150 ರೂ. ಇದ್ದ ಟೊಮೆಟೋ ಬೆಲೆ 20 ರೂಪಾಯಿಗೆ ಕುಸಿತ: ಅನ್ನದಾತ ಕಂಗಾಲು

150 ರೂ. ಇದ್ದ ಟೊಮೆಟೋ ಬೆಲೆ 20 ರೂಪಾಯಿಗೆ ಕುಸಿತ: ಅನ್ನದಾತ ಕಂಗಾಲು

Published : Sep 22, 2023, 12:46 PM IST

ಮೂರು ತಿಂಗಳ ಹಿಂದೆ ಟೊಮ್ಯಾಟೊ ಅಂದರೆ ಬಂಗಾರದ ಬೆಳೆ ಆಗಿತ್ತು. ಒಂದು ಎಕರೆಯಲ್ಲಿ ಟೊಮ್ಯಾಟೊ ಬೆಳೆ ಇದ್ದರೆ ಸಾಕು ಲಕ್ಷಾಧಿಪತಿ ಎನ್ನುತ್ತಿದ್ದರು. ಆದರೆ ಈಗ ಟೊಮ್ಯಾಟೋ ದರ ಧಿಡೀರ್ ಕುಸಿತ ಆಗಿದೆ. ಭರಪೂರ ಇಳುವರಿ ಬಂದಿರುವ ರೈತ ಸೂಕ್ತ ಬೆಲೆ ಸಿಗದೇ ಸಂಕಷ್ಟಕ್ಕೆ ಸಿಲುಕುವಂತ ಪರಿಸ್ಥಿತಿ ನಿರ್ಮಾಣಗೊಂಡಿದೆ. 
 

ರೈತರ ಪರಿಸ್ಥಿತಿ ಒಂದು ರೀತಿ ಲಾಟರಿ ಖರೀದಿಸಿದ ಹಾಗೆ ಆಗಿದೆ. ಬೀದರ್‌(Bidar) ಜಿಲ್ಲೆಯಲ್ಲಿ ರೈತನ ಪರಿಸ್ಥಿತಿ ಅದೇ ಆಗಿದೆ. ಟೊಮ್ಯಾಟೊಗೆ(Tomato) ಭರ್ಜರಿ ಬೆಲೆ ಸಿಗುತ್ತಿದೆ ಎಂದು 3 ತಿಂಗಳ ಹಿಂದೆ 5 ಲಕ್ಷಕ್ಕೂ ಅಧಿಕ ಹಣ ಖರ್ಚು ಮಾಡಿ 3 ಎಕರೆ ಭೂಮಿಯಲ್ಲಿ ಟೊಮ್ಯಾಟೊ ಬೆಳೆದಿದ್ದ. ಆದ್ರೆ, ಟೊಮ್ಯಾಟೋಗೆ ಇವತ್ತು ಬೆಲೆ ಸಿಗದೇ ಸಂಕಷ್ಟಕ್ಕೆ ಸಿಲುಕುವಂತೆ ಮಾಡಿದೆ. ಟೊಮ್ಯಾಟೊ ಕಟಾವು ಮಾಡಿ ಮಾರುಕಟ್ಟೆಗೆ ತೆಗೆದುಕೊಂಡು ಹೋದ್ರೂ ಕಟಾವು ಮಾಡಲು ಕೂಲಿಗೆ ಹಾಕಿದ ಹಣ ಸಿಗದಂತ ಪರಿಸ್ಥಿತಿ ನಿರ್ಮಾಣಗೊಂಡಿದೆ. ಬಡ್ಡಿಗೆ 5 ಲಕ್ಷದವೆಗೂ ಸಾಲ ತಂದು 3 ಎಕರೆ ಜಮೀನನಲ್ಲಿ ಟೊಮ್ಯಾಟೊ ಬೆಳೆದಿದ್ದ. ಭಾಲ್ಕಿ ತಾಲೂಕಿನ ಹಾಲಹಿಪ್ಪರ್ಗಾ ಗ್ರಾಮದ ರೈತ(Farmer) ವೈಜನಾಥ್ ಸಂಕಷ್ಟಕ್ಕೆ ಸಿಲುಕಿದ್ದಾನೆ. ಒಂದೂವರೆ ತಿಂಗಳ ಹಿಂದೆ 120 ರಿಂದ 150 ಕೆಜಿ ಇದ್ದ ಟೊಮ್ಯಾಟೊ ಈಗ ಕೇವಲ 20 ರಿಂದ 25 ರೂ. ಕೆಜಿಗೆ ಇಳಿದಿದೆ. ರೈತ ದೇಶದ ಬೆನ್ನೆಲುಬು ಅಂತಾರೆ. ಆದ್ರೆ, ರೈತನಿಗೆ ಒಮ್ಮೆ ಅತಿವೃಷ್ಠಿ-ಮತ್ತೊಮ್ಮೆ ಅನಾವೃಷ್ಠಿ ಸ್ಥಿತಿ ದೆವ್ವ-ಭೂತಗಳಂತೆ ಕಾಡುತ್ತಿರುತ್ತವೆ. 

