ಚಿನ್ನದ ಬಿಸ್ಕೆಟ್, ಕ್ರಿಪ್ಟೋ ಕರೆನ್ಸಿ, ಹವಾಲಾ: 187 ಕೋಟಿ ಹಗರಣದ ಶಿಕಾರಿ ವೇಳೆ ಬಯಲಾದ ಆ ರಹಸ್ಯವೇನು?

ಚಿನ್ನದ ಬಿಸ್ಕೆಟ್, ಕ್ರಿಪ್ಟೋ ಕರೆನ್ಸಿ, ಹವಾಲಾ: 187 ಕೋಟಿ ಹಗರಣದ ಶಿಕಾರಿ ವೇಳೆ ಬಯಲಾದ ಆ ರಹಸ್ಯವೇನು?

Published : Jul 11, 2024, 02:33 PM ISTUpdated : Jul 11, 2024, 02:36 PM IST

ವಾಲ್ಮೀಕಿ ನಿಗಮದ 187 ಕೋಟಿ ರೂಪಾಯಿ ಹಣವನ್ನು ಯೂನಿಯನ್ ಬ್ಯಾಂಕ್'ಗೆ ವರ್ಗಾವಣೆಯಿಸುವಂತೆ ಒತ್ತಡ ಹೇರಿದ್ದೇ ಮಾಜಿ ಸಚಿವ ನಾಗೇಂದ್ರ ಅಂತ ಹೇಳಲಾಗ್ತಾ ಇದೆ.  ದು ಬರೀ ನಾಗೇಂದ್ರ ಪಾಲಿಗೆ ಮಾತ್ರವಲ್ಲದೇ, ಇಡೀ ಕಾಂಗ್ರೆಸ್‌ಗೆ ಬಿಗ್ ಶಾಕ್ ಕೊಡೋ ಸಾಧ್ಯತೆ ಇದೆ. 

ವಾಲ್ಮೀಕಿ ನಿಗಮದ 187 ಕೋಟಿ ರೂಪಾಯಿ ಹಣವನ್ನು ಯೂನಿಯನ್ ಬ್ಯಾಂಕ್'ಗೆ ವರ್ಗಾವಣೆಯಿಸುವಂತೆ ಒತ್ತಡ ಹೇರಿದ್ದೇ ಮಾಜಿ ಸಚಿವ ನಾಗೇಂದ್ರ ಅಂತ ಹೇಳಲಾಗ್ತಾ ಇದೆ.  ಇದೇ ವಿಚಾರವಾಗಿ ದೊಡ್ಡದೊಂದು ಕಂಟಕ, ನಾಗೇಂದ್ರ ಅವರನ್ನ ಕಾಡ್ತಾ ಇದೆ. ಇದು ಬರೀ ನಾಗೇಂದ್ರ ಪಾಲಿಗೆ ಮಾತ್ರವಲ್ಲದೇ, ಇಡೀ ಕಾಂಗ್ರೆಸ್‌ಗೆ ಬಿಗ್ ಶಾಕ್ ಕೊಡೋ ಸಾಧ್ಯತೆ ಇದೆ. ಏಳು ತಿಂಗಳ ಹಿಂದೆ, ಅಂದ್ರೆ ಕಳೆದ ಡಿಸೆಂಬರ್ ತಿಂಗಳ ಕೊನೆಯ ವಾರದಲ್ಲಿ ಸ್ಟಾರ್ ಹೋಟೆಲ್'ನಲ್ಲಿ ಈ ಡೀಲ್ ಕುದುರಿರೋ ಬಗ್ಗೆ ಎಸ್ಐಟಿ ಅಧಿಕಾರಿಗಳಿಗೆ ಮಾಹಿತಿ ಸಿಕ್ಕಿದೆ. ಹೀಗಾಗಿ ಈ ಬೃಹತ್ ಹಗರಣದ ರಣಬೇಟೆಯಾಡೋಕೆ SIT, CBI, ED ಮುಂದಾಗಿವೆ.  187 ಕೋಟಿ ಹಗರಣದ ತನಿಖೆ ನಡೆಸೋಕೆ 18 ಕಡೆ ಶೋಧ ಕಾರ್ಯ ನಡೆದಿದೆ. ಈ ಪ್ರಕರಣದ ಬೆನ್ನಲ್ಲೇ ಚಿನ್ನದ ಬಿಸ್ಕೆಟ್, ಕ್ರಿಪ್ಟೋ ಕರೆನ್ಸಿ, ಹವಾಲಾ, ಅನ್ನೋ ಅಸಾಮಾನ್ಯ ಪದಗಳೂ ಸದ್ದು ಮಾಡ್ತಾ ಇದಾವೆ.  ಇತ್ತೀಚಿಗೆ ಆಡಿಯೋ ಬಾಂಬ್ ಬ್ಲಾಸ್ಟ್ ಆಯ್ತು. ಅದರ ಬೆನ್ನಲ್ಲೇ ಮಾಜಿ ಸಚಿವರ ಪಿಎ ಅರೆಸ್ಟ್ ಆಯ್ತು.. ಇನ್ನೂ ಏನೇನು ಕಾದಿದೆಯೋ.. ಅನ್ನೋ ಅನುಮಾನ ಮೂಡಿದೆ.. ಈ ಬೆಳವಣಿಗೆನೆಲ್ಲಾ ನೋಡ್ತಾ ಇದ್ರೆ, ಶಿಕಾರಿ ವೇಳೆ ಬಯಲಾದ ಆ ರಹಸ್ಯ, ಮಾಜಿ ಸಚಿವರಿಗೇ ಕುತ್ತು ತಂದಿತಾ ಅನ್ನೋ ಪ್ರಶ್ನೆ ಮೂಡುತ್ತೆ. ಅದಕ್ಕೆಲ್ಲಾ ಉತ್ತರವೇ ಇವತ್ತಿನ ಸುವರ್ಣ ಫೋಕಸ್ ವೀಕ್ಷಿಸಿ '1st ವಿಕೆಟ್ ಡೌನ್'
 

