ಧರ್ಮಸ್ಥಳದ 8 ಸ್ಥಳ ಶೋಧ: ಸಿಕ್ಕಿದ್ದು 1 ಅಸ್ಥಿಪಂಜರ : ರೇಡಿಯೋ ಕಾರ್ಬನ್ ಡೇಟಿಂಗ್ ಮಾಡಲಿರೋ FSL ಟೀಂ

ಧರ್ಮಸ್ಥಳದ 8 ಸ್ಥಳ ಶೋಧ: ಸಿಕ್ಕಿದ್ದು 1 ಅಸ್ಥಿಪಂಜರ : ರೇಡಿಯೋ ಕಾರ್ಬನ್ ಡೇಟಿಂಗ್ ಮಾಡಲಿರೋ FSL ಟೀಂ

Published : Aug 02, 2025, 10:10 AM IST

ಧರ್ಮಸ್ಥಳದಲ್ಲಿ ನಡೆದ ಶೋಧ ಕಾರ್ಯದಲ್ಲಿ ಎಂಟು ಸ್ಥಳಗಳನ್ನು ಅಗೆದು ಪರಿಶೀಲಿಸಲಾಯಿತು. ಒಂದು ಸ್ಥಳದಲ್ಲಿ ಮಾತ್ರ ಅಸ್ಥಿಪಂಜರ ಪತ್ತೆಯಾಗಿದ್ದು, ಅದರ ವೈಜ್ಞಾನಿಕ ವಿಶ್ಲೇಷಣೆಗೆ ಕಳುಹಿಸಲಾಗಿದೆ. ಎಫ್‌ಎಸ್‌ಎಲ್ ವರದಿಯು ತನಿಖೆಯ ಮುಂದಿನ ಹಂತವನ್ನು ನಿರ್ಧರಿಸಲಿದೆ.

ಧರ್ಮಸ್ಥಳದಲ್ಲಿ ಇಂದು 5ನೇ ದಿನವೂ ಶೋಧ ಮುಂದುವರೆಯಲಿದೆ. ಇದುವರೆಗೆ 8 ಸ್ಥಳಗಳಲ್ಲಿ ಹೊಂಡ ಅಗೆಯಲಾಗಿದ್ದು, ಕೇವಲ 1 ಸ್ಥಳದಲ್ಲಿ ಮಾತ್ರ ಅಸ್ಥಿಪಂಜರ ಪತ್ತೆಯಾಗಿದೆ. ಸಿಕ್ಕ ಅಸ್ತಿಪಂಜರದ ವೈಜ್ಞಾನಿಕ ವಿಶ್ಲೇಷಣೆಯೇ ಈಗ ಸವಾಲಾಗಿದೆ. ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ಅಸ್ಥಿಪಂಜರ ರವಾನೆ ಮಾಡಲಾಗಿದ್ದು, ಅಲ್ಲಿನ ಫೋರೆನ್ಸಿಕ್ ವರದಿ ಮೇಲೆ ಎಸ್​ಐಟಿ ತನಿಖೆ ನಿಂತಿದೆ. ಮೊದಲಿಗೆ ಹೇಗೆ ಸಾವು ಸಂಭವಿಸಿತು ಎಂದು FSL ತನಿಖೆ ನಡೆಯಲಿದೆ.  ಇದು ಸಹಜ ಸಾವೋ? ಕೊಲೆಯೋ? ವ್ಯಕ್ತಿಯ ಎತ್ತರ.. ವ್ಯಕ್ತಿಯ ತೂಕ.. ವಯಸ್ಸು ಪತ್ತೆ ಮಾಡಲಿದ್ದಾರೆ.  ಇದಕ್ಕಾಗಿ ರೇಡಿಯೋ ಕಾರ್ಬನ್ ಡೇಟಿಂಗ್ ಮಾಡಲಿರೋ FSL ಟೀಂ ಈ ಮೂಲಕ ಅಸ್ಥಿ ಪಂಜರದ ಅವಧಿ ಪತ್ತೆ ಹಚ್ಚೋ ಸಾಧ್ಯತೆ ಇದೆ ಹಗೂ  ವ್ಯಕ್ತಿಯ ಗುರುತು ಪತ್ತೆಗೆ FSLನಿಂದ ಮೂಳೆಯ ಡಿಎನ್​ಎ ಪರೀಕ್ಷೆ ನಡೆಯಲಿದ್ದು, 15 ದಿನಗಳಲ್ಲಿ FSLನಿಂದ ಮಧ್ಯಂತರ ವರದಿ ನೀಡುವ ಸಾಧ್ಯತೆ ಇದೆ.
ಅಂತಿಮ ವರದಿಗೆ 45-60 ದಿನಗಳು ತೆಗೆದುಕೊಳ್ಳೋ ಸಾಧ್ಯತೆ ಇದ್ದು, FSL ವರದಿ ಆಧರಿಸಿ ಎಸ್​ಐಟಿ ತನಿಖೆ ಮುಂದುವರೆಸಲಿದೆ.