ಇದನ್ನೂ ವೀಕ್ಷಿಸಿ:  ಸಿಸಿಬಿ ವಿಚಾರಣೆಯಲ್ಲಿ ಚೈತ್ರಾ ಹೇಳಿದ್ದೇನು..? ಇದೀಗ ಯೂ ಟರ್ನ್ ಹೊಡೆದಿದ್ದೇಕೆ ?

81:52ಹೆಲ್ತ್‌ಕೇರ್ ಎಕ್ಸಲೆನ್ಸ್ ಅವಾರ್ಡ್: 40 ಮಂದಿ ಸಾಧಕ ಸಾಧಕ ವೈದ್ಯರಿಗೆ ಸನ್ಮಾನದ ಕಿರೀಟ
20:16ಡಿಕೆ ಬತ್ತಳಿಕೆ ಸೇರಿತಾ ತ್ರಿವಳಿ ಡಿಸಿಎಂ ಬ್ರಹ್ಮಾಸ್ತ್ರ..? ಯಾರಿಗೆ ಸಿದ್ದು ಶ್ರೀರಕ್ಷೆ? ಯಾರಿಗೆ ಬಂಡೆ ಬಲ?
22:06ಡಿಕೆ ಶಿವಕುಮಾರ್ ಮಂತ್ರಿಮಂಡಲ, 8 ಗಂಟೆಯ ಗುಟ್ಟು, ಯಾರಿಗೆಲ್ಲಾ ಸಿಗಲಿದೆ ಸಚಿವ ಸ್ಥಾನ?
40 ಸಚಿವಾಕಾಂಕ್ಷಿಗಳು 4 ಸಭೆಗಳು ಏನೆಲ್ಲಾ ಚರ್ಚೆ? ಯುವ ಶಾಸಕರಿಗೆ ಮಣೆ ಹಾಕುತ್ತಾ ಕಾಂಗ್ರೆಸ್ ಹೈಕಮಾಂಡ್?
22:49ಬಿಡದಿ ಅಗ್ನಿಕುಂಡ.. ಬೂದಿ ಮುಚ್ಚಿದ ಕೆಂಡ: ದಳಪತಿ Vs ಕನಕಾಧಿಪತಿ.. ಮುಗಿಯದ ಯುದ್ಧದ ಹೊಸ ಅಧ್ಯಾಯ!
21:50ಬೆಳಗಾವಿ ಸಾಹುಕಾರನ ಜೊತೆ ಕನಕವೀರನ ಗಟ್ಟಿ ಗೆಳೆತನ..! ಸವಾಲ್ ಹಾಕಿದ್ದ ಸಾಹುಕಾರ, ಬಂಡೆ ವಿಶ್ವಾಸಕ್ಕೆ ಮಣಿದರಾ?
04:40ರೇಣುಕಾಸ್ವಾಮಿ ಕೇಸ್‌ನಲ್ಲಿ ಬಿಗ್ ಟ್ವಿಸ್ಟ್? ಬೆದರಿಕೆ ಹಾಕಿದವರ ಮೊಬೈಲ್‌ನಲ್ಲಿದೆ ನಡುಕ ಹುಟ್ಟಿಸೋ ಸತ್ಯ!
24:272028ರ ಚುನಾವಣೆ: ಜೋಡೆತ್ತುಗಳ ಸೈಲೆಂಟ್ ಆಟ ಶುರು, ಮತ್ತೊಂದು ಮಹಾಯುದ್ಧಕ್ಕೆ ರೆಡಿ ಭಲೇ ಜೋಡಿ!
53:23ಮೈಸೂರು ಸಂಸದ, ರಾಜವಂಶಸ್ಥರೇ ಕಂಬಳ ಬೇಡ ಎಂದಿದ್ದೇಕೆ? ಕಂಬಳ ನಡೆಸಿಯೇ ಸಿದ್ಧ ಎಂದು ಆಯೋಜಕರ ಪಟ್ಟೇಕೆ?
23:39ಕೈ ಕೊಟ್ಟವರ್ಯಾರೋ ಮಂಜುನಾಥ?; ಬಿಜೆಪಿಯಲ್ಲಿ ಅಡ್ಡಮತದಾನದ ಆಂತರಿಕ ಜ್ವಾಲಾಮುಖಿ ಸ್ಫೋಟ!
Read more