ಐತಿಹಾಸಿಕ ತಾಣಗಳ ಅಭಿವೃದ್ದಿಗೆ ಮುಂದಾದ ಸರ್ಕಾರ:  ಸ್ಮಾರಕ ಮಿತ್ರ ಯೋಜನೆಗೆ ಕೆಲವರ ವಿರೋಧ

ಐತಿಹಾಸಿಕ ತಾಣಗಳ ಅಭಿವೃದ್ದಿಗೆ ಮುಂದಾದ ಸರ್ಕಾರ: ಸ್ಮಾರಕ ಮಿತ್ರ ಯೋಜನೆಗೆ ಕೆಲವರ ವಿರೋಧ

Published : Dec 08, 2023, 10:28 AM IST

ಕನ್ನಡ ನಾಡಿನ ಐತಿಹಾಸಿಕ ಪರಂಪರೆ ಸಾರುವ ಐತಿಹಾಸಿಕ ತಾಣಗಳ ಅಭಿವೃದ್ದಿಗೆ ರಾಜ್ಯ ಸರ್ಕಾರ ಸ್ಮಾರಕ ಮಿತ್ರ ಎಂಬ ಯೋಜನೆ ಜಾರಿಗೊಳಿಸಲು ಮುಂದಾಗಿದೆ. ಆದ್ರೆ ಸರ್ಕಾರದ ಈ ಸ್ಮಾರಕ ಮಿತ್ರ ಯೋಜನೆಗೆ ಕೆಲವರ ವಿರೋಧವೂ ಸಹ ವ್ಯಕ್ತವಾಗಿದೆ. 

ಉತ್ತರ ಕರ್ನಾಟಕದ ಬಾಗಲಕೋಟೆಯಲ್ಲಿ(Bagalkot) ಐತಿಹಾಸಿಕ ಪರಂಪರೆಯ ತಾಣಗಳಾದ ಬಾದಾಮಿ, ಐಹೊಳೆ, ಪಟ್ಟದಕಲ್ಲು, ಕೂಡಲಸಂಗಮ ಸೇರಿದಂತೆ ಅನೇಕ ತಾಣಗಳ ಅಭಿವೃದ್ದಿ ಇಂದಿಗೂ ಪೂರ್ಣವಾಗಿಲ್ಲ. ಈ ಮಧ್ಯೆ ಸರ್ಕಾರ(Government) ಖಾಸಗಿ ಸಹಭಾಗಿತ್ವದಲ್ಲಿ ಐತಿಹಾಸಿಕ ತಾಣಗಳ ಅಭಿವೃದ್ಧಿಗೆ ಮುಂದಾಗಿದೆ. ಸ್ಮಾರಕ ಮಿತ್ರ ಯೋಜನೆಯನ್ನು ಪ್ರವಾಸೋದ್ಯಮ ಇಲಾಖೆ(Department of Tourism) ಮೂಲಕ ಜಾರಿಗೆ ಮುಂದಾಗಿದೆ. ಖಾಸಗಿ ಕಂಪನಿಗಳ ನಿಧಿ ವಿನಿಯೋಗಿಸಿ ಎಲ್ಲಾ ಸ್ಮಾರಕ ಅಭಿವೃದ್ಧಿ ಮಾಡ್ತೇವೆ ಅಂತ ಪ್ರವಾಸೋದ್ಯಮ ಸಚಿವ ಎಚ್.ಕೆ. ಪಾಟೀಲ್(HK Patil) ಹೇಳಿದ್ರು.ಐತಿಹಾಸಿಕ ತಾಣಗಳನ್ನು ಖಾಸಗಿಯವರಿಗೆ ಟೆಂಡರ್ ಮೂಲಕ ದತ್ತು ನೀಡಲು ಮುಂದಾಗಿರೋದು ಕೆಲವು ಕನ್ನಡ ಸಂಘಟನೆಗಳ ಅಸಮಾಧಾನಕ್ಕೆ ಕಾರಣವಾಗಿದೆ. ಐಹೊಳೆ, ಪಟ್ಟದಕಲ್ಲು ತಾಣಗಳನ್ನು ಸ್ಥಳಾಂತರ ಜೊತೆ ಇನ್ನೂ ಸಮಸ್ಯೆಗಳಿವೆ. ಹಾಗೆಯೇ ಖಾಸಗಿಯವರಿಗೆ ನೀಡಿದ್ರೆ ಉಳಿದ ಕೆಲಸಗಳು ಆಗೋದಿಲ್ಲ. ಹೀಗಾಗಿ ಸರ್ಕಾರವೇ ಹೆಚ್ಚುವರಿ ಅನುದಾನ ನೀಡಿ ಅಭಿವೃದ್ಧಿ ಮಾಡಿದ್ರೆ ಒಳ್ಳೆಯದಾಗುತ್ತೆ. ಸರ್ಕಾರ ಖಾಸಗಿಯವರಿಗೆ ತಾಣಗಳನ್ನ ಬಿಟ್ಟುಕೊಟ್ಟು ಟೆಂಡರ್ ಮೂಲಕ ಹಣ ಹೊಡೆಯುವ ಷಡ್ಯಂತ್ರ ನಡೆಸ್ತಿದ್ದಾರೆ ಎಂದು ಆತ್ಮರಾವ್ ಆರೋಪಿಸಿದ್ದಾರೆ. ಸ್ಮಾರಕ ಮಿತ್ರ ಯೋಜನೆ ಮೂಲಕ ಐತಿಹಾಸಿಕ ತಾಣಗಳನ್ನ ಖಾಸಗಿಯವರಿಗೆ ವಹಿಸಲು ಮುಂದಾಗಿರೋದು ಒಳ್ಳೆಯದೇ. ಆದ್ರೆ, ಐತಿಹಾಸಿಕ ತಾಣಗಳ ಸಮಸ್ಯೆಗಳನ್ನ ಬಗೆಹರಿಸಲಿ ಅನ್ನೋದು ಜನರ ಆಶಯ.

