ಅನಾವೃಷ್ಠಿ ಸ್ಥಿತಿ ದೆವ್ವ-ಭೂತಗಳಂತೆ ಕಾಡುತ್ತಿರುತ್ತವೆ. 

ಇದನ್ನೂ ವೀಕ್ಷಿಸಿ:  ಸಿಸಿಬಿ ವಿಚಾರಣೆಯಲ್ಲಿ ಚೈತ್ರಾ ಹೇಳಿದ್ದೇನು..? ಇದೀಗ ಯೂ ಟರ್ನ್ ಹೊಡೆದಿದ್ದೇಕೆ ?

03:40Udupi: ಸರ್ಕಾರಿ ಶಾಲೆಗಳ ಟಾಯ್ಲೆಟ್ ಸ್ವಚ್ಛತೆಗೆ ರಥ: ಗೋಪಾಡಿ ಶ್ರೀನಿವಾಸ ರಾವ್ ಕೊಡುಗೆ!
26:12ಫ್ಲೇವರ್​.. ಚಿನ್ನು.. ಬಂಗಾರಿ ಕೊನೆಗೂ ಬಂದುಬಿಟ್ಟಳು: ಮತ್ತೆ ಮಂಜನ ಮಡಿಲು ಸೇರಿದ್ಲು ಲೀಲಾ!
23:31ಎಣ್ಣೆ ಪಾರ್ಟಿ ಮಾಡುವಾಗ್ಲೇ ಅವನ ಸ್ಕೆಚ್​ ರೆಡಿಯಾಯ್ತು: ಸ್ನೇಹಿತನನ್ನ ಕೊಂದು ಅಕ್ಕನಿಗೆ ವಿಡಿಯೋ ಕಾಲ್​ ಮಾಡಿದ್ದ!
19:47ಅರಸು ಆಳ್ವಿಕೆ ದಾಖಲೆ ಮುರಿಯೋವರೆಗೂ ಸಿದ್ದು ಸಿಎಂ ಕುರ್ಚಿ ಗಡದ್ದು; ಪುತ್ರನ ಹೇಳಿಕೆಯಿಂದ ಮತ್ತೆ ಮಾಡ್ತಿದೆ ಸದ್ದು!
25:05ಹಾಡಹಗಲೇ 3 ಕೆಜಿ ಚಿನ್ನ ಲೂಟಿ ಪ್ರಕರಣ; ನಾಲ್ವರು ಅರೆಸ್ಟ್, ಕಾಂಟ್ರಾಕ್ಟ್ ಮಾಸ್ಟರ್‌ಮೈಂಡ್ ಎಸ್ಕೇಪ್!
23:14ಡಿ.ಕೆ.ಶಿವಕುಮಾರ್‌ಗೆ ಇದ್ಯಾ ರಾಜಯೋಗ? ನೇರಾನೇರ ಕುರ್ಚಿ ಕಾಳಗಕ್ಕೆ ಇಳಿದದ್ದು ಅದೇ ಕಾರಣಕ್ಕಾ?
21:10ಮಹಾಕ್ರಾಂತಿ ಮಹಾ ಮುಹೂರ್ತ ಫಿಕ್ಸ್: ಪದತ್ಯಾಗನಾ? ಪಟ್ಟಾಭಿಷೇಕನಾ? ದೆಹಲಿಯಲ್ಲಿ ಕ್ಲೈಮ್ಯಾಕ್ಸ್..!
22:40ಕುರ್ಚಿ ಕಿತ್ತಾಟ: 'ಜೋಡೆತ್ತು'ಗಳ ಜಲ್ಲಿಕಟ್ಟು, ಡಿಕೆಶಿ-ಸತೀಶ್ ಜಾರಕಿಹೊಳಿ ಮಧ್ಯರಾತ್ರಿ ರಹಸ್ಯ ರಿವೀಲ್!
21:17ಸಿಎಂ ಸಿಂಹಾಸನ ಸಮರ: 'ಕೊಟ್ಟ ಮಾತು ಉಳಿಸಿಕೊಳ್ಳಿ'! ಅಧ್ಯಕ್ಷ ಖರ್ಗೆಗೆ ಡಿಕೆಶಿ 'ಆತ್ಮಸಾಕ್ಷಿ' ಅಸ್ತ್ರ!
26:10ಮಾಯಕೊಂಡ ಬೇಬಿ! ಸಿನಿಮಾ ಬಿಟ್ಟು ರಾಜಕೀಯಕ್ಕೆ ಬಂದಳು, ಎಂಎಲ್​ಎ ಆಗಬೇಕಿದ್ದವಳು ಜೈಲು ಪಾಲು!
Read more