ಚಿನ್ನದ ಬಿಸ್ಕೆಟ್, ಕ್ರಿಪ್ಟೋ ಕರೆನ್ಸಿ, ಹವಾಲಾ: 187 ಕೋಟಿ ಹಗರಣದ ಶಿಕಾರಿ ವೇಳೆ ಬಯಲಾದ ಆ ರಹಸ್ಯವೇನು?

ಚಿನ್ನದ ಬಿಸ್ಕೆಟ್, ಕ್ರಿಪ್ಟೋ ಕರೆನ್ಸಿ, ಹವಾಲಾ: 187 ಕೋಟಿ ಹಗರಣದ ಶಿಕಾರಿ ವೇಳೆ ಬಯಲಾದ ಆ ರಹಸ್ಯವೇನು?

Published : Jul 11, 2024, 02:33 PM ISTUpdated : Jul 11, 2024, 02:36 PM IST

ವಾಲ್ಮೀಕಿ ನಿಗಮದ 187 ಕೋಟಿ ರೂಪಾಯಿ ಹಣವನ್ನು ಯೂನಿಯನ್ ಬ್ಯಾಂಕ್'ಗೆ ವರ್ಗಾವಣೆಯಿಸುವಂತೆ ಒತ್ತಡ ಹೇರಿದ್ದೇ ಮಾಜಿ ಸಚಿವ ನಾಗೇಂದ್ರ ಅಂತ ಹೇಳಲಾಗ್ತಾ ಇದೆ.  ದು ಬರೀ ನಾಗೇಂದ್ರ ಪಾಲಿಗೆ ಮಾತ್ರವಲ್ಲದೇ, ಇಡೀ ಕಾಂಗ್ರೆಸ್‌ಗೆ ಬಿಗ್ ಶಾಕ್ ಕೊಡೋ ಸಾಧ್ಯತೆ ಇದೆ. 

ವಾಲ್ಮೀಕಿ ನಿಗಮದ 187 ಕೋಟಿ ರೂಪಾಯಿ ಹಣವನ್ನು ಯೂನಿಯನ್ ಬ್ಯಾಂಕ್'ಗೆ ವರ್ಗಾವಣೆಯಿಸುವಂತೆ ಒತ್ತಡ ಹೇರಿದ್ದೇ ಮಾಜಿ ಸಚಿವ ನಾಗೇಂದ್ರ ಅಂತ ಹೇಳಲಾಗ್ತಾ ಇದೆ.  ಇದೇ ವಿಚಾರವಾಗಿ ದೊಡ್ಡದೊಂದು ಕಂಟಕ, ನಾಗೇಂದ್ರ ಅವರನ್ನ ಕಾಡ್ತಾ ಇದೆ. ಇದು ಬರೀ ನಾಗೇಂದ್ರ ಪಾಲಿಗೆ ಮಾತ್ರವಲ್ಲದೇ, ಇಡೀ ಕಾಂಗ್ರೆಸ್‌ಗೆ ಬಿಗ್ ಶಾಕ್ ಕೊಡೋ ಸಾಧ್ಯತೆ ಇದೆ. ಏಳು ತಿಂಗಳ ಹಿಂದೆ, ಅಂದ್ರೆ ಕಳೆದ ಡಿಸೆಂಬರ್ ತಿಂಗಳ ಕೊನೆಯ ವಾರದಲ್ಲಿ ಸ್ಟಾರ್ ಹೋಟೆಲ್'ನಲ್ಲಿ ಈ ಡೀಲ್ ಕುದುರಿರೋ ಬಗ್ಗೆ ಎಸ್ಐಟಿ ಅಧಿಕಾರಿಗಳಿಗೆ ಮಾಹಿತಿ ಸಿಕ್ಕಿದೆ. ಹೀಗಾಗಿ ಈ ಬೃಹತ್ ಹಗರಣದ ರಣಬೇಟೆಯಾಡೋಕೆ SIT, CBI, ED ಮುಂದಾಗಿವೆ.  187 ಕೋಟಿ ಹಗರಣದ ತನಿಖೆ ನಡೆಸೋಕೆ 18 ಕಡೆ ಶೋಧ ಕಾರ್ಯ ನಡೆದಿದೆ. ಈ ಪ್ರಕರಣದ ಬೆನ್ನಲ್ಲೇ ಚಿನ್ನದ ಬಿಸ್ಕೆಟ್, ಕ್ರಿಪ್ಟೋ ಕರೆನ್ಸಿ, ಹವಾಲಾ, ಅನ್ನೋ ಅಸಾಮಾನ್ಯ ಪದಗಳೂ ಸದ್ದು ಮಾಡ್ತಾ ಇದಾವೆ.  ಇತ್ತೀಚಿಗೆ ಆಡಿಯೋ ಬಾಂಬ್ ಬ್ಲಾಸ್ಟ್ ಆಯ್ತು. ಅದರ ಬೆನ್ನಲ್ಲೇ ಮಾಜಿ ಸಚಿವರ ಪಿಎ ಅರೆಸ್ಟ್ ಆಯ್ತು.. ಇನ್ನೂ ಏನೇನು ಕಾದಿದೆಯೋ.. ಅನ್ನೋ ಅನುಮಾನ ಮೂಡಿದೆ.. ಈ ಬೆಳವಣಿಗೆನೆಲ್ಲಾ ನೋಡ್ತಾ ಇದ್ರೆ, ಶಿಕಾರಿ ವೇಳೆ ಬಯಲಾದ ಆ ರಹಸ್ಯ, ಮಾಜಿ ಸಚಿವರಿಗೇ ಕುತ್ತು ತಂದಿತಾ ಅನ್ನೋ ಪ್ರಶ್ನೆ ಮೂಡುತ್ತೆ. ಅದಕ್ಕೆಲ್ಲಾ ಉತ್ತರವೇ ಇವತ್ತಿನ ಸುವರ್ಣ ಫೋಕಸ್ ವೀಕ್ಷಿಸಿ '1st ವಿಕೆಟ್ ಡೌನ್'
 

23:39ಕೈ ಕೊಟ್ಟವರ್ಯಾರೋ ಮಂಜುನಾಥ?; ಬಿಜೆಪಿಯಲ್ಲಿ ಅಡ್ಡಮತದಾನದ ಆಂತರಿಕ ಜ್ವಾಲಾಮುಖಿ ಸ್ಫೋಟ!
19:09ಕನಕಾಧಿಪತಿ ಚದುರಂಗ.. BJP ಪಡೆ ಕೋಲಾಹಲ: ಹಸ್ತಕೋಟೆಗೇ ಗೊತ್ತಿರಲಿಲ್ಲ.. ಡಿಕೆ ಹೂಡಿದ ಚಕ್ರವ್ಯೂಹ!
19:50Suvarna Special: 151/5 ಬಂಡೆಯಾಟವಯ್ಯಾ! ಮೊದಲ ಅಗ್ನಿಪರೀಕ್ಷೆ..ಶತ್ರುಪಡೆಯನ್ನೇ ಒಡೆದ ಕನಕಪುರ ಬಂಡೆ!
20:09Suvarna Special: ಆರೆಸ್ಸೆಸ್​ Vs ಖರ್ಗೆ ರಣರಂಗ, 100 ವರ್ಷ ಇತಿಹಾಸದ RSS​​​ ವಿರುದ್ಧ ಖರ್ಗೆ ‘ಸಂಘ’ರ್ಷ..!
19:20Suvarna Special: ಯಾರಿಗುಂಟು ಲಕ್ಷ್ಮೀ?ಯಾರಿಗಿಲ್ಲ ಜ್ಯೋತಿ? ಕಾಸು, ಕರೆಂಟು, ಲಕ್ಷ್ಮೀ, ಜ್ಯೋತಿ..ಇದು ಆಪರೇಷನ್ ಗ್ಯಾರಂಟಿ
47:03RSS ನೋಂದಣಿ ಯಾವಾಗ..? ಗೃಹ ಸಚಿವ ಪ್ರಿಯಾಂಕ್ ಖರ್ಗೆ ಸಾಲು ಸಾಲು ಪ್ರಶ್ನೆಯಿಂದ ಶುರುವಾದ ಚರ್ಚೆ
25:24ಧರ್ಮಸ್ಥಳ ಬುರುಡೆ ಕೇಸ್‌ಗೆ ಬಿಗ್ ಟ್ವಿಸ್ಟ್: ಸಾಥ್ ಕೊಟ್ಟವರ ₹200 ಕೋಟಿ ಷಡ್ಯಂತ್ರ ಬಿಚ್ಚಿಟ್ಟ ಮಾಸ್ಕ್‌ ಮ್ಯಾನ್!
23:20ಧರ್ಮಸ್ಥಳ ವಿರುದ್ಧ ಕೇರಳ ಫಂಡಿಂಗ್, ಚಿತ್ರದುರ್ಗ ಕನೆಕ್ಷನ್, 200 ಕೋಟಿ ಡೀಲ್ ಸೀಕ್ರೆಟ್ ಬಿಚ್ಚಿಟ್ಟ ಮಾಸ್ಕ್ ಮ್ಯಾನ್
21:25DK Shivakumar: ಸಿದ್ದು ಸಂಪ್ರದಾಯ ಮುರಿದ ಡಿಕೆಶಿ: ಗಾಂಧಿಗಿರಿ ಹಿಂದಿನ ರಣತಂತ್ರವೇನು?
21:34ಡಿಫರೆಂಟ್ ಡಿಕೆ: ವಿದುರ ನೀತಿ.. ಚಾಣಕ್ಯ ತಂತ್ರ.. ರಾಜ್ಯ ರಾಜಕಾರಣದಲ್ಲಿ 'ಬಂಡೆ'ಯ ಹೊಸ ಚದುರಂಗದಾಟ!
Read more