ಇದನ್ನೂ ವೀಕ್ಷಿಸಿ:  ರೇಷ್ಮೆ ಬೆಳೆ ನಂಬಿದ ರೈತರಿಗೆ ಬಿಗ್‌ ಶಾಕ್‌: ಗೂಡು ಕಟ್ಟದೆ ಹುಳುಗಳ ಸಾವು !

22:34ರಾಹುಕಾಲ ರಹಸ್ಯ..! ಸಿದ್ದು ಆಪ್ತನ ಪತ್ರವ್ಯೂಹ.. ರಾಹುಲ್ ಕೈಯಲ್ಲಿ ಡಿ.ಕೆ.ಶಿವಕುಮಾರ್ ಪಟ್ಟ ಭವಿಷ್ಯ!
21:17ಸಿದ್ದು ಸಮರವ್ಯೂಹ.. ಡಿಕೆ ಚತುರದಾಳ.. ಡಿನ್ನರ್ ದಂಗಲ್: ಒಂದು ಸಭೆ.. ಮೂರು ಸಂದೇಶ.. ಚಾಣಾಕ್ಷ ಬಂಡೆ!
03:40Udupi: ಸರ್ಕಾರಿ ಶಾಲೆಗಳ ಟಾಯ್ಲೆಟ್ ಸ್ವಚ್ಛತೆಗೆ ರಥ: ಗೋಪಾಡಿ ಶ್ರೀನಿವಾಸ ರಾವ್ ಕೊಡುಗೆ!
26:12ಫ್ಲೇವರ್​.. ಚಿನ್ನು.. ಬಂಗಾರಿ ಕೊನೆಗೂ ಬಂದುಬಿಟ್ಟಳು: ಮತ್ತೆ ಮಂಜನ ಮಡಿಲು ಸೇರಿದ್ಲು ಲೀಲಾ!
23:31ಎಣ್ಣೆ ಪಾರ್ಟಿ ಮಾಡುವಾಗ್ಲೇ ಅವನ ಸ್ಕೆಚ್​ ರೆಡಿಯಾಯ್ತು: ಸ್ನೇಹಿತನನ್ನ ಕೊಂದು ಅಕ್ಕನಿಗೆ ವಿಡಿಯೋ ಕಾಲ್​ ಮಾಡಿದ್ದ!
19:47ಅರಸು ಆಳ್ವಿಕೆ ದಾಖಲೆ ಮುರಿಯೋವರೆಗೂ ಸಿದ್ದು ಸಿಎಂ ಕುರ್ಚಿ ಗಡದ್ದು; ಪುತ್ರನ ಹೇಳಿಕೆಯಿಂದ ಮತ್ತೆ ಮಾಡ್ತಿದೆ ಸದ್ದು!
25:05ಹಾಡಹಗಲೇ 3 ಕೆಜಿ ಚಿನ್ನ ಲೂಟಿ ಪ್ರಕರಣ; ನಾಲ್ವರು ಅರೆಸ್ಟ್, ಕಾಂಟ್ರಾಕ್ಟ್ ಮಾಸ್ಟರ್‌ಮೈಂಡ್ ಎಸ್ಕೇಪ್!
23:14ಡಿ.ಕೆ.ಶಿವಕುಮಾರ್‌ಗೆ ಇದ್ಯಾ ರಾಜಯೋಗ? ನೇರಾನೇರ ಕುರ್ಚಿ ಕಾಳಗಕ್ಕೆ ಇಳಿದದ್ದು ಅದೇ ಕಾರಣಕ್ಕಾ?
21:10ಮಹಾಕ್ರಾಂತಿ ಮಹಾ ಮುಹೂರ್ತ ಫಿಕ್ಸ್: ಪದತ್ಯಾಗನಾ? ಪಟ್ಟಾಭಿಷೇಕನಾ? ದೆಹಲಿಯಲ್ಲಿ ಕ್ಲೈಮ್ಯಾಕ್ಸ್..!
22:40ಕುರ್ಚಿ ಕಿತ್ತಾಟ: 'ಜೋಡೆತ್ತು'ಗಳ ಜಲ್ಲಿಕಟ್ಟು, ಡಿಕೆಶಿ-ಸತೀಶ್ ಜಾರಕಿಹೊಳಿ ಮಧ್ಯರಾತ್ರಿ ರಹಸ್ಯ ರಿವೀಲ್!
Read more