20:16ಡಿಕೆ ಬತ್ತಳಿಕೆ ಸೇರಿತಾ ತ್ರಿವಳಿ ಡಿಸಿಎಂ ಬ್ರಹ್ಮಾಸ್ತ್ರ..? ಯಾರಿಗೆ ಸಿದ್ದು ಶ್ರೀರಕ್ಷೆ? ಯಾರಿಗೆ ಬಂಡೆ ಬಲ?
22:06ಡಿಕೆ ಶಿವಕುಮಾರ್ ಮಂತ್ರಿಮಂಡಲ, 8 ಗಂಟೆಯ ಗುಟ್ಟು, ಯಾರಿಗೆಲ್ಲಾ ಸಿಗಲಿದೆ ಸಚಿವ ಸ್ಥಾನ?
40 ಸಚಿವಾಕಾಂಕ್ಷಿಗಳು 4 ಸಭೆಗಳು ಏನೆಲ್ಲಾ ಚರ್ಚೆ? ಯುವ ಶಾಸಕರಿಗೆ ಮಣೆ ಹಾಕುತ್ತಾ ಕಾಂಗ್ರೆಸ್ ಹೈಕಮಾಂಡ್?
22:49ಬಿಡದಿ ಅಗ್ನಿಕುಂಡ.. ಬೂದಿ ಮುಚ್ಚಿದ ಕೆಂಡ: ದಳಪತಿ Vs ಕನಕಾಧಿಪತಿ.. ಮುಗಿಯದ ಯುದ್ಧದ ಹೊಸ ಅಧ್ಯಾಯ!
21:50ಬೆಳಗಾವಿ ಸಾಹುಕಾರನ ಜೊತೆ ಕನಕವೀರನ ಗಟ್ಟಿ ಗೆಳೆತನ..! ಸವಾಲ್ ಹಾಕಿದ್ದ ಸಾಹುಕಾರ, ಬಂಡೆ ವಿಶ್ವಾಸಕ್ಕೆ ಮಣಿದರಾ?
04:40ರೇಣುಕಾಸ್ವಾಮಿ ಕೇಸ್‌ನಲ್ಲಿ ಬಿಗ್ ಟ್ವಿಸ್ಟ್? ಬೆದರಿಕೆ ಹಾಕಿದವರ ಮೊಬೈಲ್‌ನಲ್ಲಿದೆ ನಡುಕ ಹುಟ್ಟಿಸೋ ಸತ್ಯ!
24:272028ರ ಚುನಾವಣೆ: ಜೋಡೆತ್ತುಗಳ ಸೈಲೆಂಟ್ ಆಟ ಶುರು, ಮತ್ತೊಂದು ಮಹಾಯುದ್ಧಕ್ಕೆ ರೆಡಿ ಭಲೇ ಜೋಡಿ!
53:23ಮೈಸೂರು ಸಂಸದ, ರಾಜವಂಶಸ್ಥರೇ ಕಂಬಳ ಬೇಡ ಎಂದಿದ್ದೇಕೆ? ಕಂಬಳ ನಡೆಸಿಯೇ ಸಿದ್ಧ ಎಂದು ಆಯೋಜಕರ ಪಟ್ಟೇಕೆ?
23:39ಕೈ ಕೊಟ್ಟವರ್ಯಾರೋ ಮಂಜುನಾಥ?; ಬಿಜೆಪಿಯಲ್ಲಿ ಅಡ್ಡಮತದಾನದ ಆಂತರಿಕ ಜ್ವಾಲಾಮುಖಿ ಸ್ಫೋಟ!
19:09ಕನಕಾಧಿಪತಿ ಚದುರಂಗ.. BJP ಪಡೆ ಕೋಲಾಹಲ: ಹಸ್ತಕೋಟೆಗೇ ಗೊತ್ತಿರಲಿಲ್ಲ.. ಡಿಕೆ ಹೂಡಿದ ಚಕ್ರವ್ಯೂಹ!
Read more