20:16ಡಿಕೆ ಬತ್ತಳಿಕೆ ಸೇರಿತಾ ತ್ರಿವಳಿ ಡಿಸಿಎಂ ಬ್ರಹ್ಮಾಸ್ತ್ರ..? ಯಾರಿಗೆ ಸಿದ್ದು ಶ್ರೀರಕ್ಷೆ? ಯಾರಿಗೆ ಬಂಡೆ ಬಲ?
22:06ಡಿಕೆ ಶಿವಕುಮಾರ್ ಮಂತ್ರಿಮಂಡಲ, 8 ಗಂಟೆಯ ಗುಟ್ಟು, ಯಾರಿಗೆಲ್ಲಾ ಸಿಗಲಿದೆ ಸಚಿವ ಸ್ಥಾನ?
40 ಸಚಿವಾಕಾಂಕ್ಷಿಗಳು 4 ಸಭೆಗಳು ಏನೆಲ್ಲಾ ಚರ್ಚೆ? ಯುವ ಶಾಸಕರಿಗೆ ಮಣೆ ಹಾಕುತ್ತಾ ಕಾಂಗ್ರೆಸ್ ಹೈಕಮಾಂಡ್?
22:49ಬಿಡದಿ ಅಗ್ನಿಕುಂಡ.. ಬೂದಿ ಮುಚ್ಚಿದ ಕೆಂಡ: ದಳಪತಿ Vs ಕನಕಾಧಿಪತಿ.. ಮುಗಿಯದ ಯುದ್ಧದ ಹೊಸ ಅಧ್ಯಾಯ!
21:50ಬೆಳಗಾವಿ ಸಾಹುಕಾರನ ಜೊತೆ ಕನಕವೀರನ ಗಟ್ಟಿ ಗೆಳೆತನ..! ಸವಾಲ್ ಹಾಕಿದ್ದ ಸಾಹುಕಾರ, ಬಂಡೆ ವಿಶ್ವಾಸಕ್ಕೆ ಮಣಿದರಾ?
04:40ರೇಣುಕಾಸ್ವಾಮಿ ಕೇಸ್‌ನಲ್ಲಿ ಬಿಗ್ ಟ್ವಿಸ್ಟ್? ಬೆದರಿಕೆ ಹಾಕಿದವರ ಮೊಬೈಲ್‌ನಲ್ಲಿದೆ ನಡುಕ ಹುಟ್ಟಿಸೋ ಸತ್ಯ!
24:272028ರ ಚುನಾವಣೆ: ಜೋಡೆತ್ತುಗಳ ಸೈಲೆಂಟ್ ಆಟ ಶುರು, ಮತ್ತೊಂದು ಮಹಾಯುದ್ಧಕ್ಕೆ ರೆಡಿ ಭಲೇ ಜೋಡಿ!
53:23ಮೈಸೂರು ಸಂಸದ, ರಾಜವಂಶಸ್ಥರೇ ಕಂಬಳ ಬೇಡ ಎಂದಿದ್ದೇಕೆ? ಕಂಬಳ ನಡೆಸಿಯೇ ಸಿದ್ಧ ಎಂದು ಆಯೋಜಕರ ಪಟ್ಟೇಕೆ?
23:39ಕೈ ಕೊಟ್ಟವರ್ಯಾರೋ ಮಂಜುನಾಥ?; ಬಿಜೆಪಿಯಲ್ಲಿ ಅಡ್ಡಮತದಾನದ ಆಂತರಿಕ ಜ್ವಾಲಾಮುಖಿ ಸ್ಫೋಟ!
19:09ಕನಕಾಧಿಪತಿ ಚದುರಂಗ.. BJP ಪಡೆ ಕೋಲಾಹಲ: ಹಸ್ತಕೋಟೆಗೇ ಗೊತ್ತಿರಲಿಲ್ಲ.. ಡಿಕೆ ಹೂಡಿದ ಚಕ್ರವ್ಯೂಹ!
